ಬಿಬಿಎಂಪಿ (BBMP) ಯನ್ನು ಗ್ರೇಟರ್ ಬೆಂಗಳೂರು (Greater Bengaluru) ಎಂದು ಬದಲಿಸಲು ಹೊರಟಿರುವ ಡಿಕೆ ಶಿವಕುಮಾರ್ (Dk Shivakumar) ಅವರ ಅಭಿಪ್ರಾಯದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (BY Vijayendra) ಮಾತನಾಡಿದ್ದಾರೆ.

ಇವತ್ತು ಬೆಂಗಳೂರು ಮಹಾನಗರದ ಪ್ರಮುಖರ ಸಭೆ ಕರೆದಿದ್ವಿ.ಡಿಕೆಶಿ ಅವರು ಬಿಬಿಎಂಪಿ ಅನ್ನು ಗ್ರೇಟರ್ ಬೆಂಗಳೂರು ಮಾಡಲು ಹೊರಟಿದ್ದಾರೆ.ಈ ತೀರ್ಮಾನದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದೆವು.ಗ್ರೇಟರ್ ಬೆಂಗಳೂರು ಮಾಡುವ ಮೂಲಕ ಬೆಂಗಳೂರು ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದಲೂ ಇದು ಒಳ್ಳೇದಲ್ಲ.ಇದಕ್ಕೆ ಅವಕಾಶ ಕೊಡಬಾರದು ಅಂತ ಸಭೆಯಲ್ಲಿ ಚರ್ಚೆ ಆಗಿದೆ.ಅದೇ ರೀತಿ ಬಜೆಟ್ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ.ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ವಿಜಯೇಂದ್ರ ಹೇಳಿದ್ದಾರೆ.






