ಕಾಂತಾರ (Kantara) ಸಿನಿಮಾದ ಬಿಗ್ ಸಕ್ಸಸ್ ನಂತರ ಮೈಸೂರಿನಲ್ಲಿ (Mysore) ತಲೆ ಎತ್ತಿದ್ದ ಕೊರಗಜ್ಜ (Koragajja) ದೇವಸ್ಥಾನಕ್ಕೆ ಸದ್ಯ ಬೀಗ ಹಾಕಲಾಗಿದೆ. ಮೈಸೂರಿನ ರಿಂಗ್ ರೋಡ್ ನ ಕೇರ್ಗಳ್ಳಿ ಸಮೀಪದ ತೋಟವೊಂದರಲ್ಲಿ ಈ ದೇವಸ್ಥಾನ ತಲೆ ಎತ್ತಿತ್ತು.

ಈ ಕೊರಗಜ್ಜ ದೇವಸ್ಥಾನಕ್ಕೆ (Koragajja Temple) ದೈವದ ಮೇಲೆ ನಂಬಿಕೆಯಿಟ್ಟ ಸಹಸ್ರಾರು ಭಕ್ತರು ಪ್ರತಿನಿತ್ಯ ಆಗಮಿಸುತ್ತಿದ್ರು.ಆದ್ರೆ ಕಳೆದ ಒಂದು ತಿಂಗಳಿಂದ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಬೀಗ ನೋಡಿಕೊಂಡು ವಾಪಸ್ ಹೋಗುತ್ತಿದ್ದಾರೆ.
ಈ ಜಮೀನಿಗೆ ಸಂಬಂಧಪಟ್ಟಂತೆ ಭೂ ವಿವಾದ ಇದೆ ಎನ್ನಲಾಗಿದ್ದು, ಇಲ್ಲಿನ ಅರ್ಚಕರಾಗಿದ್ದ ತೇಜುಕುಮಾರ್ ಮತ್ತು ಪತ್ನಿ ನಡುವೆ ಕಲಹವಾಗಿತ್ತು. ಈ ವ್ಯಾಜದಿಂದಾಗಿ ಬೀಗ ಹಾಕಲಾಗಿದೆ ಎಂದು ಹೇಳಲಾಗ್ತಿದೆ.ಈ ಹಿಂದೆಯೂ ಟ್ರಸ್ಟಿಗಳ ನಡುವೆ ಜಗಳ ನಡೆದಾಗಲೂ ಹೀಗೆ ಬೀಗ ಹಾಕಲಾಗಿತ್ತು.