ಮೈಸೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಶತಾಯುಷಿಗಳೊಂದಿಗೆ ಮತದಾನ ಸಂಬಂಧ ಸಂವಾದ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ವರ್ಚುವಲ್ ಮುಖಾಂತರ ಶತಾಯುಷಿ ಮತದಾರರೊಂದಿಗೆ ಹಾಗೂ ಹಿರಿಯ ನಾಗರಿಕ ಮತದಾರರೊಂದಿಗೆ ಮಾತನಾಡಿ ಅವರುಗಳ ಆರೋಗ್ಯ ವಿಚಾರಿಸುವುದರೊಂದಿಗೆ ಮತದಾನ ಮಾಡಲು ಯಾರ ಸಹಾಯವನ್ನಾದರೂ ಪಡೆದುಕೂಳ್ಳುತ್ತೀರಾ? ಅಥವಾ ತಾವೇ ಮತದಾನ ಕೇಂದ್ರಕ್ಕೆ ತೆರಳುತ್ತೀರ, ಮತಗಟ್ಟೆ ಅಧಿಕಾರಿಗಳು ತಮ್ಮ ಮನೆಗಳಿಗೆ ಬರುತ್ತಾರಾ,ಮತದಾರರ ಚೀಟಿ ಇದ್ಯಾ, ಮತಗಟ್ಟೆ ನಿಮ್ಮ ಮನೆಯಿಂದ ಎಷ್ಟು ದೂರ ಇದೆ,ನಿಮ್ಮ ಮನೆಯಲ್ಲಿ ಎಷ್ಟು ಜನ ಮತದಾರರಿದ್ದೀರ ಇತ್ಯಾದಿ ವಿಚಾರಿಸಿದರು.
ಶತಾಯುಷಿ ಮತದಾರರು ಹಾಗೂ ಅವರ ಕುಟುಂಬ ವರ್ಗದವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು
![](https://pratidhvani.com/wp-content/uploads/2023/03/WhatsApp-Image-2023-03-08-at-6.06.29-PM-1024x768.jpeg)
ನಂತರ ವಿವರ ನೀಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ 80 ವರ್ಷ ದಾಟಿರುವ 84992 ಮತದಾರರಿದ್ದು,ನೂರು ವರ್ಷ ಪೂರೈಸಿರುವ 1057 ಮತದಾರರಿದ್ದಾರೆ ಹಾಗೂ 90ವರ್ಷ ಪೂರೈಸಿರುವ 16900 ಮತದಾರರಿದ್ದಾರೆ ಎಂದರು.
ಈ ವರ್ಗದ ಮತದಾರರು ಹುಮ್ಮಸ್ಸು ಹಾಗೂ ಸ್ಪೂರ್ತಿಯಿಂದ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೆಲವರು ಹಾಸಿಗೆ ಹಿಡಿದಿದ್ದು ಅವರು ಗಳಿಂದಲೂ ಮತದಾನ ಮಾಡಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದೆಂದು.
ಸಂವಾದದಲ್ಲಿ ಶತಾಯುಷಿಗಳಾದ ಅಕ್ಕಯ್ಯಮ್ಮ,ನಾಗೇಗೌಡ,ಸಿದ್ದಮ್ಮ,ಶಿವಪ್ಪ,ವೀರರಾಜೇ ಅರಸ್, ಸಣ್ಣಮ್ಮ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.