• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

ಪ್ರತಿಧ್ವನಿ by ಪ್ರತಿಧ್ವನಿ
August 26, 2026
in Top Story, ಅಂಕಣ, ವಿಶೇಷ
0
ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?
Share on WhatsAppShare on FacebookShare on Telegram
ADVERTISEMENT

ಇಂದಿನ ಪೀಳಿಗೆ ಬದಲಾಗುತ್ತಿರುವ ಬದುಕಿನ ಕನ್ನಡಿ. ಇಂದಿನ ಪೀಳಿಗೆಯನ್ನು ನೋಡಿದ್ರೆ ಕೆಲವೊಮ್ಮೆ ಅಚ್ಚರಿ ಆಗುತ್ತೆ. ನಮ್ಮ ಕಾಲದಲ್ಲಿ ಒಂದು ವಿಷಯ ತಿಳಿದುಕೊಳ್ಳಬೇಕು ಅಂದರೆ ಹಿರಿಯರನ್ನು ಕೇಳಬೇಕು, ಪುಸ್ತಕ ಹುಡುಕಬೇಕು. ಆದರೆ ಇವತ್ತಿನ ಮಕ್ಕಳ ಕೈಯಲ್ಲಿ ಮೊಬೈಲ್ ಇದೆ. ಬೆರಳ ತುದಿಯಲ್ಲಿ ಜಗತ್ತಿನ ಮಾಹಿತಿ ಇದೆ. ನಿಮಿಷದಲ್ಲಿ ಏನು ಬೇಕಾದ್ರೂ ಹುಡುಕಬಹುದು. ತಂತ್ರಜ್ಞಾನ ಇವತ್ತು ಬದುಕನ್ನು ತುಂಬಾ ಸುಲಭ ಮಾಡಿದೆ.

Actor Bhaskar Shetty Life Journey : ಇದು ಲಕ್ಕಿ ಭಾಸ್ಕರ ಕಥೆ! Darshan | Punithrajkumar | #pratidhvani

ಆದರ ಇದೇ ತಂತ್ರಜ್ಞಾನ ಕೆಲವೊಮ್ಮೆ ಬದುಕನ್ನು ಕಷ್ಟವೂ ಮಾಡ್ತಿದೆ. ಇಂದಿನ ಪೀಳಿಗೆಗೆ ಅವಕಾಶಗಳು ತುಂಬಾ ಇವೆ. ಓದಿಗೆ, ಕೆಲಸಕ್ಕೆ, ತಮ್ಮ ಪ್ರತಿಭೆ ತೋರಿಸೋಕೆ, ಹೊಸದನ್ನು ಕಲಿಯೋಕೆ ಸಾವಿರ ದಾರಿಗಳಿವೆ. ಯಾರ ಸಹಾಯವೂ ಇಲ್ಲದೆ ತಮ್ಮದೇ ಆದ ಗುರುತು ಮಾಡಿಕೊಳ್ಳಬಹುದು. ಹೆಣ್ಣುಮಕ್ಕಳಾಗಲಿ, ಗಂಡುಮಕ್ಕಳಾಗಲಿ ತಮ್ಮ ಕನಸುಗಳನ್ನು ಬೆನ್ನತ್ತೋ ಧೈರ್ಯ ಇವತ್ತು ಹೆಚ್ಚಾಗಿದೆ. ಇದು ಖಂಡಿತ ಒಳ್ಳೆಯ ಬೆಳವಣಿಗೆ.

ಆದರೆ ಇನ್ನೊಂದು ಕಡೆ ನೋಡಿದ್ರೆ, ಸಹನೆ ಮಾತ್ರ ಕಡಿಮೆಯಾಗ್ತಿದೆ. ಎಲ್ಲವೂ ತಕ್ಷಣ ಬೇಕು. ಮೆಸೇಜ್ ಮಾಡಿದ್ರೆ ತಕ್ಷಣ ಉತ್ತರ ಬರಬೇಕು. ವಿಡಿಯೋ ಹಾಕಿದ್ರೆ ತಕ್ಷಣ ಲೈಕ್ಸ್ ಬರಬೇಕು. ಕೆಲಸ ಶುರು ಮಾಡಿದ್ರೆ ಬೇಗ ಯಶಸ್ಸು ಸಿಗಬೇಕು. ಸಂಬಂಧದಲ್ಲಿ ಸಣ್ಣ ಸಮಸ್ಯೆ ಬಂದ್ರೂ ಮಾತಾಡಿ ಬಗೆಹರಿಸಿಕೊಳ್ಳೋದಕ್ಕಿಂತ ದೂರ ಆಗೋದು ಸುಲಭ ಅನ್ನಿಸಿಬಿಡುತ್ತೆ.

ನಮ್ಮ ಕಾಲದಲ್ಲಿ ಸಂಬಂಧ ಅಂದ್ರೆ ಜವಾಬ್ದಾರಿ ಇತ್ತು. ಈಗ ಸಂಬಂಧ ಅಂದ್ರೆ ಕೆಲವೊಮ್ಮೆ ಅನುಕೂಲ ಅನ್ನೋ ಮನಸ್ಥಿತಿ ಕಾಣಿಸುತ್ತೆ. ಇವತ್ತಿನ ಪೀಳಿಗೆಯ ದೊಡ್ಡ ಸಮಸ್ಯೆ ಏನಂದ್ರೆ ಹೋಲಿಕೆ. ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬರ ಜೀವನ ನೋಡ್ತಾ ತಮ್ಮ ಜೀವನವನ್ನೇ ಕಡಿಮೆ ಅಂತ ಭಾವಿಸಿಕೊಳ್ಳುತ್ತಾರೆ. ಅವನು ಕಾರು ತಗೊಂಡ, ಅವಳು ವಿದೇಶಕ್ಕೆ ಹೋದಳು, ಇವನು ದೊಡ್ಡ ಮನೆ ಕಟ್ಟಿದ, ಅವರು ಖುಷಿಯಾಗಿದ್ದಾರೆ ಅಂತ ನೋಡ್ತಾ ತಮ್ಮ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ತಾರೆ.

TOXIC| Honest Review By | Vijay Bharamasagara: ಕುಸಿದು ಬಿತ್ತಾ ನಿರೀಕ್ಷೆಗಳ ಬೆಟ್ಟ! ? |YASH |KVN|

ಆದ್ರೆ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಕಾಣೋದು ಜೀವನದ ಒಂದು ಭಾಗ ಮಾತ್ರ, ಇಡೀ ಜೀವನ ಅಲ್ಲ. ಇಂದಿನ ಪೀಳಿಗೆಗೆ ಹಣ ಬೇಕು, ಸ್ವಾತಂತ್ರ್ಯ ಬೇಕು, ಒಳ್ಳೆಯ ಜೀವನ ಬೇಕು. ಇದರಲ್ಲಿ ತಪ್ಪೇನಿಲ್ಲ. ಆದರೆ ಹಣದ ಹಿಂದೆ ಓಡುತ್ತಾ ನೆಮ್ಮದಿಯನ್ನು ಕಳೆದುಕೊಳ್ಳಬಾರದು. ಯಶಸ್ಸಿನ ಹಿಂದೆ ಓಡುತ್ತಾ ಸಂಬಂಧಗಳನ್ನ ಕಳೆದುಕೊಳ್ಳಬಾರದು. ಹಿರಿಯರಲ್ಲೂ ತಪ್ಪುಗಳಿವೆ, ಇಂದಿನ ಪೀಳಿಗೆಯಲ್ಲೂ ತಪ್ಪುಗಳಿವೆ. ಹಾಗಾಗಿ ಒಬ್ಬರನ್ನೊಬ್ಬರು ದೂಷಿಸುವುದಕ್ಕಿಂತ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದು ಮುಖ್ಯ.

Siddaramaiah on public : ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೆ ಬಿದ್ದು ಬಿದ್ದು ನಕ್ಕ ಜನ..! #internalreservation

ಹಿರಿಯರು ಹೊಸ ಪೀಳಿಗೆಯ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಹೊಸ ಪೀಳಿಗೆ ಹಿರಿಯರ ಅನುಭವವನ್ನ ಗೌರವಿಸಬೇಕು. ಆಗ ಮಾತ್ರ ಎರಡು ತಲೆಮಾರುಗಳ ನಡುವೆ ಇರುವ ಅಂತರ ಕಡಿಮೆಯಾಗುತ್ತೆ. ಕೊನೆಗೆ ಇಂದಿನ ಪೀಳಿಗೆ ಕೆಟ್ಟ ಪೀಳಿಗೆ ಅಲ್ಲ. ಅವರಿಗೆ ಮಾಹಿತಿ ಜಾಸ್ತಿ, ಆದರೆ ಕೆಲವೊಮ್ಮೆ ವಿವೇಕ ಕಡಿಮೆ. ಅವಕಾಶಗಳು ಜಾಸ್ತಿ, ಆದರೆ ಸಹನೆ ಕಡಿಮೆ. ಸಂಪರ್ಕ ಜಾಸ್ತಿ, ಆದರೆ ಆತ್ಮೀಯತೆ ಕೆಲವೊಮ್ಮೆ ಕಡಿಮೆ. ಅದಕ್ಕೆ ಇಂದಿನ ಪೀಳಿಗೆಗೆ ಬೇಕಾಗಿರೋದು ಮತ್ತಷ್ಟು ತಂತ್ರಜ್ಞಾನ ಅಲ್ಲ ಸ್ವಲ್ಪ ಮಾನವೀಯತೆ, ಸ್ವಲ್ಪ ಸಹನೆ, ಸ್ವಲ್ಪ ಸಂಬಂಧಗಳ ಬೆಲೆ ಅರಿವು. ಏಕೆಂದರೆ ಬದುಕು ಅಂದ್ರೆ ಕೇವಲ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳೋದು ಅಲ್ಲ..ನಮ್ಮನ್ನು ನಿಜವಾಗಿ ಪ್ರೀತಿಸುವವರ ಹೃದಯದಲ್ಲಿ ಜಾಗ ಮಾಡಿಕೊಳ್ಳೋದು.

ಬರಹ: ನವೀನ ಹೆಚ್.ಎ, ಹನುಮನಹಳ್ಳಿ

Siddaramaiah on high command : ಒಬ್ಬರನ್ನೇ dcm ಮಾಡಬೇಕು ಅಂತ ಮಾಡಿಸಿದ್ಯಾರು? #siddaramaiah #drgparameshwar
Previous Post

ಹೆಲ್ಮೆಟ್ ಇಲ್ಲದೇ ಬುಲೆಟ್ ಸವಾರಿ: ಕಾಂಗ್ರೆಸ್‌ ಶಾಸಕ ಪ್ರಕಾಶ್ ಕೋಳಿವಾಡಗೆ ದಂಡ..!

Next Post

ಆಗಸ್ಟ್ 28ರಂದು ಅಪರೂಪದ ಚಂದ್ರಗ್ರಹಣ: ಭಾರತದಲ್ಲಿ ಕಾಣಿಸಲಿದೆಯೇ? ಸಮಯ, ಸೂತಕ ಸೇರಿ ಸಂಪೂರ್ಣ ಮಾಹಿತಿ

Related Posts

ಯಶ್‌ ‘ಟಾಕ್ಸಿಕ್’ಗೆ ಉಪ್ಪಿ ಫಿದಾ; ಸಿನಿಮಾ ನೋಡಿ ಏನಂದ್ರು ಗೊತ್ತಾ?
Top Story

ಯಶ್‌ ‘ಟಾಕ್ಸಿಕ್’ಗೆ ಉಪ್ಪಿ ಫಿದಾ; ಸಿನಿಮಾ ನೋಡಿ ಏನಂದ್ರು ಗೊತ್ತಾ?

by ಪ್ರತಿಧ್ವನಿ
August 28, 2026
0

ರಿಯಲ್ ಸ್ಟಾರ್ ಉಪೇಂದ್ರ ಅವರು ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾವನ್ನು ವೀಕ್ಷಿಸಿದ್ದು, ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ...

Read moreDetails
‘ಕಾವೇರಿ’ಯಲ್ಲಿ ಬಿಜೆಪಿ ನಾಯಕರ ದಂಡು; ಸಿದ್ದರಾಮಯ್ಯ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವೇ?

‘ಕಾವೇರಿ’ಯಲ್ಲಿ ಬಿಜೆಪಿ ನಾಯಕರ ದಂಡು; ಸಿದ್ದರಾಮಯ್ಯ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವೇ?

August 28, 2026
‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

August 28, 2026
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
Next Post
ಆಗಸ್ಟ್ 28ರಂದು ಅಪರೂಪದ ಚಂದ್ರಗ್ರಹಣ: ಭಾರತದಲ್ಲಿ ಕಾಣಿಸಲಿದೆಯೇ? ಸಮಯ, ಸೂತಕ ಸೇರಿ ಸಂಪೂರ್ಣ ಮಾಹಿತಿ

ಆಗಸ್ಟ್ 28ರಂದು ಅಪರೂಪದ ಚಂದ್ರಗ್ರಹಣ: ಭಾರತದಲ್ಲಿ ಕಾಣಿಸಲಿದೆಯೇ? ಸಮಯ, ಸೂತಕ ಸೇರಿ ಸಂಪೂರ್ಣ ಮಾಹಿತಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada