• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಮಾಡಾಳ್​ ಭ್ರಷ್ಟಾಚಾರದಲ್ಲಿ ಸಚಿವ ಬೈರತಿ ಭಾಗಿ ಶಂಕೆ..! ಶಿವಮೊಗ್ಗಕ್ಕೂ ಪಾಲು..!

ಕೃಷ್ಣ ಮಣಿ by ಕೃಷ್ಣ ಮಣಿ
March 5, 2023
in ಅಂಕಣ
0
ಮಾಡಾಳ್​ ಭ್ರಷ್ಟಾಚಾರದಲ್ಲಿ ಸಚಿವ ಬೈರತಿ ಭಾಗಿ ಶಂಕೆ..! ಶಿವಮೊಗ್ಗಕ್ಕೂ ಪಾಲು..!
Share on WhatsAppShare on FacebookShare on Telegram

ADVERTISEMENT

ಲೋಕಾಯುಕ್ತ ರೇಡ್​ ಆಯ್ತು, ಲಂಚದ 40 ಲಕ್ಷ ಸೇರಿ 8 ಕೋಟಿ 10 ಲಕ್ಷದ 30 ಸಾವಿರ ರೂಪಾಯಿ ಹಣವನ್ನೂ ಲೋಕಾಯುಕ್ತರು ಜಪ್ತಿ ಮಾಡಿದ್ದರು. ಆ ಬಳಿಕ ಒಟ್ಟು 6 ಮಂದಿ ಆರೋಪಿಗಳಲ್ಲಿ ಐವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಜೈಲಿನಲ್ಲಿ ಬಂಧಿತ ಆರೋಪಿಗಳಿಗೆ UTP ನಂಬರ್ ಕೊಟ್ಟಿದ್ದು, ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಸಂಖ್ಯೆ 2066, ಸುರೇಂದ್ರ ಸಂಖ್ಯೆ 2067, ಸಿದ್ದೇಶ್ ಸಂಖ್ಯೆ 2068, ನಿಕೋಲಾಸ್ ಸಂಖ್ಯೆ 2069, ಗಂಗಾಧರ್ ಸಂಖ್ಯೆ 2070 ಎಂದು ಕೊಡಲಾಗಿದೆ. ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಜೈಲಿನ ಕ್ವಾರಂಟೈನ್ ಸೆಲ್​ನಲ್ಲಿ ಇರಿಸಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ವಿಚಾರಣಾಧೀನ ಕೈದಿಗಳ ಸೆಲ್​ಗೆ ಶಿಫ್ಟ್ ಮಾಡಲಾಗುತ್ತದೆ. ಆದರೆ ಲೋಕಾಯುಕ್ತ ದಾಳಿ ನಡೆಯುತ್ತಿದ್ದ ಹಾಗೆ ನಾಪತ್ತೆ ಆಗಿರುವ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಎ1 ಆರೋಪಿ ಆಗಿದ್ದು, ಅಜ್ಞಾತ ಸ್ಥಳವನ್ನು ಸೇರಿಕೊಂಡಿದ್ದಾರೆ. ಇದೀಗ ಬಂಧನಕ್ಕೂ ಮುನ್ನ ಸಾಕಷ್ಟು ವಿಚಾರಗಳು ಬಯಲಾಗಿವೆ.

CSR ಫಂಡ್​​ನಲ್ಲಿ ಉಳಿದ ಸಚಿವರಿಗೂ ಪಾಲು..!

ಪ್ರತಿಯೊಂದು ಕಂಪನಿಯೂ ತನ್ನ ಆದಾಯದಲ್ಲಿ ಶೇಕಡ 2ರಷ್ಟನ್ನು ಸಿಎಸ್’​ಆರ್​ (Corporate Social Responsibility) ಫಂಡ್​​ಗೆ ನೀಡಬೇಕಿದೆ. ಆ ಫಂಡ್​​ ಬಳಕೆಗೆ ಒಂದು ಸಮಿತಿ ಇರುತ್ತದೆ. ಆ ಸಿಎಸ್’​ಆರ್​ ಫಂಡ್​ನಲ್ಲಿ ಅಕ್ರಮ ಮಾಡುವ ಉದ್ದೇಶದಿಂದ ಅಲ್ಲಿ ಸದಸ್ಯರುಗಳನ್ನ ತೆಗೆದು ಅಧಿಕಾರಿಗಳೇ ಸೇರಿಕೊಂಡರು. ಸಿಎಸ್’​ಆರ್​ ಫಂಡ್’​ನ ಹಣ ಅರ್ಹತೆ ಇದ್ದವರಿಗೆ ಕೊಟ್ಟಿಲ್ಲ. ಸಿಎಸ್​ಆರ್ ಫಂಡ್​ನಲ್ಲಿ ಸಚಿವ ಬೈರತಿ ಬಸವರಾಜು ಅವರಿಗೂ 3.70 ಕೋಟಿ ಹಣವನ್ನ ಕೊಡಲಾಗಿದೆ. ಶಾಲೆ ನಿರ್ಮಾಣಕ್ಕೆ ಎಂದು ಹೇಳಿ ತೆಗೆದುಕೊಂಡು ಹೋಗಿದ್ದಾರೆ. ನಂತರ ಆ ಹಣ ಏನಾಯ್ತು ಎನ್ನುವ ಬಗ್ಗೆ ಮಾಹಿತಿ ತಿಳಿದಿಲ್ಲ. ಇನ್ನು ಸಿಎಸ್​’ಆರ್ ಫಂಡ್’​ನ ಹಣವನ್ನು ದಾವಣಗೆರೆಯ ಚನ್ನಗಿರಿ ಹಾಗು ಶಿವಮೊಗ್ಗಕ್ಕೂ ತೆಗೆದುಕೊಂಡು ಹೋಗಿದ್ದಾರೆ. ಅದು ಕೂಡ ಬಳಕೆ ಆಗಿದೆಯೋ ಇಲ್ವೋ..? ಇನ್ನು ಎಲ್ಲೆಲ್ಲಿ ಕೊಟ್ಟಿದ್ದಾರೊ..? ಗೊತ್ತಿಲ್ಲ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಶಿವಶಂಕರ್ ಆಗ್ರಹಿಸಿದ್ದಾರೆ.

‘ಮೈಸೂರು ಸ್ಯಾಂಡಲ್​ ಸೋಪು’ ಕಂಪನಿಯಲ್ಲೇ ಭ್ರಷ್ಟರು..!

ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್​ ಸೋಪ್​​ ಮತ್ತು ಮಾರ್ಜಕ ಸಂಸ್ಥೆಯಲ್ಲಿ  6 ಅಧಿಕಾರಿಗಳ ವಿರುದ್ಧ ನೌಕರರ ಸಂಘ ಅನುಮಾನ ವ್ಯಕ್ತಪಡಿಸಿದೆ. ಪರ್ಚೇಸ್ ಕಮಿಟಿ ಮತ್ತು ಮ್ಯಾನೇಜ್ಮೆಂಟ್ ಅವರನ್ನ ತನಿಖೆಗೆ ಒಳಪಡಿಸಬೇಕು. 6 ಮಂದಿ ಅಧಿಕಾರಿಗಳನ್ನ ತನಿಖೆ ಒಳಪಡಿಸಿದರೆ ಸತ್ಯಾಂಶ ಹೊರ ಬರುತ್ತೆ. ಈ ಆರು ಜನ ಅಧಿಕಾರಿಗಳ ಮೇಲೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ. ಇನ್ನು ಸಿಎಸ್​’ಆರ್​ ಫಂಡ್​​ ಮೂಲಕ ಕಂಪನಿ ಸುತ್ತಮುತ್ತ ಆಗುವಂತಹ ಸಮಸ್ಯೆಗಳ ನಿವಾರಣೆಗಾಗಿ ರಸ್ತೆ ಅಭಿವೃದ್ಧಿ, ಪರಿಸರ ರಕ್ಷಣೆ, ಮೂಲಭೂತ ಸೌಲಭ್ಯಗಳು, ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕೆಲಸಗಳಿಗೆ ಬಿಡುಗಡೆ ಮಾಡಲಾಗುತ್ತದೆ. NGO ( Non-governmental organization ) ಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಆದರೆ ಇಲ್ಲಿ ಹೇಗೆ ಹಣ ಬಿಡುಗಡೆ ಆಗಿದೆ ಅನ್ನೋ ಬಗ್ಗೆ ತನಿಖೆ ನಡೆಯಬೇಕಿದೆ ಅನ್ನೋದು ನೌಕರರ ಆಗ್ರಹ.

KAS ಅಧಿಕಾರಿ ಅಲ್ಲವೇ ಅಲ್ಲ ಪ್ರಶಾಂತ್​ ಮಾಡಾಳ್​..!

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ  ಪ್ರಶಾಂತ್ ಮಾಡಾಳ್​ KAS ಅಧಿಕಾರಿ ಎಂದು ವರದಿಯಾಗಿತ್ತು. ಆದರೆ KAS ಅಧಿಕಾರಿಗಳ ಸಂಘ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ರಶಾಂತ್ ಮಾಡಾಳ್ KAS ಅಧಿಕಾರಿ ಅಲ್ಲ. ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ (KSAS) ಸೇರಿದ ಅಧಿಕಾರಿ ಎಂದು ಸ್ಪಷ್ಟನೆ ಕೊಡಲಾಗಿದೆ. ಇದರ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್​ ಮಾಡಾಳ್​ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಪ್ರಶಾಂತ್ ಮಾಡಾಳ್​ ಪ್ರಕರಣದಲ್ಲಿ ಒಟ್ಟು 8 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ನಿಯಮದ ಪ್ರಕಾರ ಯಾವುದೇ ಅಧಿಕಾರಿ ಬಂಧನವಾದ 48 ಗಂಟೆಯೊಳಗೆ ಅಮಾನತು ಆಗಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೀಗ ಓರ್ವ ಶಾಸಕನ ಪುತ್ರ ಸಿಕ್ಕಿಬಿದ್ದಿರುವುದರಿಂದ ಕಂಗಾಲಾಗಿರುವ ಭಾರತೀಯ ಜನತಾ ಪಾರ್ಟಿಗೆ ಬೈರತಿ ಬಸವರಾಜ್​ ಸೇರಿದಂತೆ, ಇನ್ನು ಹಲವರು ಸಿಕ್ಕಿ ಬೀಳುವ ಸಾಧ್ಯತೆ ಇರುವುದು ಸಂಕಷ್ಟ ಸೂಚಕವಾಗಿ ಪರಿಣಮಿಸಿದೆ.

Tags: KSDLಪ್ರಶಾಂತ್ ಮಾಡಾಳ್ಬಿಜೆಪಿಬೈರತಿ ಬಸವರಾಜವಿರೂಪಾಕ್ಷಪ್ಪ ಮಾಡಾಳ್​ಶಿವಮೊಗ್ಗ
Previous Post

10 ಕೆಜಿ ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರ, ಸಿದ್ದರಾಮಯ್ಯ ಕೊಟ್ಟಿದ್ದು 3 ರೂಪಾಯಿ ಗೋಣಿ ಚೀಲ: ವರ್ತೂರು ಪ್ರಕಾಶ್

Next Post

ಬಿಜೆಪಿಯಲ್ಲಿ B.S ಯಡಿಯೂರಪ್ಪ ಭಾಷಣಕ್ಕೂ ಸ್ವಾತಂತ್ರವಿಲ್ಲ..! ಮೊದಲೇ ಫಿಕ್ಸ್​.. ಏನಿದು ವರಸೆ.. ?

Related Posts

Top Story

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

by ಪ್ರತಿಧ್ವನಿ
July 1, 2025
0

ನಾಯಕತ್ವ ಬದಲಾವಣೆಯ ನಿರ್ಧಾರವು ಪಕ್ಷದ ಹೈಕಮಾಂಡ್‌ ಕೈಯಲ್ಲಿ ಇರುತ್ತದೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಭೇಟಿ ನೀಡಿದ ನಂತರ ಈ ಊಹಾಪೋಹ ಬಲಗೊಂಡಿದೆ. ಡಿ.ಕೆ.ಶಿವಕುಮಾರ್...

Read moreDetails

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025

ಲೋಕಾಯುಕ್ತರು ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರನ್ನು ವಜಾಗೊಳಿಸಿ: ರವಿಕೃಷ್ಣಾ ರೆಡ್ಡಿ.

June 30, 2025

DK Shivakumar: ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೊಟಿ ಅನುದಾನ: ಡಿಸಿಎಂ ಡಿ.ಕೆ.ಶಿವಕುಮಾರ್

June 30, 2025

Golder Star Ganesh: ವಿಶೇಷ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ ಗೋಲ್ಡನ್ ಸ್ಟಾರ್ .

June 30, 2025
Next Post
ನನ್ನ ಹುಟ್ಟುಹಬ್ಬದಂದೇ ಮೋದಿ ಅವರು ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಉದ್ಘಾಟನೆ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ: ಬಿಎಸ್‌ ವೈ ..!

ಬಿಜೆಪಿಯಲ್ಲಿ B.S ಯಡಿಯೂರಪ್ಪ ಭಾಷಣಕ್ಕೂ ಸ್ವಾತಂತ್ರವಿಲ್ಲ..! ಮೊದಲೇ ಫಿಕ್ಸ್​.. ಏನಿದು ವರಸೆ.. ?

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada