• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆಚರಣೆಗಳ ಸಾಂಸ್ಥೀಕರಣವೂ ಕೋಮು ಸಂಘರ್ಷದ  ನೆಲೆಗಳೂ

ನಾ ದಿವಾಕರ by ನಾ ದಿವಾಕರ
September 15, 2024
in ಕರ್ನಾಟಕ, ರಾಜಕೀಯ, ಶೋಧ
0
ಆಚರಣೆಗಳ ಸಾಂಸ್ಥೀಕರಣವೂ ಕೋಮು ಸಂಘರ್ಷದ  ನೆಲೆಗಳೂ
Share on WhatsAppShare on FacebookShare on Telegram

—-ನಾ ದಿವಾಕರ—-

ADVERTISEMENT

ಭಕ್ತಿಭಾವಗಳ ಆಂತರ್ಯದ ಕೂಗು ಪ್ರಚೋದಕ ವಸ್ತುವಾಗುವುದು ವರ್ತಮಾನದ ದುರಂತ

ಪ್ರಶಾಂತ ನೀರಿನ ಕೊಳದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಬೇಕೆಂದರೆ ಒಂದು ಕಲ್ಲೆಸೆದರೆ ಸಾಕು. ಆ ಎಸೆತದ ರಭಸಕ್ಕೆ ಅದರೊಳಗೇ ತಮ್ಮ ಜೀವನ ಸವೆಸುವ ಸಣ್ಣ ಮೀನುಗಳು ವಿಲವಿಲನೆ ಒದ್ದಾಡುತ್ತವೆ, ಜೀವ ಹಾನಿಯ ಭೀತಿಯಿಂದ ಅತ್ತಿಂದಿತ್ತ ಓಡಾಡುತ್ತವೆ. ಬಿದ್ದ ಕಲ್ಲುಗಳಿಂದ ಅವುಗಳಿಗೆ ಪೆಟ್ಟಾಗುವುದಿಲ್ಲ ಆದರೆ ಕದಡಿದ ನೀರು ಆ ಜೀವಗಳನ್ನು ತಲ್ಲಣಗೊಳಿಸುತ್ತದೆ ಕಲ್ಲೆಸೆದವರಿಗೆ ಈ ಮೀನುಗಳ ಚಿಂತೆ ಇರುವುದಿಲ್ಲ. ನೀರನ್ನು ಕದಡಲು ಬಯಸುವವರಿಗೆ ಆ ಕೊಳದ ಪ್ರಶಾಂತತೆಯ ಮೌಲ್ಯವೇ ತಿಳಿದಿರುವುದಿಲ್ಲ. ಏಕೆಂದರೆ ಯಾವುದೇ ಒಂದು ವಸ್ತುವನ್ನು ತನ್ನ ಮನಸ್ಸಿಗೆ ಬಂದಂತೆ ಬಳಸುವುದು, ಆಡಿಸುವುದು, ಪಲ್ಲಟಗೊಳಿಸುವುದು ಸಾಮಾನ್ಯ ಮನುಷ್ಯನನ್ನು ತೃಪ್ತಿಗೊಳಿಸುವ ಪ್ರಕ್ರಿಯೆ. ಕದಡಿದ ನೀರು ಮನುಷ್ಯನಲ್ಲಿ ಸಂಭ್ರಮದ ಭಾವ ಮೂಡಿಸುತ್ತದೆ. ಮಾನವೇತಿಹಾಸದಲ್ಲಿ ಸಾಮಾನ್ಯವಾಗಿ ಗುರುತಿಸಬಹುದಾದ ಲಕ್ಷಣ ಇದು.

ಸಂಬಂಧ ಭಂಜಕರ ಸಮಾಜದಲ್ಲಿ

ಇದೇ ಸನ್ನಿವೇಶವನ್ನು ನಾವು ಬದುಕುವ ಸಮಾಜಕ್ಕೆ ಅನ್ವಯಿಸಿ ನೋಡುವುದಾದರೆ, ಸಮಾಜದಲ್ಲಿ ನೆಲೆಸಿರುವ ಶಾಂತಿಯನ್ನು ಕದಡುವ ಮೂಲಕ, ಅಲ್ಲಿ ತಳವೂರಿರಬಹುದಾದ ಸೌಹಾರ್ದ, ಸಮನ್ವಯ ಮತ್ತು ಭ್ರಾತೃತ್ವದ ಸೇತುವೆಗಳನ್ನು ಭಂಜಿಸಿ ಸಂಭ್ರಮಿಸುವ ಒಂದು ವರ್ಗವನ್ನೂ ನಮ್ಮ ನಡುವೆಯೇ ಗುರುತಿಸಬಹುದು. ಮಾನವ ಸಂಬಂಧಗಳಿಗೆ ಯಾವುದೇ ಜಾತಿ ಅಥವಾ ಧರ್ಮದ ಅವಶ್ಯಕತೆ ಇರುವುದಿಲ್ಲ. ಆದರೆ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳನ್ನು ಭಗ್ನಗೊಳಿಸಲು ಈ ಎರಡೂ ಸಾಂಸ್ಥಿಕ ನೆಲೆಗಳು ಉಪಯೋಗಿಸಲ್ಪಡುತ್ತವೆ. ದಿನನಿತ್ಯ ಪರಸ್ಪರ ಮುಖಾಮುಖಿಯಾಗುತ್ತಾ ತಮ್ಮ ನಿತ್ಯ ಜೀವನದ ಜಟಿಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾ ಸಾಗುವ ತಳಸ್ತರದ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಈ ಸಾಂಸ್ಥಿಕ ನೆಲೆಗಳು ಪರಕೀಯವೇ ಆಗಿರುತ್ತದೆ.

ಆದರೆ ಈ ಸಾಮಾಜಿಕ ಸಮನ್ವಯವನ್ನು ಭಂಗಗೊಳಿಸುವುದರ ಮೂಲಕವೇ ತಮ್ಮ ರಾಜಕೀಯ ಅಧಿಕಾರ ವ್ಯಾಪ್ತಿಯನ್ನು, ಸಾಂಸ್ಕೃತಿಕ ಬಿಗಿಹಿಡಿತವನ್ನು, ಸಾಮುದಾಯಿಕ ಪಾರಮ್ಯವನ್ನು ಕಾಪಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಧಾರ್ಮಿಕ ಶಕ್ತಿಗಳು, ಸಮಾಜವೆಂಬ ತಿಳಿಗೊಳವನ್ನು ಕದಡುವ ಮೂಲಕವೇ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲು ಸದಾ ಉತ್ಸುಕವಾಗಿರುತ್ತವೆ. ಸಮಾಜವನ್ನು ಅಸ್ಮಿತೆಗಳ ಆಧಾರದಲ್ಲಿ ಅಡ್ಡಡ್ಡಲಾಗಿ ವಿಭಜಿಸಿ, ತಮ್ಮ ಅಧಿಕಾರ ವ್ಯಾಪ್ತಿಯನ್ನು ಹಾಗೂ ಸಾಂಸ್ಕೃತಿಕ ಆಧಿಪತ್ಯವನ್ನು ಗಟ್ಟಿಗೊಳಿಸಿಕೊಳ್ಳಲು ರಾಜಕೀಯ ಶಕ್ತಿಗಳು ಜಾತಿ ಮತ್ತು ಧರ್ಮ ಎರಡನ್ನೂ ಸಮಾನವಾಗಿ ಬಳಸಿಕೊಳ್ಳುತ್ತವೆ. ಒಡೆದು ಆಳುವ ನೀತಿಯ ಜನಕರನ್ನು ನಾವು ಬ್ರಿಟೀಷರಲ್ಲಿ ಕಾಣುವುದು ಸಹಜವಾದರೂ, ಇದು ಭಾರತದ ಶ್ರೇಣೀಕೃತ ಸಮಾಜದ ಅಂತರ್ಗತ ಲಕ್ಷಣ ಎನ್ನುವುದನ್ನೂ ಒಪ್ಪಲೇಬೇಕಿದೆ.

ಭಾರತದಲ್ಲಿ ನಡೆದಿರುವ, ನಡೆಯುತ್ತಿರುವ ಯಾವುದೇ ಕೋಮು ಸಂಘರ್ಷದಲ್ಲೂ ನಾವು ಕಾಣಬೇಕಾಗಿರುವುದು ಈ ವಿದ್ಯಮಾನವನ್ನೇ. ಹಿಂದೂಗಳ ಅಥವಾ ಮುಸ್ಲಿಮರ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲೇ ಎರಡೂ ಪಂಗಡಗಳ ನಡುವೆ ಕೋಮು ಸಂಘರ್ಷ ಏರ್ಪಡುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಆಚರಣೆಗಳು ಸಾಂಸ್ಥೀಕರಣಗೊಂಡಷ್ಟೂ ವಿಭಜನೆಯ ಅಸ್ತ್ರಗಳು ಮೊನಚಾಗುವುದನ್ನೂ ಗುರುತಿಸಬಹುದು. ಹಿಂದೂಗಳು ಆಚರಿಸುವ ಸಾರ್ವಜನಿಕ ಗಣೇಶೋತ್ಸವ ಅಥವಾ ಮುಸ್ಲಿಮರು ಆಚರಿಸುವ ಮೊಹರಂ ಇತ್ಯಾದಿ ಆಚರಣೆಗಳು ಸಾಮುದಾಯಿಕ ಗೋಡೆಗಳನ್ನು ದಾಟಿ ಸಾರ್ವತ್ರೀಕರಣಗೊಂಡಂತೆಲ್ಲಾ, ಈ ಆಚರಣೆಗಳ ಹಿಂದಿನ ಶ್ರದ್ಧಾಭಕ್ತಿಗಳು ಹಿಂದಕ್ಕೆ ಸರಿದು ಭಾವಾವೇಶದ ವಾತಾವರಣ ಸೃಷ್ಟಿಯಾಗುತ್ತದೆ.

ಸಮನ್ವಯ ಸಮಾಜದ ಔದಾತ್ಯ

ಕೌಟುಂಬಿಕ ನೆಲೆಗಳಲ್ಲಿ, ನಾಲ್ಕು ಗೋಡೆಗಳ ನಡುವೆ, ಸಾವಿರಾರು ಮನೆಗಳಲ್ಲಿ ಪೂಜಿಸಲ್ಪಡುವ ಗಣೇಶ ಹೊರ ಸಮಾಜಕ್ಕೆ ಯಾವುದೇ ರೀತಿಯ ಬಾಧೆ ಉಂಟುಮಾಡುವುದಿಲ್ಲ. ನೆರೆಹೊರೆಯ ಅನ್ಯಧರ್ಮೀಯರ ನಡುವೆಯೇ ಈ ಹಬ್ಬಗಳು ಮನೆಗಳಲ್ಲಿ, ಮಾರುಕಟ್ಟೆಯಲ್ಲಿ, ಬಡಾವಣೆಗಳಲ್ಲಿ ಒಂದು ಪ್ರಶಾಂತ ತಿಳಿಗೊಳದಂತೆ ಸಂಭ್ರಮಿಸಲ್ಪಡುತ್ತವೆ. ಮೂಲತಃ ಹಬ್ಬ ಎನ್ನುವ ಕಲ್ಪನೆಯೇ ಮಾನವ ಸಂಬಂಧಗಳನ್ನು ಗಡಿಗಳಿಂದಾಚೆಗೆ ಜೋಡಿಸುವ ಒಂದು ಸಾಧನವಾಗಿರುವುದನ್ನು ನಮ್ಮ ಬಹುತ್ವ ಸಂಸ್ಕೃತಿ ಮತ್ತು ಸಮಾಜವೇ ಗುರುತಿಸಿದೆ. ಈ ಆಚರಣೆಗಳ ಸಾಂಸ್ಥೀಕರಣ ಪ್ರಕ್ರಿಯೆಯಲ್ಲಿ ಕೌಟುಂಬಿಕ ನೆಲೆಯ ಸಮನ್ವಯವನ್ನೇ ಕಾಪಾಡಿಕೊಳ್ಳುವುದೇ ಆದರೆ ಸಾರ್ವಜನಿಕ ಉತ್ಸವ ಮೆರವಣಿಗೆಗಳೂ ಸಹ ಪ್ರಶಾಂತ ನೀರಿನ ಕೊಳದಂತೆ ನಿರ್ಮಲವಾಗಿರುತ್ತವೆ.

ಇದಕ್ಕೆ ಅತ್ಯುತ್ತಮ ನಿದರ್ಶನಗಳನ್ನು ವರ್ತಮಾನದ ಸಮಾಜದಲ್ಲೂ ಹೇರಳವಾಗಿ ಕಾಣಬಹುದು. ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಆಚರಿಸಲಾಗುವ ಜಾತ್ರೆಗಳು, ಉರುಸ್‌ಗಳನ್ನು ಗಮನಿಸಿದರೆ ಈ ವಾಸ್ತವವೂ ಅರಿವಾಗುತ್ತದೆ. ಕಳೆದ ಮೂರುನಾಲ್ಕು ದಶಕಗಳಲ್ಲಿ ಕೋಮುದ್ವೇಷ, ಮತದ್ವೇಷಗಳು ಸಾಂಸ್ಥಿಕ ಸ್ವರೂಪ ಪಡೆದುಕೊಂಡಿದ್ದರೂ ಸಹ, ಇಂದಿಗೂ ಈ ಜಾತ್ರೆಗಳಲ್ಲಿ ಬೇರೆಲ್ಲೂ ಕಾಣದ ಸೌಹಾರ್ದತೆಯನ್ನು ಕಾಣಬಹುದಲ್ಲವೇ ? ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರು, ಚಿತ್ರದುರ್ಗದ ನಾಯಕನಟ್ಟಿ, ಕೋಲಾರದ ಆವಣಿ, 600 ವರ್ಷಗಳ ಇತಿಹಾಸ ಇರುವ ಕಲಬುರ್ಗಿಯ ಹಜರತ್‌ ಖಾಜಾ ಬಂದಾ ನವಾಜ್‌ ಉರುಸ್‌ ಇಂತಹ ಹಲವಾರು ಸಾಂಸ್ಕೃತಿಕ ಉತ್ಸವಗಳು ಧಾರ್ಮಿಕ ಆಚರಣೆಗಳ ಚೌಕಟ್ಟಿನೊಳಗೇ ನಡೆಯುತ್ತವೆ. ಈ ಜಾತ್ರೆಗಳಲ್ಲಿ ಎಲ್ಲ ಜಾತಿ, ಧರ್ಮಗಳ ಜನರು ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಾರೆ. ಸಮನ್ವಯ ಸಂಸ್ಕೃತಿಯ ಪ್ರತೀಕವಾದ ಈ ಉತ್ಸವಗಳು ಎಂದೂ ಸಹ ಕೋಮುಭಾವನೆಗಳಿಂದ ಕಲುಷಿತವಾಗಿಲ್ಲ.

ಇದಕ್ಕೆ ಕಾರಣ ಇಲ್ಲಿ ಜನಸಾಮಾನ್ಯರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣಾತ್ಮಕ ಚಟುವಟಿಕೆಗಳು ಸಾಂಸ್ಥಿಕ ಮತಾಚರಣೆಯನ್ನು ಬದಿಗಿಟ್ಟು ಸಾಗಿರುತ್ತವೆ. ಈ ಉತ್ಸವಗಳಲ್ಲೂ ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯಗಳಿರುತ್ತವೆ. ತಮ್ಮದೇ ಆದ ಶ್ರದ್ಧಾನಂಬಿಕೆಗಳೊಂದಿಗೆ ಸಕ್ರಿಯವಾಗಿರುತ್ತವೆ. ಆದರೆ ಈ ನಂಬಿಕೆಗಳ ನಡುವೆ ಗೋಡೆಗಳಿರುವುದಿಲ್ಲ ಅಥವಾ ದಾಟಬಾರದ ಬೇಲಿಗಳನ್ನು ಕಟ್ಟಲಾಗಿರುವುದಿಲ್ಲ. ಸಂಸ್ಕೃತಿ ಎನ್ನುವುದನ್ನು ಸಂಕುಚಿತ ಕೋಶದೊಳಗೆ ಹುದುಗಿಸದೆ ವಿಶಾಲಾರ್ಥದಲ್ಲಿ ನೋಡಿದಾಗ, ಭಾರತದ ಬಹುತ್ವ ಸಂಸ್ಕೃತಿ ಇಂತಹ ಅಚರಣೆಗಳಲ್ಲಿ ಕಾಣುತ್ತದೆ. ಮತಾಚರಣೆಯ ನೆಪದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ತಮ್ಮದೇ ಆದ ಸಾಂಸ್ಥಿಕ ಚೌಕಟ್ಟುಗಳಲ್ಲಿ ಸಿಲುಕಿಸಿ, ಜನಸಾಮಾನ್ಯರ ಶ್ರದ್ಧಾಭಕ್ತಿಗಳನ್ನು ಮತಕೇಂದ್ರಗಳ ಬಂಧಿಯನ್ನಾಗಿ ಮಾಡುವ ವೈದಿಕಶಾಹಿಯ ಅಥವಾ ಪುರೋಹಿತಶಾಹಿಯ ಪಾರಮ್ಯ ಈ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾಣುವುದಿಲ್ಲ. ಸಾಮಾನ್ಯ ಜನರಲ್ಲಿ ಯಾವುದೇ ಕಾರಣಕ್ಕಾದರೂ ಇರಬಹುದಾದ ಶ್ರದ್ಧಾ ಭಕ್ತಿಗಳಿಗೆ ಅಥವಾ ಅತೀತತೆಯಲ್ಲಿನ ನಂಬಿಕೆಗಳಿಗೆ ಸಾಂಸ್ಥಿಕ ಸ್ವರೂಪವನ್ನು ನೀಡದೆ ಇರುವುದರಿಂದಲೇ ಇಂತಹ ಬಹುಸಾಂಸ್ಕೃತಿಕ ಆಚರಣೆಗಳು ಇನ್ನೂ ಜೀವಂತವಾಗಿವೆ.

ಸಾಂಸ್ಥೀಕರಣದ ಚೌಕಟ್ಟುಗಳಲ್ಲಿ

ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಯನ್ನು ನಾವು ಕಲಿತ ಸಮಾಜದ ನಡುವೆ ಸೃಷ್ಟಿಯಾಗಿರುವ ಆಚರಣೆಗಳಲ್ಲಿ ಕಾಣುತ್ತಿದ್ದೇವೆ. ಹಿಂದುತ್ವ ಸಂಘಟನೆಗಳಿಗೆ ಗಣಪತಿ ಉತ್ಸವ ಇಂತಹ ಒಂದು ಸಾಧನವಾಗಿ ಶತಮಾನದ ಇತಿಹಾಸವನ್ನೂ ಹೊಂದಿದೆ. ಬ್ರಿಟೀಷರ ವಿರುದ್ಧ ಹೋರಾಡಲು ಬಾಲಗಂಗಾಧರ ತಿಲಕ್‌ ರೂಪಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ತನ್ನ ಧಾರ್ಮಿಕ ಗಡಿಗಳನ್ನು ಮೀರಿ ಸಾಂಸ್ಕೃತಿಕ ರಾಜಕಾರಣದ ಸ್ವರೂಪ ಪಡೆದುಕೊಂಡಿರುವುದು ವಾಸ್ತವ. ಜನಸಾಮಾನ್ಯರ ದೈವಶ್ರದ್ಧೆ ಕೌಟುಂಬಿಕ ನೆಲೆಯಲ್ಲಿರುವಷ್ಟು ಹೊತ್ತೂ ಅದು ವ್ಯಕ್ತಿ ಬದುಕಿನ ಒಂದು ಭಾಗವಾಗಿರುತ್ತದೆ. ಅಲ್ಲಿ ಸಂಯಮ ಮತ್ತು ಶ್ರದ್ಧೆ ಸಮ್ಮಿಳಿತಗೊಂಡು ಸಹಬಾಳ್ವೆಯನ್ನು ರೂಢಿಸಿಕೊಳ್ಳಲು ನೆರವಾಗುತ್ತಿರುತ್ತದೆ. ನೆರೆಹೊರೆಯ ಜನರು ʼ ಅನ್ಯ ʼರೇ ಆಗಿದ್ದರೂ ಸಹ ಅವರೊಡನೆ ಕೂಡಿಬಾಳುವ ಮನಸ್ಥಿತಿ ಇರುತ್ತದೆ.

ಒಮ್ಮೆ ಈ ಮತಶ್ರದ್ಧೆ ಸಾಂಸ್ಥೀಕರಣಕ್ಕೊಳಗಾಗಿ, ಧಾರ್ಮಿಕ ಆಚರಣೆಗಳಿಗೆ ಸಾರ್ವಜನಿಕ ಸ್ವರೂಪ ನೀಡಿದ ಕೂಡಲೇ, ಅದೇ ಮನೆಯೊಳಗಿನ ಯುವ ಸಮೂಹದ ನಡುವೆ ಧಾರ್ಮಿಕತೆ ಮರೆಯಾಗಿ, ಭಾವೋನ್ಮಾದ, ಭಾವಾವೇಷಗಳು ಪ್ರವೇಶಿಸುತ್ತವೆ. ನಾಲ್ಕು ಗೋಡೆಗಳ ನಡುವೆ ಕಾಣಬಹುದಾದ ಸಂಯಮ, ಸಭ್ಯತೆ ಮತ್ತು ಸಹಿಷ್ಣುತೆಗಳನ್ನು ವ್ಯಕ್ತಿಗತ ನೆಲೆಯಲ್ಲಿ ಕಳೆದುಕೊಳ್ಳುವ ಯುವ ಸಮೂಹ ನೆರೆಮನೆಯ ʼ ಅನ್ಯ ʼರನ್ನೂ ಸಹ ವಕ್ರದೃಷ್ಟಿಯಿಂದ ನೋಡಲಾರಂಭಿಸುತ್ತದೆ. ಮತೀಯವಾದಿಗಳಿಗೆ, ಕೋಮುವಾದಿ ಶಕ್ತಿಗಳಿಗೆ, ಮತಾಂಧ ಸಂಘಟನೆಗಳಿಗೆ ಹಾಗೂ ಮೂಲಭೂತವಾದಿಗಳಿಗೆ ಯುವ ಸಮೂಹದ ಈ ವಕ್ರದೃಷ್ಟಿಯೇ ಬಂಡವಾಳವಾಗಿ ಪರಿಣಮಿಸುತ್ತದೆ. ತಮ್ಮ ಸಾಂಸ್ಕೃತಿಕ ಪಾರಮ್ಯ ಮತ್ತು ಮತೀಯ ಆಳ್ವಿಕೆಯನ್ನು ಬಲಪಡಿಸಿಕೊಳ್ಳಲು ಈ ಯುವಪಡೆಗಳನ್ನು ಸಶಸ್ತ್ರ ಕಾವಲುಪಡೆಗಳಾನ್ನಾಗಿ ಮಾಡಲಾಗುತ್ತದೆ. ಅಯೋಧ್ಯಾ ನಂತರದ ಭಾರತ ಇಂತಹ ಪಡೆಗಳನ್ನು ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳಲ್ಲಿ ಸೃಷ್ಟಿಸಿರುವುದು ವರ್ತಮಾನದ ಆತಂಕಗಳಿಗೆ ಕಾರಣವಾಗಿದೆ.

ಸಾಂಸ್ಥೀಕರಣಗೊಂಡ ಮತಾಚರಣೆಯು ಸಹಜವಾಗಿಯೇ ತನ್ನ ಮೂಲ ಆವಾಸ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧಾನಂಬಿಕೆಗಳನ್ನು, ಆಚರಣೆಗಳನ್ನು ಹಾಗೂ ಆರಾಧನೆಯ ಪ್ರಕಾರಗಳನ್ನು ಸಾರ್ವತ್ರೀಕರಿಸುವ ವೇದಿಕೆಯಾಗಿ ಪರಿಣಮಿಸುತ್ತದೆ. ನಾಗಮಂಗಲದಲ್ಲಿ ಇತ್ತೀಚೆಗೆ ನಡೆದ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮನೆಯಲ್ಲಿ ಭಕ್ತಿಯಿಂದ  ಮೌನವಾಗಿ ಗಣೇಶ ಹಬ್ಬ ಆಚರಿಸುವ ಯುವ ಸಮೂಹವೇ ರಸ್ತೆಯಲ್ಲಿಡುವ ಗಣಪತಿಯಲ್ಲಿ ಒಂದು ಹೊಸ ಅಸ್ಮಿತೆಯನ್ನು ಕಾಣುತ್ತದೆ. ನಾಲ್ಕು ಗೋಡೆಗಳ ನಡುವೆ ಇದ್ದ ಭಕ್ತಿಭಾವ ಈ ಗಣಪತಿ ಪೆಂಡಾಲ್‌ಗಳ ಅಡಿ ಉನ್ಮಾದವನ್ನು ಪಡೆಯುತ್ತವೆ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಈ ಉನ್ಮಾದವನ್ನು ಉದ್ಧೀಪನಗೊಳಿಸುವ ಶಕ್ತಿಗಳು ಒಂದೆಡೆಯಾದರೆ, ಉನ್ಮಾದಕರ ಘೋಷಣೆಗಳಿಂದ ಪ್ರಚೋದನೆಗೊಳಗಾಗುವ ಶಕ್ತಿಗಳು ಮತ್ತೊಂದೆಡೆ ಧಿಗ್ಗನೆ ಎದ್ದುಕುಳಿತುಕೊಳ್ಳುತ್ತವೆ. ಮಂದಿರ-ಮಸೀದಿಗಳು ಈ ಭಾವೋನ್ಮಾದಗಳಿಗೆ ಮತ್ತಷ್ಟು ಇಂಬು ನೀಡುವುದರಿಂದ, ಗಣಪತಿ ಉತ್ಸವದಲ್ಲೂ ʼಜೈ ಶ್ರಿರಾಮ್ʼ ಘೋಷಣೆಗಳು, ಇದಕ್ಕೆ ಪ್ರತಿಯಾಗಿ ʼಅಲ್ಲಾಹು ಅಕ್ಬರ್‌ ʼಘೋಷಣೆಗಳು ಮೊಳಗುತ್ತವೆ. ‌

ಮತೀಯ ರಾಜಕಾರಣದ ನೆರಳಲ್ಲಿ

ವ್ಯಕ್ತಿಗತ ನೆಲೆಯಲ್ಲಿ ಶ್ರದ್ಧಾಭಕ್ತಿಯಿಂದ ನುಡಿಯಬೇಕಾದ ಈ ನುಡಿಗಟ್ಟುಗಳನ್ನು ಸಾರ್ವತ್ರೀಕರಿಸುವುದು ಮತೀಯ ರಾಜಕಾರಣದ ಒಂದು ಉದ್ದೇಶವಾದರೆ, ಇದನ್ನು ಸಾಂಸ್ಥೀಕರಣಕ್ಕೊಳಪಟ್ಟ ಧಾರ್ಮಿಕ ಆಚರಣೆಗಳ ಘೋಷವಾಕ್ಯಗಳನ್ನಾಗಿ ಮಾಡುವುದು ಸಾಂಸ್ಕೃತಿಕ ರಾಜಕಾರಣದ ಉದ್ದೇಶವಾಗಿರುತ್ತದೆ. ಹಾಗಾಗಿಯೇ ವರ್ಷವಿಡೀ ಸಹನೀಯವಾಗಿ ಕಾಣುವ ಜೈ ಶ್ರೀರಾಮ್‌ ಎಂಬ ಘೋಷಣೆ ಒಂದು ಉತ್ಸವದ ಸಂದರ್ಭದಲ್ಲಿ ಮತ್ತೊಂದು ಕೋಮಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ತೋರುತ್ತದೆ. ಈ ಅಸಹನೆಯ ಮೂಲ ಇರುವುದು ಜನಸಾಮಾನ್ಯರ ಬದುಕಿನಲ್ಲಿ ಅಲ್ಲ, ಅವರು ನಿತ್ಯ ಬದುಕಿನಲ್ಲಿ ಪರಸ್ಪರ ಕೈಹಿಡಿದೇ ಸಾಗುತ್ತಿರುತ್ತಾರೆ. ಬದಲಾಗಿ ಈ ಚೌಕಟ್ಟಿನಿಂದಾಚೆಗೆ ಕಾಲಿಡುವ ಯುವ ಸಮೂಹವನ್ನು ನಿರ್ದೇಶಿಸುವ ಸಾಂಸ್ಥಿಕ ಮತಗಳಲ್ಲಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಈ ಅಸಹನೆಯನ್ನು ಉತ್ಪಾದಿಸಲಾಗುತ್ತದೆ.

ಮತೀಯವಾದ, ಮತೀಯ ರಾಜಕಾರಣ ಮತ್ತು ಮತಾಂಧತೆಯ ಮೂಲ ಇರುವುದು ಇಲ್ಲಿಯೇ. ನಾಗಮಂಗಲದ ಗಲಭೆಗಳಿಗೆ ರಾಜಕೀಯ ಪಕ್ಷಗಳ ನಾಯಕರು ಸ್ಪಂದಿಸಿರುವ ರೀತಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಎರಡೂ ಕೋಮುಗಳಲ್ಲಿ ಇಂತಹ ಘಟನೆಗಳಿಗೆ ಬಳಸಲ್ಪಡುವ ಯುವ ಸಮೂಹದ ಒಂದು ಭಾಗ ಕಾನೂನು-ಪೊಲೀಸರ ಆತಿಥ್ಯಕ್ಕೆ ಒಳಪಟ್ಟರೆ, ಈ ಸಾಂಸ್ಥೀಕರಣಕ್ಕೆ ಕಾರಣವಾದ ರಾಜಕೀಯ ಶಕ್ತಿಗಳು ತಮ್ಮ ಆಧಿಪತ್ಯವನ್ನು ಮತ್ತಷ್ಟು ಬಿಗಿಗೊಳಿಸಲು ಶಾಂತಿ-ಸೌಹಾರ್ದತೆಯ ಮಾತುಕತೆಗಳಲ್ಲಿ ತೊಡಗುತ್ತವೆ. ಹಿಂದೂಗಳೂ ತಲ್ವಾರ್‌ ಹಿಡಿಯಬೇಕಾಗುತ್ತದೆ ಎನ್ನುವ ಮಾಜಿ ಸಂಸದ, ಯೋಗಿ ಮಾದರಿಯ ಬುಲ್ಡೋಜರ್‌ ನೀತಿಯನ್ನು ಬಯಸುವ ವಿರೋಧ ಪಕ್ಷದ, ನಾಗಮಂಗಲದಂತಹ ಸಮನ್ವಯದ ನೆಲದಲ್ಲಿ ಪಾಕಿಸ್ತಾನವನ್ನು ಶೋಧಿಸುವ ಮತ್ತೊಬ್ಬ ನಾಯಕ ಇವರೆಲ್ಲರೂ ಸಹ ಗಂಭೀರವಾಗಿ ಯೋಚಿಸಬೇಕಿರುವುದು ಈ ಅಂಶಗಳನ್ನು.

ದಿಕ್ಕು ತಪ್ಪುವ ಯುವಸಂಕುಲ

ಕಲ್ಲೆಸೆಯುವ, ಬೆಂಕಿ ಹಚ್ಚುವ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವ, ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಮಾಡುವ  ಯುವ ಕಾಲಾಳುಗಳು ಶೂನ್ಯದಲ್ಲಿ ಅಥವಾ ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ. ಸಹಬಾಳ್ವೆಯ ಬಯಲಿನಿಂದಲೇ ಇವರನ್ನು ಹೆಕ್ಕಿ ತೆಗೆಯಲಾಗುತ್ತದೆ. ನಿನ್ನೆ ಇದ್ದ ಸ್ನೇಹ ಇಂದು ದ್ವೇಷವಾಗಿ ಮಾರ್ಪಡುತ್ತದೆ. ನಿನ್ನೆ ಸೋದರರಂತಿದ್ದವರು ಇಂದು ಶತ್ರುಗಳಾಗಿ ಕಾಣುತ್ತಾರೆ. ನಿನ್ನೆಯ ಅಜಾನ್‌ ಇಂದು ಕರ್ಕಶವಾಗಿ ಕೇಳಿಸುತ್ತದೆ. ನಿನ್ನೆಯ ಉತ್ಸವ-ಮೆರವಣಿಗೆ ಇಂದು ಅಸಹನೀಯವಾಗುತ್ತದೆ. ಆದರೆ ಈ ಭಾವನೆಗಳೆಲ್ಲವೂ ಉತ್ಪಾದಿತ ಭಾವನೆಗಳಾಗುತ್ತವೆ. ಈ ಭಾವನೆಗಳ ಸರಕುಗಳನ್ನು ಹೆಗಲ ಮೇಲೆ ಹೊತ್ತು, ಗಲಭೆಯಲ್ಲಿ ಭಾಗಿಗಳಾಗಿ, ತಮ್ಮ ಬದುಕನ್ನು ಕಳೆದುಕೊಳ್ಳುವವರು ಸಾಮಾನ್ಯವಾಗಿ ವಂಚಿತ ತಳಸಮುದಾಯಗಳಿಂದ ಬಂದವರೇ ಆಗಿರುತ್ತಾರೆ. ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳ ಮೇಲ್ಪದರದ-ಮೇಲ್ವರ್ಗದ-ಮೇಲ್ಜಾತಿಯ ನೆರಳೂ ಸಹ ಇಲ್ಲಿ ನುಸುಳುವುದಿಲ್ಲ. ಇದು ಭಾರತದ ಕೋಮುವಾದಿ ಇತಿಹಾಸ ಕಂಡಿರುವ ನಗ್ನ ಸತ್ಯ.

ತಮ್ಮ ನಿತ್ಯ ಬದುಕಿನ ಸೌಂದರ್ಯವನ್ನು ಕಳೆದುಕೊಂಡು, ಕರಾಳ ಭವಿಷ್ಯದತ್ತ ಸಾಗುವ ಯುವ ಸಮೂಹ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಈ ಯುವ ಸಂಕುಲವನ್ನು ಅಧಿಕಾರ ರಾಜಕಾರಣದ ಸರಕುಗಳನ್ನಾಗಲು ಅವಕಾಶವೀಯದೆ, ಮತದ್ವೇಷ, ಕೋಮು ಹಿಂಸೆ ಮತ್ತು ಉತ್ಪಾದಿತ ಅಸ್ಮಿತೆಗಳ ಚೌಕಟ್ಟುಗಳಿಂದ ಹೊರತಂದು, ಸಾಮಾಜಿಕ ಸ್ವಾಸ್ಥ್ಯದ ಕಾಲಾಳುಗಳನ್ನಾಗಿ ಮಾಡಬೇಕಾದ ತುರ್ತು ಎದುರಾಗಿದೆ. ಈ ಜವಾಬ್ದಾರಿಯನ್ನು ಪ್ರಗತಿಪರ ಎನಿಸಿಕೊಂಡ ಸಮಾಜಮುಖಿ ಸಂಘಟನೆಗಳೇ ವಹಿಸಿಕೊಳ್ಳಬೇಕಿದೆ. ಸರ್ವ ಜನಾಂಗದ ಶಾಂತಿಯ ತೋಟ ಸಾಕಾರಗೊಳ್ಳುವುದೇ ಆದರೆ ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಿದೆ. ನಾಗಮಂಗಲ ನಾಳೆ ಶಾಂತವಾಗುತ್ತದೆ. ಜನಜೀವನ ಸಹಜವಾಗುತ್ತದೆ. ಇಂದಿನ ರಾಜಕೀಯ ಶತ್ರುಗಳು ನಾಳೆ ಮಿತ್ರರಾಗುತ್ತಾರೆ. ಇಫ್ತಾರ್‌ಗಳಲ್ಲಿ ಸೌಹಾರ್ದತೆ ಮೆರೆಯುತ್ತಾರೆ. ಆದರೆ ವೈಷಮ್ಯದ ಒಳಗುದಿ, ದ್ವೇಷಾಸೂಯೆಗಳ ಬೇಗುದಿ ಗುಪ್ತವಾಹಿನಿಯಂತೆ ಪ್ರವಹಿಸುತ್ತಲೇ ಇರುತ್ತದೆ. ಈ ಅಂತರ್‌ ಪ್ರವಾಹ ಸಮಾಜವನ್ನು ಅವನತಿಯತ್ತ ಕೊಂಡೊಯ್ಯುತ್ತದೆ. ಈ ಪಾತಾಳಕುಸಿತವನ್ನು ತಪ್ಪಿಸುವ  ಜವಾಬ್ದಾರಿ ಸಮಾಜದ ಮೇಲಿದೆ. ನಾಗರಿಕರ ಮೇಲಿದೆ.

-೦-೦-೦-೦-

Tags: BJPCongress Partydifference between hindu and muslim cultureHinduhindu cultureHindu Muslimhindu muslim conflict in indiahindu muslim cultural harmonyhindu muslim culturehindu muslim fighthindu muslim historyhindu muslim lovehindu muslim weddinghindu v muslimhindu vs muslimhindu vs muslim makeuphindus vs muslimsindian cultureindonesia with hindu culturemuslimmuslim hindumuslim to hinduಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ.. ಕರ್ನಾಟಕದ ಬಗ್ಗೆ ಅಬ್ಬರ..

Next Post

ನಕಲಿ ಟಿಕೆಟ್‌ ಪರೀಕ್ಷಿಸಲು ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ದಿಪಡಿಸಿದ ರೈಲ್ವೇ ಇಲಾಖೆ

Related Posts

Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
0

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ರುವ ನಾಡಪ್ರಭು ಕೆಂಪೇಗೌಡ...

Read moreDetails
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025
Next Post
ನಕಲಿ ಟಿಕೆಟ್‌ ಪರೀಕ್ಷಿಸಲು ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ದಿಪಡಿಸಿದ  ರೈಲ್ವೇ ಇಲಾಖೆ

ನಕಲಿ ಟಿಕೆಟ್‌ ಪರೀಕ್ಷಿಸಲು ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ದಿಪಡಿಸಿದ ರೈಲ್ವೇ ಇಲಾಖೆ

Recent News

Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ
Top Story

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada