ಎರಡು ವಾರಗಳು ಕಳೆದರು ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ವಿರೋಧ ಪಕ್ಷಗಳು ಪೆಗ್ಗಾಸಸ್ ಕದ್ದಾಲಿಕೆ , ಕೃಷಿ ಕಾನೂನು ಮತ್ತು ದೇಶದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಒತ್ತಾಯಿಸುತ್ತಿದೆ.
ಅವಿಶ್ಷಾಸ ಗೊತ್ತುವಳಿಯನ್ನು ರಾಜ್ಯಸಭಾ ಅಧ್ಯಕ್ಷರಾದ ವೆಂಕಯ್ಯ ನಾಯ್ಡುರವರ ವಿರುದ್ದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಪಕ್ಷಗಳು ಮಂಡಿಸಲಿವೆ ಎಂದು ಮೂಲಗಳು ತಿಳಿಸಿವೆ.
ಜುಲೈ 19ರಂದು ಶುರುವಾದ ಮಳೆಗಾಲದ ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ದ ಪೆಗ್ಗಾಸಸ್ ಕದ್ದಾಲಿಕೆ , ಲಸಿಕಾ ಅಭಿಯಾನ , ದೇಶದ ಜ್ವಲಂತ ಸಮ್ಯಸೆಗಳಿಗೆ , ವಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಲು ವಿಫಲವಾಗಿದ್ದು ಆಡಳಿತ ಸರ್ಕಾರ ಟೀಕೆಗೆ ಗುರಿಯಾಗಿದೆ.
ಕೇಂದ್ರ ಸರ್ಕಾರವು ಸಂಸತ್ ಕಲಾಪವನ್ನು ಸರಿಯಾಗಿ ನಡೆಸಲು ಬಿಡುತ್ತಿಲ್ಲ ಅವರು ಕಲಾಪವನ್ನು ಎಷ್ಟು ಭಾರಿ ಕರೆಯುತ್ತಾರೆ ಎಂಬುದು ಮುಖ್ಯವಲ್ಲ ಕಲಾಪದಲ್ಲಿ ಚರ್ಚಿಸಬೇಕಾಗಿರುವ ವಿಷಯಗಳು ಮುಖ್ಯ ಎಂದು ಟಿಎಂಸಿ ಸಂಸದ ಡೆರೆಕ್ ʼ ಒ ʼ ಬ್ರಯಾನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಟಿಎಂಸಿ ಸಂಸದೆ ಮಮತಾ ಬ್ಯಾನರ್ಜಿ ಅವರ ಕಾನೂನು ಸಲಹೆಗಾರರಾದ ಶಂತನುಸೇನ್ ರವರು ಈ ವೇಳೆ ಸಂಸತ್ತಿನಿಂದ ಅಮಾನತಾದರು.
ಇನ್ನೊಂದೆಡೆ ಆಡಳಿತ ಪಕ್ಷ ಬಿಜೆಪಿ ಪ್ರತಿಪಕ್ಷದವರು ಸುಗಮ ಕಲಾಪಕ್ಕೆ ಅನುವು ಮಾಡಿಕೊಡದೆ ಅಡ್ಡಿಪಡಿಸುತ್ತಿದ್ದಾರೆಂದು ಆಡಳಿತ ಪಕ್ಷ ಬಿಜೆಪಿ ವಿಪಕ್ಷಗಳ ಮೇಲೆ ಕಿಡಿಕಾರಿದೆ.
ಒಂದು ವೇಳೆ ವಿಪಕ್ಷದವರು ಏನಾದರು ರಾಜ್ಯಸಭಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೆ ಆದರೆ ಮುಂದಿನ ವಾರ ಸಹ ಸುಗಮವಾಗಿ ಸಂಸತ್ ಕಲಾಪಗಳು ನಡೆಯುವುದು ಅನುಮಾನ.