ವಿಮಾನದಲ್ಲಿ ಪೌಚ್ನಿಂದ ನೀರು ಸೇವಿಸಿ ಅಸ್ವಸ್ಥಗೊಂಡ ಕುರಿತು ತನಿಖೆ ನಡೆಸುವಂತೆ Team India ಆಟಗಾರ ಮಯಂಕ್ ಅಗರ್ವಾಲ್ ದೂರು ನೀಡಿದ್ದಾರೆ.
![](https://pratidhvani.com/wp-content/uploads/2024/01/78a2ig2g_mayank-agarwal_625x300_14_April_22-1024x576.webp)
ರಣಜಿ ಟ್ರೋಫಿ ಪಂದ್ಯಾವಳಿ ಹಿನ್ನೆಲೆಯಲ್ಲಿ ತ್ರಿಪುರಾಕ್ಕೆ ತೆರಳಿದ್ದ ಕರ್ನಾಟಕದ ರಣಜಿ ತಂಡದ ಕ್ಯಾಪ್ಟನ್ Mayank Agarwal ತ್ರಿಪುರಾದಿಂದ ಸೂರತ್ಗೆ ವಿಮಾನದಲ್ಲಿ ತೆರಳುತ್ತಿದ್ದರು. ಈ ವೇಳೆ ಮಯಾಂಕ್ ಅಗರ್ವಾಲ್ ಅವರು ವಿಮಾನದಲ್ಲಿ ಪೌಚ್ನಿಂದ ವಿಷಕಾರಿ ದ್ರವವನ್ನು ಸೇವಿಸಿದ ಪರಿಣಾಮ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೂಡಲೇ ತ್ರಿಪುರಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಈ ಹಿನ್ನೆಲೆಯಲ್ಲಿ ವಿಮಾನದಲ್ಲಿ ತಾವು ಸೇವಿಸಿದ ದ್ರವದ ಕುರಿತಂತೆ ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಧಿಡೀರ್ ಅಸ್ವಸ್ಥರಾದ ಕಾರಣ ಅವರನ್ನು ತ್ರಿಪುರಾದ ಸ್ಥಳೀಯ ಆಸ್ಪತ್ರೆ ICUನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ ಈ ಘಟನೆಯಿಂದ ಕರ್ನಾಟಕ ತಂಡದ ಇತರೆ ಆಟಗಾರರು ಕೆಲಕಾಲ ಆತಂಕಕ್ಕೊಳಗಾಗಿದ್ದರು.
#TeamIndia #MayankAgarwal #Karnataka #Cricketer #RanjiTrophy #KSCA