ಲಂಡನ್ : ಬ್ರಿಟನ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಪರ ಬೆಂಬಲಿಗರ ಗುಂಪೊಂದು ದಾಳಿ ಮಾಡಿ ಭಾರತದ ರಾಷ್ಟ್ರಧ್ವಜವನ್ನು ಕಿತ್ತೆಸೆದು ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ ಘಟನೆಯು ಭಾನುವಾರ ನಡೆದಿದೆ. ಈ ಘಟನೆ ಬಗ್ಗೆ ಭಾರತವು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು ಬ್ರಿಟಿಷ್ ಹೈಕಮಿಷನ್ ಉಪ ಮುಖ್ಯಸ್ಥರನ್ನು ಕರೆಸಿ ಖಡಕ್ ಎಚ್ಚರಿಕೆ ನೀಡಿದೆ. ದೆಹಲಿಯಲ್ಲಿರುವ ಬ್ರಿಟಿಷ್ ರಾಜತಾಂತ್ರಿಕರನ್ನು ಭೇಟಿ ಮಾಡಿ ಕಠಿಣ ನಿಲುವಿನ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
An Indian diplomat confronts a Khalistani clown, takes back the Indian flag pulled down by a mob that attacked the Indian High Commission in London to protest legal action taken against a militant Sikh secessionist in India.
— Sonam Mahajan (@AsYouNotWish) March 19, 2023
A larger tricolour has now replaced the previous one. pic.twitter.com/1dG1AdhedH
ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಅವಮಾನ ಎಸಗಿದ ಬಗ್ಗೆ ಕಾರಣ ಕೇಳಿ ದೆಹಲಿಯಲ್ಲಿರುವ ಹೈಕಮಿಷನ್ ಅಧಿಕಾರಿಯನ್ನು ಎಂಇಎಗೆ ಕರೆಯಿಸಲಾಗಿದೆ. ಪ್ರತಿಭಟನಕಾರರು ಹೈಕಮಿಷನ್ ಪ್ರವೇಶಿಸಿದ್ದಾರ ಎಂದರೆ ಅಲ್ಲಿ ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಕಾರಣ ನೀಡಿ ಎಂದು ಬ್ರಿಟಿಷ್ ರಾಜತಾಂತ್ರಿಕರನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಪ್ರಶ್ನಿಸಿದೆ.
ಭಾನುವಾರ ಹಳಿ ಖಲಿಸ್ತಾನ ಧ್ವಜವನ್ನು ಹಿಡಿದ ಪುರುಷರ ಗುಂಪು ಹೈಕಮಿಷನ್ ಕಟ್ಟಡದ ಮೇಲೇರಿ ತ್ರಿವರ್ಣ ಧ್ವಜವನ್ನು ಕೆಳಗಿಸಿದ್ದಾರೆ. ಲಂಡನ್ನಲ್ಲಿ ಹೈಕಮಿಷನ್ ಮೇಲೆ ನಡೆದ ದಾಳಿಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರರು , ಬ್ರಿಟನ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲಿನ ದಾಳಿಯ ಬಳಿಕ ಈ ವಿಚಾರವನ್ನು ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ವಿರುದ್ಧ ಪ್ರತ್ಯೇಕತಾವಾದಿ ಹಾಗೂ ಉಗ್ರಗಾಮಿ ಚಟುವಟಿಕೆಗಳು ನಡೆದಿರುವ ಬಗ್ಗೆ ಭಾರತದಲ್ಲಿರುವ ಯುಕೆ ಹಿರಿಯ ರಾಜತಾಂತ್ರಿಕರನ್ನು ಕರೆಸಿ ಕಾರಣ ಕೇಳಲಾಗಿದೆ ಎಂದು ಹೇಳಿದ್ದಾರೆ.