• Home
  • About Us
  • ಕರ್ನಾಟಕ
Wednesday, July 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ದಶಕಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಗುಜರಾತಿನ ಭೂ ರಹಿತ ದಲಿತರ ಮಹಿಳೆಯರು ಮತ್ತು ಮೇಲ್ಜಾತಿ ಜಮೀನ್ದಾರರ ಆಕ್ರಮಣ (ಭಾಗ-1)

ಫಾತಿಮಾ by ಫಾತಿಮಾ
December 10, 2021
in ಅಭಿಮತ
0
ದಶಕಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಗುಜರಾತಿನ ಭೂ ರಹಿತ ದಲಿತರ ಮಹಿಳೆಯರು ಮತ್ತು ಮೇಲ್ಜಾತಿ ಜಮೀನ್ದಾರರ ಆಕ್ರಮಣ (ಭಾಗ-1)
Share on WhatsAppShare on FacebookShare on Telegram

ಈ ದೇಶದ ದಲಿತರಿಗೆ ‘ಭೂಮಿ’ ಹೊಂದುವ ಅವಕಾಶ ಸಿಕ್ಕಿದ್ದೇ ಭೂ ಮಸೂದೆ ಕಾಯ್ದೆ ಜಾರಿಯಾದಮೇಲೆ. ಅಲ್ಲೂ ಅದೆಷ್ಟೋ ದಲಿತರಿಂದ, ಹಿಂದುಳಿದ ವರ್ಗದವರಿಂದ ಹೆಬ್ಬೆಟ್ಟು ಒತ್ತಿಸಿ, ಒಂದಿಷ್ಟು ದುಡ್ಡಿನ ಆಸೆ ತೋರಿಸಿ ಭೂಮಿ ಕಸಿದವರೆಷ್ಟು ಮಂದಿಯೋ! ಭೂ‌ಮಸೂದೆ ಕಾಯ್ದೆ ಜಾರಿಯಾದದ್ದು 1971ರಲ್ಲಾದರೆ ಇದಕ್ಕೆ ವ್ಯತಿರಿಕ್ತವಾಗಿ  1960ರ ದಶಕದಲ್ಲೇ ಗುಜರಾತಿನಲ್ಲಿ ಭೂ ರಹಿತರಿಗೆ ಭೂಮಿ ವಿತರಿಸುವ ‘ಸಂಥಾನಿ’ ಎನ್ನುವ ಯೋಜನೆ ಜಾರಿಯಾಗಿತ್ತು. ಈ ಯೋಜನೆ ಕಾಗದ ಪತ್ರದಲ್ಲಿರುವಷ್ಟೇ ಪರಿಣಾಮಕಾರಿಯಾಗಿ ಜಾರಿಯಾಗಿದ್ದರೆ ಗುಜರಾತಿನಲ್ಲಿ ಈ ಹೊತ್ತಿಗೆ ಭೂರಹಿತ ರೈತರೇ ಇರಬಾರದಿತ್ತು. ಆದರೆ ಭೂರಹಿತರಿಗೆ ಹಂಚಬೇಕಿದ್ದ ಭೂಮಿಗಳು ಉಳ್ಳವರಿಗೆ ಹಂಚಿಕೆಯಾಗುತ್ತಿದೆ. ಭೂಮಿ ಇಲ್ಲದವರಿಗೆ ನಾಮ್‌ಕಾವಸ್ತೆ ಹಂಚಿದ ಭೂಮಿಗಳು ಸಹ ಕೃಷಿ ಯೋಗ್ಯವಲ್ಲದ ಭೂಮಿಗಳಾಗಿವೆ. ಈ ಬಗ್ಗೆ ಬೆಳಕು ಚೆಲ್ಲುವ ಮೀನಾಕ್ಷಿ ಕಪೂರ್ ಅವರ ವರದಿಯು “2005 ಮತ್ತು 2009 ರ ನಡುವೆ ಗುಜರಾತ್‌ನಾದ್ಯಂತ 7,000 ಭೂರಹಿತ ಕುಟುಂಬಗಳಿಗೆ ವಿತರಿಸಲಾದ (ಕಾಗದದ ಮೇಲೆ) 20,000 ಎಕರೆ ಬಂಜರು ಭೂಮಿ ಕಳಪೆ-ಗುಣಮಟ್ಟದ, ಕೃಷಿಯೋಗ್ಯವಲ್ಲದ ಭೂಮಿಯಾಗಿದೆ” ಎನ್ನುತ್ತದೆ. ಸರ್ಕಾರ ಬಡವರಿಗೆ ಹಂಚಬೇಕಿರುವ ಕೃಷಿಯೋಗ್ಯ ಭೂಮಿಯಲ್ಲಿ ಕಷ್ಟಪಟ್ಟು ದಲಿತರು ಬೆಳೆ ಬೆಳೆದರೂ ಹಕ್ಕುಪತ್ರಗಳನ್ನು ನೀಡಲಾಗುತ್ತಿಲ್ಲ.

ADVERTISEMENT

ಇದಕ್ಕೊಂದು ಉತ್ತಮ ಉದಾಹರಣೆ ಗುಜರಾತ್ ರಾಜ್ಯ ಹೆದ್ದಾರಿಯಿಂದ 400 ಮೀಟರ್ ದೂರದಲ್ಲಿರುವ, ಸಾಬರ್‌ಮತಿ‌ ನದಿಯ ತೀರದ ಸುಮಾರು ನೂರು ಎಕರೆ ಭೂಮಿ. ಸರ್ಕಾರಿ ದಾಖಲೆಗಳ ಪ್ರಕಾರ‌ ಇದು ‘ಉಪಯುಕ್ತವಲ್ಲದ ನದಿ ತೀರದ ಭೂಮಿ’. ಆದರೆ ಸ್ಕ್ರೋಲ್.ಇನ್ ಪತ್ರಕರ್ತೆ ಆಯಿಶಾ ಜೋಹರಿ ಅದೇ ಭೂಮಿಯನ್ನು ಸಂದರ್ಶಿಸಿದಾಗ ಕಂಡದ್ದೇ ಬೇರೆ. ಒಂದೆಡೆ ವಿಸ್ತಾರವಾದ ಗೋಧಿ ಗದ್ದೆಗಳು, ಮಾಗಿದ ತೆನೆಗಳು ಮತ್ತು ಬೆಳೆ ಕೊಯ್ಯಲು ಟ್ರ್ಯಾಕ್ಟರ್.  ಇನ್ನೊಂದೆಡೆ  ಕ್ಯಾಸ್ಟರ್ ಆಯಿಲ್ ಪೊದೆಗಳ ಅಚ್ಚುಕಟ್ಟಾದ ಸಾಲುಗಳು.  ಮಾಗಿದ ಹಣ್ಣನ್ನು ಹಿಂದಿನ ವಾರವಷ್ಟೇ ಕೊಯ್ದ ಕುರುಹು ಗೋಚರಿಸುತ್ತಿತ್ತು. ಮತ್ತೊಂದೆಡೆ  ಕುಡುಗೋಲು ಹಿಡಿದ ಮಹಿಳೆಯರ ಗುಂಪು ಮುಂದಿನ ಬಿತ್ತನೆ ಋತುವಿನ ತಯಾರಿಗಾಗಿ ಪೊದೆಗಳನ್ನು ಕತ್ತರಿಸುತ್ತಿದ್ದರು.

ಸರ್ಕಾರಿ ದಾಖಲಾತಿಗಳ ಪ್ರಕಾರ ಉಪಯುಕ್ತವಾಗಿಲ್ಲದ ಭೂಮಿಯನ್ನು ಹಸಿರಿನಿಂದ ನಳನಳಿಸುವಂತೆ ಮಾಡಿದ್ದು ‘ಜೈ ಭೀಮ್ ಮಹಿಳಾ ಖೇತಿ ಸಹಕಾರಿ ಮಂಡಳಿ’. 72 ವರ್ಷದ ಬಲುಬೆನ್ ನೇತೃತ್ವದ 51 ದಲಿತ ಮಹಿಳೆಯರು ಸರ್ಕಾರದ 36 ಎಕರೆ ಅನುಪಯುಕ್ತ ಭೂಮಿಯನ್ನು ವರ್ಷಕ್ಕೆ ಎರಡು ಬೆಳೆ ಬೆಳೆಯುವ ಗದ್ದೆಯಾಗಿ ಪರಿವರ್ತಿಸಿದ್ದಾರೆ. ಆದರೆ ಅಧಿಕಾರಿ ವರ್ಗ ಇವರಿಗೆ ಯಾವುದೇ ಭೂಮಿಯನ್ನು ವಿತರಿಸುವ ಉತ್ಸಾಹ ತೋರಿಲ್ಲ. ಸಂಥಾನಿ ಯೋಜನೆಯಡಿ ಭೂ ಹಂಚಿಕೆಯ ತಮ್ಮ ಅಹವಾಲನ್ನು ಅಂಗೀಕರಿಸಿಕೊಳ್ಳಲು ಬಾಲುಬೆನ್ ಪಟ್ಟಿರುವ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಯಾವ ಪ್ರಯತ್ನವೂ ಫಲ ನೀಡಿಲ್ಲ. ಈ ಬಗ್ಗೆ ಮಾತನಾಡಿರುವ ಬಾಲುಬೆನ್ “ನಾವು ಕಲೆಕ್ಟರ್ ಮಟ್ಟದಲ್ಲಿ, ತಾಲೂಕು (ಬ್ಲಾಕ್) ಮಟ್ಟದಲ್ಲಿ ಮತ್ತು ಗಾಂಧಿನಗರದಲ್ಲಿ ಸಾಧ್ಯವಿರುವ ಪ್ರತಿಯೊಂದು ಸರ್ಕಾರಿ ಕಚೇರಿಗೂ ಅಲೆದಾಡಿದ್ದೇವೆ. ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ನಮ್ಮ ಪ್ರಯತ್ನವನ್ನು ಶ್ಲಾಘಿಸಿದ್ದಾರೆ ಮತ್ತು ನಮಗೆ ಭೂಮಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.  ಆದರೆ ನಮಗೆ ಇನ್ನೂ ಭೂಮಿ ಸಿಕ್ಕಿಲ್ಲ” ಎಂದಿದ್ದಾರೆ.

ವೌಥಾ ಮಹಿಳೆಯರ ನಿರಂತರ ಹೋರಾಟವು ಗುಜರಾತ್‌ನ ಭೂರಹಿತ ದಲಿತರು, ವಿಶೇಷವಾಗಿ ಮಹಿಳಾ ರೈತರು ತಮ್ಮ ಹೆಸರಿಗೆ ಭೂಮಿಯನ್ನು ಪಡೆಯುವಲ್ಲಿ ಇರುವ ಅಗಾಧ ಸಮಸ್ಯೆಗಳ ಸಂಕೇತವಾಗಿದೆ. ರಾಜ್ಯ ಸರ್ಕಾರವು ಲಭ್ಯವಿರುವ ಭೂಮಿಯ ಕೊರತೆಯ ಬಗ್ಗೆ ಹೇಳುತ್ತಿದೆ. ಆದರೆ ಇದೇ ಅವಧಿಯಲ್ಲಿ ಸರ್ಕಾರವೇ ಹಲವು ಭೂಮಿಗಳನ್ನು ಮಂಜೂರು ಮಾಡಿದೆ.

 2015-16 ರ ಕೃಷಿ ಜನಗಣತಿಯ ಪ್ರಕಾರ, ಮಹಿಳೆಯರು ಭಾರತದ ಒಟ್ಟು ಕೃಷಿ ಭೂಮಿ ಹಿಡುವಳಿಯಲ್ಲಿ 13.9% ಅನ್ನು ನಿರ್ವಹಿಸುತ್ತಾರೆ.  ಅಧಿಕೃತವಾಗಿ ಪರಿಶಿಷ್ಟ ಜಾತಿಗಳು ಎಂದು ಕರೆಯಲ್ಪಡುವ ದಲಿತ ಸಮುದಾಯಗಳ ಮಹಿಳೆಯರು 13.4% ಭೂಮಿಯನ್ನು ನಿರ್ವಹಿಸುತ್ತಾರೆ. ಗುಜರಾತ್‌ನಲ್ಲಿ ಒಟ್ಟು ಕೃಷಿ ಭೂಮಿ ಹಿಡುವಳಿಯಲ್ಲಿ ಮಹಿಳೆಯರು ಸರಾಸರಿ 16.4% ಅನ್ನು ನಿಯಂತ್ರಿಸುತ್ತಾರೆ.  ಗಮನಾರ್ಹವಾಗಿ, ಪರಿಶಿಷ್ಟ ಜಾತಿಗಳ ಮಹಿಳೆಯರು 18.4% ಭೂ ಹಿಡುವಳಿಗಳನ್ನು ನಿಯಂತ್ರಿಸುತ್ತಾರೆ . ಅಂದರೆ ಇತರ ಜಾತಿಗಳ ಮಹಿಳೆಯರಿಗಿಂತ ಹೆಚ್ಚು.

ಆದರೆ ಗಮನಾರ್ಹ ಸಂಗತಿಯೆಂದರೆ, ಪರಿಶಿಷ್ಟ ಜಾತಿ ಗುಂಪುಗಳು ಹೊಂದಿರುವ ಭೂಮಿಯ ಪ್ರಮಾಣ.  ರಾಷ್ಟ್ರೀಯ ಮಟ್ಟದಲ್ಲಿ, ಅವರು ಒಟ್ಟು ಜನಸಂಖ್ಯೆಯ 16.6% ರಷ್ಟಿದ್ದಾರೆ, ಆದರೆ ದೇಶದ ಕೃಷಿ ಭೂಮಿ ಹಿಡುವಳಿಯಲ್ಲಿ 11.8% ಅನ್ನು ಮಾತ್ರ ನಿರ್ವಹಿಸುತ್ತಾರೆ.  ಗುಜರಾತ್‌ನಲ್ಲಿ ದಲಿತ ಜನಸಂಖ್ಯೆಯು 6.7%,ಆದರೆ ಅವರು ರಾಜ್ಯದ ಕೃಷಿಭೂಮಿ ಹಿಡುವಳಿಯಲ್ಲಿ ಕೇವಲ 3% ಅನ್ನು ಮಾತ್ರ ನಿರ್ವಹಿಸುತ್ತಾರೆ.

ಗುಜರಾತಿನ ಬಹುತೇಕ ಗ್ರಾಮೀಣ ದಲಿತರು, ಭೂರಹಿತರಿಗೆ ಭೂಮಿಯನ್ನು ಹಂಚುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ದಶಕಗಳ ನೀತಿಗಳ ಹೊರತಾಗಿಯೂ ಭೂರಹಿತ ಕೃಷಿ ಕಾರ್ಮಿಕರಾಗಿ ಉಳಿದಿದ್ದಾರೆ.  ಗುಜರಾತಿನ ದಲಿತರ ಭೂ ಹಂಚಿಕೆಗಾಗಿ ಹೋರಾಟ  ಮತ್ತು ನಂತರ ಹಂಚಿಕೆಯಾದ ಭೂಮಿಯ  ಸ್ವಾಧೀನ ದಶಕಗಳಿಂದಲೂ ಒಂದು ಸಮಸ್ಯೆಯಾಗಿಯೇ ಉಳಿದಿದೆ.  2016 ರಲ್ಲಿ, ಉನಾದಲ್ಲಿ ನಾಲ್ವರು ದಲಿತರ ಮೇಲಿನ ಕ್ರೂರ ಹಲ್ಲೆಯು ರಾಜ್ಯಾದ್ಯಂತ ಚಳವಳಿಯನ್ನು ಪ್ರಚೋದಿಸಿತು. ಇದು ದಲಿತ ಭೂಮಿಯ ಹಕ್ಕುಗಳ ಮೇಲೆ ಕೇಂದ್ರೀಕರಿಸಿ ಜಿಗ್ನೇಶ್ ಮೇವಾನಿಯಂತಹ ಹೋರಾಟಗಾರರನ್ನೂ ಸೃಷ್ಟಿಸಿತು.

ಆದರೆ ದಲಿತರ ಭೂಮಿಯ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟ ಮುನ್ನಲೆಗೆ ಬಂದರೂ ನಿರ್ದಿಷ್ಟವಾಗಿ ದಲಿತ ಮಹಿಳೆಯರ  ಭೂ ಒಡೆತನದ ಹಕ್ಕುಗಳ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ.”ಇದು ನಮ್ಮ ವೈಫಲ್ಯ, ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ನಾವು ದಲಿತರಿಗೆ ಭೂಮಿ ಮಂಜೂರು ಮಾಡಲು ಪ್ರಯತ್ನಪಟ್ಟರೂ ಸಹ ಅದು ದಲಿತ ಪುರುಷರ ಹಿಡಿತದಲ್ಲಿ ಉಳಿಯುತ್ತದೆ” ಎಂದು ಗುಜರಾತ್ ವಿಧಾನಸಭೆಯಲ್ಲಿ ಹಲವಾರು ಪ್ರತಿಭಟನೆಗಳನ್ನು ನಡೆಸಿದ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.  “ನಾವು ಅತ್ಯಂತ ಪ್ರಗತಿಪರ ಮತ್ತು ಮಹಿಳಾ ಪರ ಎಂಬ ಎಲ್ಲಾ ಘೋಷಣೆಗಳ ಹೊರತಾಗಿಯೂ ದಲಿತ ಮಹಿಳೆಯರಿಗೆ ಭೂಮಿಯನ್ನು ಹಂಚಿಕೆ ಮಾಡಲಾಗಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ. ವೌಥಾ ಪ್ರದೇಶದ ದಲಿತ ಮಹಿಳೆಯರು ಭೂ ಮಂಜೂರಾತಿಗಾಗಿ ಹೋರಾಟ ನಡೆಸುತ್ತಿದ್ದರೆ, ಇನ್ನೂ ನೂರಾರು ಮಂದಿ ಸಂಥಾನಿ ಯೋಜನೆಯ ಮೂಲಕ ತಮಗೆ ಈಗಾಗಲೇ ಮಂಜೂರಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ.

ಆರು ಗುಜರಾತ್ ಜಿಲ್ಲೆಗಳಲ್ಲಿ ಗ್ರಾಮೀಣ ಅರ್ಥಶಾಸ್ತ್ರಜ್ಞೆ ಮಂಜುಳಾ ಲಕ್ಷ್ಮಣ್ ನಡೆಸಿದ ಅಧ್ಯಯನವು “1960 ಮತ್ತು 2015 ರ ನಡುವೆ ಭೂ ಸೀಲಿಂಗ್ ಕಾನೂನಿನ ಮೂಲಕ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳಿದರೂ 43% ದಲಿತರು ಆಸ್ತಿಯನ್ನು ಪಡೆದಿಲ್ಲ” ಎಂದು ಹೇಳಿದೆ..   58% ಜನರಿಗೆ ಅಧಿಕೃತವಾಗಿ ಹಂಚಿಕೆಯಾದ ನಂತರವೂ ಭೂಮಿ ಸ್ವಾಧೀನವಾಗಲು ಐದು ವರ್ಷಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದೆ.

ಇದಕ್ಕೆ ಮುಖ್ಯ ಕಾರಣವೆಂದರೆ ಅತಿಕ್ರಮಣ. ಜಾತಿ ಶ್ರೇಣಿಯಲ್ಲಿ ಕೆಳಗಿರುವ ಜಾತಿ ಗುಂಪುಗಳಿಗೆ ಕಾಗದದ ಮೇಲೆ ಮಂಜೂರು ಮಾಡಲಾದ ಜಮೀನುಗಳನ್ನು ಹೆಚ್ಚಾಗಿ ಮೇಲ್ಜಾತಿ ಗುಂಪುಗಳ ಸದಸ್ಯರು ಅಕ್ರಮವಾಗಿ ಆಕ್ರಮಿಸಿಕೊಳ್ಳುತ್ತಾರೆ ಮತ್ತು ಜಾತಿ ಹಾಗೂ ರಾಜಕೀಯ ಪ್ರಭಾವ ಬಳಸಿ ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸುತ್ತಾರೆ.

 “ದಲಿತರು ಮತ್ತು ಒಬಿಸಿಗಳಿಗೆ (ಇತರ ಹಿಂದುಳಿದ ವರ್ಗಗಳಿಗೆ) ಮಂಜೂರು ಮಾಡಲಾದ ಸಾವಿರಾರು ಎಕರೆ ಭೂಮಿ ನಾವು ಮೇಲ್ವರ್ಗದ ಜನರ ಅಧೀನದಲ್ಲಿರುವುದನ್ನು ನಾವು ಪತ್ತೆ ಮಾಡಿದ್ದೇವೆ” ಎಂದು ಜಿಗ್ನೇಶ್ ಮೇವಾನಿ ಹೇಳುತ್ತಾರೆ.  ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗಿದ್ದರೂ, ಪ್ರಕರಣಗಳು ಅಪರೂಪವಾಗಿ ದಾಖಲಾಗುತ್ತವೆ ಮತ್ತು ಅತಿಕ್ರಮಣದಾರರನ್ನು ತೆರವು ಮಾಡುವಲ್ಲಿ ಪೊಲೀಸ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವ ಶ್ರಮವನ್ನೂ ವಹಿಸುವುದಿಲ್ಲ ಎಂಬುವುದು ಭಾರತದಲ್ಲಿ ಜಾತಿ ವ್ಯವಸ್ಥೆಯ ಬೇರುಗಳು ಎಷ್ಟು ಆಳವಾಗಿದೆ ಎನ್ನುವುದಕ್ಕೆ ಸಾಕ್ಷಿ.

Tags: gujarati-landless-daliths-who-have-been-fighting-for-land-for-decades-and-invasion-of-uppercast-landowners
Previous Post

ಸರ್ಕಾರ ಮಿಷಿನರಿನಾ ಆಡಳಿತ ಪಕ್ಷ ದುರುಪಯೋಗ ಪಡಿಸಿಕೊಂಡಿದೆ: ಡಿ.ಕೆ.ಶಿವಕುಮಾರ್‌

Next Post

ಉತ್ತರಪ್ರದೇಶದಲ್ಲಿ ಈಗ ಕೆಂಪು ಟೊಪ್ಪಿ V/s ಕೇಸರಿ ಶಾಲು ಕದನವೇ?

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಉತ್ತರಪ್ರದೇಶದಲ್ಲಿ ಈಗ ಕೆಂಪು ಟೊಪ್ಪಿ  V/s ಕೇಸರಿ ಶಾಲು ಕದನವೇ?

ಉತ್ತರಪ್ರದೇಶದಲ್ಲಿ ಈಗ ಕೆಂಪು ಟೊಪ್ಪಿ V/s ಕೇಸರಿ ಶಾಲು ಕದನವೇ?

Please login to join discussion

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ
Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada