• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಇಷ್ಟಲಿಂಗಾರಾಧನೆ: ಜಗತ್ತಿನ ಏಕೈಕ ವೈಜ್ಞಾನಿಕ ಪೂಜಾವಿಧಾನ

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
April 4, 2023
in ಅಂಕಣ
0
ಇಷ್ಟಲಿಂಗಾರಾಧನೆ: ಜಗತ್ತಿನ ಏಕೈಕ ವೈಜ್ಞಾನಿಕ ಪೂಜಾವಿಧಾನ
Share on WhatsAppShare on FacebookShare on Telegram

ADVERTISEMENT

~ ಡಾ. ಜೆ ಎಸ್ ಪಾಟೀಲ.

ಬೆಂಗಳೂರು :ಏ.೦೪: ಲಿಂಗಾಯತ ಧರ್ಮವು ಏಕದೇವೋಪಾಸಕ ಮತ್ತು ವಿಗ್ರಹ ಆರಾಧಕರಲ್ಲದ ಜಗತ್ತಿನ ಪ್ರಗತಿಪರ ಧರ್ಮಗಳಲ್ಲಿ ಒಂದು. ಅದಕ್ಕೆ ಲಿಂಗಾಯತ ಧರ್ಮೀಯರಲ್ಲಿ ಕಂಡುಬರುವ ಇಷ್ಟಲಿಂಗ ಪೂಜಾ ವಿಧಾನ ಪುಷ್ಟಿಯೊದಗಿಸುತ್ತದೆ. ಇಷ್ಟಲಿಂಗಾರಾಧನೆಯನ್ನು ತ್ರಾಟಕಯೋಗ/ಅನಿಮಿಷದೃಷ್ಟಿಯೋಗ/ ಶಿವಯೋಗ ಸಾಧನೆ/ಲಿಂಗಾಂಗಯೋಗ ಎನ್ನುತ್ತೇವೆ. ಶಿವಯೋಗ ಸಾಧನೆಯ ಭಾಗವಾಗಿ ನಾವು ಇಷ್ಟಲಿಂಗವನ್ನು ಧ್ಯಾನಿಸುತ್ತೇವೆ. ಇದು ಕರಸ್ಥಲದಲ್ಲಿರುವ ಲಿಂಗದ ಮೇಲೆ ತದೇಕಚಿತ್ತವಾದ ದೃಷ್ಟಿ ಇಡುವುದೇ ಆಗಿದೆ. ಇದನ್ನು ಅನುಭಾವದ ಪಾರಿಭಾಷೆಯಲ್ಲಿ ಶರಣರು ಲಿಂಗನಿರೀಕ್ಷಣೆ ಎನ್ನುತ್ತಾರೆ. ಕೆಲವು ಕ್ಷಣ ಲಿಂಗ ನಿರೀಕ್ಷಣೆ ಮಾಡಿದ ಮೇಲೆ ಎರಡನೆ ಹಂತದಲ್ಲಿ ಲಿಂಗಧ್ಯಾನ ಮಾಡಲಾಗುತ್ತದೆ.

ಇಷ್ಟಲಿಂಗಾರಾಧನೆಯು ವೈಜ್ಞಾನಿಕ ಆಧಾರದಲ್ಲಿ ವಿವಿಧ ಹಂತಗಳನ್ನೊಳಗೊಂಡಿದೆ. ಇಷ್ಟಲಿಂಗ ಧ್ಯಾನದ ಸಂದರ್ಭದಲ್ಲಿ ಉಸಿರನ್ನು ನಿಯಂತ್ರಿಸುವುದು ಅತ್ಯಗತ್ಯ. ನಿಯಂತ್ರಿತ ಶ್ವಾಸೋಚ್ಚಾಸ, ತದೇಕ ಚಿತ್ತದ ನೋಟ ಮತ್ತು ಮಂತ್ರಾನುಸಂಧಾನದಿಂದ ಸಾಧಕ ಅಂತರ್ಮುಖಿಯಾಗುತ್ತಾನೆ. ಸತತ ಸಾಧನೆಯಿಂದ ಮೂಲಾಧಾರ ಚಕ್ರದ ಕುಂಡಲಿನಿ ಶಕ್ತಿ (ಲಿಂಗಶಕ್ತಿ/ಆಚಾರಲಿಂಗ) ಜಾಗೃತಗೊಂಡು ೩ನೇ ಕಣ್ಣು ತೆರೆಯುತ್ತದೆ (Opening of the third eye) ಎಂದು ನಂಬಲಾಗುತ್ತದೆ. ಅನಿಮಿಷದೃಷ್ಟಿಯು ಬಹಳ ಮಹತ್ವಪೂರ್ಣವಾದ ಹಂತವಾದ್ದರಿಂದ ಇದನ್ನು ದೃಷ್ಟಿಯೋಗ, ತ್ರಾಟಕಯೋಗ ಅಥವ ಅನಿಮಿಷಯೋಗವೆಂತಲೂ ಕರೆಯುತ್ತಾರೆ. ಈ ಸಾಧನಾ ಪರಿಕಲ್ಪನೆಯನ್ನು ಚಿನ್ಮಯಜ್ಞಾನಿ ಚನ್ನಬಸವಣ್ಣನವರ ವಚನದಲ್ಲಿ ಮಾರ್ಮಿಕವಾಗಿ ವಿವರಿಸ್ಪಟ್ಟಿದೆ:

“ಕರಸ್ಥಲದಲ್ಲಿ ಲಿಂಗಸ್ಥಾಪನವಾದ ಬಳಿಕ,
ಲಿಂಗದಲ್ಲಿ ಅನಿಮಿಷ ದೃಷ್ಟಿಯಾಗಬೇಕು.
ತನ್ನ ತಾನೆ ಅನಿಮಿಷವಾಗಬೇಕು.
ಲಿಂಗದಲ್ಲಿ ಅನಿಮಿಷವಾಗಬೇಕು.
ಜಂಗಮದ ನಿಲುಕಡೆಯನರಿಯಬೇಕು.
ಪ್ರಸಾದದಲ್ಲಿ ಪರಿಪೂರ್ಣನಾಗಬೇಕು.
ಹಿರಣ್ಯಕ್ಕೆ ಕೈಯಾನದಿರಬೇಕು
ತನ್ನ ನಿಲುಕಡೆಯ ತಾನರಿಯಬೇಕು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಕರಸ್ಥಲದ ನಿಜವನರಿವರೆ ಇದು ಕ್ರಮ.”

ಈ ರೀತಿಯಾಗಿ ತ್ರಾಟಕಯೋಗ/ಶಿವಯೋಗವನ್ನು ಚೆನ್ನಬಸವಣ್ಣನವರು ವರ್ಣಿಸಿದ್ದಾರೆ. ಅವರ ಇನ್ನೊಂದು ವಚನ ಇನ್ನೂ ಘಾಡವಾಗಿ ಈ ಪರಿಕಲ್ಪನೆಯನ್ನು ವಿವರಿಸುತ್ತದೆ:

“ಕತ್ತಲಮನೆಯಲ್ಲಿರ್ದ ಮನಜನು,
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ?
ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ
ಹತ್ತಿ ಹರಿಯದನ್ನಕ್ಕ?
ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ?
ಹಾಂಗೆ, ಸಮ್ಯಗ್‍ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ,
ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವನು?

(ಸ.ವ.ಸಂ: 3ˌ ವ.ಸಂ: 1090)

ಚೆನ್ನಬಸವಣ್ಣನವರು ಈ ಚಿಕ್ಕ ವಚನದಲ್ಲಿ ಶಿವಯೋಗ ಸಾಧನೆಯ ಅಘಾದವಾದ ಅರ್ಥವನ್ನು ಹಿಡಿದಿಟ್ಟಿದ್ದಾರೆ. ಕತ್ತಲೆಯ ಮನೆಯಲ್ಲಿ ಕುಳಿತು ಬೆಳಕನ್ನು ನೆನೆದರೆ ಬೆಳಕು ಕಾಣಬಾರದು. ಅದಕ್ಕಾಗಿ ಬೆಂಕಿ ಹೊತ್ತಿಸಲೇಬೇಕು. ಮರದ ಮೇಲಿರುವ ಫಲವು ನಮ್ಮ ನೋಟ ಮಾತ್ರಕ್ಕೆ ಉದುರಿ ಬೀಳದು. ಅದು ಮರ ಹತ್ತಿ ಹರಿದಾಗಲೆ ದೊರಕುವುದು. ಹುಟ್ಟು ಕುರುಡನೊಬ್ಬನೇ ಎಷ್ಟೊತ್ತು ನಡೆದರೂ ತನ್ನ ಇಚ್ಚಿತ ಪಟ್ಟಣವನ್ನು ಮುಟ್ಟಲಾರ. ಅದಕ್ಕಾಗಿ ಆತ ಕಣ್ಣಿದ್ದವನ ಕೈಹಿಡಿದು ನಡೆಯಲೇಬೇಕಾಗುವುದು. ಹಾಗೆ ಇಷ್ಟಲಿಂಗ ಸಾಧನೆಯಲ್ಲಿ ಚೈಚನ್ಯ ಸ್ವರೂಪಿಯಾದ ದೇವನ ನೆನಹುˌ ಆತನ ನಿರೀಕ್ಷಣೆ ಮತ್ತು ಪೂಜೆಗಳು ಬಿಡಿಬಿಡಿಯಾಗಿ ಒಂದೊಂದೆ ಮಾಡುವುದು ಅಪೂರ್ಣ. ಸಮ್ಯಜ್ಞಾನಾತ್ಮಕವಾದ ಲಿಂಗಾರ್ಚನ (ನೆನಹು), ಲಿಂಗ ನಿರೀಕ್ಷಣ (ನಿರೀಕ್ಷಣೆ) ಮತ್ತು ಲಿಂಗಧ್ಯಾನಗಳು (ಧ್ಯಾನ ಅಥವ ಪೂಜೆ) ಇವು ವಿವಿಧ ಹಂತಗಳಲ್ಲಿ ಮಾಡಿದಾಗ ಮಾತ್ರ ಯೋಗಸಾಧನೆ ಪರಿಪೂರ್ಣಗೊಳ್ಳುತ್ತದೆ ಎನ್ನುವ ವಿಷಯ ಚೆನ್ನಬಸವಣ್ಣನವರ ಮೇಲಿನ ವಚನದಲ್ಲಿ ಮಾರ್ಮಿಕವಾಗಿ ಮೂಡಿಬಂದಿದೆ.

ಹಾಗಾಗಿ ಗುರು ಬಸವಣ್ಣನವರಿಂದ ಅವಿಷ್ಕಾರಗೊಂಡಿರುವ ಇಷ್ಟಲಿಂಗಾರಾಧನೆಯು ಜಗತ್ತಿನ ಏಕೈಕ ವೈಜ್ಞಾನಿಕ ಆಧಾರದಲ್ಲಿ ರೂಪಿತವಾದ ಪೂಜಾವಿಧಾನವೆಂದು ಅನೇಕ ಜನ ಪ್ರಾಜ್ಞರು ಗುರುತಿಸಿದ್ದಾರೆ.

~ಡಾ. ಜೆ ಎಸ್ ಪಾಟೀಲ.

Tags: (Lingasakti/AcharalingaAn anti-caste rationalistbasavaBasavannaBasavanna great 12 century reformerChannabasavannaChinmayajnaniCongress PartyDrishti YogaIshtalinga meditationIshtalinga methodIshtalingaradhana consistsistalinapoojelingapoojeLingayatismShiva Yoga Sadhanavachanegaluworshipನರೇಂದ್ರ ಮೋದಿ
Previous Post

ಸಿದ್ದರಾಮಯ್ಯ ವಿರುದ್ಧ ಡಿಕೆಶಿಯನ್ನು ಎತ್ತಿಕಟ್ಟಲು ಎನ್‌ಡಿಟಿವಿ ಹುನ್ನಾರ?

Next Post

AAP | EXCLUSIVE INTERVIEW | PART 1 | ಕರ್ನಾಟಕದಲ್ಲಿ ಎಎಪಿ ಪಕ್ಷ ದೊಡ್ಡ ಪರೀಕ್ಷೆಗೆ ಹೋಗ್ತಿದೆ..! DR RAMESH |

Related Posts

Top Story

CM Siddaramaiah: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣಕ್ಕೆ ಚಾಲನೆ ನೀಡಿದ ಸಿಎಂ..!!

by ಪ್ರತಿಧ್ವನಿ
October 21, 2025
0

ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕ: ಸಿ.ಎಂ ಮೆಚ್ಚುಗೆ ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು....

Read moreDetails

DK Shivakumar: 4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ..!!

October 21, 2025

Green Kannada Movie: ರಾಜ್ ವಿಜಯ್ ನಿರ್ದೇಶನದ “ಗ್ರೀನ್” ಚಿತ್ರ ಈ ವಾರ ತೆರೆಗೆ..!!

October 21, 2025

ನೀಲಕಂಠ ಫಿಲಂಸ್ ಹಾಗೂ ಧರ್ಮಶ್ರೀ ಎಂಟರ್ ಪ್ರೈಸಸ್ ನಿರ್ಮಾಣದ ವಿಭಿನ್ನ ಶೀರ್ಷಿಕೆಯ “4.30 – 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ” ಚಿತ್ರಕ್ಕೆ ಚಾಲನೆ

October 19, 2025

DK Shivakumar: ಗುತ್ತಿಗೆದಾರಾರ ನೋವು ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ..!!

October 19, 2025
Next Post
AAP | EXCLUSIVE INTERVIEW | PART 1 | ಕರ್ನಾಟಕದಲ್ಲಿ ಎಎಪಿ ಪಕ್ಷ ದೊಡ್ಡ ಪರೀಕ್ಷೆಗೆ ಹೋಗ್ತಿದೆ..! DR RAMESH |

AAP | EXCLUSIVE INTERVIEW | PART 1 | ಕರ್ನಾಟಕದಲ್ಲಿ ಎಎಪಿ ಪಕ್ಷ ದೊಡ್ಡ ಪರೀಕ್ಷೆಗೆ ಹೋಗ್ತಿದೆ..! DR RAMESH |

Please login to join discussion

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ
Top Story

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

by ಪ್ರತಿಧ್ವನಿ
October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 24, 2025
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ
Top Story

ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ

by ಪ್ರತಿಧ್ವನಿ
October 24, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada