
ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಶೂನ್ಯ.ಮಂಡ್ಯ ಜನ ಈ ಬಾರಿ ಕುಮಾರಸ್ವಾಮಿಗೆ ಅವಕಾಶ ಕೊಟ್ಟರೆ,ಮುಂದೆ ಮಗ, ಹೆಂಡತಿಗೆ ಅವಕಾಶ ಕೊಡಿ ಅಂತ ಕೇಳುತ್ತಾರೆ ಅಂತ ಸಚಿವ ಚಲುವರಾಯಸ್ವಾಮಿ ಹೇಳಿದ್ರು.

ಮಂಡ್ಯದಲ್ಲಿ ಮಾತಾಡಿದ ಅವ್ರು, ನಾವು ಚುನಾವಣೆಗೆ ನಿಲ್ಲುವುದು ಬೇಡಾ ಅಂದಿಲ್ಲಆದ್ರೆ, ಕುಮಾರಸ್ವಾಮಿ ಮಂಡ್ಯಗೆ ನೀಡಿರುವ ಕೊಡುಗೆ ಏನು..? 2 ಬಾರಿ ಸಿಎಂ ಆಗಿದ್ದ HDK ಮಂಡ್ಯಗೆ ಏನು ಮಾಡಿಲ್ಲ ಹೆಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಸಂಸದರಾಗಿದ್ರು
ಆಗ ಯಾಕೆ ಅವರು ಕಾವೇರಿ ವಿವಾದವನ್ನು ಬಗೆಹರಿಸಿಲ್ಲ
ಈಗ ಎಲ್ಲವೂ ಬಗೆಹರಿಸುವ ಹಂತಕ್ಕೆ ಬಂದಿದೆ ಎಂದರು.

ನನ್ನ ಸ್ನೇಹ ಮಾಡಿದ್ದು ದುರಾದೃಷ್ಟ ಎಂದು HDK ಎನ್ನುತ್ತಾರೆ.ಇವರನ್ನ CM ಮಾಡಿದ್ದಾಗ ನಾವು ನಮ್ಮ ಜೀವನ ಪಣ ಇಟ್ಟಿದ್ದೋ,ಆ ಬಗ್ಗೆ ಅವರಿಗೆ ಕೃತಜ್ಞತೆ ಇಲ್ಲ, ಸುಮ್ಮನೆ ಏನೇನೋ ಮಾತಾಡ್ತಾರೆ. ಜನರ ಬಗ್ಗೆ ಕಾಳಜಿ ಇಲ್ಲ. ಸುಮ್ಮನೆ ಅನುಕಂಪ ಗಿಟ್ಟಿಸಿಕೊಳ್ಳಲು ಮಾತಾಡ್ತಾರೆ ಅಂತ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ಕೊಟ್ಟರು .





