2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election 2023) ಕೌಂಟ್ಡೌನ್ ಶುರುವಾಗಿದೆ. ಇದೇ ಮೇ 10ರಂದು ಚುನಾವಣೆ(election) ನಡೆಯಲಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರಿಗೆ ಸ್ಯಾಂಡಲ್ವುಡ್ನ(sandalwood) ಅನೇಕ ನಟ, ನಟಿಯರು ಕೂಡ ಸಾಥ್ ನೀಡುತ್ತಿದ್ದಾರೆ. ಈ ಸಲ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್(kiccha sudeep) ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.


ರಾಜ್ಯದ ನಾನಾ ಕಡೆ ತೆರಳಿ ಬಿಜೆಪಿ(BJP) ಪರ ಮತಯಾಚಿಸುತ್ತಿದ್ದಾರೆ. ಇಂದು ಕಲಬುರಗಿಯ ದೇವದುರ್ಗ ಪಟ್ಟಣದಲ್ಲಿ ಬಿಜೆಪಿ(BJP) ಅಭ್ಯರ್ಥಿ ಕೆ.ಶಿವನಗೌಡ ಪರ ನಟ ಸುದೀಪ್ ರೋಡ್ ಶೋ ನಡೆಸಲಿದ್ದಾರೆ. ಇನ್ನು ಕಲಬುರಗಿಯಿಂದ ದೇವದುರ್ಗಕ್ಕೆ ಕಿಚ್ಚ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಈ ವೇಳೆ ಸುದೀಪ್ರನ್ನ ನೋಡೋಕೆ ಅಭಿಮಾನಿಗಳು ಬ್ಯಾರಿಕೇಡ್ ಮುರಿದು ನುಗ್ಗಿದರು. ಸುದೀಪ್(sudeep) ಹೆಲಿಕಾಪ್ಟರ್ನಿಂದ ಕೆಳಗಿಳಿಯುತ್ತಿದ್ದಂತೆ, ಹೆಲಿಕಾಪ್ಟರ್ ಬಳಿಯೇ ಜನ ಓಡಿ ಬಂದರು. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಕೇಂದ್ರ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದ್ರು. ಪೊಲೀಸರ(police) ಲಾಠಿ ಏಟು ಬೀಳುತ್ತಿದ್ದಂತೆ ಎದ್ವೋ ಬಿದ್ವೋ ಅಂತ ಜನ ಓಡಿ ಹೋದರು.
