ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ (Chandrashekaran) ಆತ್ಮಹತ್ಯೆ ಪ್ರಕರಣ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಹಾಗೆ ವಾಸವಾಗುತ್ತಿದೆ. ಇದರ ಪರಿಣಾಮ ಸಚಿವ ಬಿ ನಾಗೇಂದ್ರ (Minister B Nagendra) ತಲೆ ತಂಡ ಬಹುತೇಕ ಖಚಿತ ಎಂದು ಕಾಂಗ್ರೆಸ್ (Congress) ಮೂಲದ ನಾಯಕರೆ ಹೇಳುತ್ತಿದ್ದಾರೆ.
![](https://pratidhvani.com/wp-content/uploads/2024/05/IMG_8043.jpeg)
ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ ನಡೆದಿದ್ದು ಕೋಟ್ಯಂತರ ರೂಪಾಯಿ ಹಣವನ್ನ ಹೈದರಾಬಾದ್ ಗೆ (Hydrabad) ರವಾನೆ ಮಾಡಲಾಗಿದೆ ತೆಲಂಗಾಣ (Telangana) ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಫಂಡ್ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಈಗಾಗಲೇ ಈ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಯೂನಿಯನ್ ಬ್ಯಾಂಕ್ ಒಕ್ಕೂಟ ಸಿ ಬಿ ಐ (CBI) ತನಿಕೆಗೆ ಆಗ್ರಹಿಸಿದೆ. ಆದರೆ ರಾಜ್ಯ ಸರ್ಕಾರ ಎಸ್ಐಟಿ ಹೆಗಲಿಗೆ ನೀಡುವ ಇರಾದೆಯಲ್ಲಿ ಇದ್ದಂತಿದೆ.
![](https://pratidhvani.com/wp-content/uploads/2024/05/IMG_8044.jpeg)
ಈ ಒಂದು ಪ್ರಕರಣ ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದ್ದು ಸಚಿವ ಬಿ ನಾಗೇಂದ್ರ ತಲೆ ದಂಡವಾಗಬೇಕು ಎಂದು ಪಟ್ಟು ಹಿಡಿದಿದೆ . ಈ ಕಾರಣಕ್ಕಾಗಿ ಸಿಎಂ ಡಿಸಿಎಂ ಮತ್ತು ಗೃಹ ಸಚಿವರು ಪ್ರತ್ಯೇಕ ಸಭೆ ನಡೆಸಿದ್ದು ಸಚಿವರ ತಲೆದಂಡ ಬಹುತೇಕ ಖಚಿತ ಎನ್ನಲಾಗುತ್ತಿದೆ ಆ ಮೂಲಕ ಸರ್ಕಾರಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.