ರೇಣುಕಾಸ್ವಾಮಿ (Renuka swamy) ಕಿಡ್ನಾಪ್ ಆಂಡ್ ಮರ್ಡರ್ ಗೆ (Kidnap & murder) ಕಾರಣವಾದ ಅಂಶಗಳೇನು ಎಂಬುದು ಈಗ ಒಂದೊಂದಾಗಿ ಇದೀಗ ಬೆಳಕಿಗೆ ಬರ್ತಿದೆ. ಫೆಬ್ರವರಿ ತಿಂಗಳಲ್ಲಿ ಪವಿತ್ರ ಗೌಡಗೆ (Pavitra gowda) ರೇಣುಕಾಸ್ವಾಮಿ ಕಡೆಯಿಂದ ಮೊದಲ ಮೆಸೇಜ್ ಬಂದಿದ್ದು ಎಂಬ ಅಂಶ ತನಿಖೆಯಲ್ಲಿ ತಿಳಿದು ಬಂದಿದೆ.
![](https://pratidhvani.com/wp-content/uploads/2024/06/IMG_8184-4.jpeg)
ರೆಡ್ಡಿ ಅನ್ನೋ ಹೆಸರಿನಲ್ಲಿ ತೆರೆದಿದ್ದ Instagram ಅಕೌಂಟ್ ನಿಂದ ಮೆಸೇಜ್ ಗಳು ಬರಲು ಆರಂಭವಾಗಿತ್ತು. ನಂತರ ಚ್ಯಾಟಿಂಗ್ (Chatting) ಕೂಡ ಶುರುವಾಗಿತ್ತು.ಈ ಸಂದರ್ಬದಲ್ಲಿ ಪವಿತ್ರ ಗೌಡಗೆ ಮೆಸೇಜ್ ನಲ್ಲೇ ಬೈತಿದ್ದ ರೇಣುಕಾಸ್ವಾಮಿ ನಿಂದನೆಯ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ.
ಕೊನೆಗೆ ಪವಿತ್ರಾ ಈ ವಿಚಾರವನ್ನು ದರ್ಶನ್ (Darshan) ಮನೆಯಲ್ಲಿ ಕೆಲಸ ಮಾಡ್ತಿದ್ದ ಪವನ್ ಗೆ (Pawan) ತಿಳಿಸಿದ್ದಳು. ಪವನ್ ಜೊತೆಗೆ ಮಾತನಾಡಿದ ಬಳಿಕ ಒಂದು ಪ್ಲಾನ್ ಮಾಡಿದ್ರು.
![](https://pratidhvani.com/wp-content/uploads/2024/06/Darshan-3.jpg)
ಅದರಂತೆ ಒಂದು ವ್ಯಾಟ್ಸಾಪ್ (Whatsapp) ನಂಬರ್ ಕೊಡ್ತೀನಿ ಎಂದು ಹೇಳಿದ್ದ ಪವಿತ್ರ, ಬಳಿಕ ಪವನ್ ವ್ಯಾಟ್ಸಾಪ್ ನಂಬರ್ ನೀಡಿದ್ದಳು.
ಜೂನ್ ಆರಂಭದಿಂದ ರೇಣುಕಾಸ್ವಾಮಿ ಆ ವ್ಯಾಟ್ಸಾಪ್ ನಂಬರ್ ಗೆ ಚಾಟಿಂಗ್ ಮಾಡ್ತಿದ್ದ. ಊರು ಯಾವುದು, ಎಲ್ಲಿ ಕೆಲಸ ಮಾಡೋದು ಅನ್ನೋದೆಲ್ಲ ಕೇಳಿದ್ದ.ಪವಿತ್ರಾ ಳೆ ಕೇಳ್ತಿದ್ದಾಳೆ ಅಂತ ರೇಣುಕಾಸ್ವಾಮಿ ಎಲ್ಲಾ ಮಾಹಿತಿ ನೀಡಿದ್ದ.ತಾನು ಕೆಲಸ ಮಾಡ್ತಿದ್ದ ಮೆಡಿಕಲ್ ಶಾಪ್ ಫೋಟೋ,ಜೊತೆಗೆ ವ್ಯಾಟ್ಸಾಪ್ ನಲ್ಲಿ ಲೊಕೇಶನ್ ಸಹ ಶೇರ್ ಮಾಡಿದ್ದ ರೇಣುಕಾಸ್ವಾಮಿ.
ಈ ಎಲ್ಲಾ ವಿಚಾರ್ ದರ್ಶನ್ ಜೊತೆಗೆ ಚರ್ಚೆ ಆಗಿದ್ದು ಜೂನ್ 5ರಂದು. ಇದರ ಬೆನ್ನಲ್ಲೆ ಚಿತ್ರದುರ್ಗದ ರಾಘವೇಂದ್ರ ನಿಗೆ ಕರೆ ಮಾಡಿದ್ದ ದರ್ಶನ್,ರೇಣುಕಾಸ್ವಾಮಿ ಎಂಬಾತನ ಎತ್ತಾಕೊಂಡು ಬರುವಂತೆ ಸೂಚನೆ ನೀಡಿದ್ದು ಬಯಲಾಗಿದೆ.