ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ ಟಿಸಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಅಮ್ಮತಿ ಕಾವಾಡಿ ಬಳಿ ನಡೆದಿದೆ.
ಚಾಲಕ ಸೇರಿದಂತೆ ಬಸ್ ನಲ್ಲಿ ಇದ್ದ ಸುಮಾರು 40 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ.

ಕೇರಳ ರಾಜ್ಯದ ಎರ್ನಾಕುಲಂನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ಈ ಬಸ್ ತೆರಳುತಿತ್ತು. ನಸುಕಿನ 4 ಗಂಟೆಗೆ ವಿರಾಜಪೇಟೆ ಬಸ್ ನಿಲ್ದಾಣ ದಿಂದ ಬಸ್ ಹೊರಟಿತ್ತು. ಬೆಳಗ್ಗಿನ ಜಾವ ಸಮಯದಲ್ಲಿ ಕಾವಾಡಿ ಗ್ರಾಮದ ಕಂದಕಕ್ಕೆ ಮಗುಚಿ ಬಿದ್ದಿದೆ. ರಸ್ತೆಯಲ್ಲಿ ದಟ್ಟವಾಗಿ ಮಂಜು ಆವರಿಸಿತ್ತು ಎಂದು ಗಾಯಾಳು ಒಬ್ಬರು ತಿಳಿಸಿದ್ದಾರೆ.
ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.