• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಹೋರಾಟದ ಧ್ವನಿ, ಗಾಂಧಿವಾದಿ, ಸಮಾಜವಾದಿ ಪ ಮಲ್ಲೇಶ್‌ ರಿಗೆ ಒಂದು ಶೃದ್ಧಾಂಜಲಿ

ನಾ ದಿವಾಕರ by ನಾ ದಿವಾಕರ
January 20, 2023
in ಅಂಕಣ, ವಿಶೇಷ
0
ಹೋರಾಟದ ಧ್ವನಿ, ಗಾಂಧಿವಾದಿ, ಸಮಾಜವಾದಿ ಪ ಮಲ್ಲೇಶ್‌ ರಿಗೆ ಒಂದು ಶೃದ್ಧಾಂಜಲಿ
Share on WhatsAppShare on FacebookShare on Telegram

“ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸದಾ ಸ್ಪಂದಿಸುತ್ತಿದ್ದ, ಸಾಮಾಜಿಕ ಪರಿಸರದಲ್ಲಿ ಸಾಮಾನ್ಯ ಜನತೆ ಎದುರಿಸುವ ಬದುಕು-ಜೀವನ-ಜೀವನೋಪಾಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸದಾ ತುಡಿಯುತ್ತಿದ್ದ, ದುಡಿಯುವ ವರ್ಗಗಳು, ಶೋಷಿತ ಸಮುದಾಯಗಳು, ಮಹಿಳಾ ಸಮೂಹ ಮತ್ತು ಅವಕಾಶವಂಚಿತರ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ತಲ್ಲಣಗಳಿಗೆ ಸದಾ ಮಿಡಿಯುತ್ತಿದ್ದ, ವ್ಯವಸ್ಥೆಯ ಲೋಪದೋಷಗಳ ವಿರುದ್ಧ, ಆಳುವ ವರ್ಗಗಳ ದಬ್ಬಾಳಿಕೆಯ ವಿರುದ್ಧ, ಆಡಳಿತಾರೂಢ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸದಾ ಸಿಡಿದೇಳುತ್ತಿದ್ದ ” ಒಂದು ದಿಟ್ಟ ಜನಪರ ಧ್ವನಿ ಮೈಸೂರಿನಲ್ಲಿ  19 ಜನವರಿಯ ಮಧ್ಯಾಹ್ನ ಮೂರ ವೇಳೆಗೆ ಶಾಶ್ವತ ಮೌನಕ್ಕೆ ಜಾರಿಬಿಟ್ಟಿತು.

ADVERTISEMENT

89ರ ವಯೋಮಾನದ ಚಿರಯುವಕ ಎನ್ನಬಹುದಾದ, ಹೋರಾಟದ ಒಂದು ಧ್ವನಿ, ಗಾಂಧಿವಾದಿ, ಸಮಾಜವಾದಿ ಮತ್ತು ಕನ್ನಡಪರ ಹೋರಾಟಗಾರರಾಗಿ ನ್ಯಾಯ ನಿಷ್ಠುರತೆಯಿಂದ, ಪ್ರಾಮಾಣಿಕ ಬದುಕಿಗಾಗಿ, ಸಮಾನತೆಯ ಆಶಯಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಮೈಸೂರಿನ ಎಲ್ಲ ರೀತಿಯ ಜನಾಂದೋಲನಗಳಿಗೆ ಮುಂಚೂಣಿ ದನಿಯಾಗಿ ಜನಸಾಮಾನ್ಯರ ನಡುವೆ ಇರುತ್ತಿದ್ದ ಹಿರಿಯ ಹೋರಾಟಗಾರ ಪ ಮಲ್ಲೇಶ್‌ ಈಗ ನಮ್ಮ ನಡುವೆ ಇಲ್ಲ. ಅವರ ಕನ್ನಡ ಪರ ನಿಲುವಿನ ಫಲವಾಗಿಯೇ ಇಂದು ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಏಕೈಕ ಸಂಸ್ಥೆ, ನೃಪತುಂಗ ಕನ್ನಡ ಶೈಕ್ಷಣಿಕ ವಿದ್ಯಾ ವಿಕಾಸ ಸಂಸ್ಥೆ, ಮೈಸೂರಿನಲ್ಲಿ ರಾರಾಜಿಸುತ್ತಿರುವುದು ಅವರ ತಾತ್ವಿಕ ನಿಲುಮೆಗೆ ಸಾಕ್ಷಿ. ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ನೈತಿಕತೆಯನ್ನು ಸದಾ ಎತ್ತಿಹಿಡಿಯುತ್ತಿದ್ದ ಮಲ್ಲೇಶ್‌ ಅವರ ಹೋರಾಟದ ಬದುಕನ್ನು ದಾಖಲಿಸಿದರೆ ಒಂದು ಬೃಹತ್‌ ಗ್ರಂಥವೇ ಆಗಬಹುದು. ಯಾವುದೇ ರೀತಿಯ ಅನ್ಯಾಯದ ವಿರುದ್ಧ, ಅನ್ಯಾಯ ಎಸಗಿದವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ, ಸಿಡಿದೇಳುತ್ತಿದ್ದ ಹಠಮಾರಿ ಸ್ವಭಾವದ ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಮೈಸೂರಿನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪ್ರಗತಿಪರ-ಎಡಪಂಥೀಯ ಹೋರಾಟಗಾರರಿಗೆ, ಮಹಿಳಾ ಹೋರಾಟಗಾರರಿಗೆ ಮತ್ತು ದುಡಿಯುವ ವರ್ಗಗಳಿಗೆ ಒಂದು ಹೋರಾಟದ ಪ್ರತಿಧ್ವನಿಯಾಗಿಯೇ ತಮ್ಮ ಪಯಣವನ್ನು ಮುಗಿಸಿದ್ದಾರೆ.

ಒಂದು ಜೀವದ ಅಗಲಿಕೆ ಆ ಕುಟುಂಬದೊಳಗೆ ನಿರ್ವಾತವನ್ನು ಸೃಷ್ಟಿಸುವುದು ಸಹಜ. ಕೆಲ ವರುಷಗಳು ಸಂದ ನಂತರ ವಿಸ್ಮೃತಿಗೆ ಜಾರುವುದೂ ಮಾನವ ಸಹಜ. ಆದರೆ ನಮ್ಮ ನಡುವಿನ ದಿಟ್ಟ ಜನಪರ ದನಿಯಾಗಿದ್ದ ಶ್ರೀಯುತ ಪ ಮಲ್ಲೇಶ್‌ ಅವರ ಅಗಲಿಕೆಯಿಂದ ಮೈಸೂರಿನಲ್ಲಿ ಸೃಷ್ಟಿಯಾಗಿರುವ ನಿರ್ವಾತ ಬಹುಶಃ ಶಾಶ್ವತವಾಗಿ ಉಳಿಯುವಂತಹುದು. ತುಂಬಲಾರದ ನಷ್ಟ ಎನ್ನುವ ಕ್ಲೀಷೆಯನ್ನು ದಾಟಿ ನೋಡಿದಾಗ, ಪ ಮಲ್ಲೇಶ್‌ ಅವರ ಅಗಲಿಕೆ,  ಮೈಸೂರಿನ ಜನ ಚಳುವಳಿಗಳ ಪಾಲಿಗೆ ಮತ್ತು ಅವರ ಆದರ್ಶಪ್ರಾಯದಿಂದ ಬಹಳಷ್ಟು ಕಲಿಯಬಹುದಾಗಿದ್ದ ಮುಂದಿನ ತಲೆಮಾರಿನ ಪಾಲಿಗೆ, ಬಹುದೊಡ್ಡ ಪೆಟ್ಟು. ರಾಜಿಯಾಗದ ಮನೋಭಾವದೊಂದಿಗೇ ಬದುಕಿ ಬಾಳಿ, ಹೋರಾಟಗಳಲ್ಲೇ ಜೀವ ಸವೆಸಿದ ಹಿರಿಯ ನಾಯಕ ಕೊನೆಗೂ ಜವರಾಯನೊಂದಿಗೆ ರಾಜಿಯಾಗಲೇಬೇಕಾದ್ದು ಪ್ರಕೃತಿ ಸಹಜ.

ಪ ಮಲ್ಲೇಶ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರ ಆದರ್ಶ ಮತ್ತು ಹೋರಾಟದ ಸ್ಫೂರ್ತಿಯನ್ನು ನಮ್ಮೊಳಗೆ ಹಿಡಿದಿಟ್ಟುಕೊಳ್ಳುವುದೇ ಆಗಿರಲು ಸಾಧ್ಯ.

ನಾ ದಿವಾಕರ

Previous Post

| DUNIYA VIJAY | ಗುಲ್ಬರ್ಗದಿಂದ ಪಾದಯಾತ್ರೆ ಮಾಡಿ ಬಂದ ಅಭಿಮಾನಿಗೆ ಬೈದು ಬುದ್ಧಿ ಹೇಳಿದ ದುನಿಯಾ ವಿಜಯ್

Next Post

| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

Related Posts

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
0

ನಾ ದಿವಾಕರ   (ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )  ಬದಲಾದ ಭಾರತದಲ್ಲಿ ಸಾಂಸ್ಕೃತಿಕ ರಾಜಕಾರಣ ಬೇರೂರುತ್ತಿರುವ ಹೊತ್ತಿನಲ್ಲಿ, ಧರ್ಮನಿರಪೇಕ್ಷತೆಯ ಮೌಲ್ಯ...

Read moreDetails
ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

January 17, 2026
ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

January 16, 2026
ವಿಶ್ವಸಂಸ್ಥೆಯಲ್ಲಿ ಕನ್ನಡತಿಯ ಸಾಧನೆ : ಸೇನಾಧಿಕಾರಿ ಸ್ವಾತಿ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ..

ವಿಶ್ವಸಂಸ್ಥೆಯಲ್ಲಿ ಕನ್ನಡತಿಯ ಸಾಧನೆ : ಸೇನಾಧಿಕಾರಿ ಸ್ವಾತಿ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ..

January 15, 2026
ಅಮೆರಿಕ ಮಣಿಸೋಕೆ ಸಿದ್ಧವಾದ ಭಾರತದ ಯುವ ಪಡೆ : ವೈಭವ್‌ ಮೇಲೆ ಹೆಚ್ಚಿದ ನಿರೀಕ್ಷೆ

ಅಮೆರಿಕ ಮಣಿಸೋಕೆ ಸಿದ್ಧವಾದ ಭಾರತದ ಯುವ ಪಡೆ : ವೈಭವ್‌ ಮೇಲೆ ಹೆಚ್ಚಿದ ನಿರೀಕ್ಷೆ

January 15, 2026
Next Post
| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada