• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಸ್ಲಿಂರಲ್ಲಷ್ಟೇ ಅಲ್ಲ ಹಿಂದೂಗಳಲ್ಲಿಯೂ ತಲೆಹರಟೆಗಳಿವೆ, ಶಿವಮೊಗ್ಗ ಮುಸ್ಲಿಂರು ಒಳ್ಳೆಯವರೆಂದ ಈಶ್ವರಪ್ಪ ವಿಡಿಯೋ ಸಖತ್ ವೈರಲ್

ಪ್ರತಿಧ್ವನಿ by ಪ್ರತಿಧ್ವನಿ
March 13, 2023
in ಕರ್ನಾಟಕ, ರಾಜಕೀಯ
0
ಮುಸ್ಲಿಂರಲ್ಲಷ್ಟೇ ಅಲ್ಲ ಹಿಂದೂಗಳಲ್ಲಿಯೂ ತಲೆಹರಟೆಗಳಿವೆ, ಶಿವಮೊಗ್ಗ ಮುಸ್ಲಿಂರು ಒಳ್ಳೆಯವರೆಂದ ಈಶ್ವರಪ್ಪ ವಿಡಿಯೋ ಸಖತ್ ವೈರಲ್
Share on WhatsAppShare on FacebookShare on Telegram

ಶಿವಮೊಗ್ಗ:ಆಜಾನ್ ವಿರುದ್ಧ ಮಂಗಳೂರಿನಲ್ಲಿ ಗುಡಗಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಮೂರು ದಿನಗಳ ಹಿಂದೆ ಶಿವಮೊಗ್ಗ ಮುಸ್ಲಿಂ ಮುಖಂಡರನ್ನ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಇದಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಮುಖಂಡರೊಂದಿಗೆ ಮಾತನಾಡುತ್ತಾ, ಹಿಂದೂಗಳಲ್ಲಿಯೂ ಮುಸ್ಲಿಂರಂತೆ ತಲೆಹರಟೆಗಳಿದ್ದಾರೆ ಎಂದು ಹೇಳಿರುವ ವಿಡಿಯೋ ಶಿವಮೊಗ್ಗದ ಜನರ ವಾಟ್ಸ್ ಆ್ಯಪ್ ಲ್ಲಿ ಹರಿದಾಡುತ್ತಿದೆ.

ADVERTISEMENT

ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು ಹಾಗೂ ಮಹಿಳೆಯರು ಶುಕ್ರವಾರ ಸಂಜೆ ಈಶ್ವರಪ್ಪ ಮನೆಯಲ್ಲಿ ಸೇರಿ, ಮಾಜಿ ಸಚಿವ ಹಾಗೂ ತಮ್ಮ ಶಾಸಕರಿಗೆ ಹಲವು ಬೇಡಿಕೆಗಳನ್ನ ಇಟ್ಟರು. ಈ ಸಂದರ್ಭದಲ್ಲಿ ಈಶ್ವರಪ್ಪ ತಾವು ಮುಸ್ಲಿಂ ವಿರೋಧಿ ಅಲ್ಲ, ಶಿವಮೊಗ್ಗ ಮುಸ್ಲಿಂರು ಒಳ್ಳೇಯರವು ಎಂದರು.

ವಿಡಿಯೋ ಸಾರಾಂಶ ಹೀಗಿದೆ..,

ಒಂದು ತಿಳಿದುಕೊಳ್ಳಿ, ಶಿವಮೊಗ್ಗದಲ್ಲಿರುವಂತಹ ಮುಸ್ಲಿಂರು ಗಲಾಟೆ ಮಾಡುವವರಲ್ಲ. ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಎನ್ನುವುದಿಲ್ಲ. ಆದರೆ ಏನು ಪ್ರಶ್ನೆ …? ಹಿಂದೂಗಳು ತಲೆಹರಟೆ ಮಾಡಿದ್ರೂ, ಮುಸ್ಲಿಂ ತಲೆ ಹರಟೆ ಮಾಡಿದ್ರೂ ಇಂಥಹ ಗಲಾಟೆಗಳು ಶುರುವಾಗುತ್ತೆ. ಅಲ್ಲೊಂದು ನಾಲ್ಕು ಜನ, ಇಲ್ಲೊಂದು ನಾಲ್ಕು ಜನರಿಂದ ಗಲಾಟೆ. ನಾನು ತಪ್ಪು ಮಾಡಿದ್ದರೆ ಇದೇ ಸಭೆಯಲ್ಲಿ ಹೇಳಿ. ನಾನು ಯಾಕೆ ಗಲಾಟೆ ಮಾಡ್ತೀನಿ ಎಂದರೆ ಸಮಾಜದಲ್ಲಿ ಅಶಾಂತಿ ತಲೆದೋರಿದಾಗ ಮಾತ್ರ ಎಂದರು.

ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನು ಯಾವಾಗ ಗಲಾಟೆ ಮಾಡಿದ್ದು.? ಶಿವಪ್ಪ ನಾಯಕ ವೃತ್ತದ ಬಳಿ ಎಸ್ ಡಿ ಪಿಐ ಸಮಾವೇಶ ನಡೆದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾವನೋ ಕೂಗಿದ. ಇದನ್ನ ನೀವೂ ವಿರೋಧಿಸುತ್ತೀರಾ..! ನೀವು ಸುಮ್ಮನಿರ್ತೀರಾ ಆದರೆ ನಾನು ವಿರೋಧಿಸುತ್ತೇನೆ. ಗಾಜನೂರಿನಲ್ಲಿ ತಲವಾರ್ ಬೀಸಿದರು. ಇದನ್ನ ಯಾರು ಖಂಡಿಸುತ್ತಾರೆ? ಇವರೆಲ್ಲಾ ಶಿವಮೊಗ್ಗದವಾ? ಬಿಜೆಪಿಯಲ್ಲಿರುವ ಅನೇಕರು ಇದನ್ನ ವಿರೋಧಿಸುವುದೇ ಇಲ್ಲ. ಆದರೆ ನಾನು ವಿರೋಧಿಸುತ್ತೇನೆ ಎಂದರು.

ಹಿಂದೂ ಹರ್ಷನನ್ನ ಕೊಲೆ ಮಾಡಿದರು. ನಿಮ್ಮ‌ ಮಕ್ಕಳನ್ನಾದರೆ ಬಿಡ್ತೀರಾ? ಅದೇ ರೀತಿ ನಾನು ಎಲ್ಲರನ್ನೂ ವಿರೋಧಿಸಲ್ಲ. ಇಂತಹ ಕಿಡಿಗೇಡಿಗಳನ್ನ ವಿರೋಧಿಸುತ್ತೇನೆ. ಇದನ್ನೇ ಈಶ್ವರಪ್ಪ ಮುಸ್ಲಿಂ ವಿರೋಧಿ ಎಂದು ಕರೆದರೆ ಏನು ಮಾಡಬೇಕು..? ಯಾರು ಗೂಂಡಾ ವರ್ತನೆ ತೋರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಈ ವಿಡಿಯೋ ತುಣುಕನ್ನ ಮುಸ್ಲಿಂ ಮುಖಂಡ ಶಫಿ ಫೇಸ್‌ಬುಕ್‌ ಲೈವ್ ಮಾಡಿದ್ದ. ಈಗ ಈಶ್ವರಪ್ಪ ಆಡಿದ ಮಾತುಗಳು ಸಖತ್ ವೈರಲ್ ಆಗಿವೆ. ಮುಸ್ಲಿಂ ಮುಖಂಡರ ಬಳಿ ಹಿಂದೂಗಳಲ್ಲಿಯೂ ತಲೆಹರಟೆಗಳಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಓಟುಗಳೇ ಬೇಡ ಎನ್ನುತ್ತಿದ್ದ ಈಶ್ವರಪ್ಪ ಮುಸ್ಲಿಂ ಮುಖಂಡರ ಜೊತೆ ಕೂತು ಈ ತರಹದ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ವಾಟ್ಸ್ ಆ್ಯಪ್, ಫೇಸ್‌ಬುಕ್‌ ಪೋಸ್ಟ್ ಮಾಡುತ್ತಿದ್ದಾರೆ.

Tags: BJPKS EshwarappaMuslimsShimoga
Previous Post

ಮಂಡ್ಯದಲ್ಲಿ ಮುಗ್ಗರಿಸಿದ ಬಿಜೆಪಿ, 3 ತಪ್ಪುಗಳು.. ನೇರ ಮುಜುಗರ..

Next Post

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುತ್ತಿರುವ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
Next Post
ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುತ್ತಿರುವ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುತ್ತಿರುವ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada