ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಕಾಂಗ್ರೆಸ್ಗೆ ಮುಳ್ಳಾಗುತ್ತಾ ಅನ್ನೋ ಆತಂಕ ಎದುರಾಗಿದೆ. ಎಲೆಕ್ಷನ್ ಟೈಂನಲ್ಲಿ ಲವ್ ಜಿಹಾದ್ ಪಾಲಿಟಿಕ್ಸ್ ಶುರುವಾಗಿದ್ದು, ಬಿಜೆಪಿ ಲೀಡರ್ಸ್ ಲವ್ ಜಿಹಾದ್ ಎಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್ಗೆ ಲಿಂಗಾಯತ ಮತ ದೂರವಾಗುವ ಭಯ ಎದುರಾಗಿದೆ. ಈ ನಡುವೆ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ ನಾಯಕರು ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ. ಕನಿಷ್ಠ ಪಕ್ಷ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಕಣ್ಣೀರು ಹಾಕಿದ್ದರು.
![](https://pratidhvani.com/wp-content/uploads/2024/04/WhatsApp-Image-2024-04-20-at-10.50.14-AM-2-473x1024.jpeg)
ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಮನೆಗೆ ರಕ್ಷಣೆ ಕೊಡಲು ಆಗಿಲ್ಲ. ಇವರು ರಾಜ್ಯಕ್ಕೆ ಯಾವ ರಕ್ಷಣೆ ಕೊಡ್ತಾರೆ ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಸಿಎಂ ಸರಿಯಾಗಿ ಮಾಹಿತಿ ಪಡೆಯದೇ ಹೇಳಿಕೆ ನೀಡಿದ್ದಾರೆ. ಪೂರ್ವಾಪರ ಗೊತ್ತಿಲ್ಲದೆ ಸೂಕ್ಷ್ಮತೆ ಅರಿತುಕೊಳ್ಳದೆ ಮಾತನಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿದ್ದಾರೆ. ಆ ಯುವತಿಯ ತಂದೆ ಕಣ್ಣೀರಿಟ್ಟು ಮನವಿ ಮಾಡಿದ್ದನ್ನು ಗಮನಿಸಿದ್ದೇನೆ. ಈ ಸರ್ಕಾರ ಒಂದು ಸಮುದಾಯದ ಓಲೈಕೆಗಾಗಿಯೇ ಇದೆ. ಇದೇ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.
![](https://pratidhvani.com/wp-content/uploads/2024/04/WhatsApp-Image-2024-04-20-at-10.50.14-AM-1-473x1024.jpeg)
ಇನ್ನು ಮದುವೆ ಮಾಡಿಕೊಡುವಂತೆ ನೇಹಾಳ ಪೋಷಕರಿಗೆ ಪೀಡಿಸುತ್ತಿದ್ದ ಎನ್ನುವುದು FIR ನಲ್ಲಿ ದಾಖಲಾಗಿದೆ. ಖುದ್ದು ಪೋಷಕರು ನೀಡಿರುವ ದೂರಿನಲ್ಲಿ ಈ ವಿಷಯ ಬಹಿರಂಗವಾಗಿದ್ದು, ನೇಹಾಳನ್ನು ಪ್ರೀತಿ ಮಾಡ್ತಿದ್ದೇನೆ. ಮದುವೆ ಮಾಡಿ ಕೊಡುವಂತೆ ಬೆನ್ನು ಬಿದ್ದಿದ್ದ ಎನ್ನಲಾಗಿದೆ. ನಾಲ್ಕೈದು ತಿಂಗಳಿಂದಲೂ ಮದುವೆಗಾಗಿ ಪೀಡಿಸುತ್ತಿದ್ದ ಆರೋಪಿ, ನಮ್ಮ ಮಗಳು ನಿನ್ನನ್ನು ಇಷ್ಟಪಟ್ಟಿಲ್ಲ ಎಂದಿದ್ದರು. ಮಗಳು ಹೆಚ್ಚಿನ ವ್ಯಾಸಂಗ ಮಾಡುವುದಿದೆ ಎಂದು ಫಯಾಜ್ ಕುಟುಂಬಕ್ಕೆ ಪೋಷಕರು ಹೇಳಿದ್ದರು. ಫಯಾಜ್ ತಂದೆ, ತಾಯಿಗೆ ದೂರವಾಣಿ ಕರೆ ಮಾಡಿ ನೇಹಾ ಪೋಷಕರು ಹೇಳಿದ್ದರು. ಇಷ್ಟೆಲ್ಲಾ ಆದ ಮೇಲೂ ಮದುವೆಯಾಗದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕ್ತಿದ್ದ ಎನ್ನಲಾಗಿದೆ.
![](https://pratidhvani.com/wp-content/uploads/2024/04/WhatsApp-Image-2024-04-20-at-10.50.12-AM-473x1024.jpeg)
ನೇಹಾ ಹತ್ಯೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ರಾಜ್ಯದ ಜನರ ಕ್ಷಮೆಯಾಚನೆ ಮಾಡಿದ್ದಾರೆ. ನನ್ನ ಮಗ ಓದಿನಲ್ಲಿ ಬಹಳ ಜಾಣನಿದ್ದ. ಅವಳೇ ನನ್ನ ಮಗನಿಗೆ ಪ್ರಪೋಸ್ ಮಾಡಿದ್ದು. ಇಬ್ಬರೂ ಮದ್ವೆ ಆಗ್ಬೇಕು ಅಂದುಕೊಂಡಿದ್ದರು. ಈ ಬಗ್ಗೆ ನನ್ನ ಬಳಿ ಹೇಳಿದಾಗ ಲವ್ ಎಲ್ಲಾ ಬೇಡ ಅಂತ ಹೇಳಿದ್ದೆ. ಫಯಾಜ್ ಕೆಎಎಸ್ ಆಫೀಸರ್ ಆಗಬೇಕು ಅಂತಾ ಕನಸು ಕಂಡಿದ್ದ. ಆದ್ರೆ, ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತಿದೆ. ತಪ್ಪು ಮಾಡಿದವನಿಗೆ ತಕ್ಕ ಶಿಕ್ಷೆ ಆಗಬೇಕು ಎಂದಿದ್ದಾರೆ.
![](https://pratidhvani.com/wp-content/uploads/2024/04/WhatsApp-Image-2024-04-20-at-10.50.11-AM-473x1024.jpeg)