
ಬೆಂಗಳೂರು: ಸಿಟಿ ರವಿ (CT Ravi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವಿನ ಸಂಘರ್ಷದ ವಿಚಾರ ಇದೀಗ ರಾಜಭವನ (Rajbhavan) ತಲುಪಿದೆ. ಹಾಲಿ ಸಚಿವೆ ಹಾಗೂ ಮಾಜಿ ಸಚಿವರ ನಡುವಿನ ಕೇಸ್ ಸಂಬಂಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಹಾಗೂ ಮೇಲ್ಮನೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot ) ಅವರಿಗೆ ದೂರು ನೀಡಿತ್ತು.

ಇದೀಗ ಸಿಟಿ ರವಿ ನೇತೃತ್ವದ ನಿಯೋಗ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ದೂರು ನೀಡಿದೆ.
ಕಳೆದ ವಾರವಷ್ಟೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ನಿಯೋಗವು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದಬಳಕೆ ಮಾಡಿದ್ದಾರೆ ಎಂಬ ಆರೋಪದ ಕೇಸ್ನಲ್ಲಿ ಸಿಟಿ ರವಿ ಅವರನ್ನು ಬಂಧನ ಮಾಡಿದ್ದನ್ನು ಖಂಡಿಸಿ ಗವರ್ನರ್ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅವರು ಸಿಟಿ ರವಿಗೆ ಬುಲಾವ್ ನೀಡಿದ್ದಾರೆ.