Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  

ಪ್ರತಿಧ್ವನಿ

ಪ್ರತಿಧ್ವನಿ

January 29, 2023
Share on FacebookShare on Twitter

ಒಬ್ಬ ದೊಡ್ಡ ಹೀರೋ, ಒಂದು ದೊಡ್ಡ ಪ್ರೊಡಕ್ಷನ್ ಹೌಸ್ , ದೊಡ್ಡ ಬಜೆಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದಾಗ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ಆ ಬಗೆಯ ಚಿತ್ರಗಳ ಕಡೆ ನಿರ್ಮಾಪಕರು , ದೊಡ್ಡ ನಾಯಕ ನಟರು ತಲೆ ಹಾಕಿಯೂ ಮಲಗುವುದಿಲ್ಲ ಎಂದು ಕ್ರಾಂತಿ ಚಿತ್ರದ ಕುರಿತಂತೆ ಚಿತ್ರ ನಿರ್ದೇಶಕ, ಗೀಗೆ ರಚನೆಕಾರ ಕವಿರಾಜ್‌ ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಹೃದಯಾಘಾತದಿಂದ ಸ್ಯಾಂಡಲ್‌ವುಡ್‌ ನಿರ್ದೇಶಕ ನಿಧನ..!  

ಶಿವಣ್ಣನ ಸಿನಿಮಾಗೆ ನೀವೂ ಆಗಬಹುದು ಹಿರೋಯಿನ್‌..!

ರಮ್ಯಾ ಬಗ್ಗೆ ಪತ್ರ ಬರೆದ ಪೂಜಾಗಾಂಧಿ..! ಪತ್ರದಲ್ಲೇನಿದೆ..?

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಕವಿರಾಜ್‌, “ಎಲ್ಲಾ ವಿಚಾರ/ವಿವಾದಗಳಾಚೆ ‘ಕ್ರಾಂತಿ’ ಅದರ ಆಶಯ ಮತ್ತು ಸಂದೇಶಗಳಿಗಾಗಿ ಸಮಾಜ ಬೆಂಬಲಿಸಬೇಕಾದ ಚಿತ್ರ ಎನ್ನುವುದು ನನ್ನ ನಿಲುವು” ಎಂದಿದ್ದಾರೆ.

ಕವಿರಾಜ್‌ ಅವರ ಪೋಸ್ಟ್‌ನ ಪೂರ್ಣ ಪಠ್ಯ

‘ಕ್ರಾಂತಿ’ ಸಿನಿಮಾದಲ್ಲಿ ನಾಡಿನ ಎಲ್ಲಾ ಖಾಸಗಿ ಶಾಲೆಗಳನ್ನು ಕೊಂಡುಕೊಳ್ಳುವ ಅಪಾರ ಸಿರಿವಂತ ನಾಯಕ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಾ ಶಾಲೆಗಳನ್ನು ಮುಚ್ಚಿ ಬಿಡುತ್ತಾನೆ. ನಾಯಕ ಹೀಗೇಕೆ ತಪ್ಪು ಮಾಡಿದ ಎಂದು ನೋಡುಗರು ಗೊಂದಲಕ್ಕೊಳಗಾಗುತ್ತಾರೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು‌ ಓದಿಸುವ ಸಿರಿವಂತರೆಲ್ಲ ಆಕ್ರೋಶಗೊಂಡು ಕೋಲಾಹಲ ಎಬ್ಬಿಸುತ್ತಾರೆ. ಶಾಲೆಗಳನ್ನು ಮುಚ್ಚಿದರೆ ನಮ್ಮ ಮಕ್ಕಳ ಭವಿಷ್ಯವೇನು ?? ಎಂದು ರೊಚ್ಚಿನಿಂದ ಪ್ರಶ್ನಿಸುತ್ತಾರೆ.

ಆಗ ಹೀರೋ ಒಂದೇ ಒಂದು ಪ್ರಶ್ನೆ ಕೇಳುತ್ತಾನೆ. “ದಿನೇ ದಿನೇ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ತಾನೆ ಇದಾರೆ , ಅಲ್ಲಿ ಓದುತ್ತಿದ್ದ, ಓದಬೇಕಿದ್ದ ಬಡ ಮಕ್ಕಳ ಭವಿಷ್ಯ ಏನು ಅಂತಾ ಯಾಕೆ ಯಾರಿಗೂ ಅನ್ನಿಸ್ತಾ ಇಲ್ಲ ??? ಆಗ್ಯಾಕೇ ಯಾರು ರೊಚ್ಚಿಗೇಳಲ್ಲ ???

ನೋಡುಗ ಸಹೃದಯಿಗಳ ಕರುಳು ಚುರುಕೆನ್ನುತ್ತೆ. ಆತ್ಮಸಾಕ್ಷಿ ಅಲ್ಲಾಡುತ್ತದೆ. ಒಂದು ಅಪರಾಧಿ ಪ್ರಜ್ಞೆ ಕಪಾಳಕ್ಕೆ ಭಾರಿಸುತ್ತದೆ.

ಶ್ರೀಮಂತರ ಮಕ್ಕಳ ಭವಿಷ್ಯ ಮಾತ್ರ ಚೆನ್ನಾಗಿರಬೇಕಾ? ಬಡವರದ್ದಲ್ವಾ?

ಇದೊಂದು ಸೀನ್ ಸಾಕು ‘ಕ್ರಾಂತಿ_ ಸಿನಿಮಾ ನೋಡಲು , ಆ ಸಿನಿಮಾವನ್ನು ಬೆಂಬಲಿಸಲು..

ಇನ್ನು ಘರ್ಷಣೆಯಲ್ಲಿ ಕನ್ನಡದ ದ್ವಜ ಸ್ತಂಭ ನೆಲಕ್ಕೆ ಬೀಳದಂತೆ ಓಡಿ ಬಂದು ನಾಯಕ ಹಿಡಿಯುವಾಗ ನಮ್ಮಂತ ಕನ್ನಡ ಮಕ್ಕಳ ಗಂಟಲು ಉಬ್ಬಿಬರುತ್ತದೆ.

ಒಬ್ಬ ದೊಡ್ಡ ಹೀರೋ, ಒಂದು ದೊಡ್ಡ ಪ್ರೊಡಕ್ಷನ್ ಹೌಸ್ , ದೊಡ್ಡ ಬಜೆಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದಾಗ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ಆ ಬಗೆಯ ಚಿತ್ರಗಳ ಕಡೆ ನಿರ್ಮಾಪಕರು , ದೊಡ್ಡ ನಾಯಕ ನಟರು ತಲೆ ಹಾಕಿಯೂ ಮಲಗುವುದಿಲ್ಲ. ನನ್ನ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಕೂಡಾ ಇದೇ ಆಶಯ ಹೊಂದಿತ್ತು.

ಎಲ್ಲಾ ವಿಚಾರ/ವಿವಾದಗಳಾಚೆ ‘ಕ್ರಾಂತಿ’ ಅದರ ಆಶಯ ಮತ್ತು ಸಂದೇಶಗಳಿಗಾಗಿ ಸಮಾಜ ಬೆಂಬಲಿಸಬೇಕಾದ ಚಿತ್ರ ಎನ್ನುವುದು ನನ್ನ ನಿಲುವು

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

MINIRATNA | ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಶ್ರೀಗಳು #PRATIDHVANI
ಇದೀಗ

MINIRATNA | ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಶ್ರೀಗಳು #PRATIDHVANI

by ಪ್ರತಿಧ್ವನಿ
March 20, 2023
ರಾಹುಲ್ ಗಾಂಧಿ ಭೇಟಿ : ಯಾವುದೇ ಪರಿಣಾಮ ಬೀರಿಲ್ಲ..! Rahul Gandhi’s visit: No effect..!
Top Story

ರಾಹುಲ್ ಗಾಂಧಿ ಭೇಟಿ : ಯಾವುದೇ ಪರಿಣಾಮ ಬೀರಿಲ್ಲ..! Rahul Gandhi’s visit: No effect..!

by ಪ್ರತಿಧ್ವನಿ
March 21, 2023
ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ
ಕರ್ನಾಟಕ

ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

by ಮಂಜುನಾಥ ಬಿ
March 24, 2023
ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?
Top Story

ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?

by ಮಂಜುನಾಥ ಬಿ
March 25, 2023
ಕಾಂಗ್ರೆಸ್​​ ಟಿಕೆಟ್​​ ಅಚ್ಚರಿ.. ನಿಗೂಢತೆ ಉಳಿಸಿಕೊಂಡ ಕ್ಷೇತ್ರಗಳು..!
Top Story

ಕಾಂಗ್ರೆಸ್​​ ಟಿಕೆಟ್​​ ಅಚ್ಚರಿ.. ನಿಗೂಢತೆ ಉಳಿಸಿಕೊಂಡ ಕ್ಷೇತ್ರಗಳು..!

by ಕೃಷ್ಣ ಮಣಿ
March 25, 2023
Next Post
ಡಾ ವಿಷ್ಣುವರ್ಧನ್  ಇಡೀ ಕರುನಾಡು ಮೆಚ್ಚಿದ  ಹೃದಯವಂತ – ಬಸವರಾಜ ಬೊಮ್ಮಾಯಿ

ಡಾ ವಿಷ್ಣುವರ್ಧನ್  ಇಡೀ ಕರುನಾಡು ಮೆಚ್ಚಿದ  ಹೃದಯವಂತ - ಬಸವರಾಜ ಬೊಮ್ಮಾಯಿ

ಬಾಪು ಇಲ್ಲದ ಸ್ವತಂತ್ರ ಭಾರತದ 75 ವಸಂತಗಳು

ಬಾಪು ಇಲ್ಲದ ಸ್ವತಂತ್ರ ಭಾರತದ 75 ವಸಂತಗಳು

ಸರ್ಕಾರಕ್ಕೆ ಒಕ್ಕಲಿಗ, ಲಿಂಗಾಯತ, SC,ST ಬೇಡವೇ..? ಬ್ರಾಹ್ಮಣರು ಮಾತ್ರ ಸಾಕಾ..?

ಸರ್ಕಾರಕ್ಕೆ ಒಕ್ಕಲಿಗ, ಲಿಂಗಾಯತ, SC,ST ಬೇಡವೇ..? ಬ್ರಾಹ್ಮಣರು ಮಾತ್ರ ಸಾಕಾ..?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist