ಹಾಲಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ ವಿರುದ್ದದ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾದಲ್ಲಿದ್ದ ಭಾರತ ತಂಡಕ್ಕೆ ದಕ್ಷಿಣ ಆಪ್ರಿಕಾ ಎದುರು ಮುಗ್ಗರಿಸಿತ್ತು.
ಬುಧವಾರ ಭಾರತ ಬಾಂಗ್ಲಾದೇಶ ವಿರುದ್ದ ಲೀಗ್ನ ನಾಲ್ಕನೇ ಪಂದ್ಯ ಆಡಲಿದ್ದು ಪುಟಿದೇಳುವ ವಿಶ್ವಾಸದಲ್ಲಿದೆ ಮತ್ತು ಸೆಮೀಸ್ ದಾರಿಯನ್ನ ಖಾತ್ರಿ ಮಾಡಕೊಳ್ಳಲಿದೆ.
ಇನ್ನು 2016ರ ಟಿ-20 ವಿಶ್ವಕಪ್ ಕ್ವಾಟರ್ ಫಿನಾಲೆಯಲ್ಲಿ ಬಾಂಗ್ಲಾದೇಶ ವಿರುದ್ದ 1 ರನ್ ಜಯ ಕಂಡಿದ್ದ ಭಾರತ ಬಾಂಗ್ಲಾದೇಶ ವಿರುದ್ದ ಎಚ್ಚರಿಕೆಯ ಆಟವಾಡಲು ಮುಂದಾಗಿದೆ ಮತ್ತು ಯಾವುದೇ ಪ್ರಯೋಗಕ್ಕೂ ಮುಂದಾಗುವುದಿಲ್ಲ ಎಂದು ಹೇಳಲಾಗಿದೆ.
ಸದ್ಯ ಭಾರತದ ಸೆಮೀಸ್ ಕನಸು ಜಟಿಲವಾಗಿಲ್ಲವಾದರೂ ಬಾಂಗ್ಲಾದೇಶವನ್ನ ಲಘುವಾಗಿ ಪರಿಗಣಿಸುವಂತಿಲ್ಲ ಏಕೆಂದರೆ ದಕ್ಷಿಣ ಆಫ್ರಿಅಕಾ ವಿರುದ್ದ ಮುಗ್ಗರಿಸಿದ ಭಾರತದ ಬ್ಯಾಟಿಂಗ್ ಪಡೆ ಲಯಕೆ ಮರಳಬೇಕಿದೆ ಮತ್ತು ಬಾಂಗ್ಲಾ ಬ್ಯಾಟ್ಸ್ಮ್ಯಾನ್ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬೇಕಿದೆ.
ಇನ್ನು ಟಾಸ್ ಗೆದ್ದಿರುವ ಬಾಂಗ್ಲಾದೇಶ ಬೌಲಿಂಗ್ ಆಯದುಕೊಂಡಿದೆ.
ಮಳೆ ಸಾಧ್ಯತೆ
ಅಡಿಲೇಡ್ ಓವಲ್ನಲ್ಲಿ ಮಂಗಳವಾರ ಮಳೆಯಾಗಿದ್ದು ಆಟಗಾರರು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಸ ನಡೆಸಿದ್ದಾರೆ.
ಬುಧವಾರ ನಡೆಯುವ ಪಂದ್ಯದ ವೇಳೆ ಮಳೆ ಕಾಡುವ ಸಮಸ್ಯೆ ತುಂಬಾ ಕಡಿಮೆ ಇದೆ ಎಂದು ಹೇಳಲಾಗಿದೆ.
ಡಿಕೆ ಬದಲು ರಿಷಭ್ ?
ಶನಿವಾರ ದಕ್ಷಿಣ ಆಫ್ರಿಕಾ ವಿರುದ್ದ ಪಂದ್ಯದಲ್ಲಿ ತೀವ್ರ ಬೆನ್ನು ನೋವಿಗೆ ತುತ್ತಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ದಿನೇಶ್ ಕಾರ್ತಿಕ್ ಬದಲಿಗೆ ರಿಷ ಒಂತ್ಗೆ ಅವಕಾಶ ಒಲಿಯುವ ನಿರೀಕ್ಷೆ ಇದೆ. ಒಂದು ವೇಳೆ ದಿನೇಶ್ ಕಾರ್ತಕ್ ಫಿಟ್ ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲಿಗೆ ಕಣಕ್ಕಿಳಿದಿದ್ದ ದೀಪಕ್ ಹೂಡ ರನ್ ಗಳಿಸುವಲ್ಲಿ ವಿಫಲರಾಗಿದ್ದರು ಅವರ ಬದಲಿಗೆ ಅಕ್ಷರ್ ಪಟೇಲ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.






