ಬಿಜೆಪಿ ಸರ್ಕಾರದಲ್ಲಿ RSS ನ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತವೇ ಅನ್ನೋದು ಬಹಳ ವರ್ಷಗಳಿಂದ ಬಂದಿರೋ ಆರೋಪ. ಹಲವಾರು ಕಡೆ ಇದಕ್ಕೆ ಸ್ಪಷ್ಟ ನಿದರ್ಶನವು ಸಿಕ್ಕಿದೆ. ಆದ್ರೆ ಪ್ರಸ್ತುತ ಕರ್ನಾಟಕದಲ್ಲಿರೋ ಕಾಂಗ್ರೆಸ್ ಸರ್ಕಾರದ ವಿಚಾರದಲ್ಲೂ ಇದಕ್ಕೆ ಹೋಲುವಂತಹ ಉದಾಹರಣೆ ಸಿಕ್ಕಿದೆ. ಅಷ್ಟಕ್ಕೂ ಇದಕ್ಕೆ ಕಾರಣ ಯಾರು ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ.ಕರ್ನಾಟಕದಲ್ಲಿ ಅಕಾಡೆಮಿಗಳ ನೇಮಕದಲ್ಲಿ ಸಂಘ ಪರಿವಾರದವರಿಗೆ ಮಣೆ ಹಾಕಿದ್ದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆಯನ್ನಾಗಿ ಕೃಪಾ ಪಡಕಿ ಎನ್ನುವ ಸಂಘ ಪರಿವಾರದಾಕೆಯನ್ನು ನೇಮಿಸಲಾಗಿದೆ.ಈಕೆ RSSನ ಸಾಂಸ್ಕೃತಿಕ ಘಟಕವಾದ “ಸಂಸ್ಕಾರ ಭಾರತಿ”ಯಲ್ಲಿ ಪ್ರಮುಖ ಹುದ್ದೆಯಾದ ನೃತ್ಯ ವಿಧಾ ಪ್ರಮುಖ್ ಎನ್ನುವ ಹುದ್ದೆಯಲ್ಲಿ ಇರುವಾಕೆ ಅಂತವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಹೇಗೆ ಮಣೆ ಹಾಕಲಾಯ್ತು ಎಂಬ ಪ್ರಶ್ನೆ ಉದ್ಭವವಾಗಿದೆ.ದಕ್ಷಿಣ ಕನ್ನಡ ಮೂಲದ ಈಕೆಯ ಕುಟುಂಬ ತಲೆ ತಲೆಮಾರುಗಳಿಂದಲೂ ಕಟ್ಟರ್ RSSನವರು.ಈಕೆಯ ತಂದೆ ಪ್ರಭಾಕರ್ ಪಡಕಿ RSSನ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ
![](https://pratidhvani.com/wp-content/uploads/2024/03/IMG_20240218_215519-1024x578.jpg)
ವಹಿಸಿದವರು.ಈಕೆಯನ್ನು ರೆಕಮೆಂಡ್ ಮಾಡಿದವರು ಯಾರು? ಯಾರ ಮುತುವರ್ಜಿಯಲ್ಲಿ ಈಕೆಗೆ ಈ ಹುದ್ದೆ ಸಿಕ್ಕಿದೆ, ಕಾಂಗ್ರೆಸ್ ಸಿದ್ದಂತ ಇರುವವರು ಯಾರೂ ಸಿಗಲಿಲ್ಲವೇ? ಯಾಕೆ ಈ ಸರ್ಕಾರ ಪ್ರತಿ ಹಂತದಲ್ಲೂ ಬಿಜೆಪಿಗೆ, ಸಂಘಪರಿವಾರಕ್ಕೆ ಮಣೆ ಹಾಕುತ್ತಿದೆ?ನಾಗಪುರದ ಹಾವುಗಳು ಸರ್ಕಾರವನ್ನು ನಿಯಂತ್ರಿಸುತ್ತಿವೆಯೇ? ಎಂಬ ಪ್ರಶ್ನೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಕಾಂಗ್ರೆಸ್ ಗೆ ದುಡಿದ ಕಾರ್ಯಕರ್ತರು ಅಬ್ಬೇಪಾರಿಗಳಾಗಿದ್ದಾರೆ, ಬಿಜೆಪಿ ಭಕ್ತರು ಅಧಿಕಾರ ಲಾಭ ಪಡೆಯುತ್ತಿದ್ದಾರೆ.ಯಾಕೆ ಹೀಗಾಗುತ್ತಿದೆ..?ಕಾಂಗ್ರೆಸ್ ಗೆ ದುಡಿದ ಕಾರ್ಯಕರ್ತರು
![](https://pratidhvani.com/wp-content/uploads/2024/03/Bjp-Logo-2-1024x1024.png)
ಅಬ್ಬೇಪಾರಿಗಳಾಗಿದ್ದಾರೆ, ಬಿಜೆಪಿ ಭಕ್ತರು ಅಧಿಕಾರ ಲಾಭ ಪಡೆಯುತ್ತಿದ್ದಾರೆ..?ಯಾಕೆ ಹೀಗಾಗುತ್ತಿದೆ..? ಎಂಬ ಮಾತುಗಳು ಜೋರಾಗಿ ಹರಿದಾಡುತ್ತಿದೆ.ಚುನಾವಣೆಗೂ ಮುಂಚೆ ತಮ್ಮ ಕಾರ್ಯಕರ್ತರನ್ನು ಗುರುತಿಸಲು ಸಾಧ್ಯವಾಗುವ ಕಾಂಗ್ರೆಸ್ ನಾಯಕರಿಗೆ ಅಧಿಕಾರ ಪಡೆದ ನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸದೆ ಬಿಜೆಪಿ ಕಾರ್ಯಕರ್ತರನ್ನು ಗುರುತಿಸುತ್ತಿರುವುದೇಕೆ? ಎಂಬ ಆಕ್ರೋಶ ಕಾಂಗ್ರೆಸ್ ವಲಯದಲ್ಲಿ ಕೇಳಿಬರ್ತಿದೆ.