• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

World Environment Day : ವಿಶ್ವ ಪರಿಸರ ದಿನ’ ಆಚರಣೆಗೆ ನಾವೆಷ್ಟು ಯೋಗ್ಯರು..?

ಕೃಷ್ಣ ಮಣಿ by ಕೃಷ್ಣ ಮಣಿ
June 6, 2023
in Top Story, ಅಂಕಣ, ರಾಜಕೀಯ
0
World Environment Day : ವಿಶ್ವ ಪರಿಸರ ದಿನ’ ಆಚರಣೆಗೆ ನಾವೆಷ್ಟು ಯೋಗ್ಯರು..?
Share on WhatsAppShare on FacebookShare on Telegram

ಇಂದು ವಿಶ್ವ ಪರಿಸರ ದಿನ, ಎಲ್ಲಾ ಕಡೆಗಳಲ್ಲೂ ಸರ್ಕಾರ, ಸಂಘ ಸಂಸ್ಥೆಗಳು ವಿಶ್ವ ಪರಿಸರ ದಿನಾಚಣೆ ಮಾಡಲಾಗ್ತಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದು ಪ್ರಶ್ನೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡುವ ನೈತಿಕತೆ ಮನುಷ್ಯರಿಗೆ ಇದೆಯಾ..? ಎಂಬುದು. ಎಲ್ಲರೂ ಜಯಂತಿಗಳು, ವಿಶೇಷ ದಿನಗಳನ್ನು ಆಚರಣೆ ಮಾಡುವುದು ಸರಿ. ಇದರಿಂದ ಮುಂದಿನ ತಲೆಮಾರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು‌ ಅನೂಕೂಲ ಆಗುತ್ತದೆ. ಆದರೆ ವಿಶ್ವ ಪರಿಸರ ದಿನದಂದೇ ಪರಿಸರಕ್ಕೆ ಮಾರಕವಾದ ಕೆಲಸಗಳನ್ನು ಮಾಡುತ್ತ, ಪರಿಸರ ರಕ್ಷಣೆ ಸಾಧ್ಯವೇ..? ಇದನ್ನು ಎಲ್ಲರೂ ಮನಗಾಣಬೇಕು.

ADVERTISEMENT

ಪರಿಸರ ರಕ್ಷಣೆ ಎಂದರೆ ಏನು..? ರಕ್ಷಣೆ ಮಾಡುವುದು ಹೇಗೆ..?

ನಮ್ಮ ಸುತ್ತಮುತ್ತಲು ಇರುವಂತಹ ಪಡೆದ ಪರಿಸರವನ್ನು ಮೊದಲು ನಾವು ಸ್ವಚ್ಛವಾಗಿ ಇಡುವ ಕೆಲಸ ಮಾಡಬೇಕು. ಮನೆಯನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಪಕ್ಕದ ಬೀದಿಯಲ್ಲಿ ಕಸ ಎಸೆಯುವುದನ್ನು ಮೊದಲು‌ ನಿಲ್ಲಿಸಬೇಕು. ಮನೆಯಿಂದ ಖರೀದಿಗಾಗಿ ಅಂಗಡಿಗಳಿಗೆ ಹೋಗುವ ಮುನ್ನ ಕೈಚೀಲ ಹಿಡಿಕೊಂಡು ಹೋಗುವ ಮೂಲಕ‌ ಪರಿಸರಕ್ಕೆ ಮಾರಕ ಆಗಿರುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಊಟ, ನೀರು, ತಿಂಡಿ ತಿನಿಸುಗಳನ್ನು ಸೇವಿಸಲು ಪ್ಲಾಸ್ಟಿಕ್ ಮುಕ್ತ ಪೇಪರ್ ಪ್ಲೇಟ್ ಬಳಸುವುದು ಸೂಕ್ತ. ಬಳಕೆ ಹಾಗು ನಿರ್ವಹಣೆಗೆ ಅನುಕೂಲ ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್​ ಬಳಸುವುದು ಪರಿಸರಕ್ಕೆ ಮಾರಕ.

ಪರಿಸರಕ್ಕೆ ಮಾರಕ ಆಗ್ತಿರೋದು ಏನು..?

ಮರ ಗಿಡಗಳನ್ನು ಬೆಳಸಬೇಕು ಅನ್ನೋದು ಸರಿ. ಆದರೆ ಪರಿಸರ ಅಂದರೆ ಕೇವಲ ಮರಗಿಡಗಳನ್ನು ಬೆಳೆಸುವುದು ಮಾತ್ರ ಅಲ್ಲ. ಮಣ್ಣಿನ ಆರೋಗ್ಯವೂ ಕೂಡ ಪರಿಸರದ ವ್ಯಾಪ್ತಿಗೇ ಬರುತ್ತದೆ. ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್​ ನೂರಾರು ವರ್ಷಗಳ ಕಾಲ ಭೂಮಿಯಲ್ಲಿದ್ದರೂ ಬೇರೆ ವಸ್ತುಗಳ ರೀತಿ ಮಣ್ಣಿನಲ್ಲಿ ಕರಗುವುದಿಲ್ಲ. ಅಂದರೆ ಭೂಮಿಯ ಆರೋಗ್ಯ ನಿಧಾನವಾಗಿ ಕೆಡುತ್ತದೆ. ಇತ್ತೀಚಿಗೆ ನದಿಗಳ ಮೂಲಕ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್​ನಿಂದ ಮನುಷ್ಯನ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಪರಿಸರದಲ್ಲಿ ತನ್ನಷ್ಟಕ್ಕೆ ತಾನೇ ನಡೆಯುವ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನುವ ವರದಿಗಳು ಬರುತ್ತಿವೆ.

ಲಾಭದ ಉದ್ದೇಶದಿಂದ ಯೂರಿಯಾ ಬಳಕೆ..!

ರೈತರು ಬೆಳೆಯುವ ಬೆಳೆಗಳಿಗೆ ಅತಿ ಹೆಚ್ಚು ಯೂರಿಯಾ ಬಳಕೆ ಮಾಡುವ ಮೂಲಕ ಮಣ್ಣಿನ ಆರೋಗ್ಯ ಕೆಟ್ಟು ಹೋಗಿದೆ. ಎಲ್ಲಾ ಸರ್ಕಾರಗಳಿಗೆ ಮಣ್ಣಿನ ಆರೋಗ್ಯ ಕೆಟ್ಟಿದೆ. ಅದರಿಂದ ಬೆಳೆಯುವ ಆಹಾರ ಸೇವಿಸಿದ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ ಎನ್ನುವುದು ತಿಳಿದಿದೆ. ಆದರೂ ಸುಮ್ಮನಿದ್ದಾರೆ ಎಂದರೆ ಮಾರುಕಟ್ಟೆ ಹಿಡಿತ ಕೆಲಸ ಮಾಡುತ್ತದೆ. ಯೂರಿಯಾ ತಯಾರಿಕಾ ಕಂಪನಿಗಳು ಸರ್ಕಾರದ ಮೇಲೆ ಪ್ರಭಾವ ಬೀರುತ್ತವೆ. ಇನ್ನು ಯೂರಿಯಾ ಪ್ರಮಾಣ ಸೇವನೆ ಹೆಚ್ಚಾಗಿ ರೋಗ ರುಜಿನಗಳು ಬರುವುದರಿಂದ ಮಾತ್ರೆ, ಔಷಧಿಗಳನ್ನು ಜನರು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸರ್ಕಾರ ಭೂಮಿಯ ಆರೋಗ್ಯವನ್ನು ಕಾಪಾಡಲು ಮುಂದಾಗದಂತೆ ಮೆಡಿಸಿನ್​ ಮಾಫಿಯಾ ಕೂಡ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತದೆ.

‘ವಿಶ್ವ ಪರಿಸರ ದಿನಾಚರಣೆ’ ಯಾಕೆ ಮಾಡಲು ಯೋಗ್ಯರಲ್ಲ..!?

ವಿಶ್ವ ಪರಿಸರ ದಿನಾಚರಣೆ ಮಾಡುವ ಕಾರ್ಯಕ್ರಮದಲ್ಲೇ ಪ್ಲಾಸ್ಟಿಕ್​ ಬಾಟೆಲ್​ನಿಂದ ನೀರು ಕುಡಿಯುತ್ತ ಆಚರಣೆ ಮಾಡುವುದು ಅವಿವೇಕತನದ ಪರಮಾವಧಿ ಎನ್ನಬಹುದು. ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ಕೊಟ್ಟು ಕೈಗಾರಿಕೆಯ ತ್ಯಾಜ್ಯ ನದಿಗೆ ಹೋಗುವುದನ್ನು ತಡೆಯದೆ ಇದ್ದರೂ ಪರಿಸರ ದಿನಾಚರಣೆ ಮಾಡುವ ಉದ್ದೇಶ ಏನು..? ಪರಿಸರದಲ್ಲಿ ವಾಯು ಮಾಲಿನ್ಯ ಹೆಚ್ಚಾಗುವುದನ್ನು ತಡೆಯುವ ಉದ್ದೇಶದಿಂದ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಲು ಸರ್ಕಾರ ಉತ್ತೇಜನ ನೀಡುತ್ತಿತ್ತು. ಆದರೆ ಜೂನ್​ 1 ರಿಂದ ಸಬ್ಸಿಡಿ ರದ್ದು ಮಾಡಿದ್ರಿಂದ ಎಲೆಕ್ಟ್ರಿಕ್​ ವಾಹನ ದರ ಗಗನಕ್ಕೆ ಏರಿದೆ. ಇದು ಪರಿಸರ ರಕ್ಷಣೆಯ ಚಿಂತನೆಯೇ..? ಪ್ರಶ್ನೆ ಮಾಡಿಕೊಳ್ಳಬೇಕಿದೆ. ಪ್ರಕೃತಿ ಉತ್ತಮವಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತ ಜೀವನ ಮಾಡುತ್ತಾನೆ. ಪರಿಸರ ಆರೋಗ್ಯವಾಗಿದ್ದರೆ ಮಾನವನ ಜೀವಿತಾವಧಿ 100 ವರ್ಷದಿಂದ 50-60ಕ್ಕೆ ಇಳಿಯುತ್ತಲೇ ಇರಲಿಲ್ಲ ಅಲ್ಲವೇ..?

ಕೃಷ್ಣಮಣಿ

Tags: around us cleanBy carryingcelebrating World Environment Dayenvironment should be reducedgovernmentshelp the next generationorganizationsshoppingstop throwing garbageWorld Environment Day
Previous Post

12 ವರ್ಷ ಮೇಲ್ಪಟ್ಟ ಹಸುಗಳ ವಧೆಗೆ ಅವಕಾಶವಿದೆ : ಸಿಎಂ ಸಿದ್ದರಾಮಯ್ಯ

Next Post

ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ʼಐಐಎಸ್​ಸಿʼ ನಂಬರ್‌ ಒನ್..! NIRF ರ್‍ಯಾಂಕಿಂಗ್‌

Related Posts

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ
Top Story

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

by ಪ್ರತಿಧ್ವನಿ
May 2, 2026
0

ರಾಜ್ಯ ರಾಜಧಾನಿ ಬೆಂಗಳೂರು ನಗರದ ಸಂಚಾರ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಎದುರಾಗಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಒಂದಾದ ಪೀಣ್ಯ ಫ್ಲೈಓವರ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು,...

Read moreDetails
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ʼಐಐಎಸ್​ಸಿʼ ನಂಬರ್‌ ಒನ್..! NIRF ರ್‍ಯಾಂಕಿಂಗ್‌

ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ʼಐಐಎಸ್​ಸಿʼ ನಂಬರ್‌ ಒನ್..! NIRF ರ್‍ಯಾಂಕಿಂಗ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada