ಓಮಿನಿ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದರ್ಥ ಆದರೆ, ಈ ಶಬ್ದ ಹೆಚ್ಚು ಜನಪ್ರಿಯವಾಗಿದ್ದು ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರಿನಿಂದ. ಈಗ ಅದೇ ಹೆಸರಿನ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಭಾನುವಾರ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಂತರ ಮಾತನಾಡಿದ ಗೃಹ ಸಚಿವರು ನಮ್ಮ ಊರ ತೀರ್ಥಹಳ್ಳಿ ಸುಂದರವಾದ ಊರು ಅಲ್ಲಿನ ಗಾಳಿ, ನೀರಿಗೆ ಒಂದು ತರಹದ ಶಕ್ತಿಯಿದೆ. ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ನನ್ನಗೆ ಹೆಮ್ಮೆಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದ ನಿರ್ದೇಶಕ ಮಂಜು ಹೆದ್ದೂರು ನಮ್ಮೂರಿನವರೇ ಅವರು ಬಂದು ಪ್ರೀತಿಯಿಂದ ಕರೆದಾಗ ನನ್ನಗೆ ಆಗಲ್ಲ ಎಂದು ಹೇಳಲು ಮನಸ್ಸಾಗಲಿಲ್ಲ ಅವರೆಲ್ಲರ ಪ್ರೀತಿ ನನ್ನನು ಇಲಿಯವರೆಗೂ ಕರೆತಂದಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತನಾಡಿದ ನಾಯಕ ನಟ ಸಿದ್ದು ಮೂಲಿಮನಿ ಚಿತ್ರವೊಂದರಲ್ಲಿ ನಾವು ಚಿತ್ರವನ್ನ ತೋರಿಸುವ ಪ್ರಯತ್ನ ಮಾಡಿದ್ದೇವೆ ಲವ್, ಸಸ್ಪೆನ್ಸ್, ಹಾರರ್ ಎಲ್ಲವು ಸಹ ನಮ್ಮ ಚಿತ್ರದಲ್ಲಿದೆ. ತೀರ್ಥಹಳ್ಳಿ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಾಯಕಿ ಅಶ್ವಿನಿ ಚಂದ್ರ ಶೇಖರ್ ಮಾತನಾಡಿ ನಾನು ಹಲವು ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸಿದ್ದೇನೆ ನಾನು ಮೂಲತಃ ಮಲೆನಾಡಿನ ಹುಡುಗಿ ಅದೇ ಊರಿನ ಹುಡುಗಿ ಪಾತ್ರ ಸಿಕ್ಕಿರುವದು ನನ್ನಗೆ ತುಂಬಾ ಖಷಿಯಾಗಿದೆ ಎಂದು ನಾಯಕನಟಿ ಅಶ್ವಿನಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರಕ್ಕೆ ಬೆಳ್ಳುಡಿ ಫಿಲಂಸ್ ಹಾಗೂ ಎಸ್.ಆರ್.ಫಿಲಂಸ್ ಜಂಟಿಯಾಗಿ ಬಂಡವಾಳ ಹೂಡಿದ್ದು ಮಂಜು ಹೆದ್ದೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದು, ಎಂ.ಬಿ.ಹಳ್ಳಿಕಟ್ಟಿ ಛಾಯಾಗ್ರಾಹಕರಾಗಿ ಆಗಿ ಕಾರ್ಯನಿರ್ವಹಿಸಿದ್ದಾರೆ.
ಪೂಜಾ ಜನಾರ್ದನ್, ಭರತ್ ಬೋಪಣ್ಣ, ಮಂಜು ಹೆದ್ದೂರು, ಆಕಾಂಕ್ಷಾ ಪಟ್ಟಿಮಕ್ಕಿ, ದಿ || ಮೋಹನ್ ಜುನೇಜಾ, ಪ್ರಕಾಶ್ ತುಮ್ಮಿನಾಡ್, ಮನಸ್ವಿತ್ ಸೇರಿದಂತೆ ಮುಂತಾದವರು ತಾರಬಳಗದಲ್ಲಿದ್ದಾರೆ.