• Home
  • About Us
  • ಕರ್ನಾಟಕ
Thursday, October 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ರಾಮ ಮಂದಿರ ಅಪೂರ್ಣ.. ದೇಶಕ್ಕೆ ಅಶುಭವೋ..? ಶುಭವೋ..?

Any Mind by Any Mind
January 18, 2024
in ಕರ್ನಾಟಕ, ದೇಶ
0
ರಾಮಮಂದಿರ ಉದ್ಘಾಟನೆ: ಜನವರಿ 22 ರಂದು ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ
Share on WhatsAppShare on FacebookShare on Telegram

ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ramamandira) ನಿರ್ಮಾಣದ ಕೆಲಸ ಅದ್ಧೂರಿಯಾಗಿ ನಡೀತಿದೆ.. ಜನವರಿ 22ಕ್ಕೆ ಉದ್ಘಾಟನೆಯೂ ಆಗ್ತಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯೂ ನಡೆಯಲಿದ್ದು, ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನಗಳು ಹೋಗಿದೆ.. ಆದ್ರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ನಾಲ್ಕು ಪ್ರಮುಖ ಶಕ್ತಿ ಪೀಠಗಳಾದ ಶಂಕರಾಚಾರ್ಯರ ಪೈಕಿ ಇಬ್ಬರು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.. ಒರಿಸ್ಸಾದ ಪುರಿಯಲ್ಲಿರುವ ಶ್ರೀ ಗೋವರ್ಧನ ಪೀಠ, ಹಾಗು ಪ್ರಧಾನಿ ನರೇಂದ್ರ ಮೋದಿ ಹುಟ್ಟೂರು ಗುಜರಾತ್​​ನ ದ್ವಾರಕದಲ್ಲಿರುವ ಶ್ರೀ ದ್ವಾರಕಾ ಪೀಠದ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.. ರಾಮಮಂದಿರ ಉದ್ಘಾಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಕಾಮಗಾರಿ ಪೂರ್ಣವಾಗದೆ ಉದ್ಘಾಟನೆ ಸರಿಯಲ್ಲ ಎಂದಿದ್ದಾರೆ.

ADVERTISEMENT

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ದೇಶದ ಎಲ್ಲರಿಗೂ ಸಂತಸದ ವಿಚಾರವೇ ಆಗಿದೆ. ಆದರೂ ಕಾಮಗಾರಿ ಪೂರ್ಣವಾಗದೆ ಉದ್ಘಾಟನೆ ಮಾಡುತ್ತಿರುವುದು ದೇಶಕ್ಕೆ ಸಂಕಷ್ಟ ತಂದೊಡ್ಡುವ ನಂಬಿಕೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿಯಿದ್ದರೂ ಯಾಕೆ ಆತುರದಿಂದ ಉದ್ಘಾಟನೆ ಮಾಡಲಾಗ್ತಿದೆ. ರಾಮಮಂದಿರ ಮೊದಲೇ ಇತ್ತು.. ಇದು ಜೀರ್ಣೋದ್ದಾರ ಅಷ್ಟೇ ಅಂದಿದ್ದಾರೆ ಸಂತರು. ಉತ್ತರಾಖಂಡ ಜ್ಯೋತಿರ್‌‌ಮಠ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮಾತನಾಡಿ, ರಾಮಮಂದಿರವನ್ನು ಈಗ ಕಟ್ಟಿಲ್ಲ. ಅದು ಜೀರ್ಣೋದ್ಧಾರ ಮಾಡಲಾಗ್ತಿದೆ ಅಷ್ಟೇ. ಮಂದಿರ ಪೂರ್ಣವಾದ ಮೇಲೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗ್ಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಮೊದಲಿಂದಲೂ ಶ್ರೀ ರಾಮನಿದ್ದಾನೆ. ಮಂದಿರ ಪೂರ್ಣವಾಗಿಲ್ಲ, ಮೊದಲಿಗೆ ಮಂದಿರ ಪೂರ್ಣವಾಗಲಿ. ಮಂದಿರ ಪೂರ್ಣ ಆದ್ಮೇಲೆ ಲೋಕಾರ್ಪಣೆ ಆಗ್ಬೇಕು. ವಿಧಿ-ವಿಧಾನಗಳಂತೆ ಮಂದಿರ ಕೆಲಸ ಪೂರ್ಣವಾಗಿಲ್ಲ. ರಾಜಕೀಯದವರಿಗೆ ಮಾತ್ರ ಉದ್ಘಾಟನೆ ಅವಶ್ಯಕತೆಯಿದೆ. ರಾಮ ಮಂದಿರದ ಹೆಸರಲ್ಲಿ ಲಾಭ ಪಡೆಯುತ್ತಿದ್ದಾರೆ. ಲಾಭ ಪಡೆಯುವುದಾದರೆ ಪಡೆದುಕೊಳ್ಳಲಿ, ಆದರೆ ಅಪೂರ್ಣವಾಗ ಮಂದಿರ ಉದ್ಘಾಟನೆ ದೇಶಕ್ಕೆ ಒಳಿತಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಶ್ರೀಗಳು. ಒಡಿಶಾದ ಪುರಿ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ.. ಶ್ರೀರಾಮ ಧರ್ಮಕ್ಕೆ ಸೀಮಿತ ಅಲ್ಲ. ಎಲ್ಲರ ಸ್ವತ್ತು.. ಆದ್ರೆ ನಾನು ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲ್ಲ.. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಿಂದೂಗಳ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ದ್ವಾರಕಾ ಪೀಠದ ಸದಾನಂದ ಸರಸ್ವತಿ ಸ್ವಾಮೀಜಿ, ಮಂದಿರ ಉದ್ಘಾಟನೆ ಸಂಭ್ರಮದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸನಾತನ ಧರ್ಮದ ನೀತಿ, ನಿಯಮಗಳು ಅನುಸಾರ ಮಂದಿರ ಉದ್ಘಾಟನೆ ಆಗ್ಬೇಕು. ದ್ವಾರಕಾದಲ್ಲಿ ಕೆಲ ಪೂರ್ವನಿಯೋಜಿತ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ನಾನು ಅಯೋಧ್ಯೆಗೆ ಹೋಗ್ತಿಲ್ಲ ಎಂದಿದ್ದಾರೆ. ಕರ್ನಾಟಕದ ಶೃಂಗೇರಿ ಪೀಠದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಪ್ರತಿಕ್ರಿಯಿಸಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಭಾಗವಹಿಸಿ ಎಲ್ಲರೂ ಕೃತಾರ್ಥರಾಗಿ ಎಂದಷ್ಟೇ ಹೇಳಿದ್ದಾರೆ. ಆದರೆ ಯಾರೊಬ್ಬರೂ ಅಪೂರ್ಣವಾದ ದೇವಸ್ಥಾನ ಉದ್ಘಾಟನೆ ಬಗ್ಗೆ ಚರ್ಚೆ ಆಗ್ತಿಲ್ಲ. ನಿಮ್ಮ ಮನೆಯನ್ನೇ ಅರ್ಧ ನಿರ್ಮಾಣ ಆದ ಕೂಡಲೇ ಗೃಹ ಪ್ರವೇಶ ಮಾಡುವಿರಾ..? ನೀವು ಹೌದು ಎಂದಾದರೆ ರಾಮ ಮಂದಿರ ಉದ್ಘಾಟನೆ ಸರಿಯಾಗಿದೆ ಎಂದುಕೊಳ್ಳಿ. ಅರ್ಧ ನಿರ್ಮಾಣವಾದ ಮನೆ ಉದ್ಘಾಟನೆ ಮಾಡಬಾರದು ಎನ್ನುವುದು ನಿಮ್ಮ ಉತ್ತರ ಆಗಿದ್ದರೆ, ರಾಮ ಮಂದಿರಕ್ಕೂ ಅದೇ ಅನ್ವಯ ಅಲ್ಲವೇ..?

Previous Post

ಆಯಾ ವರ್ಷದ ಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡುವಂತೆ ಸಚಿವ ಮಹದೇವಪ್ಪ ಅವರಿಂದ ಖಡಕ್ ಸೂಚನೆ

Next Post

ಬೆಂಗಳೂರು ಆಗುವ ಮೊದಲೇ ಶ್ರೀರಾಮನು ಬಂದಿದ್ದ ಕುರುಹು..!

Related Posts

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್
Top Story

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

by ಪ್ರತಿಧ್ವನಿ
October 30, 2025
0

* ವಿಮಾನದಲ್ಲಿನ ತುರ್ತು ನಿರ್ಗಮನ ದ್ವಾರ ಯಾವಾಗ ತೆರೆಯಬೇಕು ಎಂಬುದರ ಅರಿವಿಲ್ಲದ ಸಂಸದ ತೇಜಸ್ವಿ ಸೂರ್ಯ ಈಗ ‘ಬೆಂಗಳೂರು ಸಂಚಾರದಟ್ಟಣೆ ನಿವಾರಣೆ’ ಕುರಿತು ಉಪನ್ಯಾಸ ನೀಡುತ್ತಿದ್ದಾನೆ. ಎಂತಹ...

Read moreDetails

CM Siddaramaiah: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ..

October 29, 2025

Priyank Kharge: ಬೆಂಗಳೂರು ಟೆಕ್ ಶೃಂಗಸಭೆ 2025: ವಿಸಿಗಳೊಂದಿಗೆ ಸಚಿವ ಖರ್ಗೆ ಸಭೆ..!!

October 29, 2025

ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

October 29, 2025

ಡಾ. ಪುನೀತ್ ರಾಜಕುಮಾರ್ 4 ನೇ ಪುಣ್ಯತಿಥಿಯನ್ನು ಆಚರಿಸಿದ‌ ಚಿಕ್ಕೋಡಿ ಜನತೆ..

October 29, 2025
Next Post
ಬೆಂಗಳೂರು ಆಗುವ ಮೊದಲೇ ಶ್ರೀರಾಮನು ಬಂದಿದ್ದ ಕುರುಹು..!

ಬೆಂಗಳೂರು ಆಗುವ ಮೊದಲೇ ಶ್ರೀರಾಮನು ಬಂದಿದ್ದ ಕುರುಹು..!

Please login to join discussion

Recent News

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್
Top Story

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

by ಪ್ರತಿಧ್ವನಿ
October 30, 2025
Top Story

CM Siddaramaiah: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ..

by ಪ್ರತಿಧ್ವನಿ
October 29, 2025
Top Story

Priyank Kharge: ಬೆಂಗಳೂರು ಟೆಕ್ ಶೃಂಗಸಭೆ 2025: ವಿಸಿಗಳೊಂದಿಗೆ ಸಚಿವ ಖರ್ಗೆ ಸಭೆ..!!

by ಪ್ರತಿಧ್ವನಿ
October 29, 2025
Serial

ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

by ಪ್ರತಿಧ್ವನಿ
October 29, 2025
Top Story

ಡಾ. ಪುನೀತ್ ರಾಜಕುಮಾರ್ 4 ನೇ ಪುಣ್ಯತಿಥಿಯನ್ನು ಆಚರಿಸಿದ‌ ಚಿಕ್ಕೋಡಿ ಜನತೆ..

by ಪ್ರತಿಧ್ವನಿ
October 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

October 30, 2025
ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada