Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮುಸ್ಲಿಂರಲ್ಲಷ್ಟೇ ಅಲ್ಲ ಹಿಂದೂಗಳಲ್ಲಿಯೂ ತಲೆಹರಟೆಗಳಿವೆ, ಶಿವಮೊಗ್ಗ ಮುಸ್ಲಿಂರು ಒಳ್ಳೆಯವರೆಂದ ಈಶ್ವರಪ್ಪ ವಿಡಿಯೋ ಸಖತ್ ವೈರಲ್

ಮಂಜುನಾಥ ಬಿ

ಮಂಜುನಾಥ ಬಿ

March 13, 2023
Share on FacebookShare on Twitter

ಶಿವಮೊಗ್ಗ:ಆಜಾನ್ ವಿರುದ್ಧ ಮಂಗಳೂರಿನಲ್ಲಿ ಗುಡಗಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಮೂರು ದಿನಗಳ ಹಿಂದೆ ಶಿವಮೊಗ್ಗ ಮುಸ್ಲಿಂ ಮುಖಂಡರನ್ನ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಇದಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಮುಖಂಡರೊಂದಿಗೆ ಮಾತನಾಡುತ್ತಾ, ಹಿಂದೂಗಳಲ್ಲಿಯೂ ಮುಸ್ಲಿಂರಂತೆ ತಲೆಹರಟೆಗಳಿದ್ದಾರೆ ಎಂದು ಹೇಳಿರುವ ವಿಡಿಯೋ ಶಿವಮೊಗ್ಗದ ಜನರ ವಾಟ್ಸ್ ಆ್ಯಪ್ ಲ್ಲಿ ಹರಿದಾಡುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು ಹಾಗೂ ಮಹಿಳೆಯರು ಶುಕ್ರವಾರ ಸಂಜೆ ಈಶ್ವರಪ್ಪ ಮನೆಯಲ್ಲಿ ಸೇರಿ, ಮಾಜಿ ಸಚಿವ ಹಾಗೂ ತಮ್ಮ ಶಾಸಕರಿಗೆ ಹಲವು ಬೇಡಿಕೆಗಳನ್ನ ಇಟ್ಟರು. ಈ ಸಂದರ್ಭದಲ್ಲಿ ಈಶ್ವರಪ್ಪ ತಾವು ಮುಸ್ಲಿಂ ವಿರೋಧಿ ಅಲ್ಲ, ಶಿವಮೊಗ್ಗ ಮುಸ್ಲಿಂರು ಒಳ್ಳೇಯರವು ಎಂದರು.

ವಿಡಿಯೋ ಸಾರಾಂಶ ಹೀಗಿದೆ..,

ಒಂದು ತಿಳಿದುಕೊಳ್ಳಿ, ಶಿವಮೊಗ್ಗದಲ್ಲಿರುವಂತಹ ಮುಸ್ಲಿಂರು ಗಲಾಟೆ ಮಾಡುವವರಲ್ಲ. ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಎನ್ನುವುದಿಲ್ಲ. ಆದರೆ ಏನು ಪ್ರಶ್ನೆ …? ಹಿಂದೂಗಳು ತಲೆಹರಟೆ ಮಾಡಿದ್ರೂ, ಮುಸ್ಲಿಂ ತಲೆ ಹರಟೆ ಮಾಡಿದ್ರೂ ಇಂಥಹ ಗಲಾಟೆಗಳು ಶುರುವಾಗುತ್ತೆ. ಅಲ್ಲೊಂದು ನಾಲ್ಕು ಜನ, ಇಲ್ಲೊಂದು ನಾಲ್ಕು ಜನರಿಂದ ಗಲಾಟೆ. ನಾನು ತಪ್ಪು ಮಾಡಿದ್ದರೆ ಇದೇ ಸಭೆಯಲ್ಲಿ ಹೇಳಿ. ನಾನು ಯಾಕೆ ಗಲಾಟೆ ಮಾಡ್ತೀನಿ ಎಂದರೆ ಸಮಾಜದಲ್ಲಿ ಅಶಾಂತಿ ತಲೆದೋರಿದಾಗ ಮಾತ್ರ ಎಂದರು.

ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನು ಯಾವಾಗ ಗಲಾಟೆ ಮಾಡಿದ್ದು.? ಶಿವಪ್ಪ ನಾಯಕ ವೃತ್ತದ ಬಳಿ ಎಸ್ ಡಿ ಪಿಐ ಸಮಾವೇಶ ನಡೆದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾವನೋ ಕೂಗಿದ. ಇದನ್ನ ನೀವೂ ವಿರೋಧಿಸುತ್ತೀರಾ..! ನೀವು ಸುಮ್ಮನಿರ್ತೀರಾ ಆದರೆ ನಾನು ವಿರೋಧಿಸುತ್ತೇನೆ. ಗಾಜನೂರಿನಲ್ಲಿ ತಲವಾರ್ ಬೀಸಿದರು. ಇದನ್ನ ಯಾರು ಖಂಡಿಸುತ್ತಾರೆ? ಇವರೆಲ್ಲಾ ಶಿವಮೊಗ್ಗದವಾ? ಬಿಜೆಪಿಯಲ್ಲಿರುವ ಅನೇಕರು ಇದನ್ನ ವಿರೋಧಿಸುವುದೇ ಇಲ್ಲ. ಆದರೆ ನಾನು ವಿರೋಧಿಸುತ್ತೇನೆ ಎಂದರು.

ಹಿಂದೂ ಹರ್ಷನನ್ನ ಕೊಲೆ ಮಾಡಿದರು. ನಿಮ್ಮ‌ ಮಕ್ಕಳನ್ನಾದರೆ ಬಿಡ್ತೀರಾ? ಅದೇ ರೀತಿ ನಾನು ಎಲ್ಲರನ್ನೂ ವಿರೋಧಿಸಲ್ಲ. ಇಂತಹ ಕಿಡಿಗೇಡಿಗಳನ್ನ ವಿರೋಧಿಸುತ್ತೇನೆ. ಇದನ್ನೇ ಈಶ್ವರಪ್ಪ ಮುಸ್ಲಿಂ ವಿರೋಧಿ ಎಂದು ಕರೆದರೆ ಏನು ಮಾಡಬೇಕು..? ಯಾರು ಗೂಂಡಾ ವರ್ತನೆ ತೋರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಈ ವಿಡಿಯೋ ತುಣುಕನ್ನ ಮುಸ್ಲಿಂ ಮುಖಂಡ ಶಫಿ ಫೇಸ್‌ಬುಕ್‌ ಲೈವ್ ಮಾಡಿದ್ದ. ಈಗ ಈಶ್ವರಪ್ಪ ಆಡಿದ ಮಾತುಗಳು ಸಖತ್ ವೈರಲ್ ಆಗಿವೆ. ಮುಸ್ಲಿಂ ಮುಖಂಡರ ಬಳಿ ಹಿಂದೂಗಳಲ್ಲಿಯೂ ತಲೆಹರಟೆಗಳಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಓಟುಗಳೇ ಬೇಡ ಎನ್ನುತ್ತಿದ್ದ ಈಶ್ವರಪ್ಪ ಮುಸ್ಲಿಂ ಮುಖಂಡರ ಜೊತೆ ಕೂತು ಈ ತರಹದ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ವಾಟ್ಸ್ ಆ್ಯಪ್, ಫೇಸ್‌ಬುಕ್‌ ಪೋಸ್ಟ್ ಮಾಡುತ್ತಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 3 | #PRATIDHVANI
ಕರ್ನಾಟಕ

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 3 | #PRATIDHVANI

by ಪ್ರತಿಧ್ವನಿ
March 25, 2023
ಉರಿಗೌಡ, ನಂಜೇಗೌಡ ವಿಚಾರದಲ್ಲಿ ಸಿ.ಟಿ ರವಿ ಹೊಸ ರಾಗ : ದಾಖಲೆ ಸದ್ಯದಲ್ಲೇ ತೋರಿಸುತ್ತೇವೆಂದು ಸವಾಲು
ಕರ್ನಾಟಕ

ಉರಿಗೌಡ, ನಂಜೇಗೌಡ ವಿಚಾರದಲ್ಲಿ ಸಿ.ಟಿ ರವಿ ಹೊಸ ರಾಗ : ದಾಖಲೆ ಸದ್ಯದಲ್ಲೇ ತೋರಿಸುತ್ತೇವೆಂದು ಸವಾಲು

by ಮಂಜುನಾಥ ಬಿ
March 21, 2023
ಎರಡು ತಿಂಗಳ ನಿರಂತರ ಹೋರಾಟ..!  VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!
Top Story

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

by ಪ್ರತಿಧ್ವನಿ
March 26, 2023
BANGALORE HUBBA | ಬೆಂಗಳೂರು ಹಬ್ಬ ಸಂಭ್ರಮ,, ಆರ್ ಅಶೋಕ್ ಹಾಡಿ ಹೊಗಳಿದ ಗಣ್ಯರು #PRATIDHVANI
ಇದೀಗ

BANGALORE HUBBA | ಬೆಂಗಳೂರು ಹಬ್ಬ ಸಂಭ್ರಮ,, ಆರ್ ಅಶೋಕ್ ಹಾಡಿ ಹೊಗಳಿದ ಗಣ್ಯರು #PRATIDHVANI

by ಪ್ರತಿಧ್ವನಿ
March 25, 2023
Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi

by ಪ್ರತಿಧ್ವನಿ
March 20, 2023
Next Post
ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುತ್ತಿರುವ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುತ್ತಿರುವ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

ಭಾಗ-೨: ಲಿಂಗಾಯತರ ಮೇಲಿನ ಮೈಸೂರು ಹಿಂದೂ ರಾಜರ ಆಕ್ರಮಣ ಮತ್ತು ಹತ್ಯಾಕಾಂಡಗಳು

ಭಾಗ-೨: ಲಿಂಗಾಯತರ ಮೇಲಿನ ಮೈಸೂರು ಹಿಂದೂ ರಾಜರ ಆಕ್ರಮಣ ಮತ್ತು ಹತ್ಯಾಕಾಂಡಗಳು

ಸುಲಭವಾಗಿ ಗೆಲ್ಲುವ ಕ್ಷೇತ್ರ ಕಳೆದುಕೊಳ್ತಿದ್ಯಾ ಕಾಂಗ್ರೆಸ್​ ಪಾರ್ಟಿ..!?

ಸುಲಭವಾಗಿ ಗೆಲ್ಲುವ ಕ್ಷೇತ್ರ ಕಳೆದುಕೊಳ್ತಿದ್ಯಾ ಕಾಂಗ್ರೆಸ್​ ಪಾರ್ಟಿ..!?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist