ಪಂಚಮಸಾಲಿಗಳ ಹೋರಾಟದಲ್ಲಿ (Panchamasali protest) ಮತ್ತೊಂದು ಹೈಡ್ರಾಮಾ ನಡೆದಿದೆ. ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಫೋಟೊಗಳಿದ್ದ ಬ್ಯಾನರ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಳಗಾವಿಯ ಅಂಬೇಡ್ಕರ್ ಗಾರ್ಡನ್ನಲ್ಲಿನಲ್ಲಿ (Ambedkar garden) ಅಳವಡಿಸಿದ್ದ ಫೋಟೊ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ.

ಕೂಡಲಸಂಗಮ ಶ್ರೀಗಳ ಧರಣಿ ಪಕ್ಕದ ಸ್ಥಳದಲ್ಲಿ ಬ್ಯಾನರ್ ಅಳವಡಿಸಲಾಗಿತ್ತು.ಚೆನ್ನಮ್ಮ ನಾಡಲ್ಲೇ ಚನ್ನಮ್ಮನ ಮಕ್ಕಳ ರಕ್ತ ಹರಿದಿದೆ ಎಂಬ ಹೆಸರಿನಡಿ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು.ಪೊಲೀಸರ ಲಾಠಿಚಾರ್ಜ್ ವೇಳೆ ,ಗಾಯಗೊಂಡ ಹೋರಾಟಗಾರರ ಫೋಟೊಗಳಿದ್ದ ಬ್ಯಾನರ್ ಇದಾಗಿದ್ದು,
ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಬ್ಯಾನರ್ ಜಪ್ತಿ ಮಾಡಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಪಂಚಮಸಾಲಿ ಮುಖಂಡರ ಮಧ್ಯೆ ವಾಗ್ವಾದ ನಡೆದಿದ್ದು,
ಪೊಲೀಸರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಂಚಮಸಾಲಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
