ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಹಣ್ಣುಗಳನ್ನು ಸೇವಿಸ್ತಾರೆ ಎಲ್ಲಾ ಹಣ್ಣುಗಳಲ್ಲಿ ಒಂದೊಂದು ಆರೋಗ್ಯ ಅಂಶಗಳಿದ್ದು ದೇಹಕ್ಕೆ ತುಂಬಾನೆ ಒಳ್ಳೆಯದು.ಆಯಾ ಸೀಸನ್ ಗೆ ಕೆಲವು ರೀತಿಯ ಹಣ್ಣುಗಳು ಬರ್ತವೆ.. ಬೇಸಿಗೆಯಲ್ಲಿ ತಿನ್ನುವಂತಹ ಹಣ್ಣುಗಳನ್ನು ಮಳೆಗಾಲದಲ್ಲಿ ತಿಂದ್ರೆ ಆರೋಗ್ಯ ಕೆಡುತ್ತದೆ, ಅದೇ ರೀತಿ ಮಳೆಗಾಲದಲ್ಲಿ ತಿನ್ನುವಂತಹ ಹಣ್ಣುಗಳನ್ನು ಕೂಡ ಬೇಸಿಗೆ ಅಥವಾ ಚಳಿಗಾಲದಲ್ಲಿ ತಿನ್ನಬಾರದು.ಇನ್ನು ಹಣ್ಣುಗಳನ್ನು ಪ್ರತಿನಿತ್ಯ ಸೇವಿಸ್ತಾರೆ.
ಇದೆಲ್ಲವೂ ಸರಿ ಆದ್ರೆ ಕೆಲವರಿಗೆ ಹಣ್ಣುಗಳನ್ನ ತಿಂದ ತಕ್ಷಣ ನೀರನ್ನು ಕುಡಿಯುವ ಅಭ್ಯಾಸವಿರುತ್ತದೆ..ಆದ್ರೆ ಕೆಲವು ಹಣ್ಣುಗಳನ್ನು ತಿಂದು ನೀರು ಕುಡಿದರೆ ಆರೋಗ್ಯ ಸಮಸ್ಯೆ ಎದುರಾಗುವುದು ಪಕ್ಕ. ಯಾವ ಹಣ್ಣುಗಳನ್ನು ತಿಂದ ಕೂಡಲೇ ನೀರನ್ನು ಕುಡಿಯಬಾರದು ಹಾಗೂ ನೀರನ್ನು ಕುಡಿದರೆ ಯಾವ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಮಾಹಿತಿ ಹೀಗಿದೆ.
ಕಲ್ಲಂಗಡಿ
ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ನೀರನ್ನ ಕುಡಿಯುವುದು ಒಳಿತಲ್ಲ. ಕಾರಣ ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುತ್ತದೆ ಜೊತೆಗೆ ನಾವು ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಸಮಸ್ಯೆ ಎದುರಾಗುತ್ತದೆ .ಹಾಗೂ ಹೊಟ್ಟೆ ಉತ್ತರ ಜೊತೆಗೆ ಕಾನ್ಸ್ಟಿಪೇಶನ್ ಸಮಸ್ಯೆಯೂ ಕಾಡುತ್ತದೆ.
ಮಾವಿನ ಹಣ್ಣು
ಈ ಹಣ್ಣನ್ನ ತಿನ್ನದ ನಂತರ ನೀರನ್ನು ಕುಡಿಯುವುದರಿಂದ ಅತಿಸಾರ, ಹೊಟ್ಟೆ ನೋವು ,ಹೊಟ್ಟೆಯಲ್ಲಿ ಕಸಿವಿಸಿ ಹೆಚ್ಚಾಗುತ್ತದೆ ಹಾಗೂ ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹಾಗೂ ನಾರಿನ ಅಂಶ ಜಾಸ್ತಿ ಇರುವುದರಿಂದ ಸಾಗುತ್ತದೆ ಹಾಗೂ ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹಾಗೂ ನಾರಿನ ಅಂಶ ಜಾಸ್ತಿ ಇರುವುದರಿಂದ.
ಬಾಳೆಹಣ್ಣು
ಬಾಳೆಹಣ್ಣು ತಿನ್ನದ ನಂತರ ನೀರನ್ನು ಕುಡಿಯುವುದರಿಂದ ಬ್ಲೋಟಿಂಗ್, ಹೊಟ್ಟೆ ನೋವು,ಗ್ಯಾಸ್ ಸಮಸ್ಯೆ ಎದುರಾಗುತ್ತದೆ.
ಅನಾನಸ್
ಅನಾನಸ್ ಆಮ್ಲೀಯ ಸ್ವಭಾವವನ್ನು ಉಲ್ಬಣಗೊಳಿಸುತ್ತದೆ, ಎದೆಯುರಿ, ಆಸಿಡ್ ರಿಫ್ಲಕ್ಸ್ ಅಥವಾ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
ಇವುಗಳ ಜೊತೆಗೆ ಸಿಟ್ರಿಕ್ ಅಂಶ ಹೆಚ್ಚಿರುವಂತಹ ಹಣ್ಣುಗಳು ಪಪಾಯ ಮತ್ತು ದಾಳಿಂಬೆ ತಿಂದು ನೀರು ಕುಡಿಯುವುದು ಒಳ್ಳೆಯದಲ್ಲ ಹಾಗೂ ಹಾಗೂ ಈ ಹಣ್ಣುಗಳನ್ನು ತಿಂದು 30 ನಿಮಿಷದಿಂದ ಒಂದು ಗಂಟೆಯವರೆಗೂ ನೀರನ್ನು ಕುಡಿಯದೇ ಇರುವುದು ಉತ್ತಮ.