ಅಮೆರಿಕಾದ ನ್ಯೂಯಾರ್ಕ್ನ ಪ್ರಸಿದ್ದ ಶ್ರೀ ತುಳಸಿ ದೇವಾಲಯದ ಮುಂದಿರುವ ಮಹಾತ್ಮ ಗಾಂಧಿ ವಿಗ್ರಹವನ್ನ ದುಷ್ಕರ್ಮಿಗಳು ಎರತಡು ವಾರಗಳ ಅವಧಿಯಲ್ಲಿ ಎರಡನೇ ಭಾರೀ ಧ್ವಂಸ ಮಾಡಿದ್ದಾರೆ.
ಆಗಸ್ಟ್ 16ರಂದು ಗಾಂಧೀಜಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ತುಳಸಿ ಮಂದಿರದಲ್ಲಿರುವ ಪ್ರತಿಮೆಯನ್ನು ಆರು ಮಂದಿ ದೊಡ್ಡ ಸುತ್ತಿಗೆಯಿಂದ ಹೊಡೆದು ರಸ್ತೆಗಳ ಮೇಲೆ ಕೆಟ್ಟದಾಗಿ ಬರೆದಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ಮೊದಲು ಆಗಸ್ಟ್ 3ರಂದು ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ತೊಡಗಿದ್ದು 25-30 ವರ್ಷದ ಯುವಕರ ಗುಂಪು ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ಸ್ಟೇಟ್ ಅಸ್ಲೆಂಬಿ ಸದಸ್ಯೆ ಜೆನ್ನಿಫರ್ ರಾಜ್ಕುಮಾರ್ ಕೃತ್ಯವನ್ನ ಖಂಡಿಸಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.