ಬೆಂಗಳೂರು : ಕಾಂಗ್ರೆಸ್ ಈಗಾಗಲೇ ಪದ್ಮನಾಭನಗರಕ್ಕೆ ಅಭ್ಯರ್ಥಿಯನ್ನೇನೋ ಘೋಷಣೆ ಮಾಡಿದೆ. ಆದರೆ ಇನ್ನೂ ಆ ಅಭ್ಯರ್ಥಿಗೆ ಪಕ್ಷದಿಂದ ಬಿ ಫಾರಂ ಸಿಗದೇ ಇರೋದನ್ನು ನೋಡಿದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ಲಾನ್ ಏನಿರಬಹುದು ಎಂಬ ಅನುಮಾನ ಮೂಡಿದೆ.
ಕಾಂಗ್ರೆಸ್ನಿಂದ ಪದ್ಮನಾಭನಗರಕ್ಕೆ ರಘುನಾಥ ನಾಯ್ಡು ಆಯ್ಕೆಯಾಗಿದ್ದಾರೆ. ಆದರೆ ಡಿಕೆಶಿ ವಿರುದ್ಧ ಕನಕಪುರದಲ್ಲಿ ಆರ್.ಅಶೋಕ್ರನ್ನು ಬಿಜೆಪಿ ಕಣಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ಪದ್ಮನಾಭನಗರದಲ್ಲಿ ಆರ್.ಅಶೋಕ್ರನ್ನು ಕಟ್ಟಿ ಹಾಕಲು ಡಿ.ಕೆಶಿವಕುಮಾರ್ ಇನ್ನೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಜೆಪಿಯ ತಂತ್ರಕ್ಕೆ ಮರುತಂತ್ರ ಹೂಡುವುದು ಕಾಂಗ್ರೆಸ್ ಪ್ಲಾನ್ ಆಗಿದೆ. ಇದೇ ಕಾರಣಕ್ಕೆ ಇನ್ನೂ ರಘುನಾಥ ನಾಯ್ಡುಗೆ ಬಿ ಫಾರಂ ಸಿಕ್ಕಿಲ್ಲ ಎನ್ನಲಾಗಿದೆ.

ಆರ್.ಅಶೋಕ್ ವಿರುದ್ಧ ಡಿ.ಕೆ ಶಿವಕುಮಾರ್ ತಮ್ಮ ಸಹೋದರ ಡಿ.ಕೆ ಸುರೇಶ್ರನ್ನು ಪದ್ಮನಾಭನಗರದಲ್ಲಿ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿ ಫಾರಂ ಪಡೆಯಲು ಕೆಪಿಸಿಸಿ ಕಚೇರಿಗೆ ತೆರಳಿದ್ದ ರಘುನಾಥ ನಾಯ್ಡುವನ್ನು ಬರಿಗೈನಲ್ಲಿ ವಾಪಸ್ ಕಳುಹಿಸಲಾಗಿದೆ.






