ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ದುಪ್ಪಟ್ಟು ಆಗಿತ್ತು. ಜನರು ಬಿಸಿಲಿನಲ್ಲಿ ಬದುಕುವುದು ಹೇಗಪ್ಪ ಅನ್ನೋ ಅಷ್ಟು ಬಿಸಿಲು ದಾಖಲೆ ನಿರ್ಮಿಸಿತ್ತು. ಇದೀಗ ಎಲ್ಲವೂ ಸರಿದಾರಿಗೆ ಬರುವ ಮುನ್ಸೂಚನೆ ಕಾಣಿಸುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನ ಮಳೆ ಬಿದ್ದಿದ್ದು ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ಬಿಸಿಲ ಬೇಗೆಯನ್ನು ತಣಿಸಿದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ.
ರಣ ಬಿಸಿಲಿಗೆ ಬಸವಳಿದಿರುವ ಕರುನಾಡಿಗೆ ವರುಣನಿಂದ ಸುಸಂದೇಶ ಸಿಕ್ಕಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಬಂದಿದೆ. ಮೇ 19ರ ವರೆಗೆ ಆಗಾಗ್ಗ ಮಳೆ ಬೀಳಲಿದ್ದು, ಮೇ 19ರ ನಂತರ ಸತತ ಮೂರು ವಾರಗಳ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಲ್ಲದೆ ಬರದಿಂದ ಹೈರಾಣಾಗುರುವ ರಾಜ್ಯಕ್ಕೆ ಮುಂದಿನ ಮೂರು ವಾರಗಳ ಕಾಲ ಸತತ ಮಳೆಯಾಗುವ ಸಾಧ್ಯತೆಯಿದ್ದು, ಜಲಾಶಯಗಳಿಗೂ ನೀರು ಹರಿದು ಬರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸತತ ಮಳೆಯಾಗುವ ಎಚ್ಚರಿಕೆ ಕೊಟ್ಟಿದೆ ಹವಾಮಾನ ಇಲಾಖೆ. ಹೀಟ್ ವೇವ್ ಹಾಗೂ ರಣ ಬಿಸಲಿಗೆ ಹೈರಾಣಾಗಿರುವ ಜನರಿಗೆ ಸಮಾಧಾನಕರ ಸಂಗತಿ ಸಿಗುವ ಸಾಧ್ಯತೆಯಿದೆ.
ಗ್ಲೋಬಲ್ ಫೋರ್ಕಾಸ್ಟ್ ಸಿಸ್ಟಮ್ (GFS) ಸಂಸ್ಥೆಯಿಂದ ಈ ಬಗ್ಗೆ ವರದಿ ಬಂದಿದ್ದು, X ಪೋಸ್ಟ್ ಮೂಲಕ ಮಾಹಿತಿ ತಿಳಿಸಿದ್ದಾರೆ. ರಾಷ್ಟ್ರೀಯ ನೈಸರ್ಗಿಕ ಹವಾಮಾನ ತಿಳಿಸುವ ಸಂಸ್ಥೆಯಾಗಿರುವ GFS, ಇಂಟರೆಸ್ಟಿಂಗ್ ಡೇಸ್ ಅಹೇಡ್ Interesting Days ahead ಎಂದು ಟ್ವೀಟ್ ಮಾಡಿದೆ. ರಾಜ್ಯ ಹವಾಮಾನ ಇಲಾಖೆಯ X ಖಾತೆ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ