![](https://pratidhvani.com/wp-content/uploads/2024/05/KJ_George.jpg)
ಲೋಕಸಭಾ ಎಲೆಕ್ಷನ್ ರಿಸಲ್ಟ್ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಮೈತ್ರಿ ನಾಯಕರು ಸರಿಯಾಗಿಯೇ ಟಕ್ಕರ್ ಕೊಟ್ಟಿದ್ದಾರೆ. ಈ ನಡುವೆ ಪ್ರತಿಷ್ಠಿತ ಕ್ಷೇತ್ರ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅಲ್ಪ ಅಂತರದಲ್ಲಿ ಕಾಂಗ್ರೆಸ್ ಸೋತಿದೆ. ಇದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ
ಸರ್ವಜ್ಞನಗರದ ಮತದಾರರಿಗೆ ಸಚಿವ ಕೆಜೆ ಜಾರ್ಜ್ ಧನ್ಯವಾದ ಹೇಳಿದ್ದಾರೆ . ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿ ಧನ್ಯವಾದ ಹೇಳಿದ್ದಾರೆ.
![](https://pratidhvani.com/wp-content/uploads/2024/06/IMG-20240605-WA0027-1024x682.jpg)
![](https://pratidhvani.com/wp-content/uploads/2024/06/Screenshot_20240605-212348-704x1024.jpg)
ಜಾರ್ಜ್ ಪೋಸ್ಟ್ ನಲ್ಲಿ ಏನಿದೆ..?
ಸರ್ವಜ್ಞನಗರದ ಆತ್ಮೀಯ ಮತದಾರ ಬಂಧುಗಳೇ,
ನಿಮಗೆಲ್ಲರಿಗೂ ನಮ್ಮ ಮನದಾಳದ ಧನ್ಯವಾದಗಳು.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತಗಳನ್ನು ನೀಡಿ ಅಗಾಧವಾದ ಬೆಂಬಲ ಮತ್ತು ವಿಶ್ವಾಸ ತೋರಿದ್ದೀರಿ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ನಿಮಗೆ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದೆ.ಒಂದು ಸಮುದಾಯವಾಗಿ, ನಾವು ಜಾತ್ಯತೀತತೆ, ಬಹುತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಮತ್ತೊಮ್ಮೆ ದೃಢವಾಗಿ ಸಾಬೀತುಪಡಿಸಿದ್ದೀರಿ.
ಕಾಂಗ್ರೆಸ್ ಪಕ್ಷದ ಆದರ್ಶಗಳು, ಮೌಲ್ಯಗಳ ಬಗ್ಗೆ ನಿಮ್ಮ ಅಚಲ ನಂಬಿಕೆಯು ನಮ್ಮನ್ನು ನಿಜವಾಗಿಯೂ ವಿನಮ್ರವಾಗಿಸಿಗಿದೆ. ಇದು ನಮಗೆ ಸ್ಪೂರ್ತಿದಾಯಕವೂ ಹೌದು. ನಾವು ಎಂದಿನಂತೆ ನಿಮ್ಮ ಧ್ವನಿಯಾಗಿ, ನಿಮ್ಮ ಕಾಳಜಿಗಳ ಬಗ್ಗೆ ದಣಿವರಿಯದೆ ಕೆಲಸ ಮಾಡಲು ಪ್ರೇರಕವಾಗಿದೆ.
![](https://pratidhvani.com/wp-content/uploads/2024/06/IMG-20240605-WA0026-1024x682.jpg)
ನಮ್ಮ ಸರ್ವಜ್ಞ ನಗರ ಪ್ರದೇಶವು ಬೆಂಗಳೂರು ಕೇಂದ್ರ ಅಭ್ಯರ್ಥಿ ಶ್ರೀ ಮನ್ಸೂರ್ ಅಲಿ ಖಾನ್ ಅವರ ಪರವಾಗಿ 73,405 ಮತಗಳನ್ನು ಚಲಾಯಿಸಿತ್ತು. ಇದು ನಿಮ್ಮ ಸಂಪೂರ್ಣ ವಿಶ್ವಾಸದ ಪ್ರತೀಕವಾಗಿದೆ. ಚುನಾವಣೆಯ ಫಲಿತಾಂಶ ಏನೇ ಇರಲಿ ನಾವು ಎಂದಿನಂತೆ ನಿಮ್ಮ ಕಾಳಜಿ ಮತ್ತು ಆಕಾಂಕ್ಷೆಗಳಿಗೆ ಧ್ವನಿಯಾಗಿ ಮುಂದುವರಿಯುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನಮ್ಮ ದೇಶದ ಬಗೆಗಿನ ನಿಮ್ಮ ಕನಸುಗಳು ನಮ್ಮ ಕಾರ್ಯಸೂಚಿಯಲ್ಲಿ ಅತ್ಯಂತ ಅಗ್ರ ಸ್ಥಾನದಲ್ಲಿವೆ.
![](https://pratidhvani.com/wp-content/uploads/2024/06/IMG-20240605-WA0028-1024x576.jpg)
ನಿಮ್ಮ ಬೆಂಬಲವು ನಮ್ಮನ್ನು ಸಮಾನತೆ, ನ್ಯಾಯ ಮತ್ತು ಪ್ರಗತಿಯ ತಳಹದಿಯ ಮೇಲೆ ನಿಲ್ಲುವ ಸಮಾಜವನ್ನು ನಿರ್ಮಿಸುವ ನಮ್ಮ ಸಂಕಲ್ಪಕ್ಕೆ ಶಕ್ತಿ ತುಂಬಿದೆ.ಮತ್ತೊಮ್ಮೆ, ನಮ್ಮೊಂದಿಗೆ ನಿಂತಿದ್ದಕ್ಕಾಗಿ ಮತ್ತು ಬಲವಾದ ಭವಿಷ್ಯಕ್ಕಾಗಿ ನಿಮ್ಮ ಭರವಸೆಯನ್ನು ನಮ್ಮ ಮೇಲೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಅಂದಿದ್ದಾರೆ.