ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಜಾಮೀನು ಸಿಗಲಿಲ್ಲ ಎಂಬ ತಪ್ಪು ಕಲ್ಪನೆಯಿಂದ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾ ನಿವಾಸಿ ರಾಜು ಲಮಾಣಿ (19) ಆತ್ಮಹತ್ಯೆಗೆ ಶರಣಾದ ಯುವಕ. ಅಪ್ರಾಪ್ತ ಬಾಲಕಿಯ ಜೊತೆಗಿನ ಲವ್ ಮಾಡುತ್ತಿದ್ದ ಎಂಬ ಆರೋಪದ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.
ಅಪ್ರಾಪ್ತ ಬಾಲಕಿಯ ಜೊತೆಗೆ ಲವ್ ಮಾಡ್ತಿದ್ದ ಎಂಬ ಆರೋಪದ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಗುರುವಾರ ಸಂಜೆ ಯವಕನಿಗೆ ಬೇಲ್ ಸಿಕ್ಕಿತ್ತು. ಕೋರ್ಟ್ ವೇಳೆ ಮುಗಿದಿದ್ದರಿಂದ ಬೇಲ್ ಸಿಕ್ಕಿರೋ ಮಾಹಿತಿ ಕಾರಾಗೃಹಕ್ಕೆ ಹೋಗಿರಲಿಲ್ಲ.

ಹೀಗಾಗಿ ಬೇಲ್ ಸಿಕ್ಕಿಲ್ಲ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿ ಪರ ವಕೀಲ ಎಮ್.ವಿ. ಮೌಲ್ವಿ ಹೇಳಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಮಂಗಳವಾರ ರಾಜು, ಜೈಲಿಂದ ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದ.
ಮುಂದಿನ ತಿಂಗಳು ಪಿಯುಸಿ ಪರೀಕ್ಷೆ ಕೂಡ ಬರೆಯುತ್ತಿದ್ದ. ಆದರೆ ಬೇಲ್ ಸಿಕ್ಕಿಲ್ಲ, ಪರೀಕ್ಷೆ ಬರೆಯೋದಕ್ಕೆ ಆಗೋದಿಲ್ಲ, ಜೀವನ ಪರ್ಯಂತ ಜೈಲಿನಲ್ಲಿಯೇ ಕೊಳೆಯಬೇಕಾಗ್ತದೆ ಅಂತ ಚಿಂತೆಗೀಡಾಗಿದ್ದ ಯವಕ 20 ದಿನಗಳಿಂದ ಜೈಲಿನಲ್ಲಿದ್ದ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜೈಲಿಗೆ ಆಗಮಿಸಿ ಪೋಷಕರು ಜೈಲಿನ ಮುಂದೆ ಕಣ್ಣೀರಿಟ್ಟರು.
ರಾಜು, ನಗರದ ಜೆಟಿ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷ ಓದುತ್ತಿದ್ದ. ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಜೊತೆಗೆ ಪ್ರೀತಿ ಇದ್ದದ್ದೆ ಜೈಲು ಪಾಲಾಗಲು ಕಾರಣವಾಗಿತ್ತು. ಈ ಘಟನೆಗೆ ಜೈಲು ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.






