ಕೊಲೆ, ಡ್ರಗ್ಸ್ ಮಾರಾಟ, ಕಳ್ಳತನ ಸೇರಿದಂತೆ ಇತರೆ ಗಂಭೀರ ಪ್ರಕರನಗಳನ್ನು ಬೇಧಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ 2022ರ ಕೇಂದ್ರ ಗೃಹ ಸಚಿವಾಲಯದ ಪದಕ ಲಭಿಸಿದೆ.
ಪೊಲೀಸ್ ಅಧಿಕಾರಿಗಳಾದ ಲೋಕಾಯುಕ್ತ ಎಸ್ಪಿ ಕೆ.ಲಕ್ಷ್ಮೀ ಗಣೇಶ್, ಹೆಸ್ಕಾಂ ಎಸ್ಪಿ ಶಂಕರ್. ಕೆ. ಮರಿಹಾಳ, ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್.ಗೌತಮ್, ಕಲಬುರಗಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, ದಾವಣಗೆರೆ ಬಸವನಗರ ಠಾಣಾಧಿಕಾರಿ ಎಚ್. ಗುರು ಬಸವರಾಜ್ ಪ್ರಶಸ್ತಿಗೆ ಭಾಜನವಾಗಿರುವ ಅಧಿಕಾರಿಗಳು.
ಇವರ ಜೊತೆಗೆ ದೇಶದ ಒಟ್ಟು 151 ಪೊಲೀಸ್ ಅಧಿಕಾರಿಗಳಿಗೆ ಪದಕ ಲಭಿಸಿದ್ದು ಆಗಸ್ಟ್ 19ರಂದು ದೆಹಲಿಯಲ್ಲಿ ಪದಕ ಪ್ರಧಾನ ಸಮಾರಂಭ ನಡೆಯಲಿದೆ.







