ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಎಲ್ಲಾ ಆರೋಪಿಗಳನ್ನು ಇದೀಗ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ರೀತಿ ಆರೋಪಿಗಳನ್ನು ಶಿಫ್ಟ್ ಮಾಡಲು ನ್ಯಾಯಾಲಯದ ಆದೇಶ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಹೀಗಾಗಿ ಈಗಾಗಲೇ ಅಧಿಕಾರಿಗಳು ಕೋರ್ಟ್ ಆದೇಶ ಪಡೆದುಕೊಂಡಿದ್ದು,24ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ನೀಡಿದೆ.
ಈ ಬಗ್ಗೆ ಜೈಲಿನ ಚೀಫ್ ಸೂರ್ಪಡೆಂಟ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಿದ್ಧತೆ ಆರಂಭವಾಗಿದೆ. ಸದ್ಯ A2 ಆರೋಪಿ ದರ್ಶನ್ ರನ್ನ ಬಳ್ಳಾರಿ ಜೈಲಿಗೆ ಕಳುಹಿಸಲು ನಿರ್ಧರಿಸಲಾಗಿದ್ದು, ಇನ್ನುಳಿದಂತೆ ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್ ಶಿವಮೊಗ್ಗಕ್ಕೆ ,ಧನರಾಜ್ ಧಾರವಾಡ ಜೈಲಿಗೂ, ವಿನಯ್ ನನ್ನ ವಿಜಯಪುರ ಜೈಲು ಮತ್ತು ನಾಗರಾಜ್ ಗುಲ್ಬರ್ಗ ಜೈಲಿಗೆ,ಲಕ್ಷ್ಮಣ ಶಿವಮೊಗ್ಗಕ್ಕೆ, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಉಳಿದಹಾಗೆ ಪವಿತ್ರಗೌಡ, ಅನುಕುಮಾರ್, ಮತ್ತು ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಲಿದ್ದಾರೆ. ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲೆ ಇದ್ದು, ಇಡೀ ಆರೋಪಿಗಳ ತಂಡ ಬೇರೆ ಬೇರೆ ಕಾರಾಗೃಹಗಳಿಗೆ ಚದುರಿ ಹೋಗಲಿದೆ.