ಸೆಪ್ಟೆಂಬರ್ 2 ರ ಬೆಳಿಗ್ಗೆ, ಪ್ರಸ್ತುತ ಜಮ್ಮುವಿನಲ್ಲಿ ವಾಸಿಸುತ್ತಿರುವ ಶ್ರೀನಗರದ ನಿವಾಸಿ ಇಫ್ರಾ, ಅಗ್ರಗಣ್ಯ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗೀಲಾನಿಯವರ ನಿಧನದ ಸುದ್ದಿಯಿಂದ ಎಚ್ಚರಕೊಂಡು, ಕಾಶ್ಮೀರದಲ್ಲಿರುವ ತನ್ನ ಹೆತ್ತವರಿಗೆ ಕರೆ ಮಾಡಲು ಅವಳು ತಕ್ಷಣ ಫೋನ್ ಕೈಗೆತ್ತುಕೊಂಡಿದ್ದಾರೆ. ಮತ್ತೆ ಪ್ರಯತ್ನಗಳ ಹೊರತಾಗಿಯೂ, Communication blackout ಇದ್ದ ಕಾರಣ ಇಫ್ರಾಗೆ ತನ್ನ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. – ಸೆಲ್ ಸೇವೆಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಗುರುವಾರ ನಿರ್ಭಂದಿಸಲಾಗಿದೆ..
ನಂತರ ಅವರು ಪ್ರಮುಖ ಪತ್ರಿಕೆಗಳ ವೆಬ್ಸೈಟ್ಗಳನ್ನು ಪರಿಶೀಲಿಸಿದಾಗ ಹುರಿಯತ್ ನಾಯಕನ ಸಾವನ್ನು ಮಾತ್ರ ನವೀಕರಿಸಿದ್ದರೇ ಹೊರತು ಅದಕ್ಕಿಂತ ಹೆಚ್ಚಿನ ಮಾಹಿತಿ ಇರಲಿಲ್ಲ.ಅನೇಕ ಬ್ಕಾಗ್ಗಳನ್ನ ನೋಡಿದರು ಯಾವುದೇ ಮಾಹಿತಿ ದೊರಕಲಿಲ್ಲ. “ನಾನು ಪ್ರತಿ 30 ನಿಮಿಷಗಳ ನಂತರ “ಗ್ರೇಟರ್” ಕಾಶ್ಮೀರವನ್ನು ತೆರೆಯುತ್ತಿದ್ದೆ ಆದರೆ ಅದು ಗೀಲಾನಿಯ ಸಾವಿನ ಸುದ್ದಿಯನ್ನು ಮಾತ್ರ ಹೊಂದಿತ್ತು ಮತ್ತು ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ ಎಂದು ಹೇಳಿದ್ದಾರೆ.” “ಗ್ರೇಟರ್” ಕಾಶ್ಮೀರವು ಕಾಶ್ಮೀರ ಕಣಿವೆಯ ಪ್ರಮುಖ ದಿನಪತ್ರಿಕೆಯಾಗಿದೆ. ಅದರ ವೆಬ್ಸೈಟ್ನಲ್ಲಿ ಕೊನೆಯ ಅಪ್ಡೇಟ್ “ಸೈಯದ್ ಅಲಿ ಶಾ ಗೀಲಾನಿ ನಿಧನರಾಗಿದ್ದಾರೆ” ಎಂಬ ಶೀರ್ಷಿಕೆ ಮಾತ್ರ ಇತ್ತು ಎಂದಿದ್ದಾರೆ.
ಕಾಶ್ಮೀರದ ಅತಿದೊಡ್ಡ ಆನ್ಲೈನ್ ರೀಚ್ ಇರುವ ಕಾಶ್ಮೀರ ಲೈಫ್ ವೆಬ್ಸೈಟ್ ಕಳೆದ 18 ಗಂಟೆಗಳಲ್ಲಿ ಕೇವಲ ಮೂರು ಅಪ್ಡೇಟ್ಗಳನ್ನು ಮಾತ್ರ ಪೋಸ್ಟ್ ಮಾಡಿದೆ.
ಕಾಶ್ಮೀರ ಲೈಫ್ ಸುದ್ದಿ ಪತ್ರಿಕೆಯ ಆನ್ಲೈನ್ ಸಂಪಾದಕರಾದ ತಾಹಿರ್ ಭಟ್ ಮುಂಜಾನೆ ಶ್ರೀನಗರದ ಪೇಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. “ಖಾಸಗಿ ವಾಹನಗಳ ಚಲನೆಯಿಲ್ಲದೆ ನಾನು ಕಠಿಣ ನಿರ್ಬಂಧವನ್ನು ಇಲ್ಲಿ ನೋಡಿದ್ದೇನೆ; ಶಟರ್ ಡೌನ್; ನಗರದಾದ್ಯಂತ ಪೊಲೀಸರು ಬೀಡುಬಿಟ್ಟಿರುವುದನ್ನು ನೋಡಿದ್ದೇನೆ, ಮತ್ತು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ನನ್ನ ಸುದ್ದಿ ಸಂಸ್ಥೆಗಾಗಿ ನಾನು ನನ್ನ ಕಣ್ಣಿನಿಂದ ಕಂಡದ್ದನ್ನು ವರದಿ ಮಾಡಲು ಬಯಸಿದ್ದೆ ಆದರೆ ಇಂಟರ್ನೆಟ್ ಸಂಪರ್ಕ ಲಭ್ಯವಿಲ್ಲದ ಕಾರಣ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ, “ಎಂದು ದಿ ವೈರ್ ಜೊತೆ ಮಾತನಾಡುತ್ತಾ ಭಟ್ ಹೇಳಿದ್ದಾರೆ. ಭಟ್ ಅವರ ಫೋನಿನಲ್ಲಿ BSNL SIM ಕಾರ್ಡ್ ಇರುವುದರಿಂದ ಕರೆಗಳನ್ನು ಮಾಡಬಹುದು ಆದರೆ ಸುದ್ದಿಗಳನ್ನು ಪೋಸ್ಟ್ ಮಾಡಲು ಸಾಧ್ಯವಿಲ್ಲ ಮತ್ತವರ ಕಚೇರಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವು ಕಾರ್ಯನಿರ್ವಹಿಸುತ್ತಿಲ್ಲ.

ಹುರಿಯತ್ ಗೀಲಾನಿ ನಿಧನರಾದರು ಎಂಬ ಸುದ್ದಿ ಹರಡಿದ ತಕ್ಷಣ ಆಡಳಿತವು ಮಧ್ಯರಾತ್ರಿಯ ವೇಳೆಗೆ ಚಲನೆ ಮತ್ತು Communication ಮೇಲೆ ನಿರ್ಬಂಧಗಳನ್ನು ಹೇರಿತು. ಗೀಲಾನಿಗೆ 92 ವರ್ಷ ವಯಸ್ಸಾಗಿತ್ತು ಮತ್ತು 11 ವರ್ಷಗಳ ಕಾಲ ಗೃಹ ಬಂಧನದಲ್ಲಿದ್ದರು. ಗೀಲಾನಿ ನಿಧನರಾದ ಮರುದಿನ ಅಂದರೆ ಗುರುವಾರ ಮುಂಜಾನೆ ಕಾಶ್ಮೀರ ಕಣಿವೆಯ ನಿವಾಸಿಗಳು ಎಚ್ಚರಗೊಂಡು ನೋಡಿದರೆ communication ಅಸ್ತವ್ಯಸ್ತಗೊಂಡಿತ್ತು ಮತ್ತು ಸಶಸ್ತ್ರ ಪಡೆಗಳು ಚಳುವಳಿಯ ಮೇಲೆ ನಿರ್ಬಂಧಗಳನ್ನು ಹೇರಿದ್ದರು. ಕೆಲವು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟ್ವರ್ಕ್ಗಳನ್ನು ಹೊರತುಪಡಿಸಿ, ಎಲ್ಲಾ ಮೊಬೈಲ್ ಸಂಪರ್ಕಗಳು ರಾತ್ರಿಯಲ್ಲಿ ಸ್ನಾಪ್ ಆಗಿದ್ದವು. ಅಂತರ್ಜಾಲ ಸ್ಥಗಿತಗೊಳಿಸುವ ಕುರಿತು ಅಧಿಕಾರಿಗಳು ಇನ್ನೂ ಯಾವುದೇ ಆದೇಶವನ್ನು ನೀಡಿಲ್ಲ ಆದರೆ ಇದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಕಾಶ್ಮೀರ ವಾಲಾ ತನ್ನ ವೆಬ್ಸೈಟ್ ಅನ್ನು ನವೀಕರಿಸಿದ ಕೆಲವೇ ಸುದ್ದಿ ಪೋರ್ಟಲ್ಗಳಲ್ಲಿ ಒಂದಾಗಿದೆ. ಆದರೆ ಇಂದು [ಗುರುವಾರ] ಅವರ ಕಚೇರಿಗೆ ಇಂಟರ್ನೆಟ್ ಸೇವೆ ಇಲ್ಲದ ಕಾರಣ, ಹೊಸದಿಲ್ಲಿಯಲ್ಲಿರುವ ಸಂಸ್ಥೆಯ ಸಿಬ್ಬಂದಿಯಾದ ಯಶರಾಜ್ ಶರ್ಮಾ ಕೆಲವು ಅಪ್ಡೇಟ್ಗಳನ್ನು ಪೋಸ್ಟ್ ಮಾಡಿದ್ದಾರೆ. “ಫೋನ್ಗಳು ಕೆಲಸ ಮಾಡುವವರೆಗೂ ನಾನು ನನ್ನ ಸಂಪಾದಕರ ಸಂಪರ್ಕದಲ್ಲಿದ್ದೆ ಆದರೆ ರಾತ್ರಿಯಲ್ಲಿ ಎಲ್ಲವೂ ಮೌನವಾಯಿತು ಮತ್ತು ನನ್ನ ಸಂಪಾದಕರೊಂದಿಗೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದು ಶರ್ಮಾ ದಿ ವೈರ್ಗೆ ತಿಳಿಸಿದ್ದಾರೆ.
ಕುತೂಹಲಕಾರಿಯಾಗಿ, ಡಿಜಿಟಲ್ ಔಟ್ಲೆಟ್ ಫ್ರೀ ಪ್ರೆಸ್ ಕಾಶ್ಮೀರವು ತನ್ನ ವೆಬ್ಸೈಟ್ ಅನ್ನು ಆಗಾಗ್ಗೆ ಅಪ್ಡೇಟ್ ಮಾಡಲು ಸಾಧ್ಯವಾಗುತ್ತಿದೆ. ಸುದ್ದಿವಾಹಿನಿಯ ಸಂಪಾದಕರಾದ ಖಾಜಿ ಜೈದ್ ಅವರು ಕಚೇರಿಯಲ್ಲಿ ಖಾಸಗಿ ಬ್ರಾಡ್ಬ್ಯಾಂಡ್ (SNTPL) ಸಂಪರ್ಕವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಪ್ರಕಟಣೆಗಳಿಗೆ ಬರೆಯುವ ಶ್ರೀನಗರ ಮೂಲದ ಪತ್ರಕರ್ತ ಜುಬೈರ್ ಅಮೀನ್ ತಮ್ಮ ಟ್ವೀಟ್ ನಲ್ಲಿ, ಕೆಲವು ತಿಂಗಳ ಹಿಂದೆ ಭಾರತವು ಜಿ 7 ಶೃಂಗಸಭೆಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಜಂಟಿ ಹೇಳಿಕೆಗೆ ಸಹಿ ಹಾಕಿದೆ. “ಇಂದು ಕಾಶ್ಮೀರವು ದೂರವಾಣಿ ಮತ್ತು ಇಂಟರ್ನೆಟ್ ಸೇವೆಗಳ ಸಂಪೂರ್ಣ ನಿರ್ಬಂಧವನ್ನು ಹಾಕಿದೆ. ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜೊತೆಗೆ ಮಾಹಿತಿಯ ಪ್ರವೇಶವಿಲ್ಲದ ಪತ್ರಕರ್ತನಿಗೆ ಅವಮಾನವಾಗಿದೆ ಎಂದು ಬರೆದುಕೊಂಡಿದ್ದಾರೆ.
ಶ್ರೀನಗರದ ಸ್ವತಂತ್ರ ಪತ್ರಕರ್ತ ಕೈಸರ್ ಅಂದ್ರಾಬಿ, ನಿನ್ನೆ ರಾತ್ರಿ ಸಾವಿನ ಸುದ್ದಿ ತಿಳಿದ ಕೆಲವೇ ಗಂಟೆಗಳಲ್ಲಿ ಗೀಲಾನಿಯವರ ನಿವಾಸವನ್ನು ತಲುಪುವಲ್ಲಿ ಯಶಸ್ವಿಯಾದ ಕೆಲವೇ ಮತ್ತು ಮೊದಲ ಮಾಧ್ಯಮ ವ್ಯಕ್ತಿಗಳಲ್ಲಿ ಒಬ್ಬರು. “ನಾನು ಹುರಿಯತ್ ನಾಯಕನ ಸಾವಿನ ಸುದ್ದಿಯನ್ನು ಕೇಳುತ್ತಿದ್ದಂತೆ, ನಾನು ಹತ್ತಿರದ ಪ್ರದೇಶದಲ್ಲಿ ಉಳಿದುಕೊಂಡಿದ್ದ ಜಾಗದಿಂದ ಕಾಲ್ನಡಿಗೆಯಲ್ಲಿ ಹೊರಟು ರಾತ್ರಿ 11ರ ಸುಮಾರಿಗೆ ಇನ್ನೊಬ್ಬ ವರದಿಗಾರ ಜುಬೈರ್ ಜೊತೆಗೆ ತಲುಪಿದೆ. ಅಷ್ಟೊತ್ತಿಗೆ ಸೈನ್ಯದ ಚಲನೆಯು ತುಂಬಾ ಹೆಚ್ಚಾಗಿದ್ದು, ನಾವು ಬೇರ್ಪಟ್ಟಿದ್ದೇವೆ ಮತ್ತು ಬೆಳಿಗ್ಗೆ 6 ಗಂಟೆಯವರೆಗೂ ನಾನು ಅಲ್ಲಿಯೇ ಇದ್ದೆ ಆದರೆ ಪತ್ರಕರ್ತರಿಗೆ ಅಲ್ಲಿ ಅವಕಾಶವಿರಲಿಲ್ಲ ಎಂದು ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ ಗೀಲಾನಿಯನ್ನು ಸಮಾಧಿ ಮಾಡಿದ ಸ್ಮಶಾನವನ್ನು ತಲುಪಲು ಯತ್ನಿಸಿದ ಮಾಧ್ಯಮದವರನ್ನು ಪೊಲೀಸರು ಬಿಡದೆ ದೂರವಿಸಿದ್ದರು ಎಂದು ಅಂದ್ರಾಬಿ ಟ್ವೀಟ್ ಮಾಡಿದ್ದಾರೆ.
ಅವರ ಸಹೋದ್ಯೋಗಿ ಮಲ್ಟಿಮೀಡಿಯಾ ಪತ್ರಕರ್ತರಾದ ಭಟ್ ಬುರ್ಹಾನ್ ಟ್ವೀಟ್ ಮಾಡಿದ್ದು, “ಹಿರಿಯ ಕಾಶ್ಮೀರಿ ಪರ ನಾಯಕ ಎಸ್ಎಎಸ್ ಗೀಲಾನಿಯವರ ಅಂತಿಮ ವಿಧಿವಿಧಾನಗಳನ್ನು ಚಿತ್ರಿಕರಿಸಲು ಒಬ್ಬ ಪತ್ರಕರ್ತರಿಗೂ ಅವಕಾಶವಿಲ್ಲ. ಕಾಶ್ಮೀರದಲ್ಲಿ ಪತ್ರಿಕೋದ್ಯಮವು ನರಳುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಗುರುವಾರ, ಸ್ವತಂತ್ರ ಫೋಟೋ ಜರ್ನಲಿಸ್ಟ್ ಲೇನ್ಗಳು ಮತ್ತು ಬೈಲೇನ್ಗಳನ್ನು ನ್ಯಾವಿಗೇಟ್ ಮಾಡಿದರು ಮತ್ತು ಗೀಲಾನಿಯನ್ನು ಸಮಾಧಿ ಮಾಡಿದ ಸ್ಮಶಾನದ ಹತ್ತಿರ ತಲುಪಿದರು ಸಹ ಆತನನ್ನು ಪೋಲೀಸರು ಹತ್ತಿರ ಹೋಗಲು ಅನುಮತಿಸಲಿಲ್ಲ, ಆದರೆ ಅವರು ದೂರದಿಂದ ಚಿತ್ರಗಳನ್ನು ಕ್ಲಿಕ್ಕಿಸಿದರು ಎಂದು ಅನಾಮಧೇಯ ಸ್ಥಿತಿಯ ವ್ಯಕ್ತಿ ದಿ ವೈರ್ ಗೆ ತಿಳಿಸಿದರು. “ನಾನು ಅಂತರ್ಜಾಲ ಲಭ್ಯತೆ ಇರುವ ರಾಷ್ಟ್ರೀಯ ಮಾಧ್ಯಮ ವಾರ್ತಾ ಕೊಠಡಿಯ ಕಚೇರಿಯನ್ನು ತಲುಪಲು ಸುಮಾರು 6 ಕಿಲೋಮೀಟರ್ ಪ್ರಯಾಣಿಸಿದೆ.” ಎಂದು ಹೇಳಿದ್ದಾರೆ.

ಕಣಿವೆಯ ಭದ್ರತಾ ಪರಿಸ್ಥಿತಿಯ ಕುರಿತು ಕಾಮೆಂಟ್ಗಾಗಿ ಕಾಶ್ಮೀರ ಐಜಿಪಿಗೆ “ದಿ ವೈರ್” ಕರೆ ಮಾಡಿದಾಗ, “ನಾನು ಸಭೆಯಲ್ಲಿದ್ದೇನೆ, ನಾನು ಮಾತನಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ, ನಾಳೆ [ಶುಕ್ರವಾರ] ಕೂಡ ನಿರ್ಬಂಧಗಳು ಮುಂದುವರೆದಿದೆ.