• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

CSKನಲ್ಲಿ ಧೋನಿಗೆ ಎಷ್ಟು ಷೇರು?ವದಂತಿಗೆ ಫ್ರಾಂಚೈಸಿ ಸ್ಪಷ್ಟನೆ ಇಲ್ಲಿದೆ

ಪ್ರತಿಧ್ವನಿ by ಪ್ರತಿಧ್ವನಿ
September 12, 2026
in ಕ್ರೀಡೆ
0
CSKನಲ್ಲಿ ಧೋನಿಗೆ ಎಷ್ಟು ಷೇರು?ವದಂತಿಗೆ ಫ್ರಾಂಚೈಸಿ ಸ್ಪಷ್ಟನೆ ಇಲ್ಲಿದೆ
Share on WhatsAppShare on FacebookShare on Telegram

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ (CSK)ನಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ಶೇ.15ರಿಂದ 20ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂಬ ವರದಿಗಳನ್ನು ಫ್ರಾಂಚೈಸಿ ತಳ್ಳಿಹಾಕಿದೆ. ಧೋನಿ ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸಿಎಸ್‌ಕೆ ಆಡಳಿತ ಸ್ಪಷ್ಟಪಡಿಸಿದೆ. ಆದರೆ, ಧೋನಿ ಈಗಾಗಲೇ ಫ್ರಾಂಚೈಸಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಕ್ರಿಕ್‌ಬಝ್ ವರದಿ ಪ್ರಕಾರ, ಧೋನಿ ಈ ಹಿಂದೆ ಖಾಸಗಿ ವಹಿವಾಟಿನ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಸಿಎಸ್‌ಕೆ ಷೇರುಗಳನ್ನು ಖರೀದಿಸಿದ್ದಾರೆ. ಸಿಎಸ್‌ಕೆ ಷೇರುಗಳು ಷೇರುಪೇಟೆಯಲ್ಲಿ ಲಿಸ್ಟ್ ಆಗಿಲ್ಲದ ಕಾರಣ, ಇಂತಹ ವಹಿವಾಟುಗಳು ಆಫ್-ಮಾರ್ಕೆಟ್ ಮೂಲಕ ನಡೆಯುತ್ತವೆ.

ADVERTISEMENT

 

ಧೋನಿ ಹೊಂದಿರುವ ಒಂದು ಲಕ್ಷಕ್ಕೂ ಹೆಚ್ಚು ಷೇರುಗಳು ಸಂಖ್ಯೆಯಲ್ಲಿ ದೊಡ್ಡದಾಗಿ ಕಂಡರೂ, ಸಿಎಸ್‌ಕೆಯ ಒಟ್ಟು ಷೇರುಗಳಿಗೆ ಹೋಲಿಸಿದರೆ ಇದು ಸುಮಾರು ಶೇ.0.01ರಿಂದ 0.02ರಷ್ಟು ಮಾತ್ರ. ಪ್ರಸ್ತುತ ಅನ್‌ಲಿಸ್ಟೆಡ್ ಮಾರುಕಟ್ಟೆಯ ಅಂದಾಜು ಮೌಲ್ಯವನ್ನು ಆಧರಿಸಿದರೆ, ಈ ಷೇರುಗಳ ಮೌಲ್ಯ ಸುಮಾರು ₹2.6 ಕೋಟಿಯಿಂದ ₹3 ಕೋಟಿಯಷ್ಟಿರಬಹುದು ಎಂದು ವರದಿಗಳು ತಿಳಿಸಿವೆ. ಸಿಎಸ್‌ಕೆಯ ಒಟ್ಟು ಷೇರುಗಳಲ್ಲಿ ಎನ್. ಶ್ರೀನಿವಾಸನ್ ಕುಟುಂಬವು ಶೇ.55ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದು, ಕಂಪನಿಯ ಮೇಲಿನ ನಿಯಂತ್ರಣವೂ ಅವರ ಕುಟುಂಬದ ಬಳಿಯಿದೆ ಎಂದು ವರದಿಯಾಗಿದೆ. ಸಾರ್ವಜನಿಕ ಷೇರುದಾರರ ಬಳಿಯೂ 30 ಕೋಟಿಗೂ ಹೆಚ್ಚು ಷೇರುಗಳಿವೆ.

 

ಕಳೆದ ಕೆಲವು ತಿಂಗಳಿಂದ ಧೋನಿ ಸಿಎಸ್‌ಕೆಯಲ್ಲಿ ದೊಡ್ಡ ಪಾಲು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಕೆಲವು ವರದಿಗಳಲ್ಲಿ ಅವರು ಮೊದಲು ಶೇ.25ರಷ್ಟು ಪಾಲು ಬಯಸಿದ್ದರು, ಬಳಿಕ ಶೇ.20ಕ್ಕೆ ಇಳಿಸಿದ್ದರು ಎಂಬ ಹೇಳಿಕೆಗಳೂ ಬಂದಿದ್ದವು. ಆದರೆ ಈ ಮಾಹಿತಿಯನ್ನು ಸಿಎಸ್‌ಕೆ ಆಡಳಿತ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಧೋನಿ ಷೇರು ಪಾಲು ಹೆಚ್ಚಿಸುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದೆ.

Aafreen Nawaz, Ashutosh Ranka : ದೆಹಲಿ ಮಾದರಿ ಹೋರಾಟ ಕರ್ನಾಟಕದಲ್ಲೂ ಮಾಡ್ತೀರಾ..? #priyankkharge #kpsc

ಷೇರು ಪಾಲು ಅತ್ಯಲ್ಪವಾಗಿದ್ದರೂ, ಸಿಎಸ್‌ಕೆ ತಂಡದ ಪ್ರಮುಖ ಕ್ರಿಕೆಟ್‌ ನಿರ್ಧಾರಗಳಲ್ಲಿ ಧೋನಿಯ ಪ್ರಭಾವ ಮುಂದುವರಿದಿದೆ. ಹೊಸ ಮುಖ್ಯ ಕೋಚ್ ಆಯ್ಕೆ ಹಾಗೂ ಮುಂದಿನ ಹರಾಜಿಗೆ ಮುನ್ನ ಆಟಗಾರರ ಕುರಿತು ಚರ್ಚೆಗಳಲ್ಲಿ ಧೋನಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. 2023ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಸಿಎಸ್‌ಕೆ, ಆ ಬಳಿಕ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದೆ. ಕಳೆದ ಕೆಲವು ಸೀಸನ್‌ಗಳಲ್ಲಿ ಪ್ಲೇಆಫ್ ಹಂತ ತಲುಪಲು ತಂಡಕ್ಕೆ ಸಾಧ್ಯವಾಗಿಲ್ಲ.

 

ಇದೀಗ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಧೋನಿ ತಂಡದೊಂದಿಗೆ ಮುಂದುವರಿಯುತ್ತಾರೆಯೇ, ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಹೊಸ ಕೋಚಿಂಗ್‌ ತಂಡದೊಂದಿಗೆ ಸಿಎಸ್‌ಕೆ ಮತ್ತೆ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತದೆಯೇ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

Tags: Chennai Super KingsChennai Super Kings NewsCricket NewsCricket UpdatesCSKCSK CoachCSK ManagementCSK OwnershipCSK SharesCSK StakeDhoni Newsindian cricketIPL 2026IPL 2027IPL FranchiseIPL Newsms dhoniMS Dhoni CSKMS Dhoni SharesN SrinivasanRuturaj GaikwadStephen Fleming
Previous Post

ನವೆಂಬರ್ 1ರೊಳಗೆ ಅಕ್ರಮ ಬಂದೂಕು ಒಪ್ಪಿಸಿ; ಇಲ್ಲದಿದ್ದರೆ ಕಠಿಣ ಕ್ರಮ: ಡಿಕೆಶಿ ಎಚ್ಚರಿಕೆ

Next Post

ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’

Related Posts

BREAKING : ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಭಾರತದ ಇಲಾವೆನಿಲ್ ವಲರಿವನ್‌ಗೆ ಬೆಳ್ಳಿ ಪದಕ
Top Story

BREAKING : ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಭಾರತದ ಇಲಾವೆನಿಲ್ ವಲರಿವನ್‌ಗೆ ಬೆಳ್ಳಿ ಪದಕ

by ಪ್ರತಿಧ್ವನಿ
September 20, 2026
0

ನಗೋಯಾ : ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ತಾರಾ ಶೂಟರ್ ಇಲಾವೆನಿಲ್ ವಲರಿವನ್ ಅಮೋಘ ಪ್ರದರ್ಶನ ನೀಡಿ ವೈಯಕ್ತಿಕ...

Read moreDetails
ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗುತ್ತಾ? ಸೆಮಿಫೈನಲ್‌ ಲೆಕ್ಕಾಚಾರ ಹೀಗಿದೆ!

ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗುತ್ತಾ? ಸೆಮಿಫೈನಲ್‌ ಲೆಕ್ಕಾಚಾರ ಹೀಗಿದೆ!

September 8, 2026
ವಿರಾಟ್-ಅನುಷ್ಕಾ ಭಾರತ ತೊರೆದು ಲಂಡನ್‌ನಲ್ಲೇ ಇರಲು ಕಾರಣವೇನು?

ವಿರಾಟ್-ಅನುಷ್ಕಾ ಭಾರತ ತೊರೆದು ಲಂಡನ್‌ನಲ್ಲೇ ಇರಲು ಕಾರಣವೇನು?

September 2, 2026
ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

August 19, 2026
2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

August 17, 2026
Next Post
ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’

ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada