• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

‘ನನ್ನ ಹೋರಾಟ ಸಿದ್ದರಾಮಯ್ಯ ವಿರುದ್ಧವಲ್ಲ, ರೈತರ ಭೂಮಿ ಉಳಿಸಲು’ : ಹೆಚ್‌ಡಿಕೆ ಸ್ಪಷ್ಟನೆ

ಪ್ರತಿಧ್ವನಿ by ಪ್ರತಿಧ್ವನಿ
June 22, 2026
in ರಾಜಕೀಯ
0
‘ನನ್ನ ಹೋರಾಟ ಸಿದ್ದರಾಮಯ್ಯ ವಿರುದ್ಧವಲ್ಲ, ರೈತರ ಭೂಮಿ ಉಳಿಸಲು’ : ಹೆಚ್‌ಡಿಕೆ ಸ್ಪಷ್ಟನೆ
Share on WhatsAppShare on FacebookShare on Telegram

ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ಹೋರಾಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ರೈತರ ಭೂಮಿ ಉಳಿಸುವ ಉದ್ದೇಶದಿಂದ ನಡೆಯುತ್ತಿರುವ ಹೋರಾಟ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಮಂಡ್ಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹೋರಾಟಕ್ಕೆ ವೈಯಕ್ತಿಕ ಹಾಗೂ ಜಾತಿ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

“ನಾನು ರೈತರ ಪರವಾಗಿ ಧ್ವನಿ ಎತ್ತಿದ್ದೇನೆ. ಕೆಲವರು ಇದನ್ನು ವೈಯಕ್ತಿಕ ಹೋರಾಟ ಎಂದು ಬಿಂಬಿಸುತ್ತಿದ್ದಾರೆ. ರೈತರ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಕೋರರ ಕೈಗೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅದನ್ನು ತಡೆಯಲು ನಾನು ರೈತರ ಜೊತೆ ನಿಂತಿದ್ದೇನೆ” ಎಂದು ಹೇಳಿದರು.ಬಿಡದಿ ಪ್ರದೇಶದ ಭೂಮಿಯನ್ನು ಉಳಿಸಿದವನು ತಾನೇ ಎಂದು ಹೇಳಿದ ಕುಮಾರಸ್ವಾಮಿ, “ಕೆಲ ಕಾಂಗ್ರೆಸ್ ಶಾಸಕರೇ ನನ್ನ ನಿರ್ಧಾರದಿಂದ ರೈತರ ಭೂಮಿ ಉಳಿಯಿತು ಎಂದು ಒಪ್ಪಿಕೊಂಡಿದ್ದಾರೆ. ಆಗ ನಾವು ಟೌನ್‌ಶಿಪ್ ಯೋಜನೆ ರೂಪಿಸಿದ್ದರೂ, ರೈತರು ವಿರೋಧಿಸಿದ ಕಾರಣ ಯೋಜನೆಯನ್ನು ಕೈಬಿಟ್ಟೆವು. ಅದರಿಂದಲೇ ಇಂದು ಆ ಭೂಮಿ ರೈತರ ಬಳಿ ಉಳಿದಿದೆ” ಎಂದು ಹೇಳಿದರು.

 

2006-07ರಲ್ಲಿ ಇದೇ ವಿಷಯದ ಕುರಿತು ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಎಲ್ಲ ದಾಖಲೆಗಳು ಲಭ್ಯವಿರುವಾಗ ಈಗ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

 

“ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಬೇಕಾಗಿಲ್ಲ. ರೈತರ ಹಿತಕ್ಕಾಗಿ ಇಡೀ ಯೋಜನೆಯನ್ನೇ ಕೈಬಿಡಿ. ಆಗ ರಾಜ್ಯದ ಜನ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸಲಹೆ ನೀಡಿದರು.ಕೆಲ ಜನಪ್ರತಿನಿಧಿಗಳು ರೈತರಿಗೆ ಚೆಕ್ ವಿತರಿಸುವ ಕಾರ್ಯಕ್ರಮ ನಡೆಸುತ್ತಿರುವುದನ್ನು ಟೀಕಿಸಿದ ಕುಮಾರಸ್ವಾಮಿ, “ಬಡ ರೈತರ ಕಷ್ಟಗಳ ಜೊತೆ ಚೆಲ್ಲಾಟ ಆಡಬೇಡಿ. ಇದು ಸಹಾಯವಲ್ಲ, ಪ್ರದರ್ಶನ. ಸಾಲ ಮಾಡಿ ಹಣ ಹಂಚುವುದು ರಾಜ್ಯದ ಆರ್ಥಿಕ ಸ್ಥಿತಿಗೆ ಹೊರೆ” ಎಂದು ಕಿಡಿಕಾರಿದರು.

ಕೈಗಾರಿಕೆಗಳು ಮತ್ತು ಟೌನ್‌ಶಿಪ್ ಅಭಿವೃದ್ಧಿಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ರಾಜ್ಯದಲ್ಲಿ ಸಾಕಷ್ಟು ಒಣಭೂಮಿ ಇದೆ. ಅಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿ. ಆದರೆ ನೀರಾವರಿ ಸೌಲಭ್ಯವಿರುವ ಫಲವತ್ತಾದ ಕೃಷಿ ಭೂಮಿಯನ್ನು ಏಕೆ ಗುರಿಯಾಗಿಸುತ್ತೀರಿ?” ಎಂದು ಪ್ರಶ್ನಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: #AgricultureLand#BidadiTownship#FarmerIssues#FarmerRights#hdkumaraswamy#jds#JDSNews#KannadaNews#KarnatakaPolitics#LandAcquisition#mandya#politicalnews#PoliticalUpdate#siddaramaiah#TownshipProject#trendingnewsbreakingnewsfarmersprotestHDKkarnatakanews
Previous Post

ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ

Next Post

ಕೆಪಿಸಿಸಿ ವೇದಿಕೆಯಿಂದ ಸಿದ್ದರಾಮಯ್ಯ ಬಿಗ್ ಮೆಸೇಜ್

Related Posts

ಕೆಪಿಸಿಸಿ ವೇದಿಕೆಯಿಂದ ಸಿದ್ದರಾಮಯ್ಯ ಬಿಗ್ ಮೆಸೇಜ್
ರಾಜಕೀಯ

ಕೆಪಿಸಿಸಿ ವೇದಿಕೆಯಿಂದ ಸಿದ್ದರಾಮಯ್ಯ ಬಿಗ್ ಮೆಸೇಜ್

by ಪ್ರತಿಧ್ವನಿ
June 22, 2026
0

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಪದಗ್ರಹಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಭವಿಷ್ಯದ ರಾಜಕೀಯ ದಿಕ್ಕು, ಸಿದ್ಧಾಂತ ಹಾಗೂ...

Read moreDetails
“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

June 21, 2026
“ಯೂಸ್‌ಲೆಸ್ ಫೆಲೋಸ್!” ಡಿಕೆಶಿ ಘೋಷಣೆಗೆ ಸಿಟ್ಟಾದ ಖರ್ಗೆ; ಕಾಂಗ್ರೆಸ್ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ

“ಯೂಸ್‌ಲೆಸ್ ಫೆಲೋಸ್!” ಡಿಕೆಶಿ ಘೋಷಣೆಗೆ ಸಿಟ್ಟಾದ ಖರ್ಗೆ; ಕಾಂಗ್ರೆಸ್ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ

June 21, 2026
ʼಇದು ನಮ್ಮ ಐದಾರು ಜನರ ನಡುವಿನ ಗುಟ್ಟುʼ: ಸುಳಿವು ಬಿಟ್ಟುಕೊಟ್ಟ ಡಿ.ಕೆ ಶಿವಕುಮಾರ್

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪ್ರಜಾಸೇವೆ ಇಲಾಖೆ: ಸಿಎಂ ಡಿ.ಕೆ ಶಿವಕುಮಾರ್

June 20, 2026
ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

June 20, 2026
Next Post
ಕೆಪಿಸಿಸಿ ವೇದಿಕೆಯಿಂದ ಸಿದ್ದರಾಮಯ್ಯ ಬಿಗ್ ಮೆಸೇಜ್

ಕೆಪಿಸಿಸಿ ವೇದಿಕೆಯಿಂದ ಸಿದ್ದರಾಮಯ್ಯ ಬಿಗ್ ಮೆಸೇಜ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada