ಸಿದ್ದರಾಮಯ್ಯ.. ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ! ಕಳೆದ ಎರಡು ದಿನಗಳಿಂದ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ (mysuru) ರಿಕಾಣಿ ಹೂಡಿದ್ದಾರೆ. ಕಬಿನಿ ರೆಸಾರ್ಟ್ (kabini resort) ನಲ್ಲಿ ಬೀಡು ಬಿಟ್ಟಿರುವ ಸಿಎಂ ಸಾಲು ಸಾಲು ಸಭೆಗಳನ್ನ ಮಾಡ್ತಿದ್ದಾರೆ. ಗಂಟೆಗಟ್ಟಲೆ ಚರ್ಚೆ ಮಾಡ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಮೈಸೂರು- ಕೊಡಗು (mysuru-kodagu) ಕ್ಷೇತ್ರವನ್ನ ಈ ಬಾರಿ ಕಾಂಗ್ರೇಸ್ ಕಳೆದುಕೊಳ್ಳುವಂತಿಲ್ಲ. ಒಂದುವೇಳೆ ಮೈಸೂರಿನಲ್ಲಿ ಸೋತ್ರೆ ಅಧಿಕಾರದಲ್ಲಿ ಇದ್ದಾಗಲೇ ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಅಭ್ಯರ್ಥಿಯನ್ನ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ಮುಖಭಂಗಕ್ಕೆ ಸಿದ್ದು ಸಿದ್ಧವಾಗಬೇಕಿದೆ. ಹೀಗಾಗಿ ಮೈಸೂರು(mysuru) ಮತ್ತು ಪಕ್ಕದ ಚಾ.ನಗರ (chamarajanagar) ಸಿಎಂ ಪಾಲಿಗೆ ಪ್ರತಿಷ್ಠೆಯ ಕಣ.
ಬಿಜೆಪಿ ಈಗಾಗಲೇ ಯದುವೀರ್ ಒಡೆಯರ್ (yaduveer odeyar) ರನ್ನ ಕಣಕ್ಕಿಳಿಸಿ ಕಾಂಗ್ರೇಸ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದೆ.ರಾಜರ ವಿಚಾರದಲ್ಲಿ ಜಾತಿ ಬಗ್ಗೆಯಾಗಲಿ, ವ್ಯಕ್ತಿ ಬಗ್ಗೆಯಾಗಲಿ ಅತಿಯಾದ ಟೀಕೆ ಮಾಡಿದ್ರೆ ಅದು ಕಾಂಗ್ರೇಸ್ಗೆ (congress) ತಿರುಗುಬಾಣವಾಗಲಿದೆ. ಸೋ ಅಂಥ ಯಡವಟ್ಟುಗಳನ್ನ ಯಾರೊಬ್ಬರೂ ಮಾಡಬಾರದು ಎಂದು ಸಿಎಂ (cm) ಎಲ್ಲಾ ನಾಯಕರಿಗೂ ಸೂಚನೆ ಕೊಟ್ಟಿದ್ದಾರಂತೆ. ಮೈಸೂರು-ಕೊಡಗು ಕ್ಷೇತ್ರವನ್ನ ಗೆಲ್ಲಬೇಕಂದ್ರೆ ಕಾಂಗ್ರೇಸ್ಗಿರೋ ಮಾರ್ಗ ಒಂದೇ. ಹಿಂದುಳಿದ ಮತ್ತು ಒಕ್ಕಲಿಗ ಮತಗಳನ್ನ ಒಗ್ಗೂಡಿಸೋದು.
ಹೀಗಾಗಿ ಡಿಕೆಶಿ (Dk Shivakumar) ಕೂಡ ನಾಳೆ ಮೈಸೂರಿಗೆ ಬರಲಿದ್ದು ಒಕ್ಕಲಿಗ ಮತಗಳನ್ನ ಒಗ್ಗೂಡಿಸೋ ಕೆಲಸಕ್ಕೆ ಮುಂದಾಗಿದ್ದಾರೆ. ಕಾಂಗ್ರೇಸ್ (congress) ಪಕ್ಷದ ಅಭ್ಯರ್ಥಿ ಲಕ್ಷ್ಮಣ್ರನ್ನ (lakshman ಶತಾಯ-ಗತಾಯ ಗೆಲ್ಲಿಸಲೇಬೇಕು ಎಂದು ಮುಖಂಡರಿಗೆ ಸೂಚನೆ ಕೊಟ್ಟಿದ್ದು, ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನ ಸಿದ್ಧಪಡಿಸಲು ಖುದ್ದು ಸಿಎಂ ಮೈಸೂರಿನಲ್ಲಿ ಬೀಡುಬಿಟ್ಟಿರೋದು ಕದನ ಕುತೂಹಲವನ್ನ ಹೆಚ್ಚು ಮಾಡಿದೆ. ಮೈಸೂರು ಕ್ಷೇತ್ರ ಮತ್ತು ಚಾಮರಾಜನಗರ ಕ್ಷೇತ್ರಗಳ ಸೋಲು-ಗೆಲುವಿನ ಆಧಾರದ ಮೇಲೆ ಸಿಎಂ ಪ್ರಭಾವ ಎಷ್ಟಿದೆ ಎಂಬುದು ತಿಳಿಯಲಿದೆ ಎಂಬ ಕಾರಣಕ್ಕೆ ಸಿದ್ದುಗೆ ಇದು ಪ್ರತಿಷ್ಠೆಯ ಕಣವಾಗಿದೆ