• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಕೊವ್ಯಾಕ್ಸ್ ಕೊರತೆಗೆ ಭಾರತದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾರಣ – ಜಾಗತಿಕ ಆರೋಗ್ಯ ಸಂಸ್ಥೆಗಳ ಅಭಿಪ್ರಾಯ

Any Mind by Any Mind
May 28, 2021
in ವಿದೇಶ
0
ಕೊವ್ಯಾಕ್ಸ್ ಕೊರತೆಗೆ ಭಾರತದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾರಣ – ಜಾಗತಿಕ ಆರೋಗ್ಯ ಸಂಸ್ಥೆಗಳ ಅಭಿಪ್ರಾಯ
Share on WhatsAppShare on FacebookShare on Telegram

ಶಿವಕುಮಾರ್‌ ಎ

ADVERTISEMENT

ಭಾರತದಲ್ಲಿ ಕರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗಿದ್ದು ಜಾಗತಿಕ ಕರೋನಾ ಲಸಿಕಾ ಅಭಿಯಾನದ (ಕೊವ್ಯಾಕ್ಸ್) ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು, WHO, UNICEF, GAVI ಮತ್ತು CEPI ಜಂಟಿ ಹೇಳಿಕೆ ನೀಡಿದೆ. ಜೂನ್ ಅಂತ್ಯದ ವೇಳೆಗೆ 190 ಮಿಲಿಯನ್ ಡೋಸ್’ಗಳಷ್ಟು ಲಸಿಕೆ ಕೊರತೆಯನ್ನು ಈ ಜಗತ್ತು ಎದುರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Coalition of Preparedness Innovations (CEPI) CEO, ಡಾ. ರಿಚರ್ಡ್ ಹಚೆಟ್, ಗ್ಲೋಬಲ್ ವ್ಯಾಕ್ಸಿನ್ ಅಲಾಯನ್ಸ್ (GAVI) ಸಿಇಒ ಡಾ. ಸೆತ್ ಬರ್ಕ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಡಾ. ತೆಡ್ರಸ್ ಅಧನಮ್ ಘೆಬ್ರೆಯೇಸಸ್ ಮತ್ತು UNICEFನ ಕಾರ್ಯಕಾರಿ ನಿರ್ದೇಶಕರಾದ ಹರನ್ರಿಯೆಟ್ಟಾ ಫೋರ್ ಅವರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ ಇದಾಗಿದೆ. ಲಸಿಕಾ ಅಭಿಯಾನವನ್ನು ಸಶಕ್ತವಾಗಿ ನಡೆಸಿರುವ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿವೆ, ಎಂದು ಅವರು ಹೇಳಿದ್ದಾರೆ.

“ಲಸಿಕಾಕರಣ ಹೆಚ್ಚಾಗಿರುವ ದೇಶದಲ್ಲಿ ಕೋವಿಡ್ ಪ್ರಕರಣಗಳೊಂದಿಗೆ, ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆಯೂ ಇಳಿಮುಖವಾಗಿದೆ. ಇದರೊಂದಿಗೆ ಸಾಮಾನ್ಯ ಪರಿಸ್ಥಿತಿ ಹಿಂತಿರುಗುವ ಸೂಚನೆಗಳು ಲಭಿಸುತ್ತಿವೆ. ಆದರೆ, ಜಾಗತಿಕವಾಗಿ ಈ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ,” ಎಂದು ಹೇಳಲಾಗಿದೆ.

ದಕ್ಷಿಣ ಏಷಿಯಾ ಭಾಗದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಕೊರತೆ ಉಂಟಾಗಿದೆ. ಭಾರತದಲ್ಲಿ ತೀವ್ರಗತಿಯಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳು ಜಾಗತಿಕ ಲಸಿಕಾ ಕೊರತೆಗೆ ಪ್ರಮುಖ ಕಾರಣ. ಜೂನ್ ಅಂತ್ಯದ ವೇಳೆಗೆ 190 ಮಿಲಿಯನ್ ಡೋಸ್ಗಳ ಕೊರತೆ ಎದುರಾಗಲಿದೆ. ಹಾಗಾಗಿ, 2021ರ ಅಂತ್ಯದ ವೇಳಗೆ ಎರಡು ಬಿಲಿಯನ್ ಡೋಸ್ ಲಸಿಕೆಗಳ ಉತ್ಪಾದನೆಯ ಅಗತ್ಯತೆ ಎದುರಾಗಲಿದೆ, ಎಂದು ಅಂದಾಜಿಸಿದ್ದಾರೆ.

“ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ಈಗಾಗಲೇ ನಡೆಸಿರುವ ವ್ಯವಹಾರದಿಂದ ಈ ವರ್ಷಾಂತ್ಯಕ್ಕೆ ಕೊವ್ಯಾಕ್ಸ್ (ಜಾಗತಿಕ ಕೋವಿಡ್ ವ್ಯಾಕ್ಸಿನ್ ಸರಬರಾಜು) ಲಸಿಕೆ ಸಿಗಲಿದೆ. ಆದರೆ, ಅದು ಸರಿಯಾದ ಸಮಯಕ್ಕೆ ಲಭಿಸದಿದ್ದರೆ ಇದರ ಪರಿಣಾಮ ಭೀಕರವಾಗಿರಲಿದೆ, ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಲಸಿಕೆ ಕೊರತೆಯನ್ನು ನೀಗಿಸಲು ದೇಶಗಳು ಲಸಿಕೆಗಳನ್ನು ಹಂಚಬೇಕು ಎಂದು ಕರೆ ನೀಡಿದೆ. ಅಮೇರಿಕಾ ಮತ್ತು ಯೂರೋಪ್ ಒಕ್ಕೂಟ ರಾಷ್ಟ್ರಗಳು ಜಾಗತಿಕವಾಗಿ 180 ಮಿಲಿಯನ್ ಡೋಸ್ ಲಸಿಕೆಯನ್ನು ಹಂಚುವ ಭರವಸೆ ನೀಡಿವೆ. ಆದರೆ, ಇಷ್ಟು ಮಾತ್ರ ಸಾಕಾಗುವುದಿಲ್ಲ. ಇತರ ರಾಷ್ಟ್ರಗಳು ಕೂಡಾ ಲಸಿಕೆ ಹಂಚಲು ಮುಂದಾಗಬೇಕು ಎಂದು ಈ ಏಜೆನ್ಸಿಗಳು ಮನವಿ ಮಾಡಿಕೊಂಡಿವೆ.

ಪ್ರಪಂಚದ ಅತೀ ದೊಡ್ಡ ಲಸಿಕೆ ತಯಾರಿಕಾ ಕಂಪೆನಿಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ GAVIಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಭಾರತಕ್ಕೆ ಕೋವಿಡ್ ಲಸಿಕೆ ನೀಡುವುದರೊಂದಿಗೆ, ಜಾಗತಿಕೆ ಲಸಿಕಾಕರಣ ಅಭಿಯಾನಕ್ಕೆ ಕೈಜೋಡಿಸಲಿದೆ. ಆದರೆ, ಭಾರತದಲ್ಲಿ ಈಗ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಕೊವ್ಯಾಕ್ಸ್ ಗೆ ಅಗತ್ಯವಿರುವಷ್ಟು ಡೋಸ್’ಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ತಿಳಿಗೊಂಡ ನಂತರ ಕೊವ್ಯಾಕ್ಸ್ ಗೆ ಅಗತ್ಯವಿರುವ ಲಸಿಕೆಗಳನ್ನು ನೀಡಲು ಎಸ್್ಐಐ ಮುಂದಾಗಬೇಕು ಎಂದು ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯ ಡಾ. ತೆಡ್ರಸ್ ಅವರು ಹೇಳಿದ್ದರು.

ಸದ್ಯದ ಮಟ್ಟಿಗೆ ಕೊವ್ಯಾಕ್ಸ್ ಸರಬಾರಾಜು 65 ಮಿಲಿಯನ್ ಡೋಸ್’ಗಳಷ್ಟು ತಲುಪಿದೆ. ಆದರೆ, ಇಲ್ಲಿಯವರೆಗೆ ಕಡಿಮೆ ಎಂದರೂ 170 ಮಿಲಿಯನ್ ಡೋಸ್’ಗಳಷ್ಟು ತಲುಪಬೇಕಿತ್ತು. ಈಗಾಗಲೇ ಕೊವ್ಯಾಕ್ಸ್ ಅಂದುಕೊಂಡ ಗುರಿ ತಲುಪದಿರುವುದರಿಂದ ಮುಂಬರುವ ದಿನಗಳಲ್ಲಿ ಲಸಿಕೆ ಉತ್ಪಾದನೇ ಇನ್ನಷ್ಟು ಹೆಚ್ಚಿಸಬೇಕಾಗಿದೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಅವರು ಇತ್ತೀಚಿಗೆ Ikeaದೊಂದಿಗಿನ ವರ್ಚುವಲ್ ಸಭೆಯಲ್ಲಿ ಮಾತನಾಡುತ್ತಾ, ಸುಮಾರು ಎಂಬತ್ತು ಸಾವಿರ ಜನರು ಪ್ರತಿ ವಾರ ಕೋವಿಡ್’ನಿಂದ ಸಾವನ್ನಪ್ಪುತ್ತಿದ್ದಾರೆ. ಈ ವೈರಸ್ ನೊಂದಿಗಿನ ಯುದ್ದದಲ್ಲಿ ನಾವಿದ್ದೇವೆ. ನಿಜವಾದ ಜಾಗತಿಕ ಲಸಿಕಾ ಯೋಜನೆ ಮಾತ್ರ ಈ ಯುದ್ದದಲ್ಲಿ ನಮ್ಮನ್ನು ಗೆಲ್ಲಿಸಲಿದೆ ಎಂದು ಹೇಳಿದ್ದಾರೆ.

UNICEF ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ಸರಬರಾಜು ಮಾಡಲು ವಿಳಂಬ ಮಾಡಿರುವುದೇ ಜಾಗತಿಕವಾಗಿ ಲಸಿಕೆಗಲ ಕೊರತೆ ಉಂಟಾಗಲು ಕಾರಣ ಎಂದು ಹೇಳಿದೆ. ಇತರ ಕಂಪನಿಗಳು ತಮ್ಮ ಒಪ್ಪಂದದಂತೆ ಜೂನ್ ಅಂತ್ಯದ ವೇಳೆಗೆ ಲಸಿಕೆಗಳನ್ನು ಸರಬರಾಜು ಮಾಡಲಿವೆ ಎಂಬ ವಿಶ್ವಾಸವಿದೆ. ಆದರೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಳಂಬಕ್ಕೆ ಯಾವುದೇ ದಿನಾಂಕವನ್ನು ನಿಗದಿಗೊಳಿಸಲು ಸಾಧ್ಯವಾಗುತ್ತಿಲ್ಲ, ಎಂದು ವಿಷಾದ ವ್ಯಕ್ತಪಡಿಸಿದೆ.

ಭಾರತದಲ್ಲಿಯೇ ಕೋವಿಡ್ ಲಸಿಕೆಗಳ ತೀವ್ರ ಅಭಾವವು ಲಸಿಕಾ ಅಭಿಯಾನಕ್ಕೆ ದೊಡ್ಡ ಮಟ್ಟದ ಪೆಟ್ಟು ನೀಡಿರುವ ಈ ಸಂದರ್ಭದಲ್ಲಿ, ಜಾಗತಿಕ ಸಂಸ್ಥೆಗಳ ಹೇಳಿಕೆಯು ನಿಜವಾಗಿಯೂ ಭಾರತ ಮೂಲದ ಲಸಿಕೆ ತಯಾರಿಕ ಸಂಸ್ಥೆಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಈಗಾಗಲೇ 18ರಿಂದ 44ರ ವಯಸ್ಸಿನವರಿಗೆ ಲಸಿಕೆ ಪಡೆಯಲು ಸಾಧ್ಯವಾಗದೇ ಇರುವುದರಿಂದ ಜನರಲ್ಲಿಯೂ ಆತಂಕದ ಪರಿಸ್ಥಿತಿ ಎದುರಾಗಿದೆ. ಅಂತರಾಷ್ಟ್ರೀಯ ಮಟ್ಟದ ಲಸಿಕಾ ತಯಾರಕರಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳು ಇನ್ನಷ್ಟು ತೀವ್ರಗತಿಯಲ್ಲಿ ಸಾಗಬೇಕಾದ ಅವಶ್ಯಕತೆಯಿದೆ.

Previous Post

ಬೆಂಗಳೂರು: ಯುವತಿಗೆ ಚಿತ್ರಹಿಂಸೆ, ಸಾಮೂಹಿಕ ಅತ್ಯಾಚಾರ-ಮಹಿಳೆ ಸೇರಿ ಒಟ್ಟು ಆರು ಮಂದಿ ಬಂಧನ

Next Post

ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾದಿದೆ ಭಾರಿ ನಷ್ಟ: ಮಹಾಮಾರಿ ಓಡಿಸಲು ತಡವಾದಷ್ಟು ಕಷ್ಟ ಕಷ್ಟ

Related Posts

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್
ದೇಶ

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

by ಪ್ರತಿಧ್ವನಿ
December 2, 2025
0

ನವದೆಹಲಿ: ರಷ್ಯಾ ಅಧ್ಯಕ್ಷ ವಾಗ್ಲಿಮಿರ್ ಪುಟಿನ್ ಡಿ.4ರಂದು ನವದೆಹಲಿಗೆ ಭೇಟಿ‌ ನೀಡಲಿದ್ದಾರೆ. ಎರಡು ದಿನಗಳ ಈ ಭೇಟಿಯ ಹಿನ್ನಲೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್...

Read moreDetails
ಚಂಡಮಾರುತದ ಅಬ್ಬರಕ್ಕೆ ನಲುಗಿದ ಶ್ರೀಲಂಕಾ: ಭಾರತದಿಂದ ನೆರವು

ಚಂಡಮಾರುತದ ಅಬ್ಬರಕ್ಕೆ ನಲುಗಿದ ಶ್ರೀಲಂಕಾ: ಭಾರತದಿಂದ ನೆರವು

November 29, 2025
ಆಳ್ವಿಕೆಯ ಮಾನದಂಡವೂ ತಂತ್ರಗಾರಿಕೆಯ ಫಲವೂ

ಆಳ್ವಿಕೆಯ ಮಾನದಂಡವೂ ತಂತ್ರಗಾರಿಕೆಯ ಫಲವೂ

November 29, 2025
ಜೈಲಿನೊಳಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆ..? ಅಸಲಿ ಸತ್ಯವೇನು..?

ಜೈಲಿನೊಳಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆ..? ಅಸಲಿ ಸತ್ಯವೇನು..?

November 26, 2025

ಮಾರ್ಟಿನ್ ಬೇಕರ್ ಸಹಿತ 7 ಕಂಪನಿ ಜತೆ ಹೂಡಿಕೆ ಮಾತುಕತೆ ನಡೆಸಿದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ..!!

November 24, 2025
Next Post
ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾದಿದೆ ಭಾರಿ ನಷ್ಟ: ಮಹಾಮಾರಿ ಓಡಿಸಲು ತಡವಾದಷ್ಟು ಕಷ್ಟ ಕಷ್ಟ

ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾದಿದೆ ಭಾರಿ ನಷ್ಟ: ಮಹಾಮಾರಿ ಓಡಿಸಲು ತಡವಾದಷ್ಟು ಕಷ್ಟ ಕಷ್ಟ

Please login to join discussion

Recent News

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!
Top Story

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

by ಪ್ರತಿಧ್ವನಿ
December 3, 2025
ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!
Top Story

ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!

by ಪ್ರತಿಧ್ವನಿ
December 2, 2025
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF
Top Story

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF

by ಪ್ರತಿಧ್ವನಿ
December 2, 2025
ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ
Top Story

ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

by ಪ್ರತಿಧ್ವನಿ
December 2, 2025
ಪ್ರಯಾಣಿಕರೇ ಗಮನಿಸಿ..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ
Top Story

ಪ್ರಯಾಣಿಕರೇ ಗಮನಿಸಿ..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ

by ಪ್ರತಿಧ್ವನಿ
December 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

December 3, 2025
ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

December 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada