• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಪಾರ್ಥೇನಿಯಂ ಜೋಶಿ’: ಪ್ರಹ್ಲಾದ್ ಜೋಶಿ ವಿರುದ್ಧ ಬಿ.ಕೆ ಹರಿಪ್ರಸಾದ್ ಕೆಂಡಾಮಂಡಲ

ಪ್ರತಿಧ್ವನಿ by ಪ್ರತಿಧ್ವನಿ
July 12, 2026
in Top Story, ಕರ್ನಾಟಕ, ರಾಜಕೀಯ
0
‘ಪಾರ್ಥೇನಿಯಂ ಜೋಶಿ’: ಪ್ರಹ್ಲಾದ್ ಜೋಶಿ ವಿರುದ್ಧ ಬಿ.ಕೆ ಹರಿಪ್ರಸಾದ್ ಕೆಂಡಾಮಂಡಲ
Share on WhatsAppShare on FacebookShare on Telegram

ಬೆಂಗಳೂರು: ಮೂಲಭೂತ ಶಿಷ್ಟಾಚಾರ “Basic Etiquettes” ನ ಪಿತಾಮಹ ಪ್ರಹ್ಲಾದ್‌ ಜೋಶಿ ಮೊದಲು ತಮ್ಮ ಪಕ್ಷದ ನಾಯಕರಿಗೆ ಹಾಗೂ ಅದರ ಬಾಲಗೊಂಚಿ ಭಕ್ತರಿಗೆ ಸಾರ್ವಜನಿಕ ಭಾಷೆಯ ಬಗ್ಗೆ ಪಾಠ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌ ಕಾಂಗ್ರೆಸ್‌ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ಗುಡುಗಿದ್ದಾರೆ.

ADVERTISEMENT
DK Shivakumar : ಕಿತ್ತೂರು ಕರ್ನಾಟಕದ ಶಾಸಕರು ಏನೆಲ್ಲಾ ಡಿಮ್ಯಾಂಡ್ ಮಾಡಿದ್ರು ಸರ್? #pratidhvani

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿ.ಕೆ ಹರಿಪ್ರಸಾದ್‌, ಪೋಕ್ಸೋ ಆರೋಪಿಗಳನ್ನು, ಚೆಕ್ ಮೂಲಕ ಲಂಚ ಪಡೆದು, ತಮ್ಮದೇ ಪಕ್ಷದ ನಾಯಕರಿಂದ “ಎಳಸು” ಅಧ್ಯಕ್ಷ ಎಂದು ಬಿರುದಾಂಕಿತರ ಸಾರ್ವಜನಿಕ ಭಾಷೆಯನ್ನು ಅವರದ್ದೇ ಭಾಷೆಯಲ್ಲಿ ಉತ್ತರಿಸುತ್ತೇನೆ ಹೊರತು, “ಜೀ ಹುಜೂರು” ಎನ್ನುವ ಬಿಜೆಪಿಯ ಸಂಸ್ಕೃತಿಯನ್ನು ನನ್ನಿಂದ ನಿರೀಕ್ಷೆ ಮಾಡುವುದು ಮೂರ್ಖತನ.

 “Basic Etiquettes” ಬಗ್ಗೆ ಪುಂಖಾನುಪುಂಖ ಮಾತ್ನಾಡುವ ಜೋಶಿ, ತನ್ನದೇ ಒಡಹುಟ್ಟಿದ ಸಹೋದರ “ಗೋಪಾಲ” ಮಾಡಿದ ಗೋಲ್ಮಾಲ್ ಬಗ್ಗೆ ಮಾತ್ನಾಡುವ “Basic Etiquettes” ಇಲ್ವಾ? ಲೋಕಸಭೆಯ ಟಿಕೆಟ್ ಕೊಡಿಸುವುದಾಗ ಅಮಾಯಕ ದಲಿತ ಹೆಣ್ಣು ಮಗಳನ್ನು ಎರಡು ಕೋಟಿ ಅನ್ಯಾಯ ಮಾಡಿದ್ದು “Basic Etiquettes” ವ್ಯಾಪ್ತಿಯೊಳಗೆ ಬರೋದಿಲ್ವಾ? ಅಣ್ಣನ ಚುನಾವಣೆಗೆ ಮತ ಕೇಳುವಾಗ ಸಂಬಂಧ ಇತ್ತು, ಗೋಲ್ಮಾಲ್ ಮಾಡಿದಾಗ ಸಂಬಂಧವೇ ಇಲ್ಲ ಎನ್ನುವ “Basic Etiquettes” ಯಾರಿಗೂ ಕಲಿಸಲು ಹೋಗಬೇಡಿ ಎಂದು ಕಿಡಿಕಾರಿದ್ದಾರೆ.

DkShivakumar  : ಕರ್ನಾಟಕದ ಗಡಿ ಭಾಗದ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ.. #pratidhvani

ಆರ್‌ಎಸ್‌ಎಸ್‌ ಬಗ್ಗೆ ದೇಶದ ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಹೇಳುತ್ತಿದ್ದಾರೆ. ಆದರೆ, ಬಹುಸಂಖ್ಯಾತರ ಭಾವನೆಗಳನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಅಧಿಕಾರಕ್ಕೇರುವುದು ಪ್ರಹ್ಲಾದ್‌ ಜೋಶಿಯಂತಹ ಪೇಶ್ವೆ ಮನಸ್ಥಿತಿಯ ರಾಜಕಾರಣಿಗಳ ರಾಜಕೀಯ ತಂತ್ರ ಎಂದು ಕುಮಾರಸ್ವಾಮಿಯವರೇ ಹೇಳಿದ್ದನ್ನು ಮೊದಲು ನೆನಪಿಸಿಕೊಳ್ಳಲಿ. ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರೇ ಪ್ರಹ್ಲಾದ್‌ ಜೋಶಿಯನ್ನು “ಮರಾಠಿ ಪೇಶ್ವೆ ವಂಶಸ್ಥ” ಎಂದು ಕರೆದಿದ್ದನ್ನು ಮರೆತಿದ್ದಾರೆಯೇ? ‘ತಾವೇ ಬೆಳೆದ ಬೆಳೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ಪ್ರಹ್ಲಾದ್‌ ಜೋಶಿ ಅಂತಹ ಪಾರ್ಥೇನಿಯಂ’ ಎಂದು ಕೂಡಾ ಹೆಚ್ ಡಿ ಕುಮಾರಸ್ವಾಮಿಯವರು ಹೇಳಿದ್ದರು.‌ ಅಂತಹ ಪಾರ್ಥೇನಿಯಂ ಜೊತೆಗೆ ನಮ್ಮ ಗಂಭೀರ ಚರ್ಚೆಯಿಲ್ಲ ಎಂದು ಬಿ.ಕೆ ಹರಿಪ್ರಸಾದ್‌ ಹೇಳಿದ್ದಾರೆ.

HD Kumaraswamy : ಡಿಕೆಶಿ ಆಡಳಿತದಲ್ಲಿ ಸಿದ್ದರಾಮಯ್ಯಗೆ ದಳಪತಿ ಬಹುಪರಾಕ್..! #pratidhvani

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಿಖ್ ಹತ್ಯಾಕಾಂಡವನ್ನು ನೆನಪಿಸಿದ್ದಾರೆ. ಆ ಘಟನೆಗೆ ಸಂಬಂಧಿಸಿದಂತೆ ತನಿಖೆಗಳು ನಡೆದಿವೆ, ನ್ಯಾಯಾಂಗ ಪ್ರಕ್ರಿಯೆಗಳು ನಡೆದಿವೆ ಮತ್ತು ಕಾಂಗ್ರೆಸ್ ಪಕ್ಷವೂ ಹಲವು ಸಂದರ್ಭಗಳಲ್ಲಿ ವಿಷಾದ ವ್ಯಕ್ತಪಡಿಸಿದೆ. ಘಟನೆಗೆ ಕಾರಣರಾದ ಎಲ್ಲರನ್ನು ಪಕ್ಷದಿಂದ ಉಚ್ಚಾಟಿಸಿ ಕಾಂಗ್ರೆಸ್ ತೀವ್ರತರವಾದ ಕ್ರಮಗಳನ್ನೂ ತೆಗೆದುಕೊಂಡಿದೆ. ಈಗ ಅದೇ ಧೈರ್ಯದಿಂದ ಪ್ರಹ್ಲಾದ್ ಜೋಷಿಯವರು 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆ ಉತ್ತರಿಸಲಿ. ಗುಜರಾತ್ ಗಲಭೆ ಮಾಡಿ ನೂರಾರು ಮಹಿಳೆಯರು ಮಕ್ಕಳನ್ನು ಕೊಂದು ಸಜೀವ ದಹನ ಮಾಡಿದ ಆರೋಪಕ್ಕೆ ಕಾರಣರಾಗಿ ಗಡಿಪಾರಾದ ವ್ಯಕ್ತಿ ಈಗ ದೇಶದ ಗೃಹ ಸಚಿವರಾಗಿದ್ದಾರೆ. ರಾಜೀನಾಮೆ ಕೇಳುವ ಧೈರ್ಯ ಇದೆಯೇ? ಅಥವಾ ಕನಿಷ್ಟ ಪಕ್ಷ ವಿಶಾದವನ್ನಾದರೂ ವ್ಯಕ್ತಪಡಿಸುವ ಮಾನವೀಯತೆ ಉಳಿದಿದಯೇ?

HD Kumaraswamy : Krishna Reddy ಈ Eshwara Khandre ವಯಸ್ಸೆಷ್ಟು..? #pratidhvani

ಗುಜರಾತ್ ನ ಅಂದಿನ ಡಿಜಿಪಿ ಸಂಜೀವ್ ಭಟ್ ಪ್ರಕಾರ ಗುಜರಾತ್ ಗಲಭೆಗೆ ಕಾರಣವೇ ಅಂದಿನ ಮುಖ್ಯಮಂತ್ರಿಯಾಗಿದ್ದ, ಈಗಿನ ಪ್ರಧಾನಿ ನರೇಂದ್ರ ಮೋದಿ. ವಡೋದರದ ಬೀದಿಯಲ್ಲಿ ಗರ್ಭಿಣಿ ಹೆಣ್ಣುಮಗಳ ಹೊಟ್ಟೆಯಲ್ಲಿ ತ್ರಿಶೂಲ ಚುಚ್ಚಿ ಮೆರವಣಿಗೆ ಮಾಡಿದ ಗೂಂಡಾಗಿರಿ ಸಂಸ್ಕೃತಿ ಯಾರದ್ದು? ಎಂದು ಕೆಪಿಸಿಸಿ ಅಧ್ಯಕ್ಷ ಪ್ರಶ್ನಿಸಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಮತ್ತು ಹತ್ಯೆಗೆ ಶಿಕ್ಷೆಗೊಂಡ ಅಪರಾಧಿಗಳು ಬಿಡುಗಡೆಯಾದಾಗ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದವರು ಯಾರ ಸೈದ್ದಾಂತಿಕ ಪರಿವಾರದವರು ಎಂಬುದನ್ನು ದೇಶವೇ ನೋಡಿದೆ. ಬಿ ಕೆ ಹರಿಪ್ರಸಾದ್ ಅವರು ಗೂಂಡಾಗಿರಿ ಅನುಭವದಿಂದ ಹೇಳಿಕೆ ನೀಡಿದ್ದಾರೆ ಎಂದು ‘ಪಾರ್ಥೇನಿಯಂ ಜೋಶಿ ‘ಯವರು ಹೇಳಿದ್ದಾರೆ. ನಾನು ಹಿಂದುತ್ವದ ಹೆಸರಿನಲ್ಲೋ, ಜಾತಿ ಹೆಸರಿನಲ್ಲೋ ಗೂಂಡಾಗಿರಿ ಮಾಡಿಲ್ಲ. ನನ್ನ ಮೇಲೆ ಜಾತ್ಯಾತೀತತೆ, ಸಂವಿಧಾನ ರಕ್ಷಣೆಗಾಗಿ ನಡೆದ ಹೋರಾಟಕ್ಕಾಗಿನ ಪ್ರಕರಣ ಹೊರತುಪಡಿಸಿದರೆ ಇನ್ನಾವುದೇ ಪ್ರಕರಣವೂ ಇಲ್ಲ.‌

Kumaraswamy on StatePolitics: ರಾಜ್ಯ ರಾಜಕಾರಣಕ್ಕೆ ವಾಪಸ್ ಬರೋ ಬಗ್ಗೆ ಕುಮಾರಸ್ವಾಮಿ ರಿಯಾಕ್ಷನ್ #pratidhvani

ನಾನು ‘ಪಾರ್ಥೇನಿಯಂ ಜೋಶಿ ‘ಯವರ ಹೈಕಮಾಂಡ್ ನಂತೆ ಯಾವತ್ತೂ ಗಡಿಪಾರಾಗಿಲ್ಲ. ನಾನು ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗಾಗಿನ ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇನೆ. ಹೆಚ್ ಡಿಕೆಯವರಿಂದ ಪೇಶ್ವೆ ಬಿರುದಾಂಕಿತ ಜೋಶಿಯವರು ಸಮಾಜವನ್ನು ಧರ್ಮ, ಜಾತಿ ಮತ್ತು ದ್ವೇಷದ ಹೆಸರಿನಲ್ಲಿ ವಿಭಜಿಸಿ, ಹಿಂದುಳಿದವರನ್ನು ಜೈಲಿಗೆ ಕಳುಹಿಸಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ವಾತಾವರಣ ನಿರ್ಮಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ, ಏರುತ್ತಾರೆ. ಇದುವೇ ನಿಜವಾದ ಸೈದ್ದಾಂತಿಕ ಗೂಂಡಾಗಿರಿಯ ರಾಜಕಾರಣ ಎಂದು ಬಿ.ಕೆ ಹರಿಪ್ರಸಾದ್‌ ಗುಡುಗಿದ್ದಾರೆ.

Tags: BJPBK HariprasadcongressKarnatakaKarnataka PoliticsPoliticsprahalad joshi
Previous Post

ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಡೆಲಿವರಿ ಬಾಯ್ ಅಸ* ವರ್ತನೆ

Next Post

ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

Related Posts

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ
Top Story

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

by ಪ್ರತಿಧ್ವನಿ
July 13, 2026
0

ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಕಲಾವಿದರ ನಡುವೆಯೂ ವೃತ್ತಿಪರ ಭಿನ್ನಾಭಿಪ್ರಾಯಗಳು ಹಾಗೂ ಅಭಿರುಚಿಯ ವ್ಯತ್ಯಾಸಗಳು ಹೊಸದೇನಲ್ಲ. ಆದರೆ ದಕ್ಷಿಣ ಭಾರತದ ಇಬ್ಬರು ದಿಗ್ಗಜರಾದ ಮಹಾನಟಿ ಸಾವಿತ್ರಿ ಮತ್ತು ಗಾನಕೋಗಿಲೆ...

Read moreDetails
ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

July 12, 2026
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

July 12, 2026
ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

July 12, 2026
Next Post
ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada