ಉತ್ತರಾಖಂಡದಲ್ಲಿ ನಡೆಯುತ್ತಿರುವ ಕುಂಭದಲ್ಲಿ ಪೊಲೀಸರು ಆರ್ಎಸ್ಎಸ್ ಕಾರ್ಯಕರ್ತರ ಸಹಾಯವನ್ನು ಪಡೆದಿದ್ದಾರೆ. ಉತ್ತರಾಖಂಡ ಪೊಲೀಸರು ಆರ್ಎಸ್ಎಸ್ ಕಾರ್ಯಕರ್ತರನ್ನು “ವಿಶೇಷ ಪೊಲೀಸ್ ಅಧಿಕಾರಿಗಳಾಗಿ” (ಎಸ್ಪಿಒ: ಸ್ಪೆಷಲ್ ಪೊಲೀಸ್ ಆಫೀಸರ್ಸ್) ನೇಮಕ ಮಾಡಿದ್ದಾರೆ. ಸುಮಾರು 1,500 ಸಂಘ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಕುಂಭ ಮೇಳದ ಡಿವೈಎಸ್ಪಿ ಬೀರೇಂದ್ರ ಪ್ರಸಾದ್ ದಬ್ರಾಲ್ ಅವರು ಈ ಹಿಂದೆ ಕುಂಭ ಮೇಳ ಸಮಯದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಸಹಾಯ ಮಾಡಿದ್ದಾರೆ. ಆದರೆ, ಅವರಿಗೆ ಇದೆ ಮೊದಲ ಬಾರಿಗೆ ಎಸ್ಪಿಒ (ಸ್ಪೆಷಲ್ ಪೊಲೀಸ್ ಆಫೀಸರ್ಸ್) ಗುರುತಿನ ಚೀಟಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಕುಂಭದಲ್ಲಿ ಕಾಂಗ್ರೆಸ್ ಸೇವಾ ದಳವೂ ಇದೆ
ಈ ವರ್ಷದ ಕುಂಭಕ್ಕೆ ಆರ್ಎಸ್ಎಸ್ ಮಾತ್ರವಲ್ಲದೆ ಕಾಂಗ್ರೆಸ್ ಸೇವಾ ದಳ ಸೇರಿದಂತೆ ಹಲವು ಸಾಮಾಜಿಕ ಸಂಸ್ಥೆಗಳನ್ನೂ ಎಸ್ಪಿಒಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಡಿವೈಎಸ್ಪಿ ಬೀರೇಂದ್ರ ಪ್ರಸಾದ್ ದಬ್ರಾಲ್ ಹೇಳಿದ್ದಾರೆ.
ಮಾರ್ಚ್ನಲ್ಲಿ, ಕುಂಭಮೇಳದ ಐಜಿ ಸಂಜಯ್ ಗುಂಜ್ಯಾಲ್ ಆರ್ಎಸ್ಎಸ್ ಅನ್ನು ಸಂಪರ್ಕಿಸಿದರು, ಕುಂಭಮೇಳದಲ್ಲಿ ಸ್ವಯಂಸೇವಕರು “ಎಸ್ಪಿಒ”ಗಳಾಗಿ ಕೆಲಸ ಮಾಡಲು ಕೇಳಿಕೊಂಡರು ಎಂದು ಉತ್ತರಾಖಂಡ ಪ್ರಾಂತ್ಯದ ಆರ್ ಎಸ್ ಎಸ್ ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ತಿಳಿಸಿದ್ದಾರೆ.
ವಿಶೇಷ ಪೊಲೀಸ್ ಅಧಿಕಾರಿಗಳಿಗೆ ವೇತನ ದೊರೆಯುವುದಿಲ್ಲ ಹಾಗೂ ಅವರದ್ದು ಸಮಾಜ ಸೇವೆಯಾಗಿದೆ ಎಂದು ಅವರು ಹೇಳಿದ್ದಾರೆ. ವಿಶೇಷ ಪೊಲೀಸ್ ಅಧಿಕಾರಿಗಳು (ಸ್ವಯಂಸೇವಕರು) ಹರಿದ್ವಾರ ನಗರ, ಘಾಟ್ಗಳು, ರೈಲ್ವೆ ನಿಲ್ದಾಣಗಳು, ಕ್ರಾಸಿಂಗ್ ಮತ್ತು ಡೈವರ್ಷನ್ ಪಾಯಿಂಟ್ಗಳು ಮತ್ತು ಯುಪಿಯ ಜಿಲ್ಲಾ ಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಕಡೆ ಕನಿಷ್ಠ ಆರು ಕಾರ್ಯಕರ್ತರು ನಿಯೋಜನೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ಆರು ಸ್ವಯಂಸೇವಕರನ್ನು ನಾಲ್ಕು ಪೊಲೀಸ್ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.