• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಹೋರಾಟದ ಧ್ವನಿ, ಗಾಂಧಿವಾದಿ, ಸಮಾಜವಾದಿ ಪ ಮಲ್ಲೇಶ್‌ ರಿಗೆ ಒಂದು ಶೃದ್ಧಾಂಜಲಿ

ನಾ ದಿವಾಕರ by ನಾ ದಿವಾಕರ
January 20, 2023
in ಅಂಕಣ, ವಿಶೇಷ
0
ಹೋರಾಟದ ಧ್ವನಿ, ಗಾಂಧಿವಾದಿ, ಸಮಾಜವಾದಿ ಪ ಮಲ್ಲೇಶ್‌ ರಿಗೆ ಒಂದು ಶೃದ್ಧಾಂಜಲಿ
Share on WhatsAppShare on FacebookShare on Telegram

“ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸದಾ ಸ್ಪಂದಿಸುತ್ತಿದ್ದ, ಸಾಮಾಜಿಕ ಪರಿಸರದಲ್ಲಿ ಸಾಮಾನ್ಯ ಜನತೆ ಎದುರಿಸುವ ಬದುಕು-ಜೀವನ-ಜೀವನೋಪಾಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸದಾ ತುಡಿಯುತ್ತಿದ್ದ, ದುಡಿಯುವ ವರ್ಗಗಳು, ಶೋಷಿತ ಸಮುದಾಯಗಳು, ಮಹಿಳಾ ಸಮೂಹ ಮತ್ತು ಅವಕಾಶವಂಚಿತರ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ತಲ್ಲಣಗಳಿಗೆ ಸದಾ ಮಿಡಿಯುತ್ತಿದ್ದ, ವ್ಯವಸ್ಥೆಯ ಲೋಪದೋಷಗಳ ವಿರುದ್ಧ, ಆಳುವ ವರ್ಗಗಳ ದಬ್ಬಾಳಿಕೆಯ ವಿರುದ್ಧ, ಆಡಳಿತಾರೂಢ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸದಾ ಸಿಡಿದೇಳುತ್ತಿದ್ದ ” ಒಂದು ದಿಟ್ಟ ಜನಪರ ಧ್ವನಿ ಮೈಸೂರಿನಲ್ಲಿ  19 ಜನವರಿಯ ಮಧ್ಯಾಹ್ನ ಮೂರ ವೇಳೆಗೆ ಶಾಶ್ವತ ಮೌನಕ್ಕೆ ಜಾರಿಬಿಟ್ಟಿತು.

ADVERTISEMENT

89ರ ವಯೋಮಾನದ ಚಿರಯುವಕ ಎನ್ನಬಹುದಾದ, ಹೋರಾಟದ ಒಂದು ಧ್ವನಿ, ಗಾಂಧಿವಾದಿ, ಸಮಾಜವಾದಿ ಮತ್ತು ಕನ್ನಡಪರ ಹೋರಾಟಗಾರರಾಗಿ ನ್ಯಾಯ ನಿಷ್ಠುರತೆಯಿಂದ, ಪ್ರಾಮಾಣಿಕ ಬದುಕಿಗಾಗಿ, ಸಮಾನತೆಯ ಆಶಯಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಮೈಸೂರಿನ ಎಲ್ಲ ರೀತಿಯ ಜನಾಂದೋಲನಗಳಿಗೆ ಮುಂಚೂಣಿ ದನಿಯಾಗಿ ಜನಸಾಮಾನ್ಯರ ನಡುವೆ ಇರುತ್ತಿದ್ದ ಹಿರಿಯ ಹೋರಾಟಗಾರ ಪ ಮಲ್ಲೇಶ್‌ ಈಗ ನಮ್ಮ ನಡುವೆ ಇಲ್ಲ. ಅವರ ಕನ್ನಡ ಪರ ನಿಲುವಿನ ಫಲವಾಗಿಯೇ ಇಂದು ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಏಕೈಕ ಸಂಸ್ಥೆ, ನೃಪತುಂಗ ಕನ್ನಡ ಶೈಕ್ಷಣಿಕ ವಿದ್ಯಾ ವಿಕಾಸ ಸಂಸ್ಥೆ, ಮೈಸೂರಿನಲ್ಲಿ ರಾರಾಜಿಸುತ್ತಿರುವುದು ಅವರ ತಾತ್ವಿಕ ನಿಲುಮೆಗೆ ಸಾಕ್ಷಿ. ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ನೈತಿಕತೆಯನ್ನು ಸದಾ ಎತ್ತಿಹಿಡಿಯುತ್ತಿದ್ದ ಮಲ್ಲೇಶ್‌ ಅವರ ಹೋರಾಟದ ಬದುಕನ್ನು ದಾಖಲಿಸಿದರೆ ಒಂದು ಬೃಹತ್‌ ಗ್ರಂಥವೇ ಆಗಬಹುದು. ಯಾವುದೇ ರೀತಿಯ ಅನ್ಯಾಯದ ವಿರುದ್ಧ, ಅನ್ಯಾಯ ಎಸಗಿದವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ, ಸಿಡಿದೇಳುತ್ತಿದ್ದ ಹಠಮಾರಿ ಸ್ವಭಾವದ ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಮೈಸೂರಿನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪ್ರಗತಿಪರ-ಎಡಪಂಥೀಯ ಹೋರಾಟಗಾರರಿಗೆ, ಮಹಿಳಾ ಹೋರಾಟಗಾರರಿಗೆ ಮತ್ತು ದುಡಿಯುವ ವರ್ಗಗಳಿಗೆ ಒಂದು ಹೋರಾಟದ ಪ್ರತಿಧ್ವನಿಯಾಗಿಯೇ ತಮ್ಮ ಪಯಣವನ್ನು ಮುಗಿಸಿದ್ದಾರೆ.

ಒಂದು ಜೀವದ ಅಗಲಿಕೆ ಆ ಕುಟುಂಬದೊಳಗೆ ನಿರ್ವಾತವನ್ನು ಸೃಷ್ಟಿಸುವುದು ಸಹಜ. ಕೆಲ ವರುಷಗಳು ಸಂದ ನಂತರ ವಿಸ್ಮೃತಿಗೆ ಜಾರುವುದೂ ಮಾನವ ಸಹಜ. ಆದರೆ ನಮ್ಮ ನಡುವಿನ ದಿಟ್ಟ ಜನಪರ ದನಿಯಾಗಿದ್ದ ಶ್ರೀಯುತ ಪ ಮಲ್ಲೇಶ್‌ ಅವರ ಅಗಲಿಕೆಯಿಂದ ಮೈಸೂರಿನಲ್ಲಿ ಸೃಷ್ಟಿಯಾಗಿರುವ ನಿರ್ವಾತ ಬಹುಶಃ ಶಾಶ್ವತವಾಗಿ ಉಳಿಯುವಂತಹುದು. ತುಂಬಲಾರದ ನಷ್ಟ ಎನ್ನುವ ಕ್ಲೀಷೆಯನ್ನು ದಾಟಿ ನೋಡಿದಾಗ, ಪ ಮಲ್ಲೇಶ್‌ ಅವರ ಅಗಲಿಕೆ,  ಮೈಸೂರಿನ ಜನ ಚಳುವಳಿಗಳ ಪಾಲಿಗೆ ಮತ್ತು ಅವರ ಆದರ್ಶಪ್ರಾಯದಿಂದ ಬಹಳಷ್ಟು ಕಲಿಯಬಹುದಾಗಿದ್ದ ಮುಂದಿನ ತಲೆಮಾರಿನ ಪಾಲಿಗೆ, ಬಹುದೊಡ್ಡ ಪೆಟ್ಟು. ರಾಜಿಯಾಗದ ಮನೋಭಾವದೊಂದಿಗೇ ಬದುಕಿ ಬಾಳಿ, ಹೋರಾಟಗಳಲ್ಲೇ ಜೀವ ಸವೆಸಿದ ಹಿರಿಯ ನಾಯಕ ಕೊನೆಗೂ ಜವರಾಯನೊಂದಿಗೆ ರಾಜಿಯಾಗಲೇಬೇಕಾದ್ದು ಪ್ರಕೃತಿ ಸಹಜ.

ಪ ಮಲ್ಲೇಶ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರ ಆದರ್ಶ ಮತ್ತು ಹೋರಾಟದ ಸ್ಫೂರ್ತಿಯನ್ನು ನಮ್ಮೊಳಗೆ ಹಿಡಿದಿಟ್ಟುಕೊಳ್ಳುವುದೇ ಆಗಿರಲು ಸಾಧ್ಯ.

ನಾ ದಿವಾಕರ

Previous Post

| DUNIYA VIJAY | ಗುಲ್ಬರ್ಗದಿಂದ ಪಾದಯಾತ್ರೆ ಮಾಡಿ ಬಂದ ಅಭಿಮಾನಿಗೆ ಬೈದು ಬುದ್ಧಿ ಹೇಳಿದ ದುನಿಯಾ ವಿಜಯ್

Next Post

| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

Related Posts

Top Story

ಡೀಪ್ಟೆಕ್ ದಶಕಕ್ಕೆ ಮುನ್ನುಡಿ ಬರೆದ ಬೆಂಗಳೂರು ಟೆಕ್ ಮೇಳ, ಡೀಪ್ಟೆಕ್ ನವೋದ್ಯಮಗಳಿಗೆ ₹ 400 ಕೋಟಿ ನೆರವು: ಸಚಿವ ಪ್ರಿಯಾಂಕ್ ಖರ್ಗೆ

by ಪ್ರತಿಧ್ವನಿ
November 20, 2025
0

ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿರುವ ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆದಾರರಿಗೆ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಬೆಂಗಳೂರು, ನವೆಂಬರ್ 20: ಇಲ್ಲಿ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

Please login to join discussion

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada