Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ತನ್ನ ಮನೆಗೆ ತಾನೇ ಬೆಂಕಿ ಹಾಕಿಕೊಂಡ ಜೆಡಿಎಸ್.!

ಕೃಷ್ಣ ಮಣಿ

ಕೃಷ್ಣ ಮಣಿ

February 5, 2023
Share on FacebookShare on Twitter

ಹಾಸನ ಜಿಲ್ಲೆಯ ಅರಕಲಗೂಡು ಹಾಗು ಅರಸೀಕೆರೆ ಗೊಂದಲದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದರು. ಅರಕಲಗೂಡಿನ ಶಾಸಕ ಎ.ಟಿ ರಾಮಸ್ವಾಮಿ ಹಾಗು ಅರಸೀಕೆರೆಯಲ್ಲಿ ಶಿವಲಿಂಗೇಗೌಡ ಕಳೆದ 2 ವರ್ಷಗಳಿಂದ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗಾಗಲೇ ಅರಕಲಗೂಡಿನಲ್ಲಿ ನಾವು ಎ ಮಂಜು ಜೊತೆಗೆ ಚರ್ಚೆ ಮಾಡಿದ್ದೇವೆ. ಅವರಿಗೆ ಟಿಕೆಟ್​ ಕ್ಲಿಯರ್​ ಮಾಡುತ್ತೇವೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಎ ಮಂಜು ಕೂಡ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಾಗು ರೇವಣ್ಣ ಹಾಗು ಕುಮಾರಸ್ವಾಮಿಗೆ ನಾನು ಆಭಾರಿ ಆಗಿರುತ್ತೇನೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಅರಕಲಗೂಡು ಹಾಲಿ ಜೆಡಿಎಸ್​ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಜೆಡಿಎಸ್​ ತನ್ನ ಮನೆಗೆ ತಾನೇ ಬೆಂಕಿ ಹಾಕಿಕೊಂಡಿದೆ. ಮುಂದಿನ ದಿನಗಳಲ್ಲಿ ಹೇಗೆ ಸುಡಲಿದೆ ಎನ್ನುವುದನ್ನು ಕಾದು ನೋಡಿ ಎಂದು ಭವಿಷ್ಯ ನುಡಿದಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಕಾಂಗ್ರೆಸ್​ ಸೇರುವ ತಯಾರಿ ಮಾಡಿಕೊಂಡು ಕೋಪವೇಕೆ..?

ಶಾಸಕ ಎ.ಟಿ ರಾಮಸ್ವಾಮಿ ಈಗಾಗಲೇ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್​ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಿಂದಲೂ ಆಹ್ವಾನ ಬಂದಿದೆ ಎನ್ನುವ ಮಾಹಿತಿ ಇದೆ. ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದ ಎ.ಟಿ ರಾಮಸ್ವಾಮಿ, ಹತ್ತಾರು ಸಭೆ ಸಮಾರಂಭದಿಂದ ದೂರ ಉಳಿದಿದ್ದರು. ಇದೀಗ ಎ ಮಂಜು ಆಯ್ಕೆ ಮಾಡಿದ್ದೇವೆ ಎನ್ನುತ್ತಿದ್ದ ಹಾಗೆ ಎ.ಟಿ ರಾಮಸ್ವಾಮಿ ಅವರು ತಿರುಗಿ ಬಿದ್ದಿದ್ದಾರೆ. ಕುಮಾರಸ್ವಾಮಿ ಮಾತು ನಿರೀಕ್ಷಿತ ಆದಂತಹ ಮಾತುಗಳು. ನಾನು ಇದನ್ನು ಬಹಳ ಹಿಂದೆಯೇ ನಿರೀಕ್ಷೆ ಮಾಡಿದ್ದೆ. ರಾಜ್ಯ ರಾಜಕಾರಣ ತುಂಬ ಕೆಟ್ಟಿದೆ. ನಾನು ರಾಜಕಾರಣ ಮಾಡಿಕೊಂಡು ಬಂದಿರುವುದು ನನಗಾಗಿ ಅಲ್ಲ, ಜನರಿಗಾಗಿ. ಆಡಳಿತ ಚೆನ್ನಾಗಿಲ್ಲ, ರಾಜಕೀಯ ಚೆನ್ನಾಗಿಲ್ಲ, ಶಾಸಕಾಂಗವೂ ಚೆನ್ನಾಗಿಲ್ಲ. ಇದೀಗ ಅರಕಲಗೂಡು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿ ಮಾಡ್ಕೊಂಡು, ಸ್ವಾರ್ಥ ರಾಜಕಾರಣ ಮಾಡಲಿಕ್ಕೆ ಮುಂದಾಗಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆ ಅಂದುಕೊಂಡು ಬಂದವನು ನಾನು. ನನ್ನ ಕ್ಷೇತ್ರವೇ ದೇವಾಲಯ, ಜನರ ಸೇವೆ ಮಾಡೋದು ದೇವರ ಪೂಜೆ ಅನ್ಕೊಂಡು ಇದ್ದೇನೆ. ನಾನು ನೇರವಾಗಿ ಮಾತನಾಡಿದ್ದೀನಿ. ಅದು ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷದಲ್ಲಿ ಕೂತಿರಲಿ ತಪ್ಪನ್ನು ತಪ್ಪು ಎಂದು ಖಂಡಿಸಿಕೊಂಡು ಬಂದಿದ್ದೀನಿ ಎಂದಿದ್ದಾರೆ. ತಪ್ಪನ್ನ ಎತ್ತಿ ಹೇಳೋದೆ ನನ್ನ ತಪ್ಪು ಎನ್ನೋದಾದ್ರೆ ಅದನ್ನು ಜನರ ತೀರ್ಮಾನಕ್ಕೆ ಬಿಡ್ತಿನಿ. ಇದು ಒಂದು, ಒಂದೂವರೆ ವರ್ಷದ ಹಿಂದೆ ನಡೆದುಕೊಂಡು ಬಂದಿರುವ ಒಳಸಂಚು. ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌‌ನಿಂದ‌ ಮುಸ್ಲಿಂ ಅಭ್ಯರ್ಥಿ ಹಾಕಿದ್ರು. ಆಮೇಲೆ ವಾಪಸ್ ತೆಗ್ಸಿದ್ರು. ಯಾರ ಹಿತವನ್ನು ಕಾಪಾಡಲಿಕ್ಕೆ..? ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಯ ಹಿತವನ್ನು ಕಾಪಾಡಲಿಕ್ಕೆ ಎಂದು ಗುಟ್ಟು ರಟ್ಟು ಮಾಡಿದ್ದಾರೆ.

ದೇವೇಗೌಡರನ್ನು ಹಾಸನದಿಂದ ಹೊರಕ್ಕೆ ಕಳಿಸಿದ್ದಕ್ಕೆ ವಿರೋಧ ಇದೆ..!

ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ಸುಳ್ಳು ಹೇಳಲಿಕ್ಕೆ ತುಂಬಾ ಭಯ ಪಡ್ತಿನಿ ನಾನು, ಸತ್ಯ ಹೇಳಲಿಕ್ಕೆ ಏನು ಹಿಂಜರಿಯುವುದಿಲ್ಲ. ನಾನು ನೆಮ್ಮದಿಯಾಗಿ, ಸಂತೋಷವಾಗಿ, ಖುಷಿಯಾಗಿದ್ದೀನಿ ಎಂದಿರುವ ಎ.ಟಿ ರಾಮಸ್ವಾಮ, ನನಗೆ ದೇವೇಗೌಡರು ಹಾಸನ ಜಿಲ್ಲೆಯನ್ನು ಬಿಟ್ಟು ತುಮಕೂರು ಜಿಲ್ಲೆಗೆ ಹೋಗುವುದು ಇಷ್ಟವಿರಲಿಲ್ಲ. ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಚನ್ನಪಟ್ಟಣದಲ್ಲಿ ಒಂದು ಪೂರ್ವಭಾವಿ ಸಭೆ ನಡೆದಿತ್ತು. ಎಲ್ಲರೂ ಕೂಡ ಪ್ರಜ್ವಲ್ ರೇವಣ್ಣ ಹೆಸರು ಹೇಳಿದ್ರು. ನಾನು ಹೇಳಲಿಲ್ಲ. ದೇವೇಗೌಡರಂತಹ ಹಿರಿಯ ಮುತ್ಸದ್ದಿಯನ್ನ ಜಿಲ್ಲೆಯಿಂದ ಹೊರಗೆ ಕಳುಹಿಸಲು ನನ್ನ ಆತ್ಮ ಒಪ್ತಿರಲಿಲ್ಲ, ಆತ್ಮಸಾಕ್ಷಿಯಂತೆ ಪ್ರಜ್ವಲ್ ಹೆಸರು ಹೇಳಲಿಲ್ಲ. ಅದಕ್ಕೆ ಕೆಲವರಿಗೆ ಕೋಪ‌ ಇರಬಹುದು ಎಂದಿದ್ದಾರೆ. ರೇವಣ್ಣ ನಮ್ಮ ಮನೆಗೆ ಎರಡು ದಿನ ಬಂದಿದ್ರು, ನಾನು ದೊಡ್ಡವರ ಜೊತೆ ಮಾತನಾಡೋಣ ಅಂತ ಹೇಳಿದ್ದೆ, ಕೆಲವು ಗೊಂದಲಗಳು, ಸಮಸ್ಯೆಗಳಿವೆ ಅದನ್ನು ಬಗೆಹರಿಸಿಕೊಳ್ಳೋಣ‌ ಅಂದಿದ್ದೆ. ಆಯ್ತು ಅಂತ ಹೋಗಿದ್ರು, ಜನವರಿ 22 ರಂದು ದೊಡ್ಡ ಕಾರ್ಯಕ್ರಮ ಇತ್ತು, ಜನವರಿ 21 ರಂದು ಏನು ಸಂಚು ನಡೀತು ಅನ್ನೋದು ಗೊತ್ತಿದೆ ಎಂದಿದ್ದಾರೆ. ಮನೆಯೊಳಗೆ ಇರುವಂತಹ ಜನ, ತಾನೇ ಮನೆ ಹಾಳು ಮಾಡೋದು, ಅವರ ಮನೆಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದು ಯಾರನ್ನು ಸುಡುತ್ತದೆ ಅಂತ ಕಾದು ನೋಡಿ ಎಂದು ಭವಿಷ್ಯ ನುಡಿದಿದ್ದಾರೆ.

ಪಕ್ಷದಲ್ಲಿ ಭಾಗಿಯಾಗುವುದೂ ಇಲ್ಲ, ಕೋಪ ಯಾಕೆ..?

ಶಾಸಕನಾಗಿ ಆಯ್ಕೆ ಆದ ಬಳಿಕ ಬೇರೊಂದು ಪಕ್ಷಕ್ಕೆ ಹೋದರೆ ಜನರು ಮುಂದಿನ ಬಾರಿ ಮತ ನೀಡುವುದಿಲ್ಲ ಎನ್ನುವುದು ಈಗಾಗಲೇ ಹತ್ತಾರು ಕ್ಷೇತ್ರಗಳಲ್ಲಿ ಅದರಲ್ಲೂ ಜೆಡಿಎಸ್​ ಶಾಸಕರಿಗೆ ಮನವರಿಕೆ ಆಗಿದೆ. ಇದೇ ಕಾರಣಕ್ಕೆ ಎ.ಟಿ ರಾಮಸ್ವಾಮಿ ಹಾಗು ಶಿವಲಿಂಗೇಗೌಡ ಕಾಂಗ್ರೆಸ್​ ಜೊತೆಗೆ ಆತ್ಮೀಯ ಸಂಬಂಧ ಇರಿಸಿಕೊಂಡು ಕ್ಷೇತ್ರದಲ್ಲಿ ಗುಟ್ಟು ಗುಟ್ಟಾಗಿ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ದೈಹಿಕವಾಗಿ ಜೆಡಿಎಸ್​ ಶಾಸಕರಾಗಿದ್ದರೂ ಮಾನಸಿಕವಾಗಿ ಕಾಂಗ್ರೆಸ್​ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಜನರಿಗೆ ನನ್ನನ್ನು ಪಕ್ಷದಿಂದ ಕುಮಾರಸ್ವಾಮಿಯೇ ಹೊರ ಹಾಕಿದ್ರು. ನಾನು ಪಕ್ಷದಲ್ಲೇ ಇದ್ದೆ. ಕೆಲವೊಂದು ಗೊಂದಲಗಳನ್ನು ಬಗೆಹರಿಸಿದ್ದರೆ ನಾನು ಜೆಡಿಎಸ್​ನಲ್ಲೇ ಉಳಿಯುತ್ತಿದೆ ಎಂದು ಕಾರ್ಯಕರ್ತರನ್ನು ಮರಳು ಮಾಡುವ ಪ್ರಯತ್ನ ಅಷ್ಟೆ ಎನ್ನುತ್ತಾರೆ ಕ್ಷೇತ್ರದ ಜನತೆ. ಇನ್ನು ಕೆಲವೇ ದಿನಗಳಲ್ಲಿ ಎ.ಟಿ ರಾಮಸ್ವಾಮಿ ಕೂಡ ಬೇರೊಂದು ಪಕ್ಷವನ್ನು ಸೇರಲಿದ್ದು, ಚುನಾವಣೆಗೆ ತಯಾರಿ ಮಾಡಿಕೊಳ್ತಿದ್ದಾರೆ. ಆದರೆ ಜೆಡಿಎಸ್​ ದೂರಬೇಕಿರುವುದು ಅವರ ರಾಜಕೀಯ ಧರ್ಮ ಅದನ್ನು ಮಾಡಲಿ ಅನ್ನೋದು ಜೆಡಿಎಸ್​ ನಾಯಕರ ಮಾತು.

ಕೃಷ್ಣಮಣಿ

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಜೆಡಿಎಸ್ ಪರ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ..!
Top Story

ಜೆಡಿಎಸ್ ಪರ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ..!

by ಪ್ರತಿಧ್ವನಿ
March 24, 2023
ಶಿವಣ್ಣನ ಸಿನಿಮಾಗೆ ನೀವೂ ಆಗಬಹುದು ಹಿರೋಯಿನ್‌..!
ಸಿನಿಮಾ

ಶಿವಣ್ಣನ ಸಿನಿಮಾಗೆ ನೀವೂ ಆಗಬಹುದು ಹಿರೋಯಿನ್‌..!

by ಪ್ರತಿಧ್ವನಿ
March 25, 2023
ಕಾಂಗ್ರೆಸ್​​ನಿಂದ ಮೊದಲ ಪಟ್ಟಿ ರಿಲೀಸ್​.. ಯಾರಿಗೆ ಟಿಕೆಟ್​ ಮಿಸ್​ ಗೊತ್ತಾ..?
Top Story

ಕಾಂಗ್ರೆಸ್​​ನಿಂದ ಮೊದಲ ಪಟ್ಟಿ ರಿಲೀಸ್​.. ಯಾರಿಗೆ ಟಿಕೆಟ್​ ಮಿಸ್​ ಗೊತ್ತಾ..?

by ಕೃಷ್ಣ ಮಣಿ
March 25, 2023
ಮೋದಿ ಅಧಿಕಾರಕ್ಕೆ ಬಂದ ಮೇಲೆ ಜನರ ಮತ್ತು ವಿಪಕ್ಷಗಳ ಹಕ್ಕಗಳನ್ನು ದಮನ ಮಾಡುತ್ತಿದ್ದಾರೆ : ಡಾ.ಯತೀಂದ್ರ ಸಿದ್ದರಾಮಯ್ಯ
Top Story

ಮೋದಿ ಅಧಿಕಾರಕ್ಕೆ ಬಂದ ಮೇಲೆ ಜನರ ಮತ್ತು ವಿಪಕ್ಷಗಳ ಹಕ್ಕಗಳನ್ನು ದಮನ ಮಾಡುತ್ತಿದ್ದಾರೆ : ಡಾ.ಯತೀಂದ್ರ ಸಿದ್ದರಾಮಯ್ಯ

by ಪ್ರತಿಧ್ವನಿ
March 24, 2023
Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..! ಯುವ ಕ್ರಾಂತಿ ಸಮಾವೇಶ #PRATIDHVANI
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..! ಯುವ ಕ್ರಾಂತಿ ಸಮಾವೇಶ #PRATIDHVANI

by ಪ್ರತಿಧ್ವನಿ
March 20, 2023
Next Post
ಯಡಿಯೂರಪ್ಪನವರ ರಥ ಪಂಚರ್‌ ಆಗದಿದ್ದರೆ ಸಾಕು. ಈಗಾಗಲೇ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ ಪಂಚರ್‌ ಮಾಡಿಬಿಟ್ಟಿದೆ.

ಯಡಿಯೂರಪ್ಪನವರ ರಥ ಪಂಚರ್‌ ಆಗದಿದ್ದರೆ ಸಾಕು. ಈಗಾಗಲೇ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ ಪಂಚರ್‌ ಮಾಡಿಬಿಟ್ಟಿದೆ.

ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್… ಬುಸ್… ತರ

ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್… ಬುಸ್… ತರ

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6 ರಂದು ರಾಜ್ಯದ ಬೆಂಗಳೂರು ಹಾಗೂ ತುಮಕೂರುಗೆ ಆಗಮನ

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6 ರಂದು ರಾಜ್ಯದ ಬೆಂಗಳೂರು ಹಾಗೂ ತುಮಕೂರುಗೆ ಆಗಮನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist