• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೋವಿಡ್‌ ಲಸಿಕೆ ಅಡ್ಡಪರಿಣಾಮದ ವರದಿ ಪ್ರಕಟಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ.!

ಫಾತಿಮಾ by ಫಾತಿಮಾ
September 19, 2021
in ದೇಶ
0
ಕೋವಿಡ್‌ ಲಸಿಕೆ ಅಡ್ಡಪರಿಣಾಮದ ವರದಿ ಪ್ರಕಟಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ.!
Share on WhatsAppShare on FacebookShare on Telegram

ಸೆಪ್ಟೆಂಬರ್ 16 ರವರೆಗೆ ಭಾರತದ ಶೇ. 56 ರಷ್ಟು ನಾಗರಿಕರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.  ಆದರೂ  ಕೃತಕವಾಗಿ ಇಂಜೆಕ್ಟ್ ಮಾಡಲಾದ ರೋಗನಿರೋಧಕದ (Adverse Events Following Immunization (AEFI) ) ಪ್ರತಿಕೂಲ ಪರಿಣಾಮಗಳ ಕುರಿತ ಸರ್ಕಾರದ ಮೌಲ್ಯಮಾಪನ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.  

ADVERTISEMENT

“ಇಲ್ಲಿಯವರೆಗೆ ನಡೆದ ಸಭೆಗಳಿಗೆ ನಾವು ವರದಿಗಳನ್ನು ಸಲ್ಲಿಸಿದ್ದೇವೆ.  ವರದಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಳಿ ಇದೆ. ವರದಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೊದಲು ಭಾಷಾಂತರಿಸಬೇಕಾಗುತ್ತದೆ ಮತ್ತು  ಪರಿಶೀಲಿಸಬೇಕಾಗುತ್ತದೆ. ಇದು ಹೆಚ್ಚಿನ‌ ಸಮಯವನ್ನು ಬೇಡುವ ಕೆಲಸ ” ಎಂದು ಶಾರದಾ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಡಾ. ಅನೀಜಾ ಅವರು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

ಕೋವಿನ್ (CoWin) ವೆಬ್‌ಸೈಟ್‌ನಲ್ಲಿ ದೈನಂದಿನ ಎಇಎಫ್‌ಐ ಸಂಖ್ಯೆಗಳನ್ನು ವರದಿ ಮಾಡಲಾಗಿದ್ದರೂ, ಅಂತಹ ಪ್ರಕರಣಗಳ ಪ್ರೊಫೈಲ್‌ಗಳನ್ನು ಅರ್ಥಮಾಡಿಕೊಳ್ಳಲು ಮೌಲ್ಯಮಾಪನ ವರದಿ ಮುಖ್ಯವಾಗಿದೆ.

ಜೂನ್ 30 ರವರೆಗೆ ಭಾರತವು 33,57,16,019 ಕೋವಿಡ್ ಲಸಿಕೆಗಳನ್ನು ನೀಡಿತ್ತು.  ಈವರೆಗೆ ದೇಶದಲ್ಲಿ ಕೋವಿಡ್‌ ಲಸಿಕೆ ಪಡೆದುಕೊಂಡವರ ಸಂಖ್ಯೆ 76,57,17,137 ದಾಟಿದೆ. ಸರ್ಕಾರದ ಉತ್ತೇಜನೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, AEFI ಯ ಪ್ರೊಫೈಲ್ ಮತ್ತು ವ್ಯಾಕ್ಸಿನೇಷನ್ ನಂತರದ ಸಾವುಗಳ ಬಗ್ಗೆ ನಿಗಾ ಇಡುವುದು, ಪರಿಸ್ಥಿತಿ ಹೇಗೆ  ಬದಲಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡುವುದು ಮುಖ್ಯವಾಗಿದೆ. (ಅಂದರೆ, ಲಸಿಕೆಗಳ ಅಡ್ಡ ಪರಿಣಾಮದ ಕುರಿತು ವಿವರವಾದ ಅಧ್ಯಯನದ ಅಗತ್ಯವಿದೆ)

ರಾಷ್ಟ್ರೀಯ ಕೋವಿಡ್ ಇಮ್ಯುನೈಸೇಶನ್ ಕಾರ್ಯಕ್ರಮವು ಈ ವರ್ಷ ಜನವರಿ 16 ರಂದು ಆರಂಭವಾದಾಗಿನಿಂದ, ವ್ಯಾಕ್ಸಿನ್ ಪಡೆದುಕೊಳ್ಳುವವರ ವಯಸ್ಸಿನ ಮಿತಿಯು ಗಮನಾರ್ಹವಾಗಿ ಬದಲಾಗಿದೆ.  AEFI ದಾಖಲೆಗಳು ಸಾಮಾನ್ಯವಾಗಿ ವಯಸ್ಸಿನ ಮಿತಿ ಬದಲಾಗುವುದರೊಂದಿಗೆ ಬದಲಾಗುತ್ತದೆ. ಆದರೆ ವರದಿಗಳನ್ನು ಇನ್ನೂ ನವೀಕರಿಸದೇ ಇರುವುದರಿಂದ, ಆ ಮಾಹಿತಿಯು ಸಾರ್ವಜನಿಕ ಡೊಮೇನ್‌ನಲ್ಲಿ‌ ಲಭ್ಯವಿಲ್ಲ.

 “ವರದಿಗಳು ಬರುತ್ತಲೇ ಇರುತ್ತವೆ ಆದರೆ ವಿಶ್ಲೇಷಣೆಯು ಸಮಯ ತೆಗೆದುಕೊಳ್ಳುತ್ತದೆ.  ಒಬ್ಬರ ಎಲ್ಲಾ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು, ಕೆಲವೊಮ್ಮೆ ಆಸ್ಪತ್ರೆಗಳ ದಾಖಲೆಗಳ‌ ಪರಿಶೀಲನೆಗಾಗಿ ಕರೆ ಮಾಡಬೇಕು.  ಕೆಲವೊಮ್ಮೆ ನಮಗೆ ಬೇಕಿರುವ ದಾಖಲೆಗಳನ್ನು ಒದಗಿಸುವಲ್ಲಿ ಅವರು ಬಹಳ ಕರಾರುವಕ್ಕಾಗಿರುವುದಿಲ್ಲ, ಹಾಗಾಗಿ ವಿಶ್ಲೇಷಣೆಯು ತಡವಾಗುತ್ತದೆ.  ಈ ರೀತಿಯ ವರದಿಗಳನ್ನು ಸಾರ್ವಜನಿಕಗೊಳಿಸಬಾರದು. ಏಕೆಂದರೆ ಜನರು ವರದಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಇದು ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದು ” ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಭಾರತದಲ್ಲಿ, ಎಇಎಫ್‌ಐಗಳ ವರದಿ ಮಾಡುವ ವಿಧಾನ ಸಮರ್ಪಕವಾಗಿಲ್ಲ ಎಂಬುದು ಸಹ  ಸತ್ಯ.

“ಜನರು ಸಾಮಾನ್ಯವಾಗಿ AEFI ಗಳನ್ನು ವರದಿ ಮಾಡುವುದಿಲ್ಲ.  ಸಮಿತಿಯ ಮುಂದೆ ಗಂಭೀರ AEFI ಮಾತ್ರ ಬರುತ್ತವೆ.  ಸ್ವಲ್ಪ ಪ್ರಮಾಣದ ದೇಹದ ನೋವು, ಜ್ವರ ಇತ್ಯಾದಿಗಳು ಸಮಿತಿಯ ಗಮನಕ್ಕೆ ಬರುವುದಿಲ್ಲ.  ನಾವು ಇತರ ಗಂಭೀರ ಘಟನೆಗಳ ಕಾರಣವನ್ನು ಸ್ಥಾಪಿಸಲು ನೋಡುತ್ತೇವೆ.  ಸಮಿತಿಯ ಮುಂದೆ ಬಂದಿರುವ AEFI ಘಟನೆಗಳನ್ನು ವಿಶ್ಲೇಷಣೆ ಮಾಡುವಾಗ ವ್ಯಕ್ತಿಯ ಹಿನ್ನೆಲೆಯನ್ನೂ ಸಮಗ್ರವಾಗಿ ಪರಿಶೀಲಿಸಬೇಕಾಗುತ್ತದೆ.  ಉದಾಹರಣೆಗೆ, ಒಬ್ಬ ವ್ಯಕ್ತಿಯು 80 ಅಥವಾ 90 ವರ್ಷ ವಯಸ್ಸಿನವರಾಗಿದ್ದು ಅವರಿಗೆ ಇತರ ಖಾಯಿಲೆಗಳೂ ಇದ್ದರೆ ಆ ವ್ಯಕ್ತಿಯ AEFI ಅನ್ನು ಪರಿಶೀಲಿಸುವಾಗ ಇತರ ಖಾಯಿಲೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ” ಎಂದು ಸಮಿತಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಚುಚ್ಚುಮದ್ದು ನೀಡಿದ ಸ್ಥಳದಲ್ಲಿ  ನೋವು, ಜ್ವರ, ತಲೆ ನೋವು ಮತ್ತು  ದೇಹದ ಇತರ ಕಡೆ ನೋವುಂಟಾಗುವುದು ಲಸಿಕೆಯ ನಂತರದ ಕೆಲವು ಸಾಮಾನ್ಯ ಪರಿಣಾಮಗಳಾಗಿವೆ ಮತ್ತು ಅಂತಹ ಸಂದರ್ಭಗಳಲ್ಲಿ ಪ್ಯಾರಸಿಟಮಾಲ್ ಬಳಕೆಯನ್ನು ಸರ್ಕಾರ ಶಿಫಾರಸು ಮಾಡುತ್ತದೆ.

ಸಾರ್ವಜನಿಕ ವಲಯದ‌ ಅವಗಾಹಣೆಗೆ ಇಟ್ಟಿರುವ  ಕೊನೆಯ ವರದಿಯು 88 ಎಇಎಫ್‌ಐಗಳನ್ನು ವಿಶ್ಲೇಷಿಸಿದೆ.  ಮತ್ತು 61 ಪ್ರಕರಣಗಳು ವ್ಯಾಕ್ಸಿನ್ ಗೆ ಪ್ರತಿಕೂಲವಾಗಿ‌ ಪ್ರತಿಕ್ರಿಯಿಸಿರುವುದಾಗಿ ಹೇಳಿದೆ. ಈ 61 ಪ್ರಕರಣಗಳಲ್ಲಿ, 37 ಲಸಿಕೆ ಉತ್ಪನ್ನ ಸಂಬಂಧಿತ ಪ್ರತಿಕ್ರಿಯೆಗಳು, 22 ರೋಗನಿರೋಧಕ ಆತಂಕಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು ಮತ್ತು ಎರಡು ರೋಗನಿರೋಧಕ ದೋಷ ಸಂಬಂಧಿತ ಪ್ರತಿಕ್ರಿಯೆಗಳು ಎಂದು ವರದಿ ಹೇಳಿದೆ.  ಮೂರು ಸಾವುಗಳು ಸೇರಿದಂತೆ ವ್ಯಾಕ್ಸಿನೇಷನ್ಗೆ ಅಸಮಂಜಸವಾದ ಸಾಂದರ್ಭಿಕ ಸಂಬಂಧವನ್ನು ಹೊಂದಿರುವ 18 ಪ್ರಕರಣಗಳಿವೆ. ಒಂಬತ್ತು ಪ್ರಕರಣಗಳನ್ನು ‘ಅನಿರ್ದಿಷ್ಟ ವರ್ಗದಲ್ಲಿ’ ಹಾಕಲಾಗಿದೆ, ಇದರಲ್ಲಿ ಎರಡು ಸಾವುಗಳೂ ಸೇರಿವೆ.

ಇದರ ಜೊತೆಗೆ ಭಾರತ ಸರ್ಕಾರವು ಪ್ರಸ್ತುತ ಇಮ್ಯುನೈಸೇಶನ್ ಕಾರ್ಯಕ್ರಮದಲ್ಲಿ ಬಳಕೆಯಲ್ಲಿರುವ ಎಲ್ಲಾ ಮೂರು ಲಸಿಕೆಗಳ ಸಂಭಾವ್ಯ ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡಿದೆ.

ಅತಿ ಹೆಚ್ಚು ಜನರಿಗೆ ನೀಡಲಾಗಿರುವ ಕೋವಿಶೀಲ್ಡ್‌ನ  ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಬಹುಮುಖ್ಯವಾದುದು ಇಂಜೆಕ್ಷನ್ ಸ್ಥಳದಲ್ಲಿ ನೋವು, ತಲೆನೋವು, ಆಯಾಸ, ದೇಹದ ನೋವು ಮತ್ತು ವಾಕರಿಕೆ. ಕೋವಾಕ್ಸಿನ್‌ನ ಅಡ್ಡಪರಿಣಾಮಗಳಲ್ಲಿ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ, ತಲೆತಿರುಗುವಿಕೆ, ನಡುಕ, ಬೆವರುವುದು, ಶೀತ ಮತ್ತು ಕೆಮ್ಮು ಪ್ರಮುಖವಾಗಿವೆ.‌  ಅಜೀರ್ಣ ಮತ್ತು ಹಸಿವಾಗದಿರುವಿಕೆ ಸ್ಪುಟ್ನಿಕ್ ವಿಯ ಅಡ್ಡಪರಿಣಾಮಗಳಲ್ಲಿ ಪ್ರಮುಖವಾದವು.

Tags: BJPCovid 19ಕರೋನಾಕೋವಿಡ್‌ ಲಸಿಕೆಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪಂಜಾಬ್‌ ನೂತನ ಮುಖ್ಯಮಂತ್ರಿಯಾಗಿ ಸುಖಜಿಂದರ್ ಸಿಂಗ್ ರಾಂಧವ ಆಯ್ಕೆ ಬಹುತೇಕ ಖಚಿತ.?

Next Post

ಪಂಜಾಬಿಗೆ ಮೊದಲ ದಲಿತ ಮುಖ್ಯಮಂತ್ರಿ: ಚರಣಜಿತ್ ಸಿಂಗ್ ಚನ್ನಿ ನೂತನ ಸಿಎಂ – ಹೈಕಮಾಂಡ್ ಅಚ್ಚರಿಯ ಆಯ್ಕೆ

Related Posts

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
0

ಪಶ್ಚಿಮ ಬಂಗಾಳ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ಇಂದು ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತದ...

Read moreDetails
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

January 16, 2026
ಮುಂಬೈ ಪಾಲಿಕೆಯಲ್ಲಿ ಬಿಜೆಪಿಯ ಗೆಲುವು ವೋಟ್ ಚೋರಿಯ ಮತ್ತೊಂದು ಸಂಕಷ್ಟಕರ ಅಧ್ಯಾಯ : ಸಿದ್ದರಾಮಯ್ಯ ಕಳವಳ

ಮುಂಬೈ ಪಾಲಿಕೆಯಲ್ಲಿ ಬಿಜೆಪಿಯ ಗೆಲುವು ವೋಟ್ ಚೋರಿಯ ಮತ್ತೊಂದು ಸಂಕಷ್ಟಕರ ಅಧ್ಯಾಯ : ಸಿದ್ದರಾಮಯ್ಯ ಕಳವಳ

January 16, 2026
BMC Election 2026: ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ಗೆ ಪ್ರಚಂಡ ಗೆಲುವು

BMC Election 2026: ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ಗೆ ಪ್ರಚಂಡ ಗೆಲುವು

January 16, 2026
Next Post
ಪಂಜಾಬಿಗೆ ಮೊದಲ ದಲಿತ ಮುಖ್ಯಮಂತ್ರಿ: ಚರಣಜಿತ್ ಸಿಂಗ್ ಚನ್ನಿ ನೂತನ ಸಿಎಂ – ಹೈಕಮಾಂಡ್ ಅಚ್ಚರಿಯ ಆಯ್ಕೆ

ಪಂಜಾಬಿಗೆ ಮೊದಲ ದಲಿತ ಮುಖ್ಯಮಂತ್ರಿ: ಚರಣಜಿತ್ ಸಿಂಗ್ ಚನ್ನಿ ನೂತನ ಸಿಎಂ – ಹೈಕಮಾಂಡ್ ಅಚ್ಚರಿಯ ಆಯ್ಕೆ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK12; ಕುತೂಹಲ ಘಟ್ಟಕ್ಕೆ BIGG BOSS ಫಿನಾಲೆ : ಗಿಲ್ಲಿ, ರಕ್ಷಿತಾ ಪಡೆದ ಮತಗಳೆಷ್ಟು..?

BBK12; ಕುತೂಹಲ ಘಟ್ಟಕ್ಕೆ BIGG BOSS ಫಿನಾಲೆ : ಗಿಲ್ಲಿ, ರಕ್ಷಿತಾ ಪಡೆದ ಮತಗಳೆಷ್ಟು..?

January 18, 2026
ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada