• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಂದಿನಿ ಹಾಲು ಇನ್ನು ಇತಿಹಾಸ ಮಾತ್ರ..! ಬಿಜೆಪಿ ಮುಂದಿನ ಪ್ಲ್ಯಾನ್​ ಏನು..?

Any Mind by Any Mind
April 9, 2023
in Top Story, ದೇಶ, ರಾಜಕೀಯ
0
ನಂದಿನಿ ಹಾಲು ಇನ್ನು ಇತಿಹಾಸ ಮಾತ್ರ..! ಬಿಜೆಪಿ ಮುಂದಿನ ಪ್ಲ್ಯಾನ್​ ಏನು..?
Share on WhatsAppShare on FacebookShare on Telegram

ADVERTISEMENT

ಬೆಂಗಳೂರು: ಏ.೦9: ಕರ್ನಾಟಕದಲ್ಲಿ ನಂದಿನಿ ಹಾಲು ಇನ್ಮುಂದೆ ಇತಿಹಾಸದ ಪುಟಗಳನ್ನು ಸೇರುತ್ತಾ..? ಈ ರೀತಿಯ ಅನುಮಾನ ಕರ್ನಾಟಕ ಜನರ ಮನಸ್ಸಲ್ಲಿ ಮನೆ ಮಾಡಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಡಬಲ್​ ಎಂಜಿನ್​ ಬಿಜೆಪಿ ಸರ್ಕಾರ ಮಾಡುತ್ತಿದೆ ಎನ್ನಲಾದ ಹುನ್ನಾರ. ನಂದಿನಿ ಬ್ರ್ಯಾಂಡ್​​ನ ದೇಶ-ವಿದೇಶದಲ್ಲಿ ಖ್ಯಾತಿ ಪಡೆಯುವಂತೆ ಮಾಡಿರುವ ಕರ್ನಾಟಕ ಮಿಲ್ಕ್​ ಫೆಡರೇಷನ್​ (KMF) ಗುಜರಾತ್​​ನ ಅಮುಲ್​ ಸಂಸ್ಥೆ ಜೊತೆಗೆ ವಿಲೀನ ಮಾಡಲಿದ್ದಾರೆ ಎನ್ನುವ ವಿಚಾರ ಕನ್ನಡಿಗರನ್ನು ಕೆರಳಿಸಿದೆ. ಇದಕ್ಕೆ ಕಾರಣ ಈ ಹಿಂದೆ ಅಮಿತ್​ ಷಾ ನೀಡಿದ್ದ ಹೇಳಿಕೆ. ಗುಜರಾತ್​​ ಮೂಲದ ಅಮುಲ್​ ಜೊತೆಗೆ ನಂದಿನಿ ಸೇರಿಕೊಂಡರೆ ಪ್ರತಿ ಗ್ರಾಮದಲ್ಲೂ ಪ್ರಾಥಮಿಕ ಡೈರಿಗಳು ಶುರುವಾಗುತ್ತವೆ ಎಂದಿದ್ದರು.

ಮಂಡ್ಯದಲ್ಲಿ ಮಾಡಿದ್ದ ಭಾಷಣ, ಮರೆತು ಬಿಟ್ಟ ಬಿಜೆಪಿ..!

ಹೊಸ ವರ್ಷ ಆರಂಭದಲ್ಲಿ ಮಂಡ್ಯದಲ್ಲಿ ಮನ್ಮುಲ್ ಮೆಗಾ ಡೈರಿ ಉದ್ಘಾಟಿಸಿ ಮಾತನಾಡಿದ್ದ ಅಮಿತ್​ ಷಾ, ಅಮುಲ್​ ಹಾಗು ನಂದಿನಿ ಜಂಟಿಯಾಗಿ ಕೆಲಸ ಮಾಡಲಿವೆ. ಮುಂದಿನ ಮೂರು ವರ್ಷಗಳಲ್ಲಿ ಅಮುಲ್​ನಿಂದ ನಂದಿನಿ ಎಲ್ಲಾ ತಾಂತ್ರಿಕ ಸಹಕಾರ ಮತ್ತು ಬೆಂಬಲ ಪಡೆಯಲಿದೆ. ಕರ್ನಾಟಕ ಹಾಗು ಗುಜರಾತ್​ ಒಟ್ಟುಗೂಡಿದರೆ ಇಡೀ ದೇಶದ ರೈತರಿಗೆ ಅನುಕೂಲ ಎಂದಿದ್ದರು. ಇದರಲ್ಲಿ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್​ ಷಾ ಅವರ ಉದ್ದೇಶ ನೇರವಾಗಿ ಅಮುಲ್​ ಜೊತೆಗೆ ನಂದಿನಿ ವಿಲೀನ ಮಾಡುವುದೇ ಆಗಿದ್ದರೂ, ರಾಜಕೀಯ ವಿರೋಧ ಹೆಚ್ಚಳವಾದ ಕಾರಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ತೇಪೆ ಹಾಕುವ ಕೆಲಸ ಮಾಡಿತ್ತು. ಅಮಿತ್​ ಷಾ ಅವರ ಹೇಳಿಕೆಯನ್ನು ತಿರುಚಲಾಗಿದೆ. ಅಮಿತ್​ ಷಾ ವಿಲೀನದ ಬಗ್ಗೆ ಮಾತನ್ನೇ ಆಡಲಿಲ್ಲ ಎಂದು ಷರಾ ಬರೆದುಕೊಂಡರು. ಇದೀಗ ಮತ್ತೆ #Savenandini ಕಾವು ಪಡೆದುಕೊಂಡಿದೆ.

ಚುನಾವಣೆಗಾಗಿ ನಡೆಯುತ್ತಿದೆ ನಂದಿನಿ ಹೋರಾಟ..?

ಬಿಜೆಪಿ ನಾಯಕರು ಹಾಗು ಬಿಜೆಪಿ ಕಾರ್ಯಕರ್ತ ಎಂದುಕೊಂಡವರು ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬಗ್ಗೆ ಹೋರಾಟ ಮಾಡುತ್ತಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಅಮುಲ್​ ವಿರೋಧ ಮಾಡುತ್ತಿರುವುದು ಏಕೆ..? ದೇಶಾದ್ಯಂತ ನಂದಿನಿ ಬೆಳೆಯುವುದು ಇಷ್ಟವಿಲ್ಲವೇ..? ಎಂದೆಲ್ಲಾ ಪ್ರಶ್ನೆ ಕೇಳುತ್ತಿದ್ದಾರೆ. ಕೆಎಂಎಫ್​ ಸಹಕಾರ ಸಂಸ್ಥೆ ಆಗಿದ್ದು, ರೈತರಿಂದ ರೈತರಿಗಾಗಿ ಸೃಷ್ಟಿಯಾಗಿರುವ ಸಂಸ್ಥೆ. ಸಣ್ಣ ಮಟ್ಟದಿಂದ ಇದೀಗ ಸಾವಿರಾರು ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದು ಹೆಮ್ಮರವಾಗಿ ನಿಂತಿದೆ. ಅಂದರೆ ಇದು ರೈತರ ಶ್ರಮದಿಂದ ಕಟ್ಟಿರುವ ಸಂಸ್ಥೆ. ಅದನ್ನು ಅಷ್ಟು ಸುಲಭವಾಗಿ ಗುಜರಾತ್​ನ ಸಂಸ್ಥೆ ಜೊತೆಗೆ ವಿಲೀನ ಮಾಡುವುದು ಸಾಧ್ಯವಿಲ್ಲ. ನಮ್ಮ ಕರ್ನಾಟಕದಲ್ಲೇ ಸ್ಥಾಪನೆ ಆಗಿದ್ದ ವಿಜಯಾ ಬ್ಯಾಂಕ್​ ಅನ್ನು ಇಂದು ಬ್ಯಾಂಕ್​ ಆಫ್​ ಬರೋಡಾ ಎಂದು ಮಾಡಲಾಗಿದೆ. ಅದರ ಬದಲು ವಿಜಯಾ ಬ್ಯಾಂಕ್​ ಜೊತೆಗೆ ಯಾಕೆ ವಿಲೀನ ಮಾಡಲಿಲ್ಲ. ವಿಜಯ ಬ್ಯಾಂಕ್​ ಅನ್ನೋ ಹೆಸರನ್ನೇ ಯಾಕೆ ಉಳಿಸಲಿಲ್ಲ…? ಬ್ಯಾಂಕ್​ ಆಫ್​ ಬರೋಡಾ ಗುಜರಾತ್​ನದ್ದು..? ಅಲ್ಲವೇ ಎಂದು ಕನ್ನಡಪರ ಹೋರಾಟಗಾರರು ತಿರುಗೇಟು ನೀಡುತ್ತಿದ್ದಾರೆ.

ನಂದಿನಿ ವಿಲೀನದ ಭಯ ಸೃಷ್ಟಿಯಾಗಿದ್ದು ಯಾಕೆ..?

ಅಮಿತ್​ ಷಾ ಈಗಾಗಲೇ ಹೇಳಿಕೆ ನೀಡಿದ್ದು ಆಯ್ತು. ಆಗ ಹೊತ್ತಿಕೊಂಡಿದ್ದ ಬೆಂಕಿ ನಂದಿದ್ದೂ ಆಯ್ತು. ಆದರೆ ಇದೀಗ ಅಮುಲ್​ ತನ್ನ ಸಂಸ್ಥೆ ಕರ್ನಾಟಕದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದೇವೆ. ನಿಮ್ಮ ಮನೆಗೆ ಶೀಘ್ರದಲ್ಲೇ ಅಮುಲ್​ ಹಾಲು ಬರಲಿದೆ ಎಂದು ಟ್ವೀಟ್​ ಮಾಡಿತ್ತು. ಅದರ ಬೆನ್ನಲ್ಲೇ ಹೋಟೆಲ್​ ಸೇರಿದಂತೆ ಮನೆಗಳಿಗೂ ನಂದಿನಿ ಹಾಲು ಸಿಗ್ತಿಲ್ಲ ಅನ್ನೋ ಮಾತುಗಳು ಶುರುವಾದವು. ಕೆಲವು ದಿನಗಳ ಕಾಲ ನಂದಿನಿ ಹಾಲನ್ನು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿ, ರಾಜ್ಯದಲ್ಲಿ ಸಿಗದಂತೆ ಅಭಾವ ಸೃಷ್ಟಿ ಮಾಡುವುದು. ಆ ಮೂಲಕ ಅಮುಲ್​ಗೆ ಮಾರುಕಟ್ಟೆ ಅವಕಾಶ ಮಾಡಿಕೊಡುವುದು. ನಂತರ ನಂದಿನಿ ವ್ಯಾಪಾರ ಕುಂಠಿತವಾದ ಬಳಿಕ ಸಂಸ್ಥೆ ನಷ್ಟದಲ್ಲಿದೆ ಎನ್ನುವ ಹುನ್ನಾರ ಮಾಡಿ ಅಮುಲ್​ ಸಂಸ್ಥೆ ಜೊತೆಗೆ ಸೇರಿಸಿಕೊಳ್ಳುವುದು. ಸಾವಿರಾರು ಕೋಟಿ ಮೌಲ್ಯದ ಸಂಸ್ಥೆ ಬಿಟ್ಟಿಯಾಗಿ ಗುಜರಾತ್​ ಸೇರುತ್ತದೆ ಎನ್ನುವುದಾದರೆ ವ್ಯಾಪಾರಿ ಮನಸ್ಥಿತಿಯ ವ್ಯಾಪಾರಿಗಳು ಬಿಡುವುದು ಉಂಟೇ ಎನ್ನುವುದು ಕನ್ನಡಿಗರ ಆತಂಕ..

ನಂದಿನಿ ಅಮುಲ್​ ಸೇರಿದರೆ ಭಾರೀ ಲಾಭ ಆಗುತ್ತಾ..? ನಿರೀಕ್ಷಿಸಿ..

ಕೃಷ್ಣಮಣಿ

Tags: 2023 election2023 Election ResultAmit Shahamulassembly electionBJPBJP GovernmentBOMMAIBSYCMCmIbrahimCongress PartyctraviDKShivakumarElection Commissionelection resultHDDHDKJanasankalpa YatreJDSKannadaKarnataka ElectionkumaraswamyModiNalin Kumar KateelNandiniNandini KMFnandini milk productsnandinivsamulNewsPancharatna YatrePMModisiddaramaiahState ElectionVijayasankalpaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿ
Previous Post

ಸಫಾರಿ ಡ್ರೆಸ್​ ತೊಟ್ಟು ಬಂಡಿಪುರದಲ್ಲಿ ಪ್ರಧಾನಿ ಮೋದಿ ರೌಂಡ್ಸ್​ : ಇಲ್ಲಿವೆ ಫೋಟೋಸ್​​

Next Post

ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ.. ಶನಿವಾರದ ಮುಹೂರ್ತ ಮಿಸ್​..!

Related Posts

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?
Top Story

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗಿದ್ದು, ಕಾಂಗ್ರೆಸ್‌ ಪಾಳಯದಲ್ಲಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ...

Read moreDetails
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

May 26, 2026
ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

May 26, 2026
Next Post
ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ.. ಶನಿವಾರದ ಮುಹೂರ್ತ ಮಿಸ್​..!

ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ.. ಶನಿವಾರದ ಮುಹೂರ್ತ ಮಿಸ್​..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada