![](https://pratidhvani.com/wp-content/uploads/2024/06/HDK-2.jpg)
ಕೇಂದ್ರ ಸಚಿವರಾದ ಬಳಿಕ ಮಂಡ್ಯಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಆಗಮಿಸ್ತಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಸ್ವಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ಕೊಡ್ತಿದ್ದಾರೆ.ನೂತನ ಸಂಸದರ ಕಚೇರಿ ಉದ್ಘಾಟಿಸಲಿರುವ ಕುಮಾರಸ್ವಾಮಿ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. ಮಂಡ್ಯ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿ ಉದ್ಘಾಟನೆ ಆಗಲಿದೆ. ಜಿಲ್ಲಾ ಗಡಿಯಿಂದ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಕೊರೋಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಅದ್ಧೂರಿ ಸ್ವಾಗತ ಕೋರಲು ಮಂಡ್ಯ ಜಿಲ್ಲಾ JDSನಿಂದ ತಯಾರಿ ನಡೆದಿದೆ.ನಿಡಘಟ್ಟ ಗ್ರಾಮದಿಂದ ಮಂಡ್ಯದವರೆಗೂ ಅದ್ಧೂರಿ ಸ್ವಾಗತ ಕೊರಲಾಗುತ್ತದೆ.ದಾರಿಯುದ್ದಕ್ಕೂ ಸಿಗುವ ಅಕ್ಕ-ಪಕ್ಕದ ಗ್ರಾಮದ ಜನರು, ಅಭಿಮಾನಿಗಳು, ಕಾರ್ಯಕರ್ತರಿಂದ ಸ್ವಾಗತ ಕೊರಲಾಗುತ್ತದೆ. ಹನಕೆರೆ ಬಳಿಯಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ಸ್ವಾಗತ ಕೋರಿ ಬಳಿಕ ಸಂಜಯ್ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ.ತೆರೆದ ವಾಹನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮೆರವಣಿಗೆ ಸಾಗಲಿದೆ.