ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ ಅನ್ನೋ ಬಗ್ಗೆ ಹಲವಾರು ನಾಯಕರು ತಮ್ಮದೇ ಆದ ವಿಶ್ಲೇಷಣೆ ಮಾಡುತ್ತಿದ್ದು, ಕಾಂಗ್ರೆಸ್ ಎಂಎಲ್ಸಿ ಪುಟ್ಟಣ್ಣ ಹೊಸ ವ್ಯಾಖ್ಯಾನ ಮಾಡಿದ್ದಾರೆ.
ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ರಾಜ್ಯದಲ್ಲಿ 23 ರಿಂದ 25 ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ತಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಕಾಂಗ್ರೆಸ್ MLC ಪುಟ್ಟಣ್ಣ, ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಭವಿಷ್ಯ ನುಡಿದಿದ್ದಾರೆ.
![](https://pratidhvani.com/wp-content/uploads/2024/05/IMG-20240518-WA00021-1024x745.jpg)
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಸಹ ಕಾಂಗ್ರೆಸ್ ಗೆಲ್ಲಲಿದೆ ಎಂದಿರುವ ಪುಟ್ಟಣ್ಣ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಅಂಡರ್ ಕರೆಂಟ್ ಪರಿಣಾಮ ಈ ಫಲಿತಾಂಶ ಬರಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಮಹಿಳೆಯರು ಶೇಕಡ 80ರಷ್ಟು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದಿದ್ದಾರೆ. ಲೋಕಸಭಾ ಫಲಿತಾಂಶದ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅದು ನನಗೆ ಗೊತ್ತಿಲ್ಲ, ಅವರು ಯಾರನ್ನ ಇಟ್ಕೊತ್ತಾರೋ, ಕಟ್ಕೊತ್ತಾರೋ ಎಂದು ವ್ಯಂಗ್ಯವಾಡಿದ್ದಾರೆ
![](https://pratidhvani.com/wp-content/uploads/2024/05/file7q6ntfng5c573hq3k19.jpg)
ಮುಂದಿನ 9 ವರ್ಷಗಳ ಕಾಲ ನಮ್ಮ ಸರ್ಕಾರ ಹಾಗು ಗ್ಯಾರಂಟಿ ಮುಂದುವರಿಯುತ್ತದೆ ಎಂದಿರುವ MLC Puttanna ಹಂಡ್ರೆಡ್ ಪರ್ಸೆಂಟ್ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ. ಯಾರ್ಯಾರನ್ನೋ ಸಿಎಂ ಮಾಡಿದ್ದೇವೆ, ನಮ್ಮ ಮನೆ ಮಗ, ನಮ್ಮೂರು ಆಗಲಿ ಬಿಡಿ ಎಂದು ಬೆಂಬಲಿಸಿದ್ದಾರೆ
ಇನ್ನು ಹಿತ್ತಲ ಬಾಗಿಲಲ್ಲಿ ಬಂದು ಕೆಲವರು ಮುಖ್ಯಮಂತ್ರಿ ಆದರು ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿರುವ ಪುಟ್ಟಣ್ಣ, ಮಾಜಿ ಪ್ರಧಾನಿ ದೇವೇಗೌಡರು ಹಾಗು ಸಿದ್ದರಾಮಯ್ಯ ಅವರದ್ದು ಹೋರಾಟದ ರಾಜಕೀಯ. ಅವರನ್ನ ಬೇರೆಯವರಿಗೆ ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.