• Home
  • About Us
  • ಕರ್ನಾಟಕ
Saturday, November 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಹಯವದನರಾಯರ ಹಿಂದೂ ಧರ್ಮ ಪ್ರೇಮ

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
April 7, 2023
in ಅಂಕಣ
0
ಹಯವದನರಾಯರ ಹಿಂದೂ ಧರ್ಮ ಪ್ರೇಮ
Share on WhatsAppShare on FacebookShare on Telegram

~ಡಾ. ಜೆ ಎಸ್ ಪಾಟೀಲ.

ADVERTISEMENT

“ಏನೆ ಪದ್ಮಾ ˌ ಸಂಜೆ ಆತುˌ ದಿನವೆಲ್ಲ ರಾಷ್ಟ್ರಪ್ರೇಮ ಜಾಗೃತಾ ಕಾರ್ಯ ಮಾಡ್ಲಿಕ್ಕೆ ಅಡ್ಡಾಡಿ ಸುಸ್ತಾಗೇತಿ ಒಂದ್ ವಾಟೆ ಚಹಾನಾದರೂ ತಂದು ಕೊಡೆ…” ಅದೇ ಆಗ ಮುಖ ತೊಳೆದು ಸಂಧ್ಯಾವಂದನೆ ಮಾಡಿ ಮುಗಿಸಿಕೊಂಡು ತಮ್ಮ ಮನೆಯ ಹೊರಪಡಸಾಲೆಯಲ್ಲಿ ನೇತ್ಹಾಕಿದ್ದ ತೂಗು ಮಂಚದ ಮೇಲೆ ಪವಡಿಸಿˌ ತಮ್ಮ ನಗಾರಿಯಂತ ಉದರದ ಮೇಲಿನ ಜನಿವಾರವನ್ನು ಎರಡೂ ಕೈಗಳಿಂದ ಸವರುತ್ತ ಹಯವದನರಾಯರು ರಾಗವಾಗಿ ಹೆಂಡತಿಯನ್ನು ಒಂದು ಲೋಟ ಚಹಕ್ಕಾಗಿ ಪೂಸಲಾಯಿಸಿದರು.

ಏನ್ರಿ ನಿಮ್ಮ ಗೋಳುˌ ಮುಂಜಾನಿಂದ ಹಪ್ಳಾ-ಸಂಡಿಗೆ ಮಾಡಿ ನನಗೂ ದಣಿವಾಗೇತಿˌ ಅಯ್ಯ ಸುಡ್ಲಿ ˌಇದೇ ಈಗ ಸಂಧ್ಯಾವಂದನೆ ಮುಗಿಸಿ ಕುಂತಿರಿˌ ಇಷ್ಟ್ ಲಘು ಚಹ ಚಹ ಅಂತ ಬಡ್ಕೋಂಡ್ರ ಹೆಂಗ. ಒಂದು ಘಳಿಗಿ ತಡಿರಿˌ ಚಹ ಮಾಡ್ಕೊಂಡು ತಗೊಂಡು ಬರ್ತಿನಿ..” ಎಂದು ಅಡುಗೆ ಕೋಣೆಯಿಂದಲೆ ರಾಯರ ಪತ್ನಿ ಪದ್ಮಕ್ಕ ರಾಯರ ಮೇಲೆ ಜೋರು ಮಾಡಿದಳು.

ಈ ಭಾಗದಲ್ಲಿ ಹಯವದನರಾವ್ ಜೋಶಿ ಅಂದ್ರೆ ಬಹಳ ಫೇಮಸ್ ಹಿಂದೂ ಸಂಘಟನೆಯ ಭಾಷಣಕಾರರು. ಜನರ ಬಾಯಲ್ಲಿ ಅವರು ಹಯರಾಯರೆಂದೆ ಪ್ರಸಿದ್ದಿ. ಹೆಂಡತಿಗೆ ಚಹ ಮಾಡಲು ಹೇಳಿ ಪುರಂಧರದಾಸರ ಕೀರ್ತನೆ ಗೊಣಗುತ್ತ ಕುಂತಿದ್ದ ರಾಯರು ತಮ್ಮ ಅಂಗಳದಲ್ಲಿ ಹೆಗಲ ಮೇಲೆ ಕೇಸರಿ ಶಾಲುಗಳನ್ನು ಹಾಕಿಕೊಂಡು ನಾಲ್ಕಾರು ಜನ ಹಿಂದೂ ಸಂಘಟನೆಯ ಯುವ ಕಾರ್ಯಕರ್ತರು ಪ್ರವೇಶಿಸಿದ್ದನ್ನು ನೋಡಿದರು.

ಯುವ ಕಾರ್ಯಕರ್ತರು ಬಂದಿದ್ದು ಕಂಡು ರಾಯರು ದಿಗಿಲುಗೊಂಡರು. ಬರೋಬ್ಬರಿ ಚಹ ಕುಡಿಯುವ ಸಮಯದಲ್ಲಿ ಇಷ್ಟೊಂದು ಜನರು ಮನೆಗೆ ಬಂದರೆ ಎಲ್ಲರಿಗೂ ಚಹ ಕುಡಿಸಬೇಕಲ್ಲ ಎನ್ನುವ ಕೊರಗು ಒಂದುಕಡೆಯಾದರೆˌ ಚಹ ಕುಡಿದ ಲೋಟಗಳು ಈ ಶೂದ್ರ ಮುಂಡೇವು ತೊಳೆಯದೆ ಇಡ್ತಾವಲ್ಲ ಎನ್ನುವ ಪೇಚಾಟ ಇನ್ನೊಂದು ಕಡೆ. ಎಲ್ಲಿ ತಮ್ಮ ಪತ್ನಿ ಪದ್ಮ ಎಲ್ಲರ ಎದುರಿಗೆ ಚಹಾ ತಗೊಂಡು ಬಂದ್ರೆ ಹೇಗೆ ಎಂದು ರಾಯರು ಹೌಹಾರಿದರು. ಕಾರ್ಯಕರ್ತರು ಬರುವುದನ್ನು ನೋಡುತ್ತಲೆ ತಡಬಡಿಸಿ “ಏಯ್ ಪದ್ಮಾˌ ಇಲ್ಲಿ ನಮ್ಮ ಮನೆಗೆ ಯಾರೊ ಹಿಂದೂ ಕಾರ್ಯಕರ್ತರು ಬಂದಾರˌ ನಿನಗ ಆಗ್ಲೆ ಹೇಳಿದ ಕೆಲ್ಸ ಆಮೇಲೆ ಮಾಡಿದರಾಯ್ತು ˌ ನಿನಗೆ ಬೇರೆ ಕೆಲ್ಸ ಇದ್ರೆ ಮಾಡ್ಲಾ…” ಎಂದು ರಾಯರು ಒಂದೇ ಊಸಿರಲ್ಲಿ ಪತ್ನಿ ಪದ್ಮಳಿಗೆ ಆದೇಶಿಸಿ ಹಿಂದೂ ಕಾರ್ಯಕರ್ತರನ್ನು ಬರಮಾಡಿಕೊಂಡರು.

“ಏನ್ರೊ ತಮ್ಮಾ ನೀವೆಲ್ಲಾ ಸೇರಿ ಈ ಬಡವನ ಮನಿ ಕಡೆ ಬಂದಿರಲ್ಲಾ ˌ ಅದೂ ಚಹ ಕುಡಿಯುವ ಟೈಮಿನ್ಯಾಗ ˌ ನಿಮಗೆಲ್ಲರಿಗೆ ಚಹಾ ಕುಡಿಸಬಹುದಿತ್ತು ˌ ಏನ್ ಮಾಡುದ್ಪಾ ಇವತ್ ಏಕಾದಶಿ ಬೇರೆ ಐತಿˌ ನಾನೇ ಇನ್ನು ತನ್ಕ ಚಹ ಕುಡಿದಿಲ್ನೋಡುˌ ಇನ್ನ ನಿಮಗೆಲ್ಲ ಹ್ಯಾಂಗ್ ಕುಡಿಸುದುˌ ಕ್ಷಮಿಸಬೇಕು ನನ್ನ” ಎಂದರು ರಾಯರು ಬಹಳ ವಿನಮ್ರತೆಯಿಂದ.

ಚಹದ ಮಾತು ಅತ್ಲಾಗಿರ್ಲಿ ˌ ಇಂತ ಅಪಸಮಯದಾಗ ನನ್ನ ಮನಿಗಿ ಬಂದಿರಲ್ಲ ನೀವೆಲ್ಲ ಸೇರಿˌ ಏನಾದ್ರೂ ಅರ್ಜಂಟ್ ಕೆಲ್ಸ ಇತ್ತೇನ್ಮತ್ತ..?” ಹಿಂದೂ ಕಾರ್ಯಕರ್ತರನ್ನು ಪ್ರಶ್ನಿಸಿದರು ಹಯವದನರಾಯರು. ಆಗ ಪಾಟಿದಾರ ಸಖಾರಾಮ… “ನೋಡ್ರಿ ರಾಯರˌ ನಿನ್ನೆ ನೀವು ಮುಸಲ್ಮಾನರ ವಿರುದ್ಧ ನಾವೆಲ್ಲ ಹಿಂದೂಗಳು ಒಗ್ಗಾಟ್ಟಾಗಿರಬೇಕುˌ ಹಿಂದೂ ನಾವೆಲ್ಲಾ ಒಂದು ಅಂತ ಮಾಡಿದ ಭಾಷ್ಣಾ ಕೇಳಿ ಊರಿನ ಹಿಂದೂ ಜನರೆಲ್ಲರಿಗೆ ಭಾಳ ಖುಷಿಯಾಗೇತಿ..” ಅಂದ.

ಹಯವದನರಾಯರ ಮುಖಾರವಿಂದ ಋಷಿಯಿಂದ ಅರಳಿತು. ಕುದುರೆ ಮುಖದವರಾಗಿದ್ದ ರಾಯರು ಹೆಸರಿಗೆ ತಕ್ಕಂತೆ ಹಿಂದೂ ಕಾರ್ಯಕರ್ತನ ಮಾತಿನಿಂದ ಕುದುರೆಯಂತೆ ಕೆನೆಯುತ್ತಾ..” ಸಂತೋಷ ಆಯ್ತಪಾ ಸಖಾರಾಮˌ ಎಷ್ಟೇ ಆಗ್ಲಿ ಆ ಸಾಬರ ಎದುರಿಗೆ ನಾವೆಲ್ಲ ಹಿಂದೂˌ ನಾವೆಲ್ಲ ಒಂದಲ್ಲೇನು… ಇನ್ಮುಂದ ನಮ್ಮೂರಲ್ಲಿರುವ ಎಲ್ಲ ಹಿಂದೂಗಳು ಒಂದsss ನೋಡ್ರಿ ˌ ನಮ್ಮ ನಡುವೆ ಎಳ್ಳಷ್ಟೂ ಭೇದ-ಭಾವ ಇರಬಾರದು…” ಎಂದು ಫರ್ಮಾನು ಹೊರಡಿಸಿದರು.

ರಾಯರ ಮಾತಿನಿಂದ ಉತ್ತೇಜಿತನಾದ ಹಿಂದೂ ಕಾರ್ಯಕರ್ತ ಯಂಕಪ್ಪ ವಡ್ಡರ…”ಆಗ್ಲಿರೀ ರಾಯರˌ ನಿಮ್ಮ ಭಾಷ್ಣಾದಿಂದ ಋಷಿಯಾಗಿರುವ ಊರ ಜನರು ನಾಳೆ ರವಿವಾರ ಊರೊಳಗ ಒಂದು ಔತಣಕೂಟ ಕಾರ್ಯಕ್ರಮ ಮಾಡೂದಂತ ನಿಶ್ಚಯಿಸ್ಯಾರ…” ಎಂದ. ಆಗ ರಾಯರು..”ಭಲೆ ಭಲೆನಪಾ ಯಂಕ್ಯಾ.. ಚಲೊ ಕೆಲ್ಸಾ ಮಾಡಿರಿ ನೋಡ್ಲೆ…” ಎಂದು ಪ್ರೋತ್ಸಾಹಿಸಿತ್ತಲೆ… ಅಂದ್ಹಂಗ ಔತಣಕೂಟ ಎಲ್ಲಿ ಅರೇಂಜ್ ಮಾಡಿರಿ ಎಂದು ಮರು ಪ್ರಶ್ನಿಸಿದರು. ಅದಕ್ಕೆ ವಡ್ಡರ ಯಂಕಪ್ಪ… “ಅದೇರಿ ರಾಯರˌ ನಿಮ್ಮ ರಾಯರ ಮಠದೊಳಗ ಮಾಡ್ಬೇಕಂತ ಜನರೆಲ್ಲ ನಿರ್ಧಾರ ಮಾಡ್ಯಾರ್ರಿ ˌ ನಿಮ್ಮ ಒಪ್ಪಿಗೆ ಬೇಕುˌ ಅಷ್ಟೇ ಅಲ್ದೆ ನೀವುˌ ಮತ್ತ ನಿಮ್ಮ ರಾಯರ ಮಠದ ಶ್ರೀಪಾದಂಗಳು ಊರಿನ ಎಲ್ಲಾ ಹಿಂದೂಗಳೊಂದಿಗೆ ಸಹಪಂಕ್ತಿ ಭೋಜನ ಮಾಡಬೇಕಂತ ಜನರ ಅಪೇಕ್ಷಾ ಐತ್ರಿ ಎಂದ.

ಆಗ ಮಾದರ ಎಲ್ಲಪ್ಪ…”ರಾಯರˌ ಔತಣಕೂಟ ಕಾರ್ಯಕ್ರಮದೊಳಗ ಮಾಂಸ ಸಮಾರಾಧನೆ ಕೂಡ ಇರ್ತೈತಿˌ ಇದನ್ನು ತಾವು ಮತ್ತು ತಮ್ಮ ಮಠದ ಶ್ರೀಪಾದಂಗಳು ಮಾಂಸಾಹಾರ ಸೇವಿಸುವ ಮೂಲಕ ತಾವೇ ಉದ್ಘಾಟಿಸಬೇಕು ಅಂತ ನಮ್ಮೆಲ್ಲರ ಅಪೇಕ್ಷೆ ಐತಿ..” ಎಂದ ಖುಷಿಯಿಂದ. ಮಾದರ ಎಲ್ಲಪ್ಪನ ಮಾತು ಕೇಳಿದ ಹಯವದನರಾಯರ ಕುದುರೆ ಮುಖ ಥೇಟ್ ಕತ್ತೆಯ ಮುಖದಂತಾಯಿತು. ಅದಕ್ಕೆ ಕೋಪಗೊಂಡ ರಾಯರು…”ಅದ್ಹ್ಯಾಂಗ ಅಕ್ಕೈತೊ ಎಲ್ಯಾ? ನಾವು ಆಚಾರ್ಯರು ಮಾಂಸಾಹಾರ ಸೇವಿಸೋದಿಲ್ಲ” ಅಂದರು. ಅದಕ್ಕೆ ಲಂಬಾಣಿ ಬಾಬು…”ಅಲ್ರಿ ರಾಯರˌ ಹಗಲೆಲ್ಲಾ ಹಿಂದುˌ ನಾವೆಲ್ಲ ಒಂದು ಅಂತಿರಿ ˌ ನಿನ್ನೆನೆ ಈ ಮಾತು ಸಾರ್ವಜನಿಕವಾಗಿ ಹೇಳಿರಿˌ ನಿಮ್ಮ ಭಾಷ್ಣಾ ಕೇಳಿ ಜನರೆಲ್ಲ ಋಷಿಯಿಂದ ಕುಣ್ಯಾಕ್ಹತ್ಯಾರˌ ಈಗ ನೀವೇ ಅಪಸ್ವರ ಹಾಡಿದ್ರ ಹ್ಯಾಂಗರಿ..? ಅಂದ.

“ಅಲ್ಲಲೇ ಬಾಬ್ಯಾ ˌ ನಾವು ಆಚಾರ್ಯರುˌ ಮಾಂಸ ಮಣ್ಣು ತಿನ್ನವರಲ್ಲ ಅಂತ ನಿನಗ ಗೊತ್ತೈತಿಲ್ಲ..” ಎಂದು ಕೋಪದಿಂದ ಬುಸುಗುಟ್ಟಿದರು. ಅದಕ್ಕೆ ತಳವಾರ ಭಿಮಶ್ಯಾ..
“ಅಲ್ರಿಪಾ ರಾಯರˌ ಕಾಶ್ಮೀರದೊಳಗಿನ ಪಂಡಿತರು ಕುರಿ ತಿಂತಾರˌ ಬಂಗಾಳಿ ಮತ್ತ ಕೊಂಕಣಿ ಬ್ರಾಮರು ಮೀನುˌ ಮಸಳಿˌ ಏಡಿˌ ಕೋಳಿ ಮಾಂಸ ತಿಂತಾರಂತ ಕೇಳೇವಿ… ಹಾಂಗsss ನೀವೂ ನಾಳೆ ಒಂದಿವ್ಸ ನಮ್ಮೆಲ್ಲರ ಜೊತೆಗೆ ಸೇರಿ ಮಾಂಸ ತಿಂದು ಹಿಂದೂˌ ನಾವೆಲ್ಲ ಒಂದು ಅನ್ನೋದನ್ನ ಖಾತ್ರಿ ಮಾಡಿ ತೋರಿಸ್ರಿಲ್ಲ…” ಅಂದ. ಇದರಿಂದ ಭಯಂಕರ ಮಾನಸಿಕ ಉರಿಹತ್ತಿಕೊಂಡು ರಾಯರ ಮುಖ ಅಕ್ಷರಶಃ ಕತ್ತೆಯ ಮುಖದಂತಾಯಿತು. ….”ಏಯ್ ಭೀಮ್ಯಾ… ಹೊಟ್ಟಿಗೇನ್ ತಿಂತಿಲೇಪಾˌ ಬುದ್ದಿಗಿದ್ದಿ ಆಯ್ತಿಲ್ಲೊ ನಿನಗˌ ನನ್ನನ್ನ ಜಾತಿಭ್ರಷ್ಟ ಮಾಡ್ಬೇಕಂದಿಯೇನ್? ಎಂದು ಗದರಿಸಿದರು.

ಕೊನೆಗೆ ರಾಜಿ ಸಂಧಾನ ಮಾಡಿದ ಕುರಬರ ಮಾಳಪ್ಪ .. ರಾಯರˌ ಹೋಗ್ಲಿ ಬಿಡ್ರಿ ಹುಡಗರ ಮಾತಿಗೆ ಬ್ಯಾಸ್ರಾ ಮಾಡ್ಕೋಬ್ಯಾಡ್ರಿ ˌ ಮಾಂಸ ತಿನ್ನುದು ಬ್ಯಾಡ ಖರೆˌ ಆದ್ರ ನಮ್ಮೆಲ್ಲರ ಜೊತೆ ನೀವು ಮತ್ತ ನಿಮ್ಮ ಶ್ರೀಪಾದಂಗಳವರು ಸಸ್ಯಾಹಾರ ಸಹಪಂಕ್ತಿ ಭೋಜನವಾದ್ರೂ ಮಾಡಬಹುದಲ್ಲ” ಎಂದ. ರಾಯರ ಪಿತ್ತ ನೆತ್ತಿಗೇರಿತು…”ಏಯ್ ಮಾಳ್ಯಾ ˌ ಏನ್ ತಿಳ್ಕೊಂಡಿಯಲೆ ಈ ರಾಯರನ್ನ ˌ ನಾವು ಈ ಹೊಲಸು ಶೂದ್ರ ಮುಂಡೇವುಗಳ ಜೊತೆ ಕುಳಿತು ಉಣ್ಬೇಕಂತಿಯೇನೊ ಭಡವಾˌ ಹೋಗ್ರಿಲ್ಲಿಂದˌ ಹಿಂದೂˌ ನಾವೆಲ್ಲ ಒಂದುನೂ ಬ್ಯಾಡˌ ನಿಮ್ಮ ಸಹಪಂಕ್ತಿ ಊಟನೂ ಬ್ಯಾಡ..” ಎಂದು ಅಬ್ಬರಿಸುತ್ತ..ರಾಯರು “ಏಯ್ ಪದ್ಮಾ ಚಹಾ ಮಾಡುದ್ ಆತೇನˌ ಎಂದು ಅಡುಗೆ ಮನೆಯ ಕಡೆಗೆ ಬಿರಬಿರನೆ ಹೊರಟೆ ಬಿಟ್ಟರು.

~ಡಾ. ಜೆ ಎಸ್ ಪಾಟೀಲ.

Tags: cofee boyHayavadanraoHinduHindu organization speakerHinduismhindusHindutvaJoshi is a very famous HinduPurandhara DasaRaya's wife Padmakkateayoung workers of a Hindu organization
Previous Post

ಸುದೀಪ್ ಸಿನಿಮಾ, ರಿಯಾಲಿಟಿ ಶೋ ಪ್ರಸಾರ-ಮರುಪ್ರಸಾರಕ್ಕೆ ತಡೆ ನೀಡಿ : ವಕೀಲ ದೂರು

Next Post

ದರ್ಶನ್ ಧ್ರುವನಾರಾಯಣ್‌ಗೆ ಒಂದು ಲಕ್ಷ ರೂ. ದೇಣಿಗೆ ಕೊಟ್ಟ ಬೆಂಬಲಿಗರು

Related Posts

Top Story

ಡೀಪ್ಟೆಕ್ ದಶಕಕ್ಕೆ ಮುನ್ನುಡಿ ಬರೆದ ಬೆಂಗಳೂರು ಟೆಕ್ ಮೇಳ, ಡೀಪ್ಟೆಕ್ ನವೋದ್ಯಮಗಳಿಗೆ ₹ 400 ಕೋಟಿ ನೆರವು: ಸಚಿವ ಪ್ರಿಯಾಂಕ್ ಖರ್ಗೆ

by ಪ್ರತಿಧ್ವನಿ
November 20, 2025
0

ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿರುವ ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆದಾರರಿಗೆ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಬೆಂಗಳೂರು, ನವೆಂಬರ್ 20: ಇಲ್ಲಿ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ದರ್ಶನ್ ಧ್ರುವನಾರಾಯಣ್‌ಗೆ ಒಂದು ಲಕ್ಷ ರೂ. ದೇಣಿಗೆ  ಕೊಟ್ಟ ಬೆಂಬಲಿಗರು

ದರ್ಶನ್ ಧ್ರುವನಾರಾಯಣ್‌ಗೆ ಒಂದು ಲಕ್ಷ ರೂ. ದೇಣಿಗೆ ಕೊಟ್ಟ ಬೆಂಬಲಿಗರು

Please login to join discussion

Recent News

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?
Top Story

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

by ಪ್ರತಿಧ್ವನಿ
November 22, 2025
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

7 ಕೋಟಿ ದರೋಡೆ ಕೇಸ್‌: ಆಂಧ್ರ ಪ್ರದೇಶದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆ

7 ಕೋಟಿ ದರೋಡೆ ಕೇಸ್‌: ಆಂಧ್ರ ಪ್ರದೇಶದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆ

November 22, 2025
ಡಿ.ಕೆ ಶಿವಕುಮಾರ್ ಮನೆಯಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆ ಪೂಜೆ

ಡಿ.ಕೆ ಶಿವಕುಮಾರ್ ಮನೆಯಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆ ಪೂಜೆ

November 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada