• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ವಿಡಿಯೋ ಮಾಡಿ: ವ್ಯಂಗ್ಯಕ್ಕೆ ಗುರಿಯಾದ ಮನ್‌ ಕಿ ಬಾತ್‌ ಸಲಹೆ

ಫೈಝ್ by ಫೈಝ್
February 27, 2022
in Uncategorized
0
ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ವಿಡಿಯೋ ಮಾಡಿ: ವ್ಯಂಗ್ಯಕ್ಕೆ ಗುರಿಯಾದ ಮನ್‌ ಕಿ ಬಾತ್‌ ಸಲಹೆ
Share on WhatsAppShare on FacebookShare on Telegram

ADVERTISEMENT

ಉದ್ಯೋಗ ಕೇಳಿದ ಯುವಜನತೆಗೆ ʼಪಕೋಡ ಮಾರಿʼ ಎಂದು ಸಲಹೆ ನೀಡಿದ್ದ ಪ್ರಧಾನಿ ಮೋದಿ ಇದೀಗ ಮತ್ತೆ ಅಂತಹದ್ದೇ ಸಲಹೆ ನೀಡಿ ಟ್ರಾಲ್‌ಗೆ ಒಳಗಾಗಿದ್ದಾರೆ. ಮನ್‌ ಕಿ ಬಾತ್‌ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತದ 75ನೇ ವರ್ಷದ ಸ್ವಾತಂತ್ರ್ಯದ ಆಚರಣೆಗಳ ಭಾಗವಾಗಿ ಜನಪ್ರಿಯ ಪ್ರಾದೇಶಿಕ ಹಾಡುಗಳಿಗೆ ಲಿಪ್ ಸಿಂಕ್ ವೀಡಿಯೊಗಳನ್ನು ಮಾಡಲು ಕರೆ ನೀಡಿದ್ದಾರೆ.

ಭಾರತೀಯ ಹಾಡುಗಳಿಗೆ ಲಿಪ್‌ ಸಿಂಕ್‌ ವಿಡಿಯೋಗಳನ್ನು ಮಾಡಿ ಜನಪ್ರಿಯರಾಗಿರುವ ತಾಂಜಾನಿಯಾ ಮೂಲದ ಕಿಲಿ ಪೌಲ್‌ ಹಾಗೂ ಅವರ ಸಹೋದರಿ ನೀಮಾ ಅವರನ್ನು ಉಲ್ಲೇಖಿಸಿರುವ ಮೋದಿ ಒಡಹುಟ್ಟಿದ ಈ ಜೋಡಿಗೆ ಭಾರತೀಯ ಸಂಗೀತದೆಡೆಗೆ ಇರುವ ಒಲವನ್ನು ಕೊಂಡಾಡಿದ್ದಾರೆ. ಮಾತ್ರವಲ್ಲ, ಅವರ ಹಾಗೆ ಹಾಡುಗಳಿಗೆ ತುಟಿಯಾಡಿಸಿ ವಿಡಿಯೋ ಮಾಡಿ ಎಂದು ಕರೆ ನೀಡಿದ್ದಾರೆ.

ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ ಮೋದಿ, “ನಾನು ಪೌಲ್‌ ಹಾಗೂ ನೀಮಾರಿಗೆ ಕೃತಜ್ಞಗಿದ್ದೇನೆ. ಅವರಂತೆಯೇ ನಮ್ಮ ಮಕ್ಕಳೂ (ಲಿಪ್‌ ಸಿಂಕ್‌) ಮಾಡಿದರೆ ಹೇಗೆ?..ಕನ್ನಡದ ವಿದ್ಯಾರ್ಥಿಗಳು ಕಾಶ್ಮೀರಿ ಭಾಷೆ ಹಾಡುಗಳಿಗೆ ಲಿಪ್‌ ಸಿಂಕ್‌ ಮಾಡಬಹುದು. ಕೇರಳದವರು ಇನ್ನೊಂದು ಇನ್ನೊಂದು ಪ್ರಾದೇಶಿಕ ಭಾಷೆಯಲ್ಲಿ ಲಿಪ್ ಸಿಂಕ್ ಮಾಡಲಿ. ʼಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಅಂಗವಾಗಿ, ಯುವಜನಾಂಗ ತಮ್ಮದೇ ಆದ ರೀತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳ ಹಾಡುಗಳಿಗೆ ಲಿಪ್‌ ಸಿಂಕ್‌ ವಿಡಿಯೊಗಳನ್ನು ಮಾಡಬಹುದು.” ಎಂದು ಮೋದಿ ಸಲಹೆ ನೀಡಿದ್ದಾರೆ.

ನಾನು ಎಲ್ಲರಿಗೂ (ಲಿಪ್‌ ಸಿಂಕ್‌ ವಿಡಿಯೋ ಮಾಡಲು) ಒತ್ತಾಯಿಸುತ್ತೇನೆ. ವಿಶೇಷವಾಗಿ, ಮಕ್ಕಳು ಇತರೆ ರಾಜ್ಯದ ಜನಪ್ರಿಯ ಹಾಡುಗಳಿಗೆ ಲಿಪ್‌ ಸಿಂಕ್‌ ಮಾಡಲಿ. ನಾವು ʼಒಂದು ಭಾರತ-ಶ್ರೇಷ್ಟ ಭಾರತʼವನ್ನು ಮರು ವ್ಯಾಖ್ಯಾನ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದೀಗ ಮನ್‌ ಕಿ ಬಾತ್‌ ನಲ್ಲಿ ಮೋದಿ ನೀಡಿದ ಈ ಸಲಹೆಯು ಟ್ರಾಲ್‌ ವಿಷಯವಾಗಿ ಬದಲಾಗಿದ್ದು, ನೆಟ್ಟಿಗರು ಈ ಹಿಂದೆ ʼಪಕೋಡ ಮಾರಲು ನೀಡಿದ ಸಲಹೆʼ ʼಮೋಡಗಳಿಂದಾಗಿ ರಾಡಾರ್‌ ನಿಂದ ತಪ್ಪಿಸಬಹುದು ಎಂದು ನೀಡಿದ ಹೇಳಿಕೆʼ ಮೊದಲಾದ ಈ ಹಿಂದಿನ ಕೆಲವು ವಿಷಯಗಳನ್ನು ಇಟ್ಟುಕೊಂಡು ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡುತ್ತಿದ್ದಾರೆ.

ಉದ್ಯೋಗ ಕೇಳಿದ್ರೆ ಪಕೋಡ ಮಾರೋಕೆ ಹೇಳುತ್ತಿದ್ದವರು ಈಗ ಲಿಪ್‌ ಸಿಂಕ್‌ ವಿಡಿಯೋ ಮಾಡಲು ಹೇಳುತ್ತಿದ್ದಾರೆ ಎಂದು ಒಬ್ಬರು ಟ್ವೀಟ್‌ ಮಾಡಿದ್ದರೆ, ಇನ್ನೊಬ್ಬರು ಪಕೋಡ ಮಾರುವುದರಿಂದ, ಹಸುವಿನ ಸೆಗಣಿ ಮಾರುವುದರಿಂದ, ಲಿಪ್‌ ಸಿಂಕ್‌ ವಿಡಿಯೋ ಮಾಡುವುದರಿಂದ ದೇಶ ಅಭಿವೃದ್ಧಿಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಕೋ ಆರ್ಡಿನೇಟರ್‌ ವಿನಯ್‌ ಕುಮಾರ್‌ ದೊಕಾನಿಯಾ ಈ ಕುರಿತು ಟ್ವೀಟ್‌ ಮಾಡಿದ್ದು, “ನಿನ್ನೆ ಅವರು ವಿದೇಶಕ್ಕೆ ಅಧ್ಯಯನಕ್ಕೆ ಯಾಕೆ ಹೋಗುತ್ತೀರಿ ಎಂದು ಪ್ರಶ್ನಿಸಿದರು, ಇವತ್ತು, ವಿಡಿಯೋಗಳಿಗೆ ಲಿಪ್‌ ಸಿಂಕ್‌ ಮಾಡಲು ಸಲಹೆ ನೀಡಿದ್ದಾರೆ, ಆದರೆ, ಜನ ಉಕ್ರೇನ್‌ ಕಾಮೆಡಿಯನ್‌ನನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಆಡಿಕೊಳ್ಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

Yesterday he said ~ Don't go abroad to study..

Today he said ~ Make Lip Sync videos..

And People claim that #Ukriane elected a comedian as their top leader…

— Vinay Kumar Dokania (@VinayDokania) February 27, 2022

प्रधानमंत्री @narendramodi जी
कभी कहते है, पकौड़े तलो
कभी कहते है, गोबर बेचो
और आज कह रहे है "किली पॉल" और "नीमा" की तरह #lip_sync वीडियो बनाओ तो आपकी लोकप्रियता बढ़ेगी।
😁😁
क्या ऐसे देश आगे बढ़ेगा? ऐसे देश की तरक्की होगी?#मोदी_है_तो_बर्बादी_है pic.twitter.com/AvUA0A54GH

— Aakash_AAP (@AakashAAP) February 27, 2022

My dear @narendramodi
It’s ok we do not have jobs or economy or development …. But please do not come on Air only to ask people to lip sync, how much ever stupid it sounds, no one blames your speech writer you see

— #CeaseFireNOW @Vasundhar@mastodon.social (@vasundhar) February 27, 2022
https://twitter.com/staribo/status/1497823347614556160
https://twitter.com/Sameer_yagami/status/1497925176402448386

Bahar kyun padhne jaate ho?? Lip sync video banao.

– Narendra Modi

— Arshi Siddiqui (@Arshi_E_Sid) February 27, 2022
Tags: FamousKarnatakaNaredra ModiSingingಮನ್‌ ಕಿ ಬಾತ್‌ಮೋದಿ ಭಾಷಣಲಿಪ್ ಸಿಂಕ್ಹಾಡುಗಳು
Previous Post

Manipur Election | ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಿದ್ದ ದಕ್ಷ ಮಹಿಳಾ ಅಧಿಕಾರಿ ವಿರುದ್ಧ ಅಮಿತ್ ಶಾ ಪ್ರಚಾರ!

Next Post

ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿದ ಆರೋಪ: ವಿನೋದ್‌ ಕಾಂಬ್ಲಿ ಬಂಧನ, ಬಿಡುಗಡೆ

Related Posts

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ
Uncategorized

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 20, 2025
0

ಬಿ.ಆರ್. ಪಾಟೀಲ್, ಕೃಷ್ಣಭೈರೇಗೌಡ ಇದ್ದಿದ್ದನ್ನೇ ಹೇಳಿದ್ದಾರೆ ಎಂದು ಕಿಡಿ ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ ಎಂದು ಕಿಡಿ ಭೂಮಿ...

Read moreDetails
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025

ನಿವೃತ್ತ ಯೋಧರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ .

May 11, 2025
Next Post
ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿದ ಆರೋಪ: ವಿನೋದ್‌ ಕಾಂಬ್ಲಿ ಬಂಧನ, ಬಿಡುಗಡೆ

ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿದ ಆರೋಪ: ವಿನೋದ್‌ ಕಾಂಬ್ಲಿ ಬಂಧನ, ಬಿಡುಗಡೆ

Please login to join discussion

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada