
ಬೆಂಗಳೂರು: ಬೈಕ್ ಗೆ ಡಿಕ್ಕಿ ಹೊಡೆದು ಯುವತಿಗೆ ತೀವ್ರ ಗಾಯ ಮಾಡಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಪ್ರಕರಣ ಸಂಬಂಧ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಅಪಘಾತದ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್,
ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಯಾರು ಚಿಕ್ಕವರಲ್ಲ. ನಾವು ಎಲ್ಲರು ಸಮಾನರೆ. ತಪ್ಪು ಯಾರೆ ಮಾಡಿರಲಿ ಹೇಗೆ ಮಾಡಿರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಆಗೇ ಆಗುತ್ತೆ ಎಂದು ದಿವ್ಯಾ ಸುರೇಶ್
ಹೇಳಿದ್ದಾರೆ.
ಇನ್ನು ಕಾರು ಅಪಘಾತದ ದೃಶ್ಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಾವಳಿ ಪ್ರಕಾರ ದಿವ್ಯಾ ಸುರೇಶ್ ಕಾರ್ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಿಂದ ಅತೀ ವೇಗವಾಗಿ ಬರುತ್ತೆ.
ಬಳಿಕ ಎಡಕ್ಕೆ ಟರ್ನ್ ತೆಗೆದುಕೊಳ್ಳುವಾಗ ಬ್ಯಾಟರಾಯನಪುರ ಸಂಚಾರಿ ಠಾಣೆಯ ಹಿಂದಿನ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಗೆ ಟಚ್ ಆಗಿದೆ. ಇದರಿಂದ ದಿವ್ಯಾ ಸುರೇಶ್ ಕಾರ್ ಮುಂಭಾಗ ಬೈಕ್ ಮೇಲೆ ಕುಳಿತಿದ್ದ ಅನಿತಾ ಕಾಲಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಮೂವರು ಸಹ ಕೆಳಗೆ ಬಿದಿದ್ದಾರೆ.. ಆದರೆ ದಿವ್ಯಾ ಸುರೇಶ್ ಕಾರ್ ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಸದ್ಯ ಅನಿತಾ ಕಾಲಿನ ಮಂಡಿ ಚಿಪ್ಪು ಒಡೆದುಹೋಗಿರುತ್ತೆ. ಆಕೆಗೆ ಶಸ್ತ್ರ ಚಿಕಿತ್ಸೆಯಾಗಿದ್ದು, ಚಿಕಿತ್ಸೆ ಹಣಕ್ಕಾಗಿ ಪರದಾಡುತ್ತಿದ್ದಾರೆ. ಘಟನೆ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದ್ದು, ದಿವ್ಯಾ ಸುರೇಶ್ ರನ್ನ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.







